ETV Bharat / state

ಬಡ ಕುಟುಂಬಗಳ ಪಾಲಿಗೆ ನೆರವಾದ ಪೊಲೀಸಪ್ಪ.. ಕೆಲಸದ ಒತ್ತಡದಲ್ಲೂ ಮಾನವೀಯತೆ.. - ಕೃಷ್ಣ ಕಟ್ಟಿಮನಿ

ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿರೋ ಪರಿಣಾಮ ದಿನಗೂಲಿ ಮಾಡಿ‌ ಬದುಕು ನಡೆಸುವವರು, ನಿರ್ಗತಿಕರು, ಬಡವರಿಗೆ ಕೆಲಸವಿಲ್ಲದೇ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ಇವರ ಕಷ್ಟವನ್ನು ಅರಿತ ಪೊಲೀಸ್​ ಇಲಾಖೆಯ ಸಿಬ್ಬಂದಿಯೊಬ್ಬರು ಕೆಲಸದ ಒತ್ತಡದಲ್ಲೂ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

policeman who help the poor people in hubballi
ಬಡ ಕುಟುಂಬಗಳ ಪಾಲಿಗೆ ಬೆಳಕಾದ ಪೊಲೀಸ್ ಸಿಬ್ಬಂದಿ
author img

By

Published : Apr 10, 2020, 6:31 PM IST

ಹುಬ್ಬಳ್ಳಿ : ಲಾಕ್​ಡೌನ್​​ ಸಂದರ್ಭದಲ್ಲಿ ಇಷ್ಟು ದಿನ ಪೊಲೀಸರು ಜನರನ್ನು ಹೊರಬರದಂತೆ ನೋಡಿಕೊಳ್ಳವುದು, ಅನಾವಶ್ಯಕ ತಿರುಗಾಟದಲ್ಲಿದ್ದವರಿಗೆ ಲಾಠಿ ರುಚಿ ತೋರಿಸುವುದು ಎಂಬೆಲ್ಲಾ ಸುದ್ದಿ ಕೇಳಿಯೇ ಕೇಳಿರುತ್ತೀರಾ. ಆದರೆ, ಇದೀಗ ಪೊಲೀಸ್​ ಸಿಬ್ಬಂದಿ ನಿರ್ಗತಿಕರು, ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.

ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿರೋ ಪರಿಣಾಮ ದಿನಗೂಲಿ ಮಾಡಿ‌ ಬದುಕು ನಡೆಸುವವರು, ನಿರ್ಗತಿಕರು, ಬಡವರಿಗೆ ಕೆಲಸವಿಲ್ಲದೇ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ಇವರ ಕಷ್ಟವನ್ನು ಅರಿತ ಪೊಲೀಸ್​ ಇಲಾಖೆಯ ಸಿಬ್ಬಂದಿಯೊಬ್ಬರು ಕೆಲಸದ ಒತ್ತಡದಲ್ಲೂ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಷ್ಣ ಕಟ್ಟಿಮನಿ ಎಂಬುವರೇ ಬಡವರಿಗೆ ಅಗತ್ಯ ವಸ್ತುಗಳನ್ನು ನೀಡಿದವರು. ಇಂದು ಬಂಜಾರ ಕಾಲೋನಿ, ಕುಸುಗಲ್ ರಸ್ತೆಯ ಶಬರಿನಗರದಲ್ಲಿರುವ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.‌ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಬಂಜಾರಾ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪಾಂಡುರಂಗ ಪಮ್ಮಾರ, ಶಂಕರ ಕಟ್ಟಿಮನಿ, ಮೋತಿಲಾಲ್ ರಾಠೋಡ, ಪ್ರಭು ಬೊಮ್ಮನಪಾಡ, ಶ್ರೀನಿವಾಸ ಕಟ್ಟಿಮನಿ ಹಾಗೂ ಬಂಜಾರಾ ಕಾಲೋನಿಯ ಗುರು-ಹಿರಿಯರು ಉಪಸ್ಥಿತರಿದ್ದರು.

ಹುಬ್ಬಳ್ಳಿ : ಲಾಕ್​ಡೌನ್​​ ಸಂದರ್ಭದಲ್ಲಿ ಇಷ್ಟು ದಿನ ಪೊಲೀಸರು ಜನರನ್ನು ಹೊರಬರದಂತೆ ನೋಡಿಕೊಳ್ಳವುದು, ಅನಾವಶ್ಯಕ ತಿರುಗಾಟದಲ್ಲಿದ್ದವರಿಗೆ ಲಾಠಿ ರುಚಿ ತೋರಿಸುವುದು ಎಂಬೆಲ್ಲಾ ಸುದ್ದಿ ಕೇಳಿಯೇ ಕೇಳಿರುತ್ತೀರಾ. ಆದರೆ, ಇದೀಗ ಪೊಲೀಸ್​ ಸಿಬ್ಬಂದಿ ನಿರ್ಗತಿಕರು, ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.

ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿರೋ ಪರಿಣಾಮ ದಿನಗೂಲಿ ಮಾಡಿ‌ ಬದುಕು ನಡೆಸುವವರು, ನಿರ್ಗತಿಕರು, ಬಡವರಿಗೆ ಕೆಲಸವಿಲ್ಲದೇ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ಇವರ ಕಷ್ಟವನ್ನು ಅರಿತ ಪೊಲೀಸ್​ ಇಲಾಖೆಯ ಸಿಬ್ಬಂದಿಯೊಬ್ಬರು ಕೆಲಸದ ಒತ್ತಡದಲ್ಲೂ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಷ್ಣ ಕಟ್ಟಿಮನಿ ಎಂಬುವರೇ ಬಡವರಿಗೆ ಅಗತ್ಯ ವಸ್ತುಗಳನ್ನು ನೀಡಿದವರು. ಇಂದು ಬಂಜಾರ ಕಾಲೋನಿ, ಕುಸುಗಲ್ ರಸ್ತೆಯ ಶಬರಿನಗರದಲ್ಲಿರುವ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.‌ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಬಂಜಾರಾ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪಾಂಡುರಂಗ ಪಮ್ಮಾರ, ಶಂಕರ ಕಟ್ಟಿಮನಿ, ಮೋತಿಲಾಲ್ ರಾಠೋಡ, ಪ್ರಭು ಬೊಮ್ಮನಪಾಡ, ಶ್ರೀನಿವಾಸ ಕಟ್ಟಿಮನಿ ಹಾಗೂ ಬಂಜಾರಾ ಕಾಲೋನಿಯ ಗುರು-ಹಿರಿಯರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.