ETV Bharat / state

ಆನ್​ಲೈನ್​​ನಲ್ಲಿ ಸಾಲ ಪಡೆದು ಹೆಚ್ಚಿನ ಬಡ್ಡಿ ಕಟ್ಟಲಾಗದೇ ಮನನೊಂದು ವ್ಯಕ್ತಿ ಆತ್ಮಹತ್ಯೆ

author img

By

Published : Mar 14, 2022, 3:42 PM IST

Updated : Mar 14, 2022, 4:10 PM IST

ಈ ಸಾಲವನ್ನು ಪ್ರತಿ ತಿಂಗಳು ಮರುಪಾವತಿ ಮಾಡುತ್ತಿದ್ದರು. ಕೋವಿಡ್-19 ಹಿನ್ನೆಲೆ ಕೆಲ ತಿಂಗಳಿನಿಂದ ಸಾಲ ಕಟ್ಟಲು ಆಗಿರಲಿಲ್ಲ. ಹಾಗಾಗಿ, ಸಾಲಕ್ಕೆ ದುಬಾರಿ ಬಡ್ಡಿ ವಿಧಿಸಲಾಗಿತ್ತು..

A person who has taken a loan through the online
ಮನನೊಂದು ಆತ್ಮಹತ್ಯೆಗೆ ಶರಣಾದ ಅಂಬರೀಶ್​

ಹಾಸನ : ಅಂಬರೀಶ್​ ಎಂಬುವರು ಆನ್​​ಲೈನ್​​ನಲ್ಲಿ ಸಾಲ ಪಡೆದಿದ್ದರು. ಆ ಸಾಲವನ್ನು ಮರುಪಾವತಿಸದಿರೋದಕ್ಕೆ ಕಂಪನಿಯವರು ಅವರ ಫೇಸ್​​ಬುಕ್​​ ಅಕೌಂಟ್​ನನ್ನು ಹ್ಯಾಕ್​ ಮಾಡಿ, ಅಶ್ಲೀಲ ಸಂದೇಶವನ್ನು ಎಲ್ಲರಿಗೂ ಕಳುಹಿಸಿದ್ದಾರೆ. ಇದರಿಂದ ಅಪಮಾನಗೊಂಡ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ನಗರದ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ.

ಮನನೊಂದು ಆತ್ಮಹತ್ಯೆಗೆ ಶರಣಾದ ಅಂಬರೀಶ್​

ಹಾಸನ ನಗರದ ಉದಯಗಿರಿ ಬಡಾವಣೆಯ ಅಂಬರೀಶ್ ಕೆ. ಸಿ. (39) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದ ಮೃತ ಅಂಬರೀಶ್, ವ್ಯಾಪಾರಕ್ಕಾಗಿ ಆನ್​​ಲೈನ್​​ನಲ್ಲಿ ಸಾಲ ಪಡೆದಿದ್ದರು.

A person who has taken a loan through the online
ಮನನೊಂದು ಆತ್ಮಹತ್ಯೆಗೆ ಶರಣಾದ ಅಂಬರೀಶ್​

ಈ ಸಾಲವನ್ನು ಪ್ರತಿ ತಿಂಗಳು ಮರುಪಾವತಿ ಮಾಡುತ್ತಿದ್ದರು. ಕೋವಿಡ್-19 ಹಿನ್ನೆಲೆ ಕೆಲ ತಿಂಗಳಿನಿಂದ ಸಾಲ ಕಟ್ಟಲು ಆಗಿರಲಿಲ್ಲ. ಹಾಗಾಗಿ, ಸಾಲಕ್ಕೆ ದುಬಾರಿ ಬಡ್ಡಿ ವಿಧಿಸಲಾಗಿತ್ತು.

ಇದನ್ನೂ ಓದಿ: ಪತ್ನಿಯ ಮೇಲಿನ ಪತಿಯ ಹಲ್ಲೆಗೆ ಬಿಗ್ ಟ್ವಿಸ್ಟ್: ಗಂಡನ ಕ್ರೌರ್ಯ ಬಿಚ್ಚಿಟ್ಟ ಅಪೂರ್ವ

ಇದನ್ನ ಪ್ರಶ್ನೆ ಮಾಡಿದ ಮೃತ ಅಂಬರೀಶ್​​ಗೆ ಬೆದರಿಕೆ ಸಹ ಹಾಕಿದ್ದರು ಎನ್ನಲಾಗಿದೆ. ಬಳಿಕ ಅವರನ್ನ ಅವ್ಯಾಚ ಶಬ್ಧಗಳಿಂದ ನಿಂದಿಸಿ, ಫೇಸ್​​ಬುಕ್ ಅಕೌಂಟ್​​ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋಗಳನ್ನು ಎಲ್ಲರಿಗೂ ಕಳಿಸಿದ್ದರು ಎನ್ನಲಾಗ್ತಿದೆ.

ಇದರಿಂದ ಮನನೊಂದ ಅಂಬರೀಶ್, 3 ದಿನಗಳ ಹಿಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವಿಗೀಡಾಗಿದ್ದಾರೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಹಾಸನ : ಅಂಬರೀಶ್​ ಎಂಬುವರು ಆನ್​​ಲೈನ್​​ನಲ್ಲಿ ಸಾಲ ಪಡೆದಿದ್ದರು. ಆ ಸಾಲವನ್ನು ಮರುಪಾವತಿಸದಿರೋದಕ್ಕೆ ಕಂಪನಿಯವರು ಅವರ ಫೇಸ್​​ಬುಕ್​​ ಅಕೌಂಟ್​ನನ್ನು ಹ್ಯಾಕ್​ ಮಾಡಿ, ಅಶ್ಲೀಲ ಸಂದೇಶವನ್ನು ಎಲ್ಲರಿಗೂ ಕಳುಹಿಸಿದ್ದಾರೆ. ಇದರಿಂದ ಅಪಮಾನಗೊಂಡ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ನಗರದ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ.

ಮನನೊಂದು ಆತ್ಮಹತ್ಯೆಗೆ ಶರಣಾದ ಅಂಬರೀಶ್​

ಹಾಸನ ನಗರದ ಉದಯಗಿರಿ ಬಡಾವಣೆಯ ಅಂಬರೀಶ್ ಕೆ. ಸಿ. (39) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದ ಮೃತ ಅಂಬರೀಶ್, ವ್ಯಾಪಾರಕ್ಕಾಗಿ ಆನ್​​ಲೈನ್​​ನಲ್ಲಿ ಸಾಲ ಪಡೆದಿದ್ದರು.

A person who has taken a loan through the online
ಮನನೊಂದು ಆತ್ಮಹತ್ಯೆಗೆ ಶರಣಾದ ಅಂಬರೀಶ್​

ಈ ಸಾಲವನ್ನು ಪ್ರತಿ ತಿಂಗಳು ಮರುಪಾವತಿ ಮಾಡುತ್ತಿದ್ದರು. ಕೋವಿಡ್-19 ಹಿನ್ನೆಲೆ ಕೆಲ ತಿಂಗಳಿನಿಂದ ಸಾಲ ಕಟ್ಟಲು ಆಗಿರಲಿಲ್ಲ. ಹಾಗಾಗಿ, ಸಾಲಕ್ಕೆ ದುಬಾರಿ ಬಡ್ಡಿ ವಿಧಿಸಲಾಗಿತ್ತು.

ಇದನ್ನೂ ಓದಿ: ಪತ್ನಿಯ ಮೇಲಿನ ಪತಿಯ ಹಲ್ಲೆಗೆ ಬಿಗ್ ಟ್ವಿಸ್ಟ್: ಗಂಡನ ಕ್ರೌರ್ಯ ಬಿಚ್ಚಿಟ್ಟ ಅಪೂರ್ವ

ಇದನ್ನ ಪ್ರಶ್ನೆ ಮಾಡಿದ ಮೃತ ಅಂಬರೀಶ್​​ಗೆ ಬೆದರಿಕೆ ಸಹ ಹಾಕಿದ್ದರು ಎನ್ನಲಾಗಿದೆ. ಬಳಿಕ ಅವರನ್ನ ಅವ್ಯಾಚ ಶಬ್ಧಗಳಿಂದ ನಿಂದಿಸಿ, ಫೇಸ್​​ಬುಕ್ ಅಕೌಂಟ್​​ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋಗಳನ್ನು ಎಲ್ಲರಿಗೂ ಕಳಿಸಿದ್ದರು ಎನ್ನಲಾಗ್ತಿದೆ.

ಇದರಿಂದ ಮನನೊಂದ ಅಂಬರೀಶ್, 3 ದಿನಗಳ ಹಿಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವಿಗೀಡಾಗಿದ್ದಾರೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated : Mar 14, 2022, 4:10 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.