ETV Bharat / state

9 ದಿನಗಳ ಕಾಲ ಭಕ್ತರಿಗೆ ಸ್ವರ್ಣಗೌರಿ ದರ್ಶನ... ಕಣ್ಣೀರು ಸುರಿಸುವ ಗೌರಮ್ಮ! - hassangowri news

ಹಾಸನ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಕರ್ಪೂರ ದೇವತೆ ಸ್ವರ್ಣಗೌರಿ ದೇವಿಯು 9 ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ನೀಡಲಿದ್ದಾಳೆ.

ಕಣ್ಣೀರು ಸುರಿಸುವ ಗೌರಮ್ಮ..!
author img

By

Published : Aug 31, 2019, 8:41 AM IST

ಹಾಸನ: ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಕರ್ಪೂರ ದೇವತೆ ಸ್ವರ್ಣಗೌರಿ ದೇವಿಯು 9 ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ನೀಡಲಿದ್ದು, ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದ ಭಕ್ತರು ಆಗಮಿಸಿ ಪೂಜಿಸುವುದು ವಿಶೇಷವಾಗಿದೆ.

ಕಣ್ಣೀರು ಸುರಿಸುವ ಗೌರಮ್ಮ!

ಸುಮಾರು 155 ವರ್ಷಗಳ ಇತಿಹಾಸ ಹೊಂದಿರುವ ಮಾಡಾಳು ಗ್ರಾಮದ ಸ್ವರ್ಣಗೌರಿ ದೇವಿಯು ಇಲ್ಲಿನ ಸ್ಥಳೀಯರ ಆರಾಧ್ಯ ದೇವತೆ. ನಂಬಿ ಬಂದವರ ಇಷ್ಟಾರ್ಥ ಈಡೇರಿಸುತ್ತಾಳೆ ಎಂಬ ನಂಬಿಕೆಯಿಂದ ಭಕ್ತ ಸಮೂಹವೇ ಇಲ್ಲಿಗೆ ಹರಿದು ಬರುತ್ತದೆ. ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ದೇವರಲ್ಲಿ ಕರ್ಪೂರದ ಹರಕೆ ಹೊತ್ತರೆ ಸಾಕು ತಾಯಿ ಸಕಲವನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥಗಳು ನೆರವೇರಿದಾಗ ದೇವಿಗೆ ಮಡಲಕ್ಕಿ ರೂಪದಲ್ಲಿ ಅಕ್ಕಿ, ಸೀರೆ, ಬಳೆ ನೀಡಿ ದೇವಸ್ಥಾನದ ಮುಂದೆ ದುಗ್ಗಳವನ್ನು ಹೊತ್ತು ಕರ್ಪೂರ ಬೆಳಗಿಸುತ್ತಾರೆ.

ದೇವಿ ಪ್ರತಿಷ್ಠಾಪನೆಯ ಇತಿಹಾಸ:

ಹಾರನಹಳ್ಳಿ ಕೋಡಿಮಠದ ಶಿವಲಿಂಗಜ್ಜಯ್ಯನವರು ಹಾಗೂ ಮಾಡಾಳು ಗ್ರಾಮದ ಮುದ್ದೇಗೌಡರು ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮಕ್ಕೆ ಗೌರಮ್ಮ ಜಾತ್ರೆ ಮುಗಿಸಿ ವಾಪಸ್ ಬರುವಾಗ ಒಂದು ಹೆಣ್ಣಿನ ರೂಪದಲ್ಲಿ ಶ್ರೀ ದೇವಿಯು ನಾನು ಬರುತ್ತೇನೆ ಕರೆದುಕೊಂಡು ಹೋಗಿ ಎಂದು ಶ್ರೀಗಳಲ್ಲಿ ಹೇಳುವಂತಹ ಒಂದು ಅಶರೀರವಾಣಿ ಕೇಳಿತಂತೆ. ಆಗ ಶಿವಲಿಂಗಜ್ಜಯವರು ಗಂಗೆಯ ರೂಪದಲ್ಲಿ ಗೌರಮ್ಮನನ್ನು ತೆಗೆದುಕೊಂಡು ಬಂದರಂತೆ. ಹೀಗೆ ತೆಗದುಕೊಂಡು ಬಂದ ಗಂಗೆಯನ್ನು ಮುದ್ದೇಗೌಡರ ಮನೆಯ ಬಾವಿಯಲ್ಲಿ ಹಾಕಿ ಗೌರಮ್ಮ ದೇವಿಯಲ್ಲಿ ಶ್ರೀಗಳು ಇಲ್ಲೇ ನೆಲೆಸುವಂತೆ ಹೇಳುತ್ತಾ ಪ್ರತಿ ವರ್ಷ ಬರುವ ಗೌರಮ್ಮ ದೇವಿಯ ದಿನಕ್ಕೆ ಅರಿಶಿನದಿಂದ ಮಾಡುವ ವಿಗ್ರಹದ ರೂಪದಲ್ಲಿ ಬಂದು ಬರುವ ಭಕ್ತಾದಿಗಳಿಗೆ ಹರಸುವಂತೆ ಹೇಳುತ್ತಾರೆ. ಅಂದಿನಿಂದ ವಿಗ್ರಹ ರೂಪಕ್ಕೆ ಅಂದು ಶಿವಲಿಂಗಜ್ಜಯ್ಯನವರು ಒಂದು ದಾರದ ಅಳತೆಯನ್ನು ಆಚಾರರಿಗೆ ನೀಡಿ ಈ ಅಳತೆಗೆ ಗೌರಮ್ಮನವರನ್ನು ಮಾಡುವಂತೆ ಹೇಳುತ್ತಾರೆ. ತದ ನಂತರ ಗೌರಮ್ಮ ದೇವಿಯ ದಿನದಂದು ಶಿವಲಿಂಗಜ್ಜಯ್ಯನವರು ದೇವಿಗೆ ಒಂದು ವಜ್ರದ ಮೂಗುತಿಯನ್ನು ಹಾಕುತ್ತಾರೆ. ಅಂದಿನಿಂದ ಇಂದಿನವರೆಗೂ ಕೋಡಿಮಠದ ಶ್ರೀಗಳೇ ಮೊದಲ ಪೂಜೆ ಮಾಡುತ್ತಾ ಬರುತ್ತಿದ್ದು, ನಂತರ ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಾರೆ. ದೇವಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನೆಲಸಿ ಬರುವ ಭಕ್ತರಿಗೆ ಬಹಳ ಆಕರ್ಷಣೀಯಯವಾಗಿ ಕಾಣುವುದು ವಿಶೇಷ.

ಕಣ್ಣೀರು ಸುರಿಸುವ ಗೌರಮ್ಮ:
9 ದಿನಗಳ ಕಾಲ ದೇವಿಯು ಭಕ್ತರಿಗೆ ದರ್ಶನ ನೀಡಿ ನಿಮಜ್ಜನ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳು ಮೂಗುತಿಯನ್ನು ತೆಗೆಯುವಾಗ ಕಣ್ಣಿನಲ್ಲಿ ನೀರು ಸುರಿಸಿ ಹೋಗುವುದು ಭಕ್ತರಿಗೆ ಆಶ್ಚರ್ಯದ ಸಂಗತಿಯಾಗಿದೆ.

ಹಾಸನ: ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಕರ್ಪೂರ ದೇವತೆ ಸ್ವರ್ಣಗೌರಿ ದೇವಿಯು 9 ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ನೀಡಲಿದ್ದು, ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದ ಭಕ್ತರು ಆಗಮಿಸಿ ಪೂಜಿಸುವುದು ವಿಶೇಷವಾಗಿದೆ.

ಕಣ್ಣೀರು ಸುರಿಸುವ ಗೌರಮ್ಮ!

ಸುಮಾರು 155 ವರ್ಷಗಳ ಇತಿಹಾಸ ಹೊಂದಿರುವ ಮಾಡಾಳು ಗ್ರಾಮದ ಸ್ವರ್ಣಗೌರಿ ದೇವಿಯು ಇಲ್ಲಿನ ಸ್ಥಳೀಯರ ಆರಾಧ್ಯ ದೇವತೆ. ನಂಬಿ ಬಂದವರ ಇಷ್ಟಾರ್ಥ ಈಡೇರಿಸುತ್ತಾಳೆ ಎಂಬ ನಂಬಿಕೆಯಿಂದ ಭಕ್ತ ಸಮೂಹವೇ ಇಲ್ಲಿಗೆ ಹರಿದು ಬರುತ್ತದೆ. ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ದೇವರಲ್ಲಿ ಕರ್ಪೂರದ ಹರಕೆ ಹೊತ್ತರೆ ಸಾಕು ತಾಯಿ ಸಕಲವನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥಗಳು ನೆರವೇರಿದಾಗ ದೇವಿಗೆ ಮಡಲಕ್ಕಿ ರೂಪದಲ್ಲಿ ಅಕ್ಕಿ, ಸೀರೆ, ಬಳೆ ನೀಡಿ ದೇವಸ್ಥಾನದ ಮುಂದೆ ದುಗ್ಗಳವನ್ನು ಹೊತ್ತು ಕರ್ಪೂರ ಬೆಳಗಿಸುತ್ತಾರೆ.

ದೇವಿ ಪ್ರತಿಷ್ಠಾಪನೆಯ ಇತಿಹಾಸ:

ಹಾರನಹಳ್ಳಿ ಕೋಡಿಮಠದ ಶಿವಲಿಂಗಜ್ಜಯ್ಯನವರು ಹಾಗೂ ಮಾಡಾಳು ಗ್ರಾಮದ ಮುದ್ದೇಗೌಡರು ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮಕ್ಕೆ ಗೌರಮ್ಮ ಜಾತ್ರೆ ಮುಗಿಸಿ ವಾಪಸ್ ಬರುವಾಗ ಒಂದು ಹೆಣ್ಣಿನ ರೂಪದಲ್ಲಿ ಶ್ರೀ ದೇವಿಯು ನಾನು ಬರುತ್ತೇನೆ ಕರೆದುಕೊಂಡು ಹೋಗಿ ಎಂದು ಶ್ರೀಗಳಲ್ಲಿ ಹೇಳುವಂತಹ ಒಂದು ಅಶರೀರವಾಣಿ ಕೇಳಿತಂತೆ. ಆಗ ಶಿವಲಿಂಗಜ್ಜಯವರು ಗಂಗೆಯ ರೂಪದಲ್ಲಿ ಗೌರಮ್ಮನನ್ನು ತೆಗೆದುಕೊಂಡು ಬಂದರಂತೆ. ಹೀಗೆ ತೆಗದುಕೊಂಡು ಬಂದ ಗಂಗೆಯನ್ನು ಮುದ್ದೇಗೌಡರ ಮನೆಯ ಬಾವಿಯಲ್ಲಿ ಹಾಕಿ ಗೌರಮ್ಮ ದೇವಿಯಲ್ಲಿ ಶ್ರೀಗಳು ಇಲ್ಲೇ ನೆಲೆಸುವಂತೆ ಹೇಳುತ್ತಾ ಪ್ರತಿ ವರ್ಷ ಬರುವ ಗೌರಮ್ಮ ದೇವಿಯ ದಿನಕ್ಕೆ ಅರಿಶಿನದಿಂದ ಮಾಡುವ ವಿಗ್ರಹದ ರೂಪದಲ್ಲಿ ಬಂದು ಬರುವ ಭಕ್ತಾದಿಗಳಿಗೆ ಹರಸುವಂತೆ ಹೇಳುತ್ತಾರೆ. ಅಂದಿನಿಂದ ವಿಗ್ರಹ ರೂಪಕ್ಕೆ ಅಂದು ಶಿವಲಿಂಗಜ್ಜಯ್ಯನವರು ಒಂದು ದಾರದ ಅಳತೆಯನ್ನು ಆಚಾರರಿಗೆ ನೀಡಿ ಈ ಅಳತೆಗೆ ಗೌರಮ್ಮನವರನ್ನು ಮಾಡುವಂತೆ ಹೇಳುತ್ತಾರೆ. ತದ ನಂತರ ಗೌರಮ್ಮ ದೇವಿಯ ದಿನದಂದು ಶಿವಲಿಂಗಜ್ಜಯ್ಯನವರು ದೇವಿಗೆ ಒಂದು ವಜ್ರದ ಮೂಗುತಿಯನ್ನು ಹಾಕುತ್ತಾರೆ. ಅಂದಿನಿಂದ ಇಂದಿನವರೆಗೂ ಕೋಡಿಮಠದ ಶ್ರೀಗಳೇ ಮೊದಲ ಪೂಜೆ ಮಾಡುತ್ತಾ ಬರುತ್ತಿದ್ದು, ನಂತರ ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತಾರೆ. ದೇವಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನೆಲಸಿ ಬರುವ ಭಕ್ತರಿಗೆ ಬಹಳ ಆಕರ್ಷಣೀಯಯವಾಗಿ ಕಾಣುವುದು ವಿಶೇಷ.

ಕಣ್ಣೀರು ಸುರಿಸುವ ಗೌರಮ್ಮ:
9 ದಿನಗಳ ಕಾಲ ದೇವಿಯು ಭಕ್ತರಿಗೆ ದರ್ಶನ ನೀಡಿ ನಿಮಜ್ಜನ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳು ಮೂಗುತಿಯನ್ನು ತೆಗೆಯುವಾಗ ಕಣ್ಣಿನಲ್ಲಿ ನೀರು ಸುರಿಸಿ ಹೋಗುವುದು ಭಕ್ತರಿಗೆ ಆಶ್ಚರ್ಯದ ಸಂಗತಿಯಾಗಿದೆ.

Intro:ಹಾಸನ : ರಾಜ್ಯದಲ್ಲೇ ಪ್ರಸಿದ್ದಿ ಪಡೆದಿರುವ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಕರ್ಪೂರ ದೇವತೆ ಸ್ವರ್ಣಗೌರಿ ದೇವಿಯು ೯ ದಿನಗಳ ಕಾಲ ಗ್ರಾಮದಲ್ಲಿ ನೆಲಸಿ ಭಕ್ತಾದಿಗಳಿಗೆ ದರ್ಶನ ನೀಡುತ್ತಾ ಬೇಡಿ ಬಂದ ಭಕ್ತರಿಗೆ ಅರಸುತ್ತ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವುದರಿಂದ ಇಲ್ಲಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯದ ಭಕ್ತರು ಆಗಮಿಸಿ ಪೂಜಿಸುವುದು ವಿಶೇಷವಾಗಿದೆ.
Body:ರಾಜ್ಯದ ಎಲ್ಲೆಡೆ ಗಣೇಶೋತ್ಸವಕ್ಕೆ ಪ್ರಾಮುಖ್ಯತೆ ಇದ್ದರೆ ಇಲ್ಲಿ ಅದಕ್ಕೆ ವಿಭಿನ್ನ ಎಂಬಂತೆ ಗೌರಿದೇವಿಗೆ ಹೆಚ್ಚು ಮನ್ನಣೆ. ೧೫೫ ವರ್ಷಗಳ ಇತಿಹಾಸವನ್ನು ಹೊಂದಿರುವ ಇಲ್ಲಿನ ಸ್ವರ್ಣಗೌರಿ ದೇವಿಯು ಈ ಗ್ರಾಮಕ್ಕೆ ಬಂದಿರುವುದೇ ಒಂದು ಅದ್ಬುತ ಸಂಗತಿ. ಹಾರನಹಳ್ಳಿ ಕೋಡಿಮಠದ ಶಿವಲಿಂಗಜ್ಜಯ್ಯನವರು ಹಾಗೂ ಮಾಡಾಳು ಗ್ರಾಮದ ಮುದ್ದೇಗೌಡರು ತುರುವೇಕೆರೆ ತಾಲ್ಲೂಕಿನ ಸಂಪಿಗೆ ಗ್ರಾಮಕ್ಕೆ ಗೌರಮ್ಮ ಜಾತ್ರೆಗೆಂದು ತೆರಳಿ ದೇವಿಯ ದರ್ಶನ ಮುಗಿಸಿಕೊಂಡು ವಾಪಸ್ಸು ಬರುವಾಗ ಒಂದು ಹೆಣ್ಣಿನ ರೂಪದಲ್ಲಿ ಶ್ರೀ ದೇವಿಯು  ನಾನು ಬರುತ್ತೇನೆ ಕರೆದುಕೊಂಡು ಹೋಗಿ ಎಂದು ಶ್ರೀಗಳಲ್ಲಿ ಹೇಳುವಂತ ಒಂದು ಅಶರೀರವಾಣಿ ಕೇಳಿಬಂದಾಗ ಶಿವಲಿಂಗಜ್ಜಯವರು ಗಂಗೆಯ ರೂಪದಲ್ಲಿ ಗೌರಮ್ಮನವರನ್ನು ತೆಗೆದುಕೊಂಡು ಬರುತ್ತಾರೆ.
ಹೀಗೆ ತೆಗದುಕೊಂಡು ಬಂದ ಗಂಗೆಯನ್ನು ಮುದ್ದೇಗೌಡರ ಮನೆಯ ಬಾವಿಯಲ್ಲಿ ಹಾಕಿ ಗೌರಮ್ಮ ದೇವಿಯಲ್ಲಿ ಶ್ರೀಗಳು ಇಲ್ಲೇ ನೆಲೆಸುವಂತೆ ಹೇಳುತ್ತಾ ಪ್ರತಿ ವರ್ಷ ಬರುವ ಗೌರಮ್ಮ ದೇವಿಯ ದಿನಕ್ಕೆ ಅರಿಶಿನದಿಂದ ಮಾಡುವ ವಿಗ್ರಹದ ರೂಪದಲ್ಲಿ ಬಂದು ಬರುವ ಭಕ್ತಾದಿಗಳಿಗೆ ಹರಿಸುವಂತೆ ಹೇಳುತ್ತಾರೆ.
ಅಂದಿನಿಂದ ವಿಗ್ರಹ ರೂಪಕ್ಕೆ ಅಂದು ಶಿವಲಿಂಗಜ್ಜಯ್ಯನವರು ಒಂದು ದಾರದ ಅಳತೆಯನ್ನು ಆಚಾರರಿಗೆ ನೀಡಿ ಈ ಅಳತೆಗೆ ಗೌರಮ್ಮನವರನ್ನು ಮಾಡುವಂತೆ ಹೇಳುತ್ತಾರೆ ತದ ನಂತರ ಗೌರಮ್ಮ ದೇವಿಯ ದಿನದಂದು ಶಿವಲಿಂಗಜ್ಜಯ್ಯನವರು ದೇವಿಗೆ ಒಂದು ವಜ್ರದ ಮೂಗುತಿಯನ್ನು ಹಾಕುತ್ತಾರೆ ಅಂದಿನಿಂದ ಇಂದಿನವರೆಗೂ ಕೋಡಿಮಠದ ಶ್ರೀಗಳೇ ಮೊದಲ ಪೂಜೆಯನ್ನು ಮಾಡುತ್ತಾ ಬರುತ್ತಿದ್ದು ನಂತರ ಗ್ರಾಮದಲ್ಲಿ ಮೆರವಣಿಗೆ ನಡೆಸಿ ದೇವಿಯೂ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನೆಲಸಿ ಬರುವ ಭಕ್ತರಿಗೆ ಬಹಳ ಆಕರ್ಷಣೆಯವಾಗಿ ಕಾಣುತ್ತಾ ಇರುವುದು ವಿಶೇಷ.
ಕರ್ಪೂರದ ಹರಕೆ: ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ದೇವರಲ್ಲಿ ಕರ್ಪೂರದ ಹರಕೆಯನ್ನು ಹೊತ್ತರೆ ಸಾಕು ತಾಯಿ ಸಕಲವನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ನಡೆದುಕೊಂಡು ಬಂದಿದೆ. ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥಗಳು ನೆರವೇರಿದಾಗ ದೇವಿಗೆ ಮಡಲಕ್ಕಿ ರೂಪದಲ್ಲಿ ಅಕ್ಕಿ, ಸೀರೆ ಬಳೆಯನ್ನು ನೀಡಿ ದೇವಸ್ಥಾನದ ಮುಂದೆ ದುಗ್ಗಳವನ್ನು ಹೊತ್ತು ಕರ್ಪೂರವನ್ನು ಬೆಳಗಿಸುತ್ತಾರೆ.
ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಿಯೇ ಮಹಾ ಪ್ರಧಾನ, ಗೌರಿದೇವಿ ಯಾವುದೇ ಆಡಂಬರ ಬಯಸುವುದಿಲ್ಲ, ಹಾಗೆಯೇ ಬೆಳ್ಳಿ, ಬಂಗಾರ ಛತ್ರಿ ಚಾಮರಗಳಿಲ್ಲ, ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಹರಕೆ ಮಾಡಿಕೊಳ್ಳುವ ಸೀರೆ, ಅಕ್ಕಿ ಹಾಗೂ ಕರ್ಪೂರ ಸೇವೆಯೇ ಇಲ್ಲಿ ಹೆಚ್ಚು ಮಹತ್ವ ಪಡೆದಿದೆ. ಇಲ್ಲಿ ಯಾವುದೇ ಒಂದು ಕೋಮು ಜನಾಂಗ ಜಾತಿಯ ಜನರು ಸೇರಿ ನಡೆಸುವ ಜಾತ್ರೆಯಲ್ಲ, ಇಲ್ಲಿ ಸರ್ವ ಜನಾಂಗದ ಜನರು ಭಾಗಿಯಾಗಿ ತಮ್ಮ ಸೇವೆ ಸಲ್ಲಿಸುತ್ತಾರೆ. ಎಲ್ಲ ವರ್ಗದ ಜನರೂ ನೇರವಾಗಿ ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ.
ದೇವಿಯ ಪ್ರತಿಷ್ಠಾಪನೆ: ೯ ದಿನಗಳ ಕಾಲ ನೆಲೆಸಲಿರುವ ಗೌರಮ್ಮ ದೇವಿಯನ್ನು ಸೆಪ್ಟಂಬರ್ ೨ ರ ಸೋಮವಾರ ಗ್ರಾಮದ ಮಾಡಳಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.  ದೇವಿಯ ದರ್ಶನಕ್ಕೆ ರಾಜ್ಯದ ನಾನಾ ಕಡೆಯಿಂದ ಲಕ್ಷಾಂತರ ಭಕ್ತರು ದರ್ಶನ ಪಡೆಯಲಿದ್ದಾರೆ. ಸೆ.೯ ರಂದು ದೇವಿಗೆ ಮಹಾಮಂಗಳಾರತಿ, ಸೆ.೧೦ ರ ರಾತ್ರಿ ಚಂದ್ರಮಂಡಲೋತ್ಸವ, ದುಗ್ಗಳಸೇವೆ ಹಾಗೂ ಸೆ. ೧೧ ರಂದು ವಿಸರ್ಜನೆಯನ್ನು ಮಾಡಲಾಗುವುದು.
Conclusion:ಕಣ್ಣೀರು ಸುರಿಸುವ ಗೌರಮ್ಮ : ೯ ದಿನಗಳ ಕಾಲ ದೇವಿಯು ಭಕ್ತರಿಗೆ ದರ್ಶನ ನೀಡಿ ವಿಸರ್ಜನೆ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳು ಮೂಗುತಿಯನ್ನು ತೆಗೆಯುವಾಗ ಕಣ್ಣಿನಲ್ಲಿ ನೀರು ಸುರಿಸಿ ಹೋಗುವುದು ಭಕ್ತರಿಗೆ ಆಶ್ಚರ್ಯದ ಸಂಗತಿಯಾಗಿದೆ.

- ಅರಕೆರೆ ಮೋಹನಕುಮಾರ, ಈಟಿವಿಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.