ETV Bharat / state

ಲಕ್ಷ ಲಕ್ಷ ನೀಡಿದ್ರೂ ನಿರ್ಲಕ್ಷ್ಯ.. ಅಮೃತ್ ಮಹಲ್ ಜಾನುವಾರುಗಳಿಗೆ ನರಕ.. - ಅಮೃತ್ ಮಹಲ್ ಹಸುಗಳು ಸುದ್ದಿ

ಲಕ್ಷ ಲಕ್ಷ ಹಣ ನೀಡಿದ್ರೂ ಅಧಿಕಾರಿಗಳ ನಿರ್ಲಕ್ಷದಿಂದ ಮೈಸೂರು ಮಹಾರಾಜರ ಕಾಲದಲ್ಲಿ ತರಲಾಗಿದ್ದ ಅಮೃತ್ ಮಹಲ್ ತಳಿಯ ಜಾನುವಾರುಗಳು ನರಕ ಯಾತನೆ ಅನುಭವಿಸುತ್ತಿವೆ.

ನರಕಯಾತನೆ ಅನುಭವಿಸುತ್ತಿರುವ ಅಮೃತ್ ಮಹಲ್ ಜಾನುವಾರುಗಳು
author img

By

Published : Oct 27, 2019, 8:30 PM IST

Updated : Oct 27, 2019, 9:22 PM IST

ಹಾಸನ: ಅಧಿಕಾರಿಗಳ ನಿರ್ಲಕ್ಷದಿಂದ ಅಮೃತ್​ ಮಹಲ್ ತಳಿ ಜಾನುವಾರುಗಳು ರೋಧನೆ ಅನುಭವಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗಿಹಳ್ಳಿ ಸಮೀಪದ ರಾಯಸಮುದ್ರ ಕಾವಲಿನಲ್ಲಿ ಸುಮಾರು 230 ಜಾನುವಾರುಗಳು ತಾವು ಹಾಕಿದ್ದ ಸಗಣಿಯ ಮಧ್ಯೆದಲ್ಲಿ ದಿನ ದೂಡುತ್ತಿವೆ.

ನರಕಯಾತನೆ ಅನುಭವಿಸುತ್ತಿರುವ ಅಮೃತ್ ಮಹಲ್ ಜಾನುವಾರುಗಳು

ಮೈಸೂರು ಮಹಾರಾಜರ ಕಾಲದಲ್ಲಿ ತರಲಾಗಿದ್ದ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ ಸ್ವಾತಂತ್ರದ ನಂತರ ರಾಜ್ಯ ಸರ್ಕಾರ ಪಶುಸಂಗೋಪನೆ ಮತ್ತು ವೈದ್ಯಕೀಯ ಸೇವಾ ಇಲಾಖೆಗೆ ಹಸ್ತಾಂತರಿಸಿತ್ತು. 1,524 ಎಕರೆ ಪ್ರದೇಶ ಇರುವ ಕೇಂದ್ರದಲ್ಲಿ 234 ಜಾನುವಾರುಗಳಿದ್ದು, ಈ ಕೇಂದ್ರದ ನಿರ್ವಹಣೆಗೆ ಮತ್ತು ಜಾನುವಾರುಗಳ ಕೊಠಡಿಗೆ ಈಗಾಗಲೇ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈಗಿರುವ ಜಾನುವಾರು ಕೊಠಡಿಯ ಅರ್ಧಭಾಗದಷ್ಟು ಪ್ರದೇಶಕ್ಕೆ ಛಾವಣಿ ಇಲ್ಲದೆ ಮಳೆನೀರು ಕೊಟ್ಟಿಗೆಯೊಳಗೆ ಶೇಖರಣೆಯಾಗುತ್ತಿದೆ.

ಜಾನುವಾರುಗಳು ಹಾಕುವ ಸಗಣಿ ತೆಗೆಯದೇ ಇರುವುದರಿಂದ 3 ಅಡಿಗೂ ಹೆಚ್ಚು ಆಳದಲ್ಲಿರುವ ಕೆಸರಿನಲ್ಲಿ ನಿಲ್ಲಲಾಗದೆ, ಮಲಗಲೂ ಸಾಧ್ಯವಾಗದೆ, ನರಕಯಾತನೆ ಅನುಭವಿಸುತ್ತಿವೆ. ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಪಶುವೈದ್ಯಕೀಯ ಮೇಲ್ವಿಚಾರಕಿ, ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲದ ಕೊರತೆ ಇದೆ. ಸರಿಯಾಗಿ ಸಂಬಳ ಆಗುತ್ತಿಲ್ಲ. ಇರುವ ವ್ಯವಸ್ಥೆಯಲ್ಲಿಯೇ ಮಾಡಿಕೊಂಡು ಹೋಗುತ್ತಿದ್ದೇವೆ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದಿದ್ದಾರೆ.

ಹಾಸನ: ಅಧಿಕಾರಿಗಳ ನಿರ್ಲಕ್ಷದಿಂದ ಅಮೃತ್​ ಮಹಲ್ ತಳಿ ಜಾನುವಾರುಗಳು ರೋಧನೆ ಅನುಭವಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗಿಹಳ್ಳಿ ಸಮೀಪದ ರಾಯಸಮುದ್ರ ಕಾವಲಿನಲ್ಲಿ ಸುಮಾರು 230 ಜಾನುವಾರುಗಳು ತಾವು ಹಾಕಿದ್ದ ಸಗಣಿಯ ಮಧ್ಯೆದಲ್ಲಿ ದಿನ ದೂಡುತ್ತಿವೆ.

ನರಕಯಾತನೆ ಅನುಭವಿಸುತ್ತಿರುವ ಅಮೃತ್ ಮಹಲ್ ಜಾನುವಾರುಗಳು

ಮೈಸೂರು ಮಹಾರಾಜರ ಕಾಲದಲ್ಲಿ ತರಲಾಗಿದ್ದ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ ಸ್ವಾತಂತ್ರದ ನಂತರ ರಾಜ್ಯ ಸರ್ಕಾರ ಪಶುಸಂಗೋಪನೆ ಮತ್ತು ವೈದ್ಯಕೀಯ ಸೇವಾ ಇಲಾಖೆಗೆ ಹಸ್ತಾಂತರಿಸಿತ್ತು. 1,524 ಎಕರೆ ಪ್ರದೇಶ ಇರುವ ಕೇಂದ್ರದಲ್ಲಿ 234 ಜಾನುವಾರುಗಳಿದ್ದು, ಈ ಕೇಂದ್ರದ ನಿರ್ವಹಣೆಗೆ ಮತ್ತು ಜಾನುವಾರುಗಳ ಕೊಠಡಿಗೆ ಈಗಾಗಲೇ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈಗಿರುವ ಜಾನುವಾರು ಕೊಠಡಿಯ ಅರ್ಧಭಾಗದಷ್ಟು ಪ್ರದೇಶಕ್ಕೆ ಛಾವಣಿ ಇಲ್ಲದೆ ಮಳೆನೀರು ಕೊಟ್ಟಿಗೆಯೊಳಗೆ ಶೇಖರಣೆಯಾಗುತ್ತಿದೆ.

ಜಾನುವಾರುಗಳು ಹಾಕುವ ಸಗಣಿ ತೆಗೆಯದೇ ಇರುವುದರಿಂದ 3 ಅಡಿಗೂ ಹೆಚ್ಚು ಆಳದಲ್ಲಿರುವ ಕೆಸರಿನಲ್ಲಿ ನಿಲ್ಲಲಾಗದೆ, ಮಲಗಲೂ ಸಾಧ್ಯವಾಗದೆ, ನರಕಯಾತನೆ ಅನುಭವಿಸುತ್ತಿವೆ. ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಪಶುವೈದ್ಯಕೀಯ ಮೇಲ್ವಿಚಾರಕಿ, ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲದ ಕೊರತೆ ಇದೆ. ಸರಿಯಾಗಿ ಸಂಬಳ ಆಗುತ್ತಿಲ್ಲ. ಇರುವ ವ್ಯವಸ್ಥೆಯಲ್ಲಿಯೇ ಮಾಡಿಕೊಂಡು ಹೋಗುತ್ತಿದ್ದೇವೆ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದಿದ್ದಾರೆ.

Intro:ಹಾಸನ: ಅಧಿಕಾರಿಗಳ ನಿರ್ಲಕ್ಷದಿಂದ ಅಮೃತಮಹಲ್ ತಳಿ ಜಾನಪದಗಳು ಮೂಕರೋಧನೆ ಅನುಭವಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾಸನಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗಿಹಳ್ಳಿ ಸಮೀಪದ ರಾಯಸಮುದ್ರ ಕಾವಲಿನಲ್ಲಿ ಸುಮಾರು 230 ಜಾನುವಾರುಗಳು ತಾವು ಹಾಕಿದ್ದ ಸೆಗಣಿಯ ಮಧ್ಯದಲ್ಲಿ ದಿನಗಳನ್ನೇ ದೂಡುತ್ತಾ ಮೂಕ ವೇದನೆಯ ಜೊತೆಗೆ ನರಕಯಾತನೆ ಅನುಭವಿಸುತ್ತಿವೆ. ಮೈಸೂರು ಮಹಾರಾಜರ ಕಾಲದಲ್ಲಿ ತರಲಾಗಿದ್ದ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ ಸ್ವಾತಂತ್ರದ ನಂತರ ರಾಜ್ಯ ಸರ್ಕಾರ ಪಶುಸಂಗೋಪನ ಮತ್ತು ವೈದ್ಯಕೀಯ ಸೇವಾ ಇಲಾಖೆಗೆ ಹಸ್ತಾಂತರಿಸಿತ್ತು. ಸಾವಿರ 524 ಎಕರೆ ಪ್ರದೇಶ ಇರುವ ಕೇಂದ್ರದಲ್ಲಿ 234 ಜಾನುವಾರುಗಳಿದ್ದು, ಈ ಕೇಂದ್ರದ ನಿರ್ವಹಣೆಗೆ ಮತ್ತು ಜಾನುವಾರುಗಳ ಕೊಠಡಿಗೆ ಈಗಾಗಲೇ 50 ಲಕ್ಷ ರೂಗಳನ್ನು ಬಿಡುಗಡೆ ಮಾಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷತನದಿಂದ ಈಗಿರುವ ಜಾನುವಾರು ಕೊಠಡಿಯ ಅರ್ಧಭಾಗದಷ್ಟು ಪ್ರದೇಶಕ್ಕೆ ಚಾವಣಿ ಇಲ್ಲದೆ ಮಳೆನೀರು ಕೊಟ್ಟಿಗೆಯೊಳಗೆ ಕರೆಯುತ್ತಿದೆ ಜೊತೆಗೆ 234 ಜಾನುವಾರುಗಳು ಹಾಕುವ ಸಗಣಿ ತೆಗೇಯದೇ ಇರುವುದರಿಂದ, 3 ಅಡಿಗೂ ಹೆಚ್ಚು ಆಳದಲ್ಲಿರುವ ಕೆಸರಿನಲ್ಲಿ ನಿಲ್ಲಲೂ ಆಗದೇ, ಮಲಗಲು ಸಾಧ್ಯವಾಗದೇ, ನರಕಯಾತನೆ ಅನುಭವಿಸುತ್ತಿವೆ. ಬೈಟ್: ರಾಘವೇಂದ್ರ, ಗೋ-ರಕ್ಷಕ ಇನ್ನು ಈ ಬಗ್ಗೆ ಈಟಿವಿ ಜೊತೆ ಮಾತನಾಡಿದ ಪಶುವೈದ್ಯಕೀಯ ಮೇಲ್ವಿಚಾರಕಿ ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲದ ಕೊರತೆ ಇದೆ ಸರಿಯಾಗಿ ಸಂಬಳ ಆಗುತ್ತಿಲ್ಲ ಇರುವ ವ್ಯವಸ್ಥೆಯಲ್ಲಿಯೇ ಮಾಡಿಕೊಂಡು ಹೋಗುತ್ತಿದ್ದೇವೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದ್ರು. ಮಂಜುಳ, ಪಶುವೈದ್ಯಕೀಯ ಪರಿವೀಕ್ಷಕಿ. ಒಟ್ಟಾರೆ 200ಕ್ಕೂ ಹೆಚ್ಚು ಜಾನುವಾರುಗಳು ಪ್ರತಿನಿತ್ಯ ನರಕಯಾತನೆ ಅನುಭವಿಸಲು ಅಧಿಕಾರಿಗಳು ವಹಿಸಿದ್ದ ನಿರ್ಲಕ್ಷವೇ ಕಾರಣ ಎಂದರೆ ತಪ್ಪಾಗಲ್ಲ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Oct 27, 2019, 9:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.