ETV Bharat / state

ನನ್ನ ಬಳಿ ಸಿಡಿ ಇದೆ ಎಂದು ಎಲ್ಲೂ ಹೇಳಿಲ್ಲ, ಹೇಳಿದ್ದರೆ ದಾಖಲೆ ತೋರಿಸಿ: ರಾಜಶೇಖರ ಮುಲಾಲಿ

author img

By

Published : Mar 9, 2021, 1:15 PM IST

Updated : Mar 9, 2021, 2:27 PM IST

ನಾನು ಎಲ್ಲಿಯೂ ನನ್ನ ಬಳಿ ಸಿಡಿ ಇವೆ ಎಂದು ಹೇಳಿಲ್ಲ ಯಾರ ಬಳಿಯಾದರೂ ನನ್ನ ಹೇಳಿಕೆಯ ದಾಖಲೆ ಇದ್ದರೆ ತೋರಿಸಿ. ಮೀಡಿಯಾಗಳು ತಮಗೆ ಏನು ಬೇಕು ಅದನ್ನು ಹುಟ್ಟಿಸಿಕೊಳ್ಳುತ್ತಾರೆ. ಏನು ಟಿಆರ್​ಪಿ ಬೇಕು ಅದನ್ನು ಮಾತ್ರ ಹಾಕಿಕೊಳ್ಳುತ್ತೀರಾ ಎಂದು ಆರೋಪಿಸಿದರು.

Social Fighter Rajashekar Mulali reaction
ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿಕೆ

ಧಾರವಾಡ: ಸಾಮಾಜಿಕ‌ ಹೋರಾಟಗಾರ ದಿನೇಶ್ ಕಲ್ಲಳ್ಳಿ ಕೇಸ್ ವಾಪಸ್ ವಿಚಾರ ಅವರಿಗೆ ಒತ್ತಡಗಳು ಏನಿದೆಯೋ ಗೊತ್ತಿಲ್ಲ, ಬೇರೆ ಏನಾದರು ತೊಂದರೆಯಾಗಿರಬಹುದು ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಈಗ ಹಲವಾರು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ದೇಶದಲ್ಲಿ ಪ್ರಮಾಣಿಕ ಸಾಮಾಜಿಕ ಹೋರಾಟಗಾರರ ಸಂಖ್ಯೆ ಬೆರಳಣಿಕೆಯಷ್ಟಿದೆ ಎಂದರು.

ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿಕೆ

ಎಲ್ಲರೂ ಅಣ್ಣಾ ಹಜಾರೆ, ರಾಜಶೇಖರ ಮುಲಾಲಿ ಆಗೋಕೆ ಸಾಧ್ಯವಿಲ್ಲ. ಒಂದೇ ದಿನ ಹಿರೋ ಆಗಿ ಅವತ್ತೆ ಸಂಜೆ ವಿಲನ್ ಆದವರು ಇದ್ದಾರೆ. ಸಿಡಿ ಕೇಸ್ ನಲ್ಲಿ ನನ್ನನ್ನು ಪಾರ್ಟಿ ಮಾಡಿದ್ದಾರೆ ಅಂತಾ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ನಿನ್ನೆ ಯಾರೋ ಬಳ್ಳಾರಿಯ ನನ್ನ ಕಚೇರಿಗೆ ಹೋಗಿದ್ದರಂತೆ, ಆದರೆ ಸಂಬಂಧಿಸಿದ ಕೋರ್ಟ್ ಕಾಫಿ ಕೊಟ್ಟಿದ್ದಾರೋ ಇಲ್ವೋ ಗೊತ್ತಿಲ್ಲ ಎಂದರು.

ರಮೇಶ್ ಜಾರಕಿಹೊಳಿ ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. ನಾನು ಎಲ್ಲಿಯೂ ನನ್ನ ಬಳಿ ಸಿಡಿ ಇವೆ ಎಂದು ಹೇಳಿಲ್ಲ ಯಾರ ಬಳಿಯಾದರೂ ನನ್ನ ಹೇಳಿಕೆಯ ದಾಖಲೆ ಇದ್ದರೆ ತೋರಿಸಿ. ಮೀಡಿಯಾಗಳು ತಮಗೆ ಏನು ಬೇಕು ಅದನ್ನು ಹುಟ್ಟಿಸಿಕೊಳ್ಳುತ್ತಾರೆ. ಏನು ಟಿಆರ್​ಪಿ ಬೇಕು ಅದನ್ನು ಮಾತ್ರ ಹಾಕಿಕೊಳ್ಳುತ್ತೀರಾ ಎಂದು ಆರೋಪಿಸಿದರು.

ಓದಿ : 4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO

ಉತ್ತರ ಕರ್ನಾಟಕದ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ದರಿದ್ದಾರೆ. ಈ ಮಾತಿಗೆ ನಾನು ಬದ್ದನಾಗಿ ಇರುತ್ತೇನೆ. ಈ ಭಾಗದ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಹೇಳುತ್ತೇನೆ ಎಂದರು.

ಧಾರವಾಡ: ಸಾಮಾಜಿಕ‌ ಹೋರಾಟಗಾರ ದಿನೇಶ್ ಕಲ್ಲಳ್ಳಿ ಕೇಸ್ ವಾಪಸ್ ವಿಚಾರ ಅವರಿಗೆ ಒತ್ತಡಗಳು ಏನಿದೆಯೋ ಗೊತ್ತಿಲ್ಲ, ಬೇರೆ ಏನಾದರು ತೊಂದರೆಯಾಗಿರಬಹುದು ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಈಗ ಹಲವಾರು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ದೇಶದಲ್ಲಿ ಪ್ರಮಾಣಿಕ ಸಾಮಾಜಿಕ ಹೋರಾಟಗಾರರ ಸಂಖ್ಯೆ ಬೆರಳಣಿಕೆಯಷ್ಟಿದೆ ಎಂದರು.

ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿಕೆ

ಎಲ್ಲರೂ ಅಣ್ಣಾ ಹಜಾರೆ, ರಾಜಶೇಖರ ಮುಲಾಲಿ ಆಗೋಕೆ ಸಾಧ್ಯವಿಲ್ಲ. ಒಂದೇ ದಿನ ಹಿರೋ ಆಗಿ ಅವತ್ತೆ ಸಂಜೆ ವಿಲನ್ ಆದವರು ಇದ್ದಾರೆ. ಸಿಡಿ ಕೇಸ್ ನಲ್ಲಿ ನನ್ನನ್ನು ಪಾರ್ಟಿ ಮಾಡಿದ್ದಾರೆ ಅಂತಾ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ನಿನ್ನೆ ಯಾರೋ ಬಳ್ಳಾರಿಯ ನನ್ನ ಕಚೇರಿಗೆ ಹೋಗಿದ್ದರಂತೆ, ಆದರೆ ಸಂಬಂಧಿಸಿದ ಕೋರ್ಟ್ ಕಾಫಿ ಕೊಟ್ಟಿದ್ದಾರೋ ಇಲ್ವೋ ಗೊತ್ತಿಲ್ಲ ಎಂದರು.

ರಮೇಶ್ ಜಾರಕಿಹೊಳಿ ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. ನಾನು ಎಲ್ಲಿಯೂ ನನ್ನ ಬಳಿ ಸಿಡಿ ಇವೆ ಎಂದು ಹೇಳಿಲ್ಲ ಯಾರ ಬಳಿಯಾದರೂ ನನ್ನ ಹೇಳಿಕೆಯ ದಾಖಲೆ ಇದ್ದರೆ ತೋರಿಸಿ. ಮೀಡಿಯಾಗಳು ತಮಗೆ ಏನು ಬೇಕು ಅದನ್ನು ಹುಟ್ಟಿಸಿಕೊಳ್ಳುತ್ತಾರೆ. ಏನು ಟಿಆರ್​ಪಿ ಬೇಕು ಅದನ್ನು ಮಾತ್ರ ಹಾಕಿಕೊಳ್ಳುತ್ತೀರಾ ಎಂದು ಆರೋಪಿಸಿದರು.

ಓದಿ : 4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO

ಉತ್ತರ ಕರ್ನಾಟಕದ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ದರಿದ್ದಾರೆ. ಈ ಮಾತಿಗೆ ನಾನು ಬದ್ದನಾಗಿ ಇರುತ್ತೇನೆ. ಈ ಭಾಗದ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಹೇಳುತ್ತೇನೆ ಎಂದರು.

Last Updated : Mar 9, 2021, 2:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.