ಧಾರವಾಡ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಭಸ್ಮವಾದ ಘಟನೆ ಧಾರವಾಡ-ಗೋವಾ ರಸ್ತೆಯ ಹೊನ್ನಾಪುರ ಬಳಿ ನಡೆದಿದೆ.
ಹುಬ್ಬಳ್ಳಿ ಮೂಲದ ಸಲೀಂ ಅಹ್ಮದ್ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಧಾರವಾಡದಿಂದ ಗೋವಾಗೆ ಹೊರಟಾಗ ಹೊನ್ನಾಪುರ ಕರಿಯಮ್ಮದೇವಿ ದೇವಸ್ಥಾನ ಬಳಿ ಕಾರು ಹೊತ್ತಿ ಉರಿದಿದೆ.
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.