ETV Bharat / state

ಮಹತ್ವಾಕಾಂಕ್ಷೆ ಬಿಆರ್​ಟಿಎಸ್ ಯೋಜನೆ ಅಪೂರ್ಣ ; ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

author img

By

Published : Sep 30, 2020, 9:00 PM IST

Updated : Sep 30, 2020, 9:41 PM IST

ಮಳೆಗಾಲದಲ್ಲಂತೂ ಬಿಆರ್​ಟಿಎಸ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುತ್ತದೆ. ಸೂಕ್ತ ಹಾಗೂ ಸುಗಮ ಸಂಚಾರದ ದೂರದೃಷ್ಟಿಯಿಂದ ನಿರ್ಮಾಣವಾದ ಬಿಆರ್‌ಟಿಎಸ್ ರಸ್ತೆಗಳು ಸ್ವಲ್ಪ ಮಳೆ ಸುರಿದ್ರೆ ಸಾಕು ಕೆರೆಗಳಂತಾಗುತ್ತವೆ..

The ambitious BRTS project is still incomplete
ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಹುಬ್ಬಳ್ಳಿ : ಬಿಆರ್​ಟಿಎಸ್​ ಹುಬ್ಬಳ್ಳಿ-ಧಾರವಾಡ ‌ಜನತೆಯ ಮಹತ್ವಾಕಾಂಕ್ಷೆ ಯೋಜನೆ. ಅವಳಿ ನಗರದ ನಡುವೆ ತ್ವರಿತ ಬಸ್ ಸೇವೆ ಕಲ್ಪಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾದ ಯೋಜನೆ ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದೆ. ಮಳೆಗಾಲ‌ ಬಂದ್ರೆ ಸಾಕು ರಸ್ತೆ ಕೆರೆಯಂತಾಗುತ್ತದೆ. ಸಂಚಾರಕ್ಕೆ ಸಂಚಕಾರ ತರುತ್ತಿರುವ ಈ ಯೋಜನೆ ಯಾವಾಗ ಪೂರ್ಣಗೊಳ್ಳುತ್ತೋ ಎನ್ನುತ್ತಿದ್ದಾರೆ.

The ambitious BRTS project is still incomplete
ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಜನತೆಗೆ ಗುಣಮಟ್ಟದ ಸಾರಿಗೆ ಸಲ್ಲಿಸುವ ಸದುದ್ದೇಶದಿಂದ ‌ಅನುಷ್ಠಾನಗೊಂಡಿರುವ ಬಿಆರ್​ಟಿಎಸ್ ಯೋಜನೆಯು ದಿನದಿಂದ ದಿನಕ್ಕೆ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಮಳೆಗಾಲದಲ್ಲಂತೂ ಬಿಆರ್​ಟಿಎಸ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುತ್ತದೆ. ಸೂಕ್ತ ಹಾಗೂ ಸುಗಮ ಸಂಚಾರದ ದೂರದೃಷ್ಟಿಯಿಂದ ನಿರ್ಮಾಣವಾದ ಬಿಆರ್‌ಟಿಎಸ್ ರಸ್ತೆಗಳು ಸ್ವಲ್ಪ ಮಳೆ ಸುರಿದ್ರೆ ಸಾಕು ಕೆರೆಗಳಂತಾಗುತ್ತವೆ.

The ambitious BRTS project is still incomplete
ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಇದರಿಂದ ಸ್ಥಳೀಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಿಆರ್​ಟಿಎಸ್ ಕಾರಿಡಾರ್​ನಲ್ಲಿ ನೀರು ಸಂಗ್ರಹಾಗುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂ. ಖರ್ಚು ಮಾಡಿದ್ರೂ ನಗರದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪ್ರಯಾಣಿಕರು‌ ನಿತ್ಯ ಪರದಾಟ ನಡೆಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.

The ambitious BRTS project is still incomplete
ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಈ ಕಾಮಗಾರಿ‌ ನಿರ್ಮಾಣಕ್ಕೆ 12 ಸಾವಿರ ಕೋಟಿ ಹಣ ಖರ್ಚಾಗಿದೆ. ಕೆಲ‌ತಿಂಗಳ ಹಿಂದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಲೋಕಾಪರ್ಣೆಗೊಳಿಸಿದ್ದಾರೆ. ಆದರೂ ಬಿಆರ್​ಟಿಎಸ್ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಹುಬ್ಬಳ್ಳಿ-ಧಾರವಾಡ ನಡುವೆ ಬ್ಯಾರಿಕೇಡ್ ನಿರ್ಮಾಣ ಸೇರಿ ಅಲ್ಲಲ್ಲಿ ರಸ್ತೆ ಕಾಮಗಾರಿ ಉಳಿದುಕೊಂಡಿದೆ. ಐದು ವರ್ಷಗಳಿಂದ ನಡೆಯುತ್ತಿರುವ ಮಂದಗತಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.

The ambitious BRTS project is still incomplete
ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಬಿಆರ್​ಟಿಎಸ್ ಅವ್ಯವಸ್ಥೆಯಿಂದ ನೂರಾರು ಅಪಘಾತ ಸಂಭವಿಸಿವೆ. ಹಲವರು ಜೀವ ಕಳೆದುಕೊಂಡಿರುವ ಉದಾಹರಣೆ ಇದೆ. ‌ಇಂತಹ ದೊಡ್ಡ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರದ ವಾಸನೆಯು ಸಹ ಕೇಳಿ ಬರುತ್ತಿದೆ. ಆದರೆ, ತ್ವರಿತ ಬಸ್ ಸೇವೆಗಾಗಿ ‌ನಿರ್ಮಾಣಗೊಂಡ ಬಿಆರ್​ಟಿಎಸ್ ಕಾಮಗಾರಿ‌ಯನ್ನು ಪೂರ್ಣಗೊಳಿಸುವತ್ತ ಸರ್ಕಾರ ಗಮನಹರಿಸಬೇಕು ಎನ್ನುತ್ತಾರೆ ಸ್ಥಳೀಯರು.

ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಹುಬ್ಬಳ್ಳಿ : ಬಿಆರ್​ಟಿಎಸ್​ ಹುಬ್ಬಳ್ಳಿ-ಧಾರವಾಡ ‌ಜನತೆಯ ಮಹತ್ವಾಕಾಂಕ್ಷೆ ಯೋಜನೆ. ಅವಳಿ ನಗರದ ನಡುವೆ ತ್ವರಿತ ಬಸ್ ಸೇವೆ ಕಲ್ಪಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾದ ಯೋಜನೆ ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದೆ. ಮಳೆಗಾಲ‌ ಬಂದ್ರೆ ಸಾಕು ರಸ್ತೆ ಕೆರೆಯಂತಾಗುತ್ತದೆ. ಸಂಚಾರಕ್ಕೆ ಸಂಚಕಾರ ತರುತ್ತಿರುವ ಈ ಯೋಜನೆ ಯಾವಾಗ ಪೂರ್ಣಗೊಳ್ಳುತ್ತೋ ಎನ್ನುತ್ತಿದ್ದಾರೆ.

The ambitious BRTS project is still incomplete
ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಜನತೆಗೆ ಗುಣಮಟ್ಟದ ಸಾರಿಗೆ ಸಲ್ಲಿಸುವ ಸದುದ್ದೇಶದಿಂದ ‌ಅನುಷ್ಠಾನಗೊಂಡಿರುವ ಬಿಆರ್​ಟಿಎಸ್ ಯೋಜನೆಯು ದಿನದಿಂದ ದಿನಕ್ಕೆ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಮಳೆಗಾಲದಲ್ಲಂತೂ ಬಿಆರ್​ಟಿಎಸ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುತ್ತದೆ. ಸೂಕ್ತ ಹಾಗೂ ಸುಗಮ ಸಂಚಾರದ ದೂರದೃಷ್ಟಿಯಿಂದ ನಿರ್ಮಾಣವಾದ ಬಿಆರ್‌ಟಿಎಸ್ ರಸ್ತೆಗಳು ಸ್ವಲ್ಪ ಮಳೆ ಸುರಿದ್ರೆ ಸಾಕು ಕೆರೆಗಳಂತಾಗುತ್ತವೆ.

The ambitious BRTS project is still incomplete
ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಇದರಿಂದ ಸ್ಥಳೀಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಿಆರ್​ಟಿಎಸ್ ಕಾರಿಡಾರ್​ನಲ್ಲಿ ನೀರು ಸಂಗ್ರಹಾಗುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂ. ಖರ್ಚು ಮಾಡಿದ್ರೂ ನಗರದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪ್ರಯಾಣಿಕರು‌ ನಿತ್ಯ ಪರದಾಟ ನಡೆಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.

The ambitious BRTS project is still incomplete
ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಈ ಕಾಮಗಾರಿ‌ ನಿರ್ಮಾಣಕ್ಕೆ 12 ಸಾವಿರ ಕೋಟಿ ಹಣ ಖರ್ಚಾಗಿದೆ. ಕೆಲ‌ತಿಂಗಳ ಹಿಂದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಲೋಕಾಪರ್ಣೆಗೊಳಿಸಿದ್ದಾರೆ. ಆದರೂ ಬಿಆರ್​ಟಿಎಸ್ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಹುಬ್ಬಳ್ಳಿ-ಧಾರವಾಡ ನಡುವೆ ಬ್ಯಾರಿಕೇಡ್ ನಿರ್ಮಾಣ ಸೇರಿ ಅಲ್ಲಲ್ಲಿ ರಸ್ತೆ ಕಾಮಗಾರಿ ಉಳಿದುಕೊಂಡಿದೆ. ಐದು ವರ್ಷಗಳಿಂದ ನಡೆಯುತ್ತಿರುವ ಮಂದಗತಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.

The ambitious BRTS project is still incomplete
ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ

ಬಿಆರ್​ಟಿಎಸ್ ಅವ್ಯವಸ್ಥೆಯಿಂದ ನೂರಾರು ಅಪಘಾತ ಸಂಭವಿಸಿವೆ. ಹಲವರು ಜೀವ ಕಳೆದುಕೊಂಡಿರುವ ಉದಾಹರಣೆ ಇದೆ. ‌ಇಂತಹ ದೊಡ್ಡ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರದ ವಾಸನೆಯು ಸಹ ಕೇಳಿ ಬರುತ್ತಿದೆ. ಆದರೆ, ತ್ವರಿತ ಬಸ್ ಸೇವೆಗಾಗಿ ‌ನಿರ್ಮಾಣಗೊಂಡ ಬಿಆರ್​ಟಿಎಸ್ ಕಾಮಗಾರಿ‌ಯನ್ನು ಪೂರ್ಣಗೊಳಿಸುವತ್ತ ಸರ್ಕಾರ ಗಮನಹರಿಸಬೇಕು ಎನ್ನುತ್ತಾರೆ ಸ್ಥಳೀಯರು.

ಬಿಆರ್​ಟಿಎಸ್ ಅವ್ಯವಸ್ಥೆಗೆ ಅವಳಿ ನಗರದ ಜನತೆಯ ಆಕ್ರೋಶ
Last Updated : Sep 30, 2020, 9:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.