ಗದಗ: ಜಿಲ್ಲೆಯಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ಯುಪಿಯ ಜನರನ್ನು ಸಚಿವ ಸಿ ಸಿ ಪಾಟೀಲ್ ಅಜಮ್ಘಡ ಜಿಲ್ಲೆಗೆ ಬಸ್ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ತಲುಪಿಸುವಲ್ಲಿ ಸಫಲರಾಗಿದ್ದಾರೆ. ಇದೀಗ ಇದನ್ನು ಗಮನಿಸಿದ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.

ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಜನರನ್ನು ಕಂಡು ಜಿಲ್ಲೆಯ ಉಸ್ತುವಾರಿ ಸಚಿವರ ಮನಮಿಡಿದಿದ್ದು, ಎಲ್ಲಾ ಯುಪಿಯ ಕಾರ್ಮಿಕರಿಗೆ ಊಟ ಉಪಚಾರ ಮಾಡಿಸಿ ಅವರನ್ನು ಅಜಮ್ಘಡ ಜಿಲ್ಲೆಗೆ ಬಸ್ ವ್ಯವಸ್ಥೆ ಮಾಡಿಸಿ ವಾಪಸ್ ಕಳುಹಿಸಿಕೊಟ್ಟಿದ್ದರು.
ಈ ಕುರಿತು ಸಚಿವ ಸಿ ಸಿ ಪಾಟೀಲ್ಗೆ ಅಭಿನಂದನಾ ಪತ್ರ ಬರೆದಿರುವ ಸ್ವತಂತ್ರ ಕುಮಾರ್ ಅವರು, ಕುಟುಂಬ ಸಮೇತ ಕಾಶಿ ವಿಶ್ವನಾಥನ ದರ್ಶನಕ್ಕೆ ತಾವು ಬರಬೇಕು, ದೇವರು ತಮಗೆ ಸಕಲ ಸೌಕರ್ಯ ಆರೋಗ್ಯ ಕೊಟ್ಟು ಕಾಪಾಡಲಿ. ನಿಮಗೆ ಸ್ವಾಮಿಯ ಆಶೀರ್ವಾದ ಸದಾ ಇರಲಿ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.