ETV Bharat / state

ಕದಿಯಲು ಬಂದವನಿಗೆ ಮರ್ಮಾಂಗಕ್ಕೆ ಒದ್ದ ಹಸು... ಸ್ಥಳದಲ್ಲೇ ಹಾರಿಹೋಯ್ತು ವ್ಯಕ್ತಿ ಪ್ರಾಣ..!

ಜಾನುವಾರು ಕಳ್ಳತನಕ್ಕೆ ಬಂದಿದ್ದ ವ್ಯಕ್ತಿ, ಹೆಣವಾಗಿದ್ದಾನೆ. ಹಸು ಆತನ ಮರ್ಮಾಂಗಕ್ಕೆ ಒದ್ದಿದ್ದರಿಂದ ಆ ವ್ಯಕ್ತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಹಾಸನ ಜಿಲ್ಲೆಯಲ್ಲಿ ಈ ನಡೆದಿದೆ.

author img

By

Published : Jun 24, 2019, 12:20 PM IST

ಜಾನುವಾರು ಕಳ್ಳತನ ಮಾಡಲು ಬಂದು.. ಹಸುವಿನಿಂದಲೇ ಪ್ರಾಣಬಿಟ್ಟ


ಹಾಸನ: ಜಾನುವಾರು ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ಒದ್ದು ಹಸುವೇ ಸಾಯಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಗೋವಿಂದಪ್ಪ (55) ಮೃತ ವ್ಯಕ್ತಿ. ಈತ ಹಸುವನ್ನು ಕದ್ದು ವಾಹನಕ್ಕೆ ಸಾಗಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮೃತನ ಶವ ಪತ್ತೆಯಾಗಿದೆ. ತೋಟದ ಮನೆಯಲ್ಲಿದ್ದ ಹಸುವನ್ನು ಗೋವಿಂದಪ್ಪ ಅಪಹರಿಸಿದ್ದ. ಅದನ್ನು ವಾಹನದಲ್ಲಿ ಸಾಗಿಸುತ್ತಾ ಎರಡು ಕಿಲೋ ಮೀಟರ್​ ಸಾಗಿದ್ದ. ನಿರ್ಜನ ಪ್ರದೇಶದಲ್ಲಿ ಹಸುವಿನ ಕಾಲು ಕಟ್ಟಿ ಹಾಕಿ ವಾಹನದಲ್ಲಿ ಸಾಗಿಸಲು ಮುಂದಾದಾಗ ಹಸು ಗೋವಿಂದಪ್ಪನ ಮರ್ಮಾಂಗಕ್ಕೆ ಒದ್ದಿದೆ. ಹಸು ಒದ್ದಿದ್ದಕ್ಕೆ ಗೋ ಕಳ್ಳ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಗೋವಿಂದಪ್ಪನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


ಹಾಸನ: ಜಾನುವಾರು ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ಒದ್ದು ಹಸುವೇ ಸಾಯಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಗೋವಿಂದಪ್ಪ (55) ಮೃತ ವ್ಯಕ್ತಿ. ಈತ ಹಸುವನ್ನು ಕದ್ದು ವಾಹನಕ್ಕೆ ಸಾಗಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮೃತನ ಶವ ಪತ್ತೆಯಾಗಿದೆ. ತೋಟದ ಮನೆಯಲ್ಲಿದ್ದ ಹಸುವನ್ನು ಗೋವಿಂದಪ್ಪ ಅಪಹರಿಸಿದ್ದ. ಅದನ್ನು ವಾಹನದಲ್ಲಿ ಸಾಗಿಸುತ್ತಾ ಎರಡು ಕಿಲೋ ಮೀಟರ್​ ಸಾಗಿದ್ದ. ನಿರ್ಜನ ಪ್ರದೇಶದಲ್ಲಿ ಹಸುವಿನ ಕಾಲು ಕಟ್ಟಿ ಹಾಕಿ ವಾಹನದಲ್ಲಿ ಸಾಗಿಸಲು ಮುಂದಾದಾಗ ಹಸು ಗೋವಿಂದಪ್ಪನ ಮರ್ಮಾಂಗಕ್ಕೆ ಒದ್ದಿದೆ. ಹಸು ಒದ್ದಿದ್ದಕ್ಕೆ ಗೋ ಕಳ್ಳ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಗೋವಿಂದಪ್ಪನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Intro:ಹಾಸನ: ಜಾನುವಾರು ಕಳ್ಳತನ ಮಾಡಲು ಬಂದವನನ್ನ ಹಸುವೊಂದು ಮರ್ಮಾಂಗಕ್ಕೆ ಒದ್ದು ಸಾಯಿಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಗೋವಿಂದಪ್ಪ (55) ಮೃತ ವ್ಯಕ್ತಿಯಾಗಿದ್ದು, ಚನ್ನರಾಯಪಟ್ಟಣ ತಾಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ಇಂತಹದೊಂದು ಘಟನೆ ಜರುಗಿದೆ. ಹಸುವನ್ನು ಕದ್ದು ವಾಹನಕ್ಕೆ ಸಾಗಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮೃತನ ಶವ ಪತ್ತೆಯಾಗಿದೆ.

ತೋಟದ ಮನೆಯಲ್ಲಿದ್ದ ಹಸುವನ್ನು ಗೋವಿಂದಪ್ಪ ಎಂಬಾತ ಅಪಹರಿಸಿದ್ದ. ಅದನ್ನು ವಾಹನದಲ್ಲಿ ಸಾಗಿಸುತ್ತಾ ಎರಡು ಕಿಲೋಮೀಟರ್​ ಸಾಗಿದ್ದ. ನಿರ್ಜನ ಪ್ರದೇಶದಲ್ಲಿ ಹಸುವಿನ ಕಾಲು ಕಟ್ಟಿ ಹಾಕಿ ವಾಹನದಲ್ಲಿ ಸಾಗಿಸಲು ಮುಂದಾದಾಗ ಹಸು ಗೋವಿಂದಪ್ಪನ ಮರ್ಮಾಂಗಕ್ಕೆ ಒದ್ದಿದೆ. ಅಚ್ಚರಿ ಎಂಬಂತೆ ಹಸು ಒದ್ದಿದ್ದಕ್ಕೆ ಗೋ ಕಳ್ಳ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಭಾರತೀಯರು ಗೋವನ್ನು ದೇವರಂತೆ ಕಾಣುತ್ತಾರೆ. ವಿಶೇಷ ದಿನಗಳಲ್ಲಿ ಅದನ್ನು ಪೂಜಿಸುತ್ತಾರೆ. ಇಂಥ ಗೋವು ಕಳ್ಳತನವಾಗಿ ಬಿಟ್ಟರೆ ಅದನ್ನು ಅವರು ಎಂದಿಗೂ ಸಹಿಸುವುದಿಲ್ಲ. ಆದ್ರೆ ಇಂತಹುದನ್ನ ಸ್ವತಃ ಹಸುವೇ ಸಹಿಸದ ಹಿನ್ನಲೆಯಲ್ಲಿ ಆತನ ಸಾವಿಗೆ ಈ ಗೋವು ಕಾರಣವಾಗಿದೆ.

ಸದ್ಯ ಗೋವಿಂದಪ್ಪನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಮೃತಪಟ್ಟ ವ್ಯಕ್ತಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಇನ್ನು ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಈತನ ಸಾವಿಗೆ ಕಾರಣವೇನು ಎನ್ನುವ ವಿಚಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರಿಕ್ಷೆಯಲ್ಲಿ ಈತ ಹಸು ಒದ್ದು ಪ್ರಕರಣ ಹೊರಬೀಳಬೇಕಿದೆ.Body:0Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.