ETV Bharat / state

ಧಾರವಾಡದಲ್ಲಿ ನಾಳೆ ಯಾವುದೇ ಬಂದ್ ಇಲ್ಲ: ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟನೆ

author img

By

Published : Feb 12, 2020, 4:38 PM IST

ನಾಳೆ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

Dc commissener reaction
ಧಾರವಾಡದಲ್ಲಿ ನಾಳೆ ಯಾವುದೇ ಬಂದ್ ಇಲ್ಲ

ಹುಬ್ಬಳ್ಳಿ: ಕೆಲವು ಕನ್ನಡ ಪರ ಸಂಘಟನೆಗಳ ಒಕ್ಕೂಟ ಫೆಬ್ರವರಿ 13ರಂದು ಕರೆ ನೀಡಿರುವ ಕರ್ನಾಟಕ ಬಂದ್​​​ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಯಾವುದೇ ಬಂದ್​​ ಇಲ್ಲ. ಈ‌ ಕುರಿತಂತೆ ಯಾವುದೇ ಸಂಘಟನೆಗಳು ಇಲ್ಲಿಯವರೆಗೂ ಮನವಿ ಮಾಡಿಲ್ಲ. ಹೀಗಾಗಿ ಸರ್ಕಾರಿ ಕಚೇರಿಗಳು, ಶಾಲಾ -ಕಾಲೇಜುಗಳಿಗೆ ರಜೆ ಇಲ್ಲ. ಅಲ್ಲದೇ ಎಂದಿನಂತೆ ಜನರ ಸಂಚಾರ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಧಾರವಾಡದಲ್ಲಿ ನಾಳೆ ಯಾವುದೇ ಬಂದ್ ಇಲ್ಲ

ಬಂದ್ ಇಲ್ಲ:

ಅವಳಿನಗರದಲ್ಲಿ ಯಾವುದೇ ಬಂದ್ ಇಲ್ಲ ಎಂದು ಇದೇ ವೇಳೆ ಪೊಲೀಸ್ ಆಯುಕ್ತ ಆರ್. ದಿಲೀಪ್‌ ಸ್ಪಷ್ಟಪಡಿಸಿದರು. ಯಾವುದೇ ಪ್ರತಿಭಟನೆ, ಮೆರವಣಿಗೆ ಸಭೆ ನಡೆಯುತ್ತಿಲ್ಲ. ಅಲ್ಲದೇ ಯಾವುದೇ ಬಿಗಿ ಭದ್ರತೆ ಸಹಿತ ಇಲ್ಲ. ಎಂದಿನಂತೆ ಜನವ್ಯವಸ್ಥೆ ಇರಲಿದೆ ಎಂದು ಪೊಲೀಸ್​​ ಆಯುಕ್ತ ಆರ್. ದಿಲೀಪ್ ತಿಳಿಸಿದರು.

ಹುಬ್ಬಳ್ಳಿ: ಕೆಲವು ಕನ್ನಡ ಪರ ಸಂಘಟನೆಗಳ ಒಕ್ಕೂಟ ಫೆಬ್ರವರಿ 13ರಂದು ಕರೆ ನೀಡಿರುವ ಕರ್ನಾಟಕ ಬಂದ್​​​ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಯಾವುದೇ ಬಂದ್​​ ಇಲ್ಲ. ಈ‌ ಕುರಿತಂತೆ ಯಾವುದೇ ಸಂಘಟನೆಗಳು ಇಲ್ಲಿಯವರೆಗೂ ಮನವಿ ಮಾಡಿಲ್ಲ. ಹೀಗಾಗಿ ಸರ್ಕಾರಿ ಕಚೇರಿಗಳು, ಶಾಲಾ -ಕಾಲೇಜುಗಳಿಗೆ ರಜೆ ಇಲ್ಲ. ಅಲ್ಲದೇ ಎಂದಿನಂತೆ ಜನರ ಸಂಚಾರ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಧಾರವಾಡದಲ್ಲಿ ನಾಳೆ ಯಾವುದೇ ಬಂದ್ ಇಲ್ಲ

ಬಂದ್ ಇಲ್ಲ:

ಅವಳಿನಗರದಲ್ಲಿ ಯಾವುದೇ ಬಂದ್ ಇಲ್ಲ ಎಂದು ಇದೇ ವೇಳೆ ಪೊಲೀಸ್ ಆಯುಕ್ತ ಆರ್. ದಿಲೀಪ್‌ ಸ್ಪಷ್ಟಪಡಿಸಿದರು. ಯಾವುದೇ ಪ್ರತಿಭಟನೆ, ಮೆರವಣಿಗೆ ಸಭೆ ನಡೆಯುತ್ತಿಲ್ಲ. ಅಲ್ಲದೇ ಯಾವುದೇ ಬಿಗಿ ಭದ್ರತೆ ಸಹಿತ ಇಲ್ಲ. ಎಂದಿನಂತೆ ಜನವ್ಯವಸ್ಥೆ ಇರಲಿದೆ ಎಂದು ಪೊಲೀಸ್​​ ಆಯುಕ್ತ ಆರ್. ದಿಲೀಪ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.