ಗದಗ: ಹೆಡ್ ಲೈಟ್ನ ಬೆಳಕು ಜಾಸ್ತಿಯಾಗಿದೆ ಅಂತಾ ಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ತಾಲೂಕಿನ ಹುಯಿಲಗೋಳ ಬಳಿ ನಡೆದಿದೆ.
ಯರೇಬೇಲೇರಿ ಗ್ರಾಮಕ್ಕೆ ಹೊರಟಿದ್ದ ಬಸ್ಗೆ ಎದುರಾಗಿ ಇಬ್ಬರು ಬುಲೆಟ್ ಸವಾರರು ಬಂದಿದ್ದಾರೆ. ಈ ವೇಳೆ ಏಕಾಏಕಿ ಬಸ್ ಅಡ್ಡಗಟ್ಟಿರೋ ಸವಾರರು ಚಾಲಕ ವೀರೇಶ್ ರಕ್ಕಸಗಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ವೇಳೆ ಬಸ್ನಲ್ಲಿದ್ದ ಮಹಿಳಾ ಪ್ರಯಾಣಿಕರೋರ್ವರು ಥಳಿಸಬೇಡಿ ಎಂದು ಬೇಡಿಕೊಂಡರೂ ಬಿಡದ ಕಿಡಿಗೇಡಿಗಳು, ಚಾಲಕ ವೀರೇಶ್ ಅವರನ್ನು ಮನಸೋಇಚ್ಛೆ ಥಳಿಸಿದ್ದಾರೆ. ಈ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದೆ.
ತೀವ್ರವಾಗಿ ಥಳಿತಕ್ಕೊಳಗಾದ ಚಾಲಕನಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಟಗೇರಿ ಪೊಲೀಸರು ಚಾಲಕ ವೀರೇಶ್ರಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.