ETV Bharat / state

ಆರ್.ಬಿ ತಿಮ್ಮಾಪುರ ತಮ್ಮ ಪಕ್ಷದ ಒಳಜಗಳದ ಕಡೆ ಗಮನ ನೀಡಲಿ: ಸಿ.ಸಿ.ಪಾಟೀಲ್ ಟಾಂಗ್​

author img

By

Published : Sep 28, 2019, 2:34 PM IST

ವಿಜಯನಗರ ಜಿಲ್ಲೆ ರಚನೆ ಬಗ್ಗೆ ಮಾಹಿತಿಯಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕುರಿತು ನಿರ್ಣಯ ತೆಗೆದುಕೊಳ್ಳುತ್ತಾರೆ. ಆರ್.ಬಿ.ತಿಮ್ಮಾಪುರ ಮೊದಲು ತಮ್ಮ ಪಕ್ಷದ ಒಳಜಗಳದ ಕಡೆ ಗಮನ ನೀಡಲಿ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಸಚಿವ ಸಿ.ಸಿ.ಪಾಟೀಲ್ ಟಾಂಗ್​

ಗದಗ : ವಿಜಯನಗರ ಜಿಲ್ಲೆ ರಚನೆ ಬಗ್ಗೆ ಮಾಹಿತಿಯಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕುರಿತು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಬಿಜೆಪಿಯಲ್ಲಿ ಕೆಲ ಲಿಂಗಾಯತ ನಾಯಕರನ್ನು ಮುಗಿಸುವ ಷಡ್ಯಂತ್ರದ ವಿಚಾರವಾಗಿ ಮಾತನಾಡಿದ ಅವರು, ಆರ್.ಬಿ.ತಿಮ್ಮಾಪುರ ಅವರು ಬೀದಿಗೆ ಬಿದ್ದಿರೋ ತಮ್ಮ ಪಕ್ಷದ ಒಳಜಗಳದ ಬಗ್ಗೆ ವಿಚಾರ ಮಾಡಲಿ. ಆಮೇಲೆ ಅವರಿಗೆ ಟೈಂ ಸಿಕ್ರೆ ನಮ್ಮ ಪಕ್ಷದ ಬಗ್ಗೆ ಚಿಂತಿಸಲಿ ಎಂದು ಟಾಂಗ್ ನೀಡಿದರು.

ಆರ್.ಬಿ.ತಿಮ್ಮಾಪುರ ತಮ್ಮ ಪಕ್ಷದ ಒಳಜಗಳದ ಕಡೆ ಗಮನ ನೀಡಲಿ: ಸಿ ಸಿ ಪಾಟೀಲ್

ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಷ್ಟ್ರೀಯ ಪಕ್ಷವಾಗಿದ್ದು, ನಾಯಕತ್ವ ಬಹಳ ಪ್ರಬಲವಾಗಿದೆ. ರಾಷ್ಟ್ರೀಯ ನಾಯಕರ ಮಾರ್ಗದರ್ಶನದ ಮೇರೆಗೆ ರಾಜ್ಯ ಘಟಕ ಕೆಲಸ ಮಾಡುತ್ತೆ. ಯುಡಿಯೂರಪ್ಪ ಇನ್ನುಳಿದ ಮೂರುವರೆ ವರ್ಷ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ವಿಚಾರ :

ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು, ಬಿಜೆಪಿ ಪಕ್ಷಕ್ಕೆ ಬರುವವರಿಗೆ ಸ್ವಾಗತ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ರಾಜ್ಯ ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಗದಗ : ವಿಜಯನಗರ ಜಿಲ್ಲೆ ರಚನೆ ಬಗ್ಗೆ ಮಾಹಿತಿಯಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕುರಿತು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಬಿಜೆಪಿಯಲ್ಲಿ ಕೆಲ ಲಿಂಗಾಯತ ನಾಯಕರನ್ನು ಮುಗಿಸುವ ಷಡ್ಯಂತ್ರದ ವಿಚಾರವಾಗಿ ಮಾತನಾಡಿದ ಅವರು, ಆರ್.ಬಿ.ತಿಮ್ಮಾಪುರ ಅವರು ಬೀದಿಗೆ ಬಿದ್ದಿರೋ ತಮ್ಮ ಪಕ್ಷದ ಒಳಜಗಳದ ಬಗ್ಗೆ ವಿಚಾರ ಮಾಡಲಿ. ಆಮೇಲೆ ಅವರಿಗೆ ಟೈಂ ಸಿಕ್ರೆ ನಮ್ಮ ಪಕ್ಷದ ಬಗ್ಗೆ ಚಿಂತಿಸಲಿ ಎಂದು ಟಾಂಗ್ ನೀಡಿದರು.

ಆರ್.ಬಿ.ತಿಮ್ಮಾಪುರ ತಮ್ಮ ಪಕ್ಷದ ಒಳಜಗಳದ ಕಡೆ ಗಮನ ನೀಡಲಿ: ಸಿ ಸಿ ಪಾಟೀಲ್

ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಷ್ಟ್ರೀಯ ಪಕ್ಷವಾಗಿದ್ದು, ನಾಯಕತ್ವ ಬಹಳ ಪ್ರಬಲವಾಗಿದೆ. ರಾಷ್ಟ್ರೀಯ ನಾಯಕರ ಮಾರ್ಗದರ್ಶನದ ಮೇರೆಗೆ ರಾಜ್ಯ ಘಟಕ ಕೆಲಸ ಮಾಡುತ್ತೆ. ಯುಡಿಯೂರಪ್ಪ ಇನ್ನುಳಿದ ಮೂರುವರೆ ವರ್ಷ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ವಿಚಾರ :

ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು, ಬಿಜೆಪಿ ಪಕ್ಷಕ್ಕೆ ಬರುವವರಿಗೆ ಸ್ವಾಗತ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ರಾಜ್ಯ ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

Intro:ವಿಜಯನಗರ ಜಿಲ್ಲೆ ರಚನೆ ಬಗ್ಗೆ ಮಾಹಿತಿಯಿಲ್ಲ...ಸಿಎಂ ಹಾಗೂ ರಾಜ್ಯಾಧ್ಯಕ್ಷರು ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯಿಸ್ತಾರೆ.......ಆರ್ ಬಿ ತಿಮ್ಮಾಪುರ ಮೊದಲು ತಮ್ಮ‌ ಪಕ್ಷದ ಒಳಜಗಳದ ಕಡೆ ಗಮನ ನೀಡಲಿ.....ಗದಗನಲ್ಲಿ ಸಚಿವ ಸಿ ಸಿ ಪಾಟೀಲ್ ಹೇಳಿಕೆ

ಆಂಕರ್-ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆಯನ್ನು ನೂತನವಾಗಿ ವಿಜಯನಗರ ಜಿಲ್ಲೆಯಾಗಿ ಮಾಡುವ ಕುರಿತು ನನಗೆ ಮಾಹಿತಿಯಿಲ್ಲ ಅಂತ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ. ಗದಗ ತಾಲೂಕಿನ ಹುಲಕೋಟಿಯಲ್ಲಿ ಮಾತನಾಡಿದ ಅವ್ರು, ಈ ಕುರಿತು ಶಾಸಕ ಸೋಮಶೇಖರ ರೆಡ್ಡಿ ವಿರೋಧ ವ್ಯಕ್ತಪಡಿಸಿರೋ ಬಗ್ಗೆಯೂ ಮಾಹಿತಿಯಲ್ಲ. ಇವೆಲ್ಲವೂ ನಮ್ಮ‌ ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಅವರು ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರಿಷ್ಠ ಮಂಡಳಿಯಲ್ಲಿ ನಿರ್ಧರಿಸ್ತಾರೆ ಎಂದ್ರು. ಇನ್ನು ಬಿಜೆಪಿಯಲ್ಲಿ ಕೆಲ ಲಿಂಗಾಯತ ನಾಯಕರನ್ನು ಮುಗಿಸುವ ಷಡ್ಯಂತ್ರದ ಆರ್ ಬಿ ತಿಮ್ಮಾಪುರ ಹೇಳಿಕೆ ವಿಚಾರವಾಗಿ ಖಾರವಾಗಿಯೇ ಪ್ರತಿಕ್ರಿಯಿಸಿದ ಸಿ ಸಿ ಪಾಟೀಲ್, ಆರ್ ಬಿ ತಿಮ್ಮಾಪುರ ಅವರು ಬೀದಿಗೆ ಬಿದ್ದಿರೋ ತಮ್ಮ ಪಕ್ಷದ ಒಳಜಗಳದ ಬಗ್ಗೆ ವಿಚಾರ ಮಾಡಲಿ. ಆಮೇಲೆ ಅವರಿಗೆ ಟೈಂ ಸಿಕ್ರೆ ನಮ್ಮ ಪಕ್ಷದ ಬಗ್ಗೆ ವಿಚಾರ ಮಾಡಲಿ ಅಂತ ತಿಮ್ಮಾಪುರ್ ಗೆ ಟಾಂಗ್ ನೀಡಿದ್ರು. ಇದೇ ವೇಳೆ ಬಿಜೆಪಿ ಪಕ್ಷದಲ್ಲಿ ಭಿನ್ನಾಭಿಪ್ರಾಯವಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನಮ್ಮ ಪಕ್ಷ ಇವಾಗ ಇಂಟ್ಯಾಕ್ಟ್ ಆಗಿದೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಷ್ಟ್ರೀಯ ಪಕ್ಷವಾಗಿದ್ದು ರಾಷ್ಟ್ರೀಯ ನಾಯಕತ್ವ ಬಹಳ ಪ್ರಬಲವಿದೆ. ರಾಷ್ಟ್ರೀಯ ನಾಯಕರ ಮಾರ್ಗದರ್ಶನ ಮೇರೆಗೆ ರಾಜ್ಯ ಘಟಕ ಕೆಲಸ ಮಾಡುತ್ತೇ ಬಿ.ಎಸ್. ವೈ ಇನ್ನುಳಿದ ಮೂರೂವರೆ ವರ್ಷ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಾರೆ ಎಂದ್ರು.‌‌ಇನ್ನು ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ಕುರಿತು ಮಾತನಾಡಿದ ಅವ್ರು, ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಬಿಜೆಪಿ ಪಕ್ಷಕ್ಕೆ ಬರುವವರಿಗೆ ಸ್ವಾಗತ ಇರುತ್ತೇ. ಯಾರನ್ನು ಪಕ್ಷಕ್ಕೆ ಸೇರಿಸಿಕೋಬೇಕು ಎನ್ನುವ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ರಾಜ್ಯ ನಾಯಕರು ತೀರ್ಮಾನಿಸ್ತಾರೆ ಎಂದ್ರು.

ಬೈಟ್೦೧-ಸಿ ಸಿ ಪಾಟೀಲ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ.

ಬೈಟ್೦೨-ಸಿ ಸಿ ಪಾಟೀಲ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ.
Body: GdgConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.