ETV Bharat / state

ಕಡ್ಡಾಯ ವರ್ಗಾವಣೆಯ ಶಾಕ್​ನಿಂದ ಕೋಮಾಕ್ಕೆ ಜಾರಿದ್ದ ಹುಬ್ಬಳ್ಳಿಯ ಶಿಕ್ಷಕ ವಿಧಿವಶ

ಹುಬ್ಬಳ್ಳಿಯ ಆನಂದ ನಗರ ಶಾಲೆಯ ಮುಖ್ಯಶಿಕ್ಷಕ ಸುಭಾಷ್ ತರ್ಲಘಟ್ಟ ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.

author img

By

Published : Sep 27, 2019, 2:37 PM IST

ಕಡ್ಡಾಯ ವರ್ಗಾವಣೆಯ ಶಾಕ್​ನಿಂದ ಕೋಮಾಕ್ಕೆ ಜಾರಿದ್ದ ಶಿಕ್ಷಕ ಸಾವು

ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕ ಇಂದು ಮೃತಪಟ್ಟಿದ್ದಾರೆ.

ಕಡ್ಡಾಯ ವರ್ಗಾವಣೆಯ ಶಾಕ್​ನಿಂದ ಕೋಮಾಕ್ಕೆ ಜಾರಿದ್ದ ಶಿಕ್ಷಕ ಸಾವು

ಸುಭಾಷ್ ತರ್ಲಘಟ್ಟ ಮೃತ ಶಿಕ್ಷಕ. ಸುಬಾಷ್​ ವರ್ಗಾವಣೆಗೆ ಹೆದರಿ ಕೋಮಾ ಸ್ಥಿತಿಗೆ ತಲುಪಿದ್ದರು. ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಆನಂದ ನಗರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು.

ಇತ್ತೀಚೆಗೆ ಸರ್ಕಾರ ನಡೆಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗವಾಣೆಯಲ್ಲಿ ಇವರನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಾಮಗೇರಿ ಗ್ರಾಮದ ಶಾಲೆಗೆ ವರ್ಗ ಮಾಡಲಾಗಿತ್ತು. ಇದರಿಂದ ಮಾನಸಿಕ‌ ಆಘಾತಕ್ಕೊಳಗಾಗಿ ಸುಭಾಷ್‌ ಕೋಮಾಕ್ಕೆ ಜಾರಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಘಟನೆಯಿಂದ ಶಿಕ್ಷಕರು ಹಾಗೂ ಅವರ ಸಂಬಂಧಿಗಳು ಆಕ್ರೋಶಗೊಂಡಿದ್ದು, ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಸರ್ಕಾರದ ನಿರ್ಧಾರಕ್ಕೆ ಶಿಕ್ಷಕನ ಪತ್ನಿ ಶೈಲಶ್ರೀ ಸೇರಿದಂತೆ ಅವರ ಸಂಬಂಧಿಕರು ತೀವ್ರವಾಗಿ ನೊಂದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕ ಇಂದು ಮೃತಪಟ್ಟಿದ್ದಾರೆ.

ಕಡ್ಡಾಯ ವರ್ಗಾವಣೆಯ ಶಾಕ್​ನಿಂದ ಕೋಮಾಕ್ಕೆ ಜಾರಿದ್ದ ಶಿಕ್ಷಕ ಸಾವು

ಸುಭಾಷ್ ತರ್ಲಘಟ್ಟ ಮೃತ ಶಿಕ್ಷಕ. ಸುಬಾಷ್​ ವರ್ಗಾವಣೆಗೆ ಹೆದರಿ ಕೋಮಾ ಸ್ಥಿತಿಗೆ ತಲುಪಿದ್ದರು. ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಆನಂದ ನಗರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು.

ಇತ್ತೀಚೆಗೆ ಸರ್ಕಾರ ನಡೆಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗವಾಣೆಯಲ್ಲಿ ಇವರನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಾಮಗೇರಿ ಗ್ರಾಮದ ಶಾಲೆಗೆ ವರ್ಗ ಮಾಡಲಾಗಿತ್ತು. ಇದರಿಂದ ಮಾನಸಿಕ‌ ಆಘಾತಕ್ಕೊಳಗಾಗಿ ಸುಭಾಷ್‌ ಕೋಮಾಕ್ಕೆ ಜಾರಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಘಟನೆಯಿಂದ ಶಿಕ್ಷಕರು ಹಾಗೂ ಅವರ ಸಂಬಂಧಿಗಳು ಆಕ್ರೋಶಗೊಂಡಿದ್ದು, ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಸರ್ಕಾರದ ನಿರ್ಧಾರಕ್ಕೆ ಶಿಕ್ಷಕನ ಪತ್ನಿ ಶೈಲಶ್ರೀ ಸೇರಿದಂತೆ ಅವರ ಸಂಬಂಧಿಕರು ತೀವ್ರವಾಗಿ ನೊಂದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Intro:HubliBody:ಕಡ್ಡಾಯ ವರ್ಗಾವಣೆಯ ಶಾಕ್ ಕೋಮಾಕ್ಕೆ ಜಾರಿದ ಶಿಕ್ಷಕ ಸಾವು-

ಹುಬ್ಬಳ್ಳಿ:- ರಾಜ್ಯ ಸರಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ಶಿಕ್ಷಕರೊಬ್ಬರು ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕ ಇಂದು ಸಾವನ್ನಪ್ಪಿದ್ದಾರೆ. ಸುಭಾಷ್ ತರ್ಲಘಟ್ಟ ಎನ್ನುವ ಶಿಕ್ಷಕರೇ ವರ್ಗಾವಣೆಗೆ ಹೆದರಿ ಕೋಮಾ ಸ್ಥಿತಿಗೆ ತಲುಪಿ ಕಳೆದ ಕೇಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಶಿಕ್ಷಕ ಸುಭಾಷ ಆನಂದ ನಗರದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಇತ್ತೀಚೆಗೆ ಸರಕಾರ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗವಾಣೆಯಲ್ಲಿ ಇವರನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಾಮಗೇರಿ ಗ್ರಾಮಕ್ಕೆ ವರ್ಗ ಮಾಡಲಾಗಿತ್ತು. ಇದರಿಂದ ಮಾನಸಿಕ‌ ಆಘಾತಕ್ಕೆ ಒಳಗಾದ ಸುಭಾಷ್‌ ಕೋಮಾಕ್ಕೆ ಜಾರಿದ್ದು.ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಘಟನೆಯಿಂದ ಶಿಕ್ಷಕರು ಹಾಗೂ ಅವರ ಸಂಬಂಧಿಗಳು ಆಕ್ರೋಶಗೊಂಡಿದ್ದು ಆಸ್ಪತ್ರೆ ಮುಂದೆ ಜಮಾಯಿಸಿದ್ದು. ಸರಕಾರದ ನಿರ್ಧಾರಕ್ಕೆ ಶಿಕ್ಷಕರ ಪತ್ನಿ ಶೈಲಶ್ರೀ ಸೇರಿದಂತೆ ಅವರ ಸಂಬಂದಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೂ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.

____________________________



ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ ಕುಂದಗೋಳConclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.