ETV Bharat / state

ವರದಕ್ಷಿಣೆ ತರದಿದ್ದಕ್ಕೆ ಹೆಂಡತಿ-ಮಗುವಿಗೆ ಥಳಿಸಿದ ಪಾಪಿ ಪತಿ - undefined

ಸಂಪ್ರದಾಯಬದ್ಧವಾಗಿ ಮದುವೆ ಮಾಡಿ ಕೊಟ್ಟರೂ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾದ ಪತಿಯೊಬ್ಬ ತನ್ನ ಹೆಂಡತಿಗೆ ವರದಕ್ಷಿಣೆ ತರುವಂತೆ ಒತ್ತಾಯಿಸಿ ಊಟ - ನೀರು ಕೂಡ ನೀಡದೆ ಚಿತ್ರ ಹಿಂಸೆ ನೀಡಿದ್ದಾನೆ.‌

ಹೆಂಡತಿ-ಮಗುವಿಗೆ ಥಳಿಸಿದ ಪಾಪಿ ಪತಿ
author img

By

Published : May 7, 2019, 8:09 PM IST

ಹಾಸನ/ಚನ್ನರಾಯಪಟ್ಟಣ: ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿ ಹಾಗೂ ಮಗುವಿಗೆ ಥಳಿಸಿರುವ ಅಮಾನವೀಯ ಘಟನೆ ತಾಲೂಕಿನ ಶ್ರೀವರಾಂಪುರ ಗ್ರಾಮದಲ್ಲಿ‌ ನಡೆದಿದೆ.

ಹೆಂಡತಿ-ಮಗುವಿಗೆ ಥಳಿಸಿದ ಪಾಪಿ ಪತಿ

ಕಳೆದ ನಾಲ್ಕು ವರ್ಷದ ಹಿಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶಿವಪುರ ಗ್ರಾಮದ ಆನಂದ್ ಮತ್ತು ಜ್ಯೋತಿ ದಂಪತಿಯ ಮಗಳಾದ ಸೌಂದರ್ಯ ಎಂಬುವರನ್ನು ‌ತಾಲೂಕಿನ ಶ್ರೀವರಾಂಪುರ ಗ್ರಾಮದ ಗೋವಿಂದಯ್ಯ ಪುತ್ರ ರಂಗನಾಥನಿಗೆ ಸಂಪ್ರದಾಯಬದ್ಧವಾಗಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದಾರೆ. ಆದರೆ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ರಂಗನಾಥ ಸೌಂದರ್ಯಳಿಗೆ ಊಟ - ನೀರು ಕೂಡ ನೀಡದೆ ಚಿತ್ರ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ.‌

ಹುಟ್ಟಿದ ಮಗುವಿಗೂ ತಿನ್ನಲು ಅನ್ನ ಕೊಡದೆ ಹಸಿದ ಹೊಟ್ಟೆಯಲ್ಲೇ ಮಲಗಿಸುತ್ತಿದ್ದನಂತೆ. ಮಗು ಬೆಳಗ್ಗೆಯೇ ಎದ್ದು ಅಮ್ಮ ಹೊಟ್ಟೆ ಹಸಿವು ಎಂದಾಗಲೂ ಸುಮ್ಮನಿರುತ್ತಿದ್ದರು ಎಂದು ಆರೋಪಿಸಲಾಗಿದೆ. ಕೇವಲ ತಾಯಿಗೆ ಮಾತ್ರ ಹಿಂಸೆ ಕೊಟ್ಟಿದ್ದು ಸಾಲದೆಂದು ಮಗುವಿಗೂ ಬಾಸುಂಡೆ ಬರುವಂತೆ ಥಳಿಸಿದ್ದಾನೆ.

ಪತಿಯ ಚಿತ್ರಹಿಂಸೆ ತಾಳಲಾರದೆ ಪೊಲೀಸರ ಮೊರೆ ಹೋಗಿರುವ ಸೌಂದರ್ಯ, ಕೊಣನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ-ಮಗು ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಗನಾಥ್ ತಲೆಮರೆಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹಾಸನ/ಚನ್ನರಾಯಪಟ್ಟಣ: ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿ ಹಾಗೂ ಮಗುವಿಗೆ ಥಳಿಸಿರುವ ಅಮಾನವೀಯ ಘಟನೆ ತಾಲೂಕಿನ ಶ್ರೀವರಾಂಪುರ ಗ್ರಾಮದಲ್ಲಿ‌ ನಡೆದಿದೆ.

ಹೆಂಡತಿ-ಮಗುವಿಗೆ ಥಳಿಸಿದ ಪಾಪಿ ಪತಿ

ಕಳೆದ ನಾಲ್ಕು ವರ್ಷದ ಹಿಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶಿವಪುರ ಗ್ರಾಮದ ಆನಂದ್ ಮತ್ತು ಜ್ಯೋತಿ ದಂಪತಿಯ ಮಗಳಾದ ಸೌಂದರ್ಯ ಎಂಬುವರನ್ನು ‌ತಾಲೂಕಿನ ಶ್ರೀವರಾಂಪುರ ಗ್ರಾಮದ ಗೋವಿಂದಯ್ಯ ಪುತ್ರ ರಂಗನಾಥನಿಗೆ ಸಂಪ್ರದಾಯಬದ್ಧವಾಗಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದಾರೆ. ಆದರೆ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ರಂಗನಾಥ ಸೌಂದರ್ಯಳಿಗೆ ಊಟ - ನೀರು ಕೂಡ ನೀಡದೆ ಚಿತ್ರ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ.‌

ಹುಟ್ಟಿದ ಮಗುವಿಗೂ ತಿನ್ನಲು ಅನ್ನ ಕೊಡದೆ ಹಸಿದ ಹೊಟ್ಟೆಯಲ್ಲೇ ಮಲಗಿಸುತ್ತಿದ್ದನಂತೆ. ಮಗು ಬೆಳಗ್ಗೆಯೇ ಎದ್ದು ಅಮ್ಮ ಹೊಟ್ಟೆ ಹಸಿವು ಎಂದಾಗಲೂ ಸುಮ್ಮನಿರುತ್ತಿದ್ದರು ಎಂದು ಆರೋಪಿಸಲಾಗಿದೆ. ಕೇವಲ ತಾಯಿಗೆ ಮಾತ್ರ ಹಿಂಸೆ ಕೊಟ್ಟಿದ್ದು ಸಾಲದೆಂದು ಮಗುವಿಗೂ ಬಾಸುಂಡೆ ಬರುವಂತೆ ಥಳಿಸಿದ್ದಾನೆ.

ಪತಿಯ ಚಿತ್ರಹಿಂಸೆ ತಾಳಲಾರದೆ ಪೊಲೀಸರ ಮೊರೆ ಹೋಗಿರುವ ಸೌಂದರ್ಯ, ಕೊಣನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ-ಮಗು ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಗನಾಥ್ ತಲೆಮರೆಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Intro:ವರದಕ್ಷಿಣೆ ತರದಿದ್ದಕ್ಕೆ ಹೆಂಡತಿ-ಮಗುವಿಗೆ ಥಳಿಸಿದ ಪತಿ

ಹಾಸನ/ಚನ್ನರಾಯಪಟ್ಟಣ: ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತ್ನಿ ಹಾಗೂ ಮಗುವಿಗೆ ಥಳಿಸಿರುವ ಘಟನೆ ಅಮಾನವೀಯ ಘಟನೆ ತಾಲೂಕಿನ
ಶ್ರೀವರಾಂಪುರ ಗ್ರಾಮದಲ್ಲಿ‌ ನಡೆದಿದೆ.
ಕಳೆದ ನಾಲ್ಕು ವರ್ಷದ ಹಿಂದೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶಿವಪುರ ಗ್ರಾಮದ ಆನಂದ್ ಮತ್ತು ಜ್ಯೋತಿ ದಂಪತಿಯ ಮಗಳಾದ ಸೌಂದರ್ಯ ಎಂಬುವರನ್ನು ‌ತಾಲೂಕಿನ ಶ್ರೀವರಾಂಪುರ ಗ್ರಾಮದ ಗೋವಿಂದಯ್ಯ ಪುತ್ರ ರಂಗನಾಥನಿಗೆ ಸಂಪ್ರದಾಯ ಬದ್ಧವಾಗಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದಾರೆ. ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ರಂಗನಾಥ ಸೌಂದರ್ಯಳಿಗೆ ಊಟ ನೀರು ಕೂಡ ನೀಡದೆ ಚಿತ್ರ ಹಿಂಸೆ ನೀಡಿದ್ದಾನೆ.‌ ನಿನ್ನನ್ನು ಮದುವೆಯಾಗಿದ್ದೆ ನನ್ನ ಕರ್ಮ. ನೀನು ಚೆನ್ನಾಗಿಲ್ಲ. ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಹಲವು ಬಾರಿ ಬೆದರಿಸಿ ಹಿಂಸಿಸುತ್ತಿದ್ದ ಎನ್ನಲಾಗಿದೆ.
ನನ್ನ ತಾಯಿ ಮನೆಗೆ ಹೋಗಿ ಬರುವಲ್ಲಿ ವರದಕ್ಷಿಣೆ ತಂದರೆ ಮಾತ್ರ ನಮ್ಮ ಮನೆಗೆ ಬಾ ಇಲ್ಲದಿದ್ದರೆ ನಿಮ್ಮಪ್ಪನ ಮನೆಯಲ್ಲೇ ಇದ್ದುಬಿಡು ಎಂದು ಎಚ್ಚರಿಕೆ ನೀಡಿದ್ದ.‌ಇದನ್ನೇಲ್ಲಾ ಅನುಸರಿಸಿಕೊಂಡು ನನ್ನ ಮಗಳು ಚೆನ್ನಾಗಿ ಇರಬೇಕು ಎಂದು ಸೌಂದರ್ಯ ತಂದೆ ಆನಂದ ೨ ಲಕ್ಷ ಹಣವನ್ನೂ ನೀಡಿದ್ದರಂತೆ. ಆದರೂ ಕ್ಯಾತೆ ನಿಲ್ಲಿಸದ ಅಳಿಯನ ವರ್ತನೆಗೆ ಬೆಸತ್ತು ಸೌಂದರ್ಯ ತಂದೆ ಆನಂದ್ ಮೃತಪಟ್ಟಿದ್ದರು.‌
ಇಷ್ಟೆಲ್ಲಾ ಆದ ನಂತರವೂ ರಂಗನಾಥನ ಉಪಟಳ ಕಡಿಮೆಯಾಗದೇ ಅನೇಕ ಬಾರಿ ಎಲ್ಲೆಂದರಲ್ಲಿಗೆ ಸಿಗರೇಟಿನಿಂದ ಸುಟ್ಟಿದ್ದಾನೆ.‌ಹುಟ್ಟಿದ ಮಗುವಿಗೂ ತಿನ್ನಲು ಅನ್ನ ಕೊಡದೆ ಹಸಿದ ಹೊಟ್ಟೆಯಲ್ಲೇ ಮಲಗಿಸುತ್ತಿದ್ದನಂತೆ. ಮಗು ಬೆಳಗ್ಗೆಯೇ ಎದ್ದು ಅಮ್ಮ
ಹೊಟ್ಟೆ ಹಸಿವು ಎಂದಾಗಲೂ ಸುಮ್ಮನಿರುತ್ತಿದ್ದರು ಎಂದು ಆರೋಪಿಸಿದ್ದಾರೆ.‌
ಕೇವಲ ತಾಯಿಗೆ ಮಾತ್ರ ಹಿಂಸೆ ಕೊಟ್ಟಿದ್ದು ಸಾಲದೆಂದು
ಮಗುವಿಗೂ ಬಾಸುಂಡೆ ಬರುವಂತೆ ಥಳಿಸಿದ್ದಾನೆ.
ಪತಿಯ ಚಿತ್ರಹಿಂಸೆ ತಾಳಲಾರದೆ ಪೊಲೀಸರ ಮೊರೆ ಹೋಗಿರುವ ಸೌಂದರ್ಯ ಕೊಣನೂರು ಠಾಣೆಯಲ್ಲಿ ದೂರು ದಾಖಲಿಸಿದ್ದು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮಗು ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಗನಾಥ್ ತಲೆಮರೆಸಿಕೊಂಡಿದ್ದು ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.