ETV Bharat / state

ಶಿಕ್ಷಣ ಸಚಿವರೇನು ಅಶಿಕ್ಷಿತರಾ.. ಸುರೇಶ್‌ಕುಮಾರ್‌ ಅವರೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲ್ವೇ?

author img

By

Published : Jun 2, 2020, 5:26 PM IST

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಮುಗಿ ಬಿದ್ದರೂ ಸಚಿವರು ಹೇಳಲಿಲ್ಲ. ಮುಗಿ ಬಿದ್ದ ಜನರ ಮಧ್ಯದಲ್ಲೇ ನಿಂತು ಸಚಿವರು ಮನವಿ ಸ್ವೀಕರಿಸಿದ್ದಾರೆ. ಪೊಲೀಸರಿಗಂತೂ ಜಾಣ ಕುರುಡುತನ.

Social gap violation by Suresh kumar
ಸಾಮಾಜಿಕ ಅಂತರ ಮರೆತ ಸಚಿವ ಸುರೇಶ್ ಕುಮಾರ್

ಧಾರವಾಡ: ಜನಸಾಮಾನ್ಯರಿಗೆ ಕೊರೊನಾ ಕುರಿತಾಗಿ ಜಾಗೃತಿ ಮೂಡಿಸಬೇಕಾದ ಸಚಿವರಿಂದಲೇ ಬೇಜವಾಬ್ದಾರಿ ಪ್ರದರ್ಶನವಾಗ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವ ಘಟನೆ ಇವತ್ತು ಧಾರವಾಡದಲ್ಲಿ ನಡೆದಿದೆ.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸಭೆ ಮುಗಿಸಿ ಊಟಕ್ಕೆ ಹೋಗುವಾಗ, ಸಚಿವ ಎಸ್ ಸುರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲು ಹೊರಗಡೆ ಬಹಳಷ್ಟು‌ ಜನ ನಿಂತಿದ್ದರು. ಸಚಿವರು ಬರುತ್ತಿದ್ದಂತೆ ಸಾಮಾಜಿಕ ಅಂತರ ಮರೆತು, ಮನವಿ ಸಲ್ಲಿಸಲು ಜನ ಮುಗಿಬಿದ್ದಿದ್ದಾರೆ.

ಸಾಮಾಜಿಕ ಅಂತರ ಮರೆತ ಸಚಿವ ಸುರೇಶ್‌ಕುಮಾರ್..

ಇದನ್ನು ಕಂಡರೂ ಕೂಡ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಜಾಣ ಮೌನ ನಡೆ ಅನುಸರಿಸಿದ್ದು ಕಂಡು ಬಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಮುಗಿ ಬಿದ್ದರೂ ಸಚಿವರು ಹೇಳಲಿಲ್ಲ. ಮುಗಿ ಬಿದ್ದ ಜನರ ಮಧ್ಯದಲ್ಲೇ ನಿಂತು ಸಚಿವರು ಮನವಿ ಸ್ವೀಕರಿಸಿದ್ದಾರೆ. ಸಭೆಯ ಬಳಿಕ ಜನ ಸಂದಣಿಯ ನಡುವೆಯೇ ಸಚಿವರು ಊಟಕ್ಕೆ ತೆರಳಿದ್ದಾರೆ.

ಧಾರವಾಡ: ಜನಸಾಮಾನ್ಯರಿಗೆ ಕೊರೊನಾ ಕುರಿತಾಗಿ ಜಾಗೃತಿ ಮೂಡಿಸಬೇಕಾದ ಸಚಿವರಿಂದಲೇ ಬೇಜವಾಬ್ದಾರಿ ಪ್ರದರ್ಶನವಾಗ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವ ಘಟನೆ ಇವತ್ತು ಧಾರವಾಡದಲ್ಲಿ ನಡೆದಿದೆ.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸಭೆ ಮುಗಿಸಿ ಊಟಕ್ಕೆ ಹೋಗುವಾಗ, ಸಚಿವ ಎಸ್ ಸುರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲು ಹೊರಗಡೆ ಬಹಳಷ್ಟು‌ ಜನ ನಿಂತಿದ್ದರು. ಸಚಿವರು ಬರುತ್ತಿದ್ದಂತೆ ಸಾಮಾಜಿಕ ಅಂತರ ಮರೆತು, ಮನವಿ ಸಲ್ಲಿಸಲು ಜನ ಮುಗಿಬಿದ್ದಿದ್ದಾರೆ.

ಸಾಮಾಜಿಕ ಅಂತರ ಮರೆತ ಸಚಿವ ಸುರೇಶ್‌ಕುಮಾರ್..

ಇದನ್ನು ಕಂಡರೂ ಕೂಡ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಜಾಣ ಮೌನ ನಡೆ ಅನುಸರಿಸಿದ್ದು ಕಂಡು ಬಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಮುಗಿ ಬಿದ್ದರೂ ಸಚಿವರು ಹೇಳಲಿಲ್ಲ. ಮುಗಿ ಬಿದ್ದ ಜನರ ಮಧ್ಯದಲ್ಲೇ ನಿಂತು ಸಚಿವರು ಮನವಿ ಸ್ವೀಕರಿಸಿದ್ದಾರೆ. ಸಭೆಯ ಬಳಿಕ ಜನ ಸಂದಣಿಯ ನಡುವೆಯೇ ಸಚಿವರು ಊಟಕ್ಕೆ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.