ETV Bharat / state

ಸ್ನೇಹಿತನ ಪತ್ನಿ ಜೊತೆಯೇ ಲವ್ವಿಡವ್ವಿ... ವ್ಯಕ್ತಿಯ ಬರ್ಬರ ಹತ್ಯೆ - undefined

ತನ್ನ ಹೆಂಡತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಆಕೆಯ ಪತಿ ಹಾಗೂ ಆತನ ಸಹೋದದರು ಸೇರಿಕೊಂಡು ಸ್ನೇಹಿತನ್ನನ್ನು ಕೊಲೆ ಮಾಡಿ ರೈಲ್ವೇ ಹಳಿಯ ಮೇಲೆ ಹಾಕಿದ್ದಾರೆ. ಈ ವೇಳೆ ರೈಲು ಮೃತದೇಹದ ಮೇಲೆ ಹರಿದು ದೇಹ ಛಿದ್ರ ಛಿದ್ರವಾಗಿರುವ ಘಟನೆ ಹಿರೇಹಂದಿಗೋಳ ಗ್ರಾಮದ ಹತ್ತಿರವಿರುವ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಗದಗ
author img

By

Published : Jul 21, 2019, 5:29 PM IST

ಗದಗ: ಸ್ನೇಹಿತನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆ ಸ್ನೇಹಿತ ಹಾಗೂ ಆತನ ಸಹೋದರರು ಸೇರಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಹಿರೇಹಂದಿಗೋಳ ಗ್ರಾಮದ ಹತ್ತಿರವಿರುವ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಬಸವರಾಜು ಕೊಲೆಯಾದ ವ್ಯಕ್ತಿ. ಪಂಚಪ್ಪ, ರವಿ ಹಾಗೂ ಮಹೇಶ್ ಕೊಲೆ ಮಾಡಿರುವ ಆರೋಪಿಗಳು. ಮಹೇಶ್ ಹಾಗೂ ಕೊಲೆಯಾಗಿರುವ ಬಸವರಾಜ್ ಚೆಡ್ಡಿ ಸ್ನೇಹಿತರು. ಗೆಳೆಯರು ಅಂದ ಮೇಲೆ ಒಬ್ಬರ ಮನೆಗೆ ಒಬ್ಬರು ಬರೋದು ಹೋಗೋದು ಇದ್ದೆ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಸವರಾಜ್, ಮೂವರು ಅಣ್ಣತಮ್ಮಂದಿರಲ್ಲಿ ಒಬ್ಬರಾದ ಪಂಚಪ್ಪನ ಮಡದಿಯ ಜೊತೆ ಅನೈತಿಕ ಸಂಬಂಧ ಇಟ್ಕೊಂಡಿದ್ದ ಎನ್ನಲಾಗುತ್ತಿದೆ.

Gadaga
ಕೊಲೆಯಾದ ವ್ಯಕ್ತಿ ಮೃತದೇಹ ಛಿದ್ರ ಛಿದ್ರವಾಗಿರುವುದು

ಹಲವು ವರ್ಷಗಳಿಂದ ಈತ ಪಂಚಪ್ಪನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇತ್ತೀಚೆಗೆ ಇದು ಪಂಚಪ್ಪ ಹಾಗೂ ಆತನ ಸಹೋದರರಿಗೆ ತಿಳಿದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಈ ಮೂರೂ ಜನ ಅಣ್ಣತಮ್ಮಂದಿರು ನಿನ್ನೆ ರಾತ್ರಿ ಬಸವರಾಜನ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ತಾಯಿ ಮತ್ತು ಅಜ್ಜಿ ಮೇಲೆ ಹಲ್ಲೆ ಮಾಡಿದ್ದು, ಬಸವರಾಜುವಿನ ಮೇಲೆ ಕಲ್ಲು ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ತಾವು ತಂದಿದ್ದ ಬೈಕ್​ನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ, ಹಿರೇಹಂದಿಗೋಳ ಗ್ರಾಮದ ಹತ್ತಿರವಿರುವ ರೈಲ್ವೇ ನಿಲ್ದಾಣದ ಬಳಿ ಹಳಿಯಲ್ಲಿ ಬಿಸಾಕಿ ಹೋಗಿದ್ದಾರೆ.

ಕೊಲೆ ಮಾಡಿರುವ ಆರೋಪದಡಿಯಲ್ಲಿ ಪಂಚಪ್ಪ ಹಾಗೂ ರವಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮಹೇಶ್ ಪರಾರಿಯಾಗಿದ್ದಾನೆ. ಶವವನ್ನು ರೈಲು ಹಳಿಯ ಮೇಲೆ ಬಿಸಾಕಿದ್ದರಿಂದ ರೈಲು ಮೃತದೇಹದ ಮೇಲೆ ಹರಿದು ಬಸವರಾಜ ದೇಹ ಎರಡು ತುಂಡಾಗಿರುವ ಸ್ಥಿತಿಯಲ್ಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಮಹೇಶ್​ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗದಗ: ಸ್ನೇಹಿತನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆ ಸ್ನೇಹಿತ ಹಾಗೂ ಆತನ ಸಹೋದರರು ಸೇರಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಹಿರೇಹಂದಿಗೋಳ ಗ್ರಾಮದ ಹತ್ತಿರವಿರುವ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಬಸವರಾಜು ಕೊಲೆಯಾದ ವ್ಯಕ್ತಿ. ಪಂಚಪ್ಪ, ರವಿ ಹಾಗೂ ಮಹೇಶ್ ಕೊಲೆ ಮಾಡಿರುವ ಆರೋಪಿಗಳು. ಮಹೇಶ್ ಹಾಗೂ ಕೊಲೆಯಾಗಿರುವ ಬಸವರಾಜ್ ಚೆಡ್ಡಿ ಸ್ನೇಹಿತರು. ಗೆಳೆಯರು ಅಂದ ಮೇಲೆ ಒಬ್ಬರ ಮನೆಗೆ ಒಬ್ಬರು ಬರೋದು ಹೋಗೋದು ಇದ್ದೆ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಸವರಾಜ್, ಮೂವರು ಅಣ್ಣತಮ್ಮಂದಿರಲ್ಲಿ ಒಬ್ಬರಾದ ಪಂಚಪ್ಪನ ಮಡದಿಯ ಜೊತೆ ಅನೈತಿಕ ಸಂಬಂಧ ಇಟ್ಕೊಂಡಿದ್ದ ಎನ್ನಲಾಗುತ್ತಿದೆ.

Gadaga
ಕೊಲೆಯಾದ ವ್ಯಕ್ತಿ ಮೃತದೇಹ ಛಿದ್ರ ಛಿದ್ರವಾಗಿರುವುದು

ಹಲವು ವರ್ಷಗಳಿಂದ ಈತ ಪಂಚಪ್ಪನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇತ್ತೀಚೆಗೆ ಇದು ಪಂಚಪ್ಪ ಹಾಗೂ ಆತನ ಸಹೋದರರಿಗೆ ತಿಳಿದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಈ ಮೂರೂ ಜನ ಅಣ್ಣತಮ್ಮಂದಿರು ನಿನ್ನೆ ರಾತ್ರಿ ಬಸವರಾಜನ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ತಾಯಿ ಮತ್ತು ಅಜ್ಜಿ ಮೇಲೆ ಹಲ್ಲೆ ಮಾಡಿದ್ದು, ಬಸವರಾಜುವಿನ ಮೇಲೆ ಕಲ್ಲು ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ತಾವು ತಂದಿದ್ದ ಬೈಕ್​ನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ, ಹಿರೇಹಂದಿಗೋಳ ಗ್ರಾಮದ ಹತ್ತಿರವಿರುವ ರೈಲ್ವೇ ನಿಲ್ದಾಣದ ಬಳಿ ಹಳಿಯಲ್ಲಿ ಬಿಸಾಕಿ ಹೋಗಿದ್ದಾರೆ.

ಕೊಲೆ ಮಾಡಿರುವ ಆರೋಪದಡಿಯಲ್ಲಿ ಪಂಚಪ್ಪ ಹಾಗೂ ರವಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮಹೇಶ್ ಪರಾರಿಯಾಗಿದ್ದಾನೆ. ಶವವನ್ನು ರೈಲು ಹಳಿಯ ಮೇಲೆ ಬಿಸಾಕಿದ್ದರಿಂದ ರೈಲು ಮೃತದೇಹದ ಮೇಲೆ ಹರಿದು ಬಸವರಾಜ ದೇಹ ಎರಡು ತುಂಡಾಗಿರುವ ಸ್ಥಿತಿಯಲ್ಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಮಹೇಶ್​ ಬಂಧನಕ್ಕೆ ಬಲೆ ಬೀಸಿದ್ದಾರೆ.

Intro:
ಆಂಕರ್- ಮತ್ತೊಬ್ಬನ ಹೆಂಡತಿ ಜೊತೆ ಹಲವು ವರ್ಷದಿಂದ ಕದ್ದು ಮುಚ್ಚಿ ಲವ್ವಿ ಡವ್ವಿ ಮಾಡ್ತಿದ್ದ ವ್ಯಕ್ತಿಯನ್ನು ಕಳೆದ ರಾತ್ರಿ ಸಹೋದರೆಲ್ಲಾ ಸೇರಿಕೊಂಡು ಇಹಲೋಕಕ್ಕೆ ಕಳಸಿದ್ದಾರೆ ಯಾಕಂದ್ರೆ ಯಾವ ಮಹಿಳೆ ಜೊತೆ ಸಂಬಂಧ ಇಟ್ಕೊಂಡಿದ್ನೋ ಅಕೆಯ ಮನೆಯವರೇ ಆತನನ್ನು ಕೊಲೆಗೈದಿದ್ದಾರೆ.

Body:ಸ್ನೇಹಿತನ ಮಡದಿ ಜೊತೆ ಅನೈತಿಕ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಬಸವರಾಜನನ್ನು ಮೂರು ಜನ ಸಹೋದರರೇ ಕೊಲೆಗೈದು, ರೈಲ್ವೇ ಹಳಿಯ ಮೇಲೆಸೆದಿದ್ದಾರೆ. ರೈಲು ಮೃತನ ಮೇಲೆ ಹರಿದಿರೋದ್ರಿಂದ ಬಸವರಾಜ ದೇಹ ಎರಡು ತುಂಡಾಗಿದೆ. ಅದೇ ಗ್ರಾಮದ ಪಂಚಪ್ಪ, ರವಿ ಹಾಗೂ ಮಹೇಶ್ ಮೂವರೂ ಸೇರಿ ಈ ಕೊಲೆ ಮಾಡಿದ್ದಾರೆ. ಮಹೇಶ್ ಹಾಗೂ ಕೊಲೆಯಾಗಿರೋ ಬಸವರಾಜ್
ಚೆಡ್ಡಿ ಗೆಳೆಯರು. ಗೆಳೆಯರು ಅಂದ ಮೇಲೆ ಒಬ್ಬರ ಮನೆಗೆ ಒಬ್ಬರು ಬರೋದು ಹೋಗೋದು ಇದ್ದೆ ಇರುತ್ತೆ. ಆದ್ರೆ ಇದನ್ನೇ ಬಂಡವಾಳ ಮಾಡ್ಕೊಂಡ ಬಸವರಾಜ್, ಮೂವರು ಅಣ್ಣತಮ್ಮಂದಿರಲ್ಲಿ ಪಂಚಪ್ಪನ ಮಡದಿಯ ಜೊತೆ ಅನೈತಿಕ ಸಂಬಂಧ ಇಟ್ಕೊಂಡಿದ್ದ. ಈ ವಿಚಾರ ಗೊತ್ತಾಗಿದ್ದೇ ತಡ, ಮೂರೂ ಜನ ಅಣ್ಣತಮ್ಮಂದಿರು ನಿನ್ನೆ ರಾತ್ರಿ ಬಸವರಾಜನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ನಂತರ ಬಸವರಾಜನನ್ನು ಹಿರೇಹಂದಿಗೋಳ ಗ್ರಾಮದ ಹತ್ತಿರವಿರುವ ರೈಲು ಹಳಿಗೆ ಎತ್ತಾಕಿಕೊಂಡು ಹೋಗಿ ಕೊಲೆ ಮಾಡಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸ್ತಿದ್ದಾರೆ.

ಹೊಲದ ಕೆಲಸ ಮಾಡಿ ಬಂದು ಮನೆಯಲ್ಲಿ ರೆಸ್ಟ್ ಮಾಡಬೇಕು ಅನ್ನೋದ್ರಲ್ಲಿ ಈ ಮೂರು ಜನ ಅಣ್ಣ ತಮ್ಮಂದಿರು ಬಸವರಾಜನ ಮನೆಗೆ ಬಂದು ಮನೆಯಲ್ಲೇ ಇದ್ದ ತಾಯಿ ಮತ್ತು ಅಜ್ಜಿ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಮನೆಯ ಮುಂದೆಯೇ ಇದ್ದ ಬಸವರಾಜನನ್ನು ಕಲ್ಲು ಬಡಿಗೆಯಿಂದ ಹಲ್ಲೆ ಮಾಡಿದ್ದಲ್ಲದೇ ತಾವು ತಂದಿದ್ದ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ ರೈಲು ಹಳಿಗೆ ಹಾಕಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿರೋ ಪಂಚಪ್ಪನ ಮಡದಿಗಾದ್ರೂ, ತಾನು ಮಾಡೋದು ತಪ್ಪು ಅಂತ ಗೊತ್ತಾಗಬಾರ್ದ. ಎರಡು ಮಕ್ಕಳ ತಾಯಿ ಆದೋಳು ಅನೈತಿಕ ಸಂಬಂಧ ಇಟ್ಕೊಂಡಿದ್ದು ಸರೀನಾ ಅಂತಿದ್ದಾರೆ ಗ್ರಾಮಸ್ಥರು. ಇನ್ನು ಕೊಲೆ ಮಾಡಿರೋ ಆರೋಪ ಹೊತ್ತಿರೋ ಮೂವರು ಅಣ್ಣತಮ್ಮಂದಿರಲ್ಲಿ, ಪಂಚಪ್ಪ ಹಾಗೂ ರವಿಯ ಬಂಧನವಾಗಿದ್ದು, ಮಹೇಶ್ ಓಡಿಹೋಗಿದ್ದಾನೆ.

Conclusion:ಏನೇ ಆಗಲಿ ಕಂಡೋರ ಹೆಂಡತಿ ಮೇಲೆ ಕಣ್ಣಾಕಿ, ಈಗ ಬಸವರಾಜ್‌ ಹೆಣವಾಗಿರೋದು ಮಾತ್ರ ವಿಪರ್ಯಾಸವೇ ಸರಿ. ಹೆಣ್ಣಿಂದಲೇ ನಾಕ, ಹೆಣ್ಣಿಂದಲೇ ನರಕ ಎನ್ನೋ ಮಾತು‌ ಈ ಘಟನೆಗೆ ಸರಿಯಾಗಿ ಒಪ್ಪುತ್ತೆ ಅಲ್ವೇ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.