ETV Bharat / state

ನೆರೆ ಸಂತ್ರಸ್ತರಿಗೆ ಶೆಡ್ ನಿರ್ಮಿಸಿಕೊಡುವ ಭರವಸೆ ಕೊಟ್ಟ ನರಗುಂದ ತಹಶೀಲ್ದಾರ್​​​​ - ತಹಶೀಲ್ದಾರ್ ಕೆ ಬಿ ಕೋರಿಶೆಟ್ಟಿ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಕಮಾಪುರ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್, ಸಂತ್ರಸ್ತರ ಸಮಸ್ಯೆಗೆ ಕೂಡಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಶೆಡ್ ನಿರ್ಮಿಸಿ ಕೊಡುವ ಭರವಸೆ
author img

By

Published : Sep 7, 2019, 6:39 PM IST

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಲಕಮಾಪುರ ಗ್ರಾಮ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಮಲಪ್ರಭಾ ನದಿಯ ಪ್ರವಾಹಕ್ಕೊಳಗಾಗಿದೆ. ಹೀಗಾಗಿ ಅನಿವಾರ್ಯವಾಗಿ ಗ್ರಾಮಸ್ಥರು ಊರನ್ನು ತೊರೆದಿದ್ದಾರೆ. ಆದರೆ ಇವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಉಳಿಯೋದಕ್ಕೆ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಮಾತ್ರ ಸಂಪೂರ್ಣ ಬೇಜವಾಬ್ದಾರಿ ಪ್ರದರ್ಶನ ಮಾಡಿದೆ. ಈ ಕುರಿತು ಈಟಿವಿ ಭಾರತದಲ್ಲಿ ವರದಿ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್, ಕೂಡಲೇ ಶೆಡ್ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ತಾತ್ಕಾಲಿಕ ಶೆಡ್ ನಿರ್ಮಿಸಿಡಲು ಗ್ರಾಮಸ್ಥರ ಆಗ್ರಹ

ಕಳೆದ ತಿಂಗಳ ಪ್ರವಾಹದ ಸಂದರ್ಭದಲ್ಲಿಯೇ ಗ್ರಾಮಸ್ಥರು ತಾತ್ಕಾಲಿಕ ಶೆಡ್​ಗೆ ಬೇಡಿಕೆ ಇಟ್ಟಿದ್ದರು. ಆದರೂ ಸಹ ಜಿಲ್ಲಾಡಳಿತ ಇವರ ಬೇಡಿಕೆ ಈಡೇರಿಸಿರಲಿಲ್ಲ. ಈಗ ಸಹ ಅದೇ‌ ನಿರ್ಲಕ್ಷ್ಯ ತೋರಿದೆ. ಇನ್ನು ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಿ ಅಂತ ಬೇಡಿಕೆಯಿಟ್ರೂ ಸಹ ಅದಕ್ಕೂ ಸ್ಪಂದನೆ ಮಾಡದ ಜಿಲ್ಲಾಡಳಿತ, ಇಲ್ಲಸಲ್ಲದ ಕಾರಣ ಹೇಳುತ್ತಿದೆ. ಹೀಗಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಈ ಪರಿಸ್ಥಿಯನ್ನು ಪರಾಮರ್ಶೆ ಮಾಡೋದಕ್ಕಾಗಿ ಸ್ಥಳಕ್ಕೆ ಹೋಗಿದ್ದ ನರಗುಂದ ತಹಶೀಲ್ದಾರ್ ಕೆ.ಬಿ.ಕೋರಿಶೆಟ್ಟಿ ಅವರಿಗೆ ಸಂತ್ರಸ್ತರು ತರಾಟೆಗೆ ತೆಗೆದುಕೊ‌ಂಡರು. ನೀವೇ ಏನಾದರೂ ಮಾಡಿ ನಮಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಿ ಅಂತ ಆಗ್ರಹ ಮಾಡಿದರು. ಇನ್ನು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ನಾವು ಬೀದಿಯಲ್ಲಿರಬೇಕಾಗಿದೆ. ರಾತ್ರಿಯೆಲ್ಲಾ ಅನಿವಾರ್ಯವಾಗಿ ರಸ್ತೆಯಲ್ಲೇ ಮಲಗೋವಂತಾಗಿದೆ. ಹುಳಹುಪ್ಪಟೆಗಳ ಕಾಟದ ಜೊತೆ, ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿಯೂ ಕಾಡುತ್ತಿದೆ.‌ ಕೂಡಲೇ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸಂತ್ರಸ್ತರ ಸಮಸ್ಯೆಗೆ ಕೂಡಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಲಕಮಾಪುರ ಗ್ರಾಮ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಮಲಪ್ರಭಾ ನದಿಯ ಪ್ರವಾಹಕ್ಕೊಳಗಾಗಿದೆ. ಹೀಗಾಗಿ ಅನಿವಾರ್ಯವಾಗಿ ಗ್ರಾಮಸ್ಥರು ಊರನ್ನು ತೊರೆದಿದ್ದಾರೆ. ಆದರೆ ಇವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಉಳಿಯೋದಕ್ಕೆ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಮಾತ್ರ ಸಂಪೂರ್ಣ ಬೇಜವಾಬ್ದಾರಿ ಪ್ರದರ್ಶನ ಮಾಡಿದೆ. ಈ ಕುರಿತು ಈಟಿವಿ ಭಾರತದಲ್ಲಿ ವರದಿ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್, ಕೂಡಲೇ ಶೆಡ್ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ತಾತ್ಕಾಲಿಕ ಶೆಡ್ ನಿರ್ಮಿಸಿಡಲು ಗ್ರಾಮಸ್ಥರ ಆಗ್ರಹ

ಕಳೆದ ತಿಂಗಳ ಪ್ರವಾಹದ ಸಂದರ್ಭದಲ್ಲಿಯೇ ಗ್ರಾಮಸ್ಥರು ತಾತ್ಕಾಲಿಕ ಶೆಡ್​ಗೆ ಬೇಡಿಕೆ ಇಟ್ಟಿದ್ದರು. ಆದರೂ ಸಹ ಜಿಲ್ಲಾಡಳಿತ ಇವರ ಬೇಡಿಕೆ ಈಡೇರಿಸಿರಲಿಲ್ಲ. ಈಗ ಸಹ ಅದೇ‌ ನಿರ್ಲಕ್ಷ್ಯ ತೋರಿದೆ. ಇನ್ನು ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಿ ಅಂತ ಬೇಡಿಕೆಯಿಟ್ರೂ ಸಹ ಅದಕ್ಕೂ ಸ್ಪಂದನೆ ಮಾಡದ ಜಿಲ್ಲಾಡಳಿತ, ಇಲ್ಲಸಲ್ಲದ ಕಾರಣ ಹೇಳುತ್ತಿದೆ. ಹೀಗಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಈ ಪರಿಸ್ಥಿಯನ್ನು ಪರಾಮರ್ಶೆ ಮಾಡೋದಕ್ಕಾಗಿ ಸ್ಥಳಕ್ಕೆ ಹೋಗಿದ್ದ ನರಗುಂದ ತಹಶೀಲ್ದಾರ್ ಕೆ.ಬಿ.ಕೋರಿಶೆಟ್ಟಿ ಅವರಿಗೆ ಸಂತ್ರಸ್ತರು ತರಾಟೆಗೆ ತೆಗೆದುಕೊ‌ಂಡರು. ನೀವೇ ಏನಾದರೂ ಮಾಡಿ ನಮಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಿ ಅಂತ ಆಗ್ರಹ ಮಾಡಿದರು. ಇನ್ನು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ನಾವು ಬೀದಿಯಲ್ಲಿರಬೇಕಾಗಿದೆ. ರಾತ್ರಿಯೆಲ್ಲಾ ಅನಿವಾರ್ಯವಾಗಿ ರಸ್ತೆಯಲ್ಲೇ ಮಲಗೋವಂತಾಗಿದೆ. ಹುಳಹುಪ್ಪಟೆಗಳ ಕಾಟದ ಜೊತೆ, ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿಯೂ ಕಾಡುತ್ತಿದೆ.‌ ಕೂಡಲೇ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸಂತ್ರಸ್ತರ ಸಮಸ್ಯೆಗೆ ಕೂಡಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Intro:ಮಲಪ್ರಭ ಪ್ರವಾಹಕ್ಕೆ ಸಿಲುಕಿದ ಮನೆ ಮಠ‌ ಕಳೆದುಕೊಂಡ ಗ್ರಾಮಸ್ಥರು...ಬೀದಿಗಳಲ್ಲೇ ರಾತ್ರಿ ಕಳೆದ ಸಂತ್ರಸ್ತರು...ತಾತ್ಕಾಲಿಕ ಶೆಡ್ ಸಹ ನಿರ್ಮಿಸದ ಜಿಲ್ಲಾಡಳಿತ.....ಈ ಟಿವಿ ಭಾರತ ವರದಿಗೆ ಎಚ್ಚೆತ್ತ ತಹಶೀಲ್ದಾರ್..ಕೂಡಲೇ ಶೆಡ್ ನಿರ್ಮಿಸಿ ಕೊಡುವ ಭರವಸೆ ನೀಡಿದ ತಹಶೀಲ್ದಾರ್

ಆಂಕರ್-ಅವ್ರೆಲ್ಲಾ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಈಗೀಗ ಸುಧಾರಿಸಿಕೊಳ್ತಿದ್ರು. ಆದ್ರೆ ಮತ್ತೆ ಪ್ರವಾಹ ಬಂದು ಅನುವಾರ್ಯವಾಗಿ ಊರು ತೊರೆದ್ರು ನೆರೆ ಸಂತ್ರಸ್ತರಾದ್ರು. ಆದ್ರೆ ಈ ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಬೇಕಾಸ ಜಿಲ್ಲಾಡಳಿತ ಮಾತ್ರ ನಿರ್ಲಕ್ಷ್ಯ ತೋರೋ ಮೂಲಕ ಅವರನ್ನು ರಾತ್ರಿಯೆಲ್ಲಾ ಬೀದಿಯಲ್ಲೇ ಕಳೆಯೋ ಹಾಗೆ ಮಾಡಿದೆ. ಈ ಕುರಿತು ಮುಂಜಾನೆ ಈ ಟಿವಿ ಭಾರತದಲ್ಲಿ ವರದಿ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಅವರಿಗೆ ಸಂತ್ರಸ್ತರು ತರಾಟೆಗೆ ತೆಹದುಕೊಂಡ್ರು.

ವಾ/ಓಂ೧-ತಾತ್ಕಾಲಿಕ ಶೆಡ್ಡ ಇಲ್ದೆ ಬೀದಿ ಬದಿಯಲ್ಲೇ ವಾಸ ಮಾಡ್ತಿರೋ ನೆರೆ ಸಂತ್ರಸ್ತರು....ತಿಂಗಳಲ್ಲಿ ಎರಡು ಬಾರಿ ಪ್ರವಾಹಕ್ಕೊಳಗಾದ ಲಕಮಾಪುರ ಗ್ರಾಮ......ತಾತ್ಕಾಲಿಕ‌ ಶೆಡ್ ನಿರ್ಮಿಸದೇ ನಿರ್ಲಕ್ಷ್ಯ ತೋರಿರೋ ಜಿಲ್ಲಾಡಳಿತ.....ಇದೆಲ್ಲಾ ನಡೆದಿರೋದು ಗದಗ ಜಿಲ್ಲೆ ನರಗುಂದ ತಾಲೂಕಿನ ಲಕಮಾಪುರ ಗ್ರಾಮದಲ್ಲಿ. ಲಕಮಾಪುರ ಗ್ರಾಮ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಮಲಪ್ರಭ ನದಿಯ ಪ್ರವಾಹಕ್ಕೊಳಗಾಗಿದೆ. ಹೀಗಾಗಿ ಅನಿವಾರ್ಯವಾಗಿ ಗ್ರಾಮಸ್ಥರು ಊರನ್ನು ತೊರೆದಿದ್ದಾರೆ. ಆದ್ರೆ ಇವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಉಳಿಯೋದಕ್ಕೆ ವ್ಯವಸ್ಥೆ ಮಾಡಬೇಕಾದ ಗದಗ ಜಿಲ್ಲಾಡಳಿತ ಮಾತ್ರ ಸಂಪೂರ್ಣ ಬೇಜವಾಬ್ದಾರಿ ಪ್ರದರ್ಶನ ಮಾಡಿದೆ. ಕಳೆದ ತಿಂಗಳ ಪ್ರವಾಹದ ಸಂದರ್ಭದಲ್ಲಿಯೇ ಗ್ರಾಮಸ್ಥರು ತಾತ್ಕಾಲಿಕ ಶೆಡ್ ಗೆ ಬೇಡಿಕೆ ಇಟ್ಟಿದ್ರು. ಆಗ್ಲೂ ಸಹ ಜಿಲ್ಲಾಡಳಿತ ಇವರ ಬೇಡಿಕೆ ಈಡೇರಿಸಿರಲಿಲ್ಲ. ಈಗ್ಲೂ ಸಹ ಅದೇ‌ ನಿರ್ಲಕ್ಷ್ಯ ತೋರಿದೆ. ಇನ್ನು ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಿ ಅಂತ ಬೇಡಿಕೆಯಿಟ್ರೂ ಸಹ ಅದಕ್ಕೂ ಸ್ಪಂದನೆ ಮಾಡದ ಜಿಲ್ಲಾಡಳಿತ, ಇಲ್ಲಸಲ್ಲದ ಕಾರಣ ಹೇಳ್ತಿದೆಯಂತೆ. ಹೀಗಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಬೈಟ್೦೧-ಬಸನಗೌಡ, ಗ್ರಾಮಸ್ಥ.

ವಾ/ಓಂ೨-ಇನ್ನು ಈ ಪರಿಸ್ಥಿಯನ್ನು ಪರಾಮರ್ಶೆ ಮಾಡೋದಕ್ಕಾಗಿ ಸ್ಥಳಕ್ಕೆ ಹೋಗಿದ್ದ ನರಗುಂದ ತಹಶೀಲ್ದಾರ್ ಕೆ ಬಿ ಕೋರಿಶೆಟ್ಟಿ ಅವರಿಗೆ ಸಂತ್ರಸ್ತರು ತರಾಟೆಗೆ ತೆಗೆದುಕೊ‌ಂಡ್ರು. ನೀವೇನಾದ್ರೂ ಮಾಡಿ ನಮಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಿ ಅಂತ ಆಗ್ರಹ ವ್ಯಕ್ತಪಡಿಸಿದ್ರು. ಇನ್ನು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ನಾವು ಬೀದಿಯಲ್ಲಿರಬೇಕಾಗಿದೆ. ರಾತ್ರಿಯೆಲ್ಲಾ ಅನಿವಾರ್ಯವಾಗಿ ರಸ್ತೆಯಲ್ಲೇ ಮಲಗೋವಂತಾಗಿದೆ. ಹುಳಹುಪ್ಪಟೆಗಳ ಕಾಟದ ಜೊತೆ, ಮಕ್ಕಳಿಗೆ ಸಾಂಕ್ರಾಮಿ ರೋಗದ ಭೀತಿಯೂ ಕಾಡ್ತಿದೆ.‌ ಕೂಡಲೇ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೈಟ್೦೨-ಸಿದ್ದಪ್ಪ, ಗ್ರಾಮಸ್ಥ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಾತ್ರ ಸಂತ್ರಸ್ತರ ಸಮಸ್ಯೆಗೆ ಕೂಡ್ಲೇ ಪರಿಹಾರ ಕಂಡುಹಿಡಿಯೋದಾಗಿ ಪೊಳ್ಳು ಭರವಸೆ ನೀಡ್ತಿದ್ದಾರೆ. ಏನೇ ಆಗ್ಲಿ ಬೀದಿಗೆ ಬಿದ್ದಿರೋ ಸಂತ್ರಸ್ತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕಾದ ಜವಾಬ್ದಾರಿ ಗದಗ ಜಿಲ್ಲಾಡಳಿತದ ಮೇಲಿದೆ.Body:ಗದಗConclusion:ಗದಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.