ETV Bharat / state

ಕೊಚ್ಚಿ ಹೋದ ಬೆಳೆ, ಮಕ್ಕಳ ಗೋಳಾಟ.. ನೆರೆ ಕುರಿತ ವಿಶೇಷ ಛಾಯಾಚಿತ್ರ ಪ್ರದರ್ಶನ - ಹುಬ್ಬಳ್ಳಿಯಲ್ಲಿ ರಾಜ್ಯ ನೆರೆ ಹಾವಳಿಯ ಛಾಯಾಚಿತ್ರ ಪ್ರದರ್ಶನ

ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಭೀಕರ ನೆರೆ ಹಾವಳಿಯ ಕುರಿತಾಗಿ ಎರಡು ದಿನಗಳ ಕಾಲ ವಿಶೇಷ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿದೆ.

ನೆರೆ ಹಾವಳಿಯ ಛಾಯಾಚಿತ್ರ ಪ್ರದರ್ಶನ
author img

By

Published : Oct 20, 2019, 2:45 PM IST

ಹುಬ್ಬಳ್ಳಿ: ಸತತವಾಗಿ ಸುರಿದ ಮಳೆಯಿಂದಾಗಿ ರಾಜ್ಯದ 22ಕ್ಕೂ ಅಧಿಕ ಜಿಲ್ಲೆಗಳು ನೆರೆ ಹಾವಳಿಗೆ ತತ್ತರಿಸಿದ್ದವು. ವರುಣನ ಆರ್ಭಟಕ್ಕೆ ಅನೇಕ ಜನ ಪ್ರಾಣ ಕಳೆದುಕೊಂಡರು. ಇಂತಹ ಪ್ರವಾಹದ ಭೀಕರತೆ ಹಾಗು ನೆರೆ ಸಂತ್ರಸ್ಥರ ಪರಿಸ್ಥಿತಿಯನ್ನು ಪ್ರಾಣದ ಹಂಗು ತೊರೆದು ಸೆರೆಹಿಡಿದ ಛಾಯಾಗ್ರಾಹಕರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.

ನೆರೆ ಹಾವಳಿಯ ಛಾಯಾಚಿತ್ರ ಪ್ರದರ್ಶನ

ಇಂದಿರಾ ಗಾಜಿನ ಮನೆಯಲ್ಲಿ ಛಾಯಾ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ.

ತುತ್ತು ಅನ್ನಕ್ಕಾಗಿ ಅಂಗಲಾಚಿದ, ಮಳೆಯಲ್ಲಿ ಕೊಚ್ಚಿ ಹೋದ ಬೆಳೆಗಳು, ಮಕ್ಕಳ‌‌ ಗೋಳಾಟ, ನೆರೆಯಿಂದ ಮುಳುಗಿರುವ ಗ್ರಾಮಗಳು.. ಹೀಗೆ ಹತ್ತು ಹಲವು ದಯನೀಯ ಘಟನೆಗಳ ಛಾಯಾಚಿತ್ರಗಳು ವೀಕ್ಷಕರ ಗಮನ ಸೆಳೆದವು.

ಬೆಳಗಾವಿ, ಹಾವೇರಿ, ಗದಗ, ಬಳ್ಳಾರಿ, ಬಿಜಾಪುರ, ಬಾಗಲಕೋಟೆ ಸೇರಿದಂತೆ ಒಟ್ಟು 9 ಜಿಲ್ಲೆಗಳ 40ಕ್ಕೂ ಅಧಿಕ ಪತ್ರಿಕಾ ಛಾಯಾಗ್ರಾಹಕರ 200ಕ್ಕೂ ಅಧಿಕ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.

ಹುಬ್ಬಳ್ಳಿ: ಸತತವಾಗಿ ಸುರಿದ ಮಳೆಯಿಂದಾಗಿ ರಾಜ್ಯದ 22ಕ್ಕೂ ಅಧಿಕ ಜಿಲ್ಲೆಗಳು ನೆರೆ ಹಾವಳಿಗೆ ತತ್ತರಿಸಿದ್ದವು. ವರುಣನ ಆರ್ಭಟಕ್ಕೆ ಅನೇಕ ಜನ ಪ್ರಾಣ ಕಳೆದುಕೊಂಡರು. ಇಂತಹ ಪ್ರವಾಹದ ಭೀಕರತೆ ಹಾಗು ನೆರೆ ಸಂತ್ರಸ್ಥರ ಪರಿಸ್ಥಿತಿಯನ್ನು ಪ್ರಾಣದ ಹಂಗು ತೊರೆದು ಸೆರೆಹಿಡಿದ ಛಾಯಾಗ್ರಾಹಕರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.

ನೆರೆ ಹಾವಳಿಯ ಛಾಯಾಚಿತ್ರ ಪ್ರದರ್ಶನ

ಇಂದಿರಾ ಗಾಜಿನ ಮನೆಯಲ್ಲಿ ಛಾಯಾ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ.

ತುತ್ತು ಅನ್ನಕ್ಕಾಗಿ ಅಂಗಲಾಚಿದ, ಮಳೆಯಲ್ಲಿ ಕೊಚ್ಚಿ ಹೋದ ಬೆಳೆಗಳು, ಮಕ್ಕಳ‌‌ ಗೋಳಾಟ, ನೆರೆಯಿಂದ ಮುಳುಗಿರುವ ಗ್ರಾಮಗಳು.. ಹೀಗೆ ಹತ್ತು ಹಲವು ದಯನೀಯ ಘಟನೆಗಳ ಛಾಯಾಚಿತ್ರಗಳು ವೀಕ್ಷಕರ ಗಮನ ಸೆಳೆದವು.

ಬೆಳಗಾವಿ, ಹಾವೇರಿ, ಗದಗ, ಬಳ್ಳಾರಿ, ಬಿಜಾಪುರ, ಬಾಗಲಕೋಟೆ ಸೇರಿದಂತೆ ಒಟ್ಟು 9 ಜಿಲ್ಲೆಗಳ 40ಕ್ಕೂ ಅಧಿಕ ಪತ್ರಿಕಾ ಛಾಯಾಗ್ರಾಹಕರ 200ಕ್ಕೂ ಅಧಿಕ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.

Intro:ಹುಬ್ಬಳಿBody:ಸ್ಲಗ್:- ಪ್ರವಾಹ ಪರಿಸ್ಥಿತಿಯ ಛಾಯ ಚಿತ್ರಣ.......ಪ್ರದರ್ಶನ ‌



ಹುಬ್ಬಳ್ಳಿ:- ಸತತವಾಗಿ ಸುರಿದ ಮಳೆಯಿಂದಾಗಿ ಉತ್ತರ ಕರ್ನಾಟಕದ ಬಹುತೇಕ ಕುಟುಂಬಗಳು ಬೀದಿಗೆ ಬಂದಿದ್ದು, ಅದೆಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಛಾಯಾಗ್ರಾಹಕರು ಕರ್ತವ್ಯ ನಿರ್ವಹಿಸಿ ದೇಶಕ್ಕೆ ಪ್ರವಾಹದ ಪರಿಸ್ಥಿತಿ ಹಾಗೂ‌ ಅಲ್ಲಿರುವ ಜನರ ಕಷ್ಟಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಸರಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಕಣ್ಣಿಗೆ ಕಟ್ಟುವ ಹಾಗೇ ತೋರಿಸಿದ್ದಾರೆ.

ಹೌದು, ಇಂದಿರಾ ಗಾಜಿನ ಮನೆಯಲ್ಲಿ ಪತ್ರಿಕಾ ಛಾಯಾಗ್ರಾಹಕರು ವತಿಯಿಂದ ಎರಡು ದಿನಗಳ ನೆರೆ ಛಾಯಾ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪ್ರದರ್ಶನದಲ್ಲಿ ಪ್ರತಿಯೊಂದು ಭಾವಚಿತ್ರಗಳು ನೆರೆ ಸಂತ್ರಸ್ತರಿಗೆ ಆದ ಅನಾಹುತದ ಬಗ್ಗೆ ಬಿಡಿಯಾಗಿ ಬಿತ್ತಿಸುತ್ತಿದ್ದವು, ನೀರಿನಲ್ಲಿ ಮುಳಗಿ ಹೋಗಿರುವ ಕುಟುಂಬ, ತುತ್ತು ಅನ್ನಕ್ಕಾಗಿ ಅಂಗಲಾಚಿಸುವ ಚಿತ್ರ, ಮಳೆಯಲ್ಲಿ ಕೊಚ್ಚಿ ಹೋದ ಬೆಳೆಗಳು, ಮಕ್ಕಳ‌‌ ಗೋಳಾಟ ,ನೆರೆಯಿಂದ ಗ್ರಾಮಗಳು ಮುಳುಗಿರುವ ಚಿತ್ರ ಹೀಗೆ ಅನೇಕ ಮಳೆಯಿಂದಾಗಿ ಕಣ್ಣಿರು ತರಿಸುವಂತಹ ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇನ್ನೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬೇಟಿ ನೀಡಿ ಈ ನೆರೆ ಛಾಯಚಿತ್ರ ಪ್ರದರ್ಶನವನ್ನು ಉದ್ಘಾಟನೆ ಮಾಡಿದ್ದು, ಇವರು ಪ್ರದರ್ಶನದಲ್ಲಿ ಇಡಲಾಗಿರುವ ಛಾಯಾಚಿತ್ರಗಳನ್ನು ನೋಡಿ ಮಾತನಾಡಿದ ಅವರು, ಪ್ರವಾಹದ ವೇಳೆ ಸೆರೆ ಹಿಡಿದಿರುವಂತಹ ಈ ಛಾಯಾಚಿತ್ರಗಳ ಪ್ರವಾಹದ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವ ಹಾಗೇ ಇವೆ. ಜನರು ಪ್ರವಾಹದ ಪರಿಸ್ಥಿತಿಯಲ್ಲಿ ಅನುಭವಿಸಿದ ಕಷ್ಟ ನೋವುಗಳನ್ನು ಈ ಛಾಯ ಚಿತ್ರಗಳನ್ನು ‌ನೋಡಿದ್ರೇ ತಿಳಿಯುತ್ತೆ. ಅವಳಿನಗರದ ಪ್ರತಿಯೊಬ್ಬರು ಈ ಛಾಯಾಚಿತ್ರ ಪ್ರದರ್ಶನಕ್ಕೆ ಭೇಟಿ ನೀಡಿ ಪ್ರದರ್ಶನದಲ್ಲಿ ಇಡಲಾಗಿರುವ ಛಾಯಾಚಿತ್ರ ವಿಕ್ಷಿಸುವಂತೆ ತಿಳಿಸಿದರು.
ಇನ್ನೂ ನೆರೆ ಛಾಯಾಚಿತ್ರ ಪ್ರದರ್ಶನದಲ್ಲಿ ನೆರೆ ಪ್ರವಾಹ ಬಂದಾಗ ಜನರ ಸ್ಥಿತಿಗತಿಗಳು ಹೇಗೆ ಇತ್ತು. ನೆರೆ ಬಂದಾಗ ಜನರು ಯಾವ ಯಾವ ಸಮಸ್ಯೆಗಳನ್ನು ಅನುಭವಿಸಿದರು. ಒಟ್ಟಾರೆಯಾಗಿ ನೆರೆಯ ಪರಿಣಾಮ ಯಾವ ರೀತಿ ಇತ್ತು ಎಂಬುದನ್ನು ಜನರಿಗೆ ತಿಳಿಸುವ ಹಿನ್ನಲೆಯಲ್ಲಿ ಬೆಳಗಾವಿ, ಹಾವೇರಿ, ಗದಗ, ಬಳ್ಳಾರಿ, ಬಿಜಾಪುರ, ಬಾಗಲಕೋಟೆ ಸೇರಿದಂತೆ ಒಟ್ಟು 9 ಜಿಲ್ಲೆಗಳ 40 ಕ್ಕೂ ಹೆಚ್ಚು ಜನ ಪತ್ರಿಕಾ ಛಾಯಾಗ್ರಹಕರು ಇತ್ತೀಚೆಗೆ ಸುರಿದ ಮಹಾ ಮಳೆಯಿಂದ ನೆರೆ ಪ್ರವಾಹಕ್ಕೊಳಗಾದ ಒಂಬತ್ತು ಜಿಲ್ಲೆಗೆ ಸಂಬಂಧ ಪಟ್ಟ ಅಪರೂಪದ 200 ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿದ್ದುವು...

ಬೈಟ್:- ಕಿರಣ್ ಬಾಕಳೆ ಛಾಯಾಗ್ರಾಹಕ.

ಬೈಟ್:- ರೂಪ ಸೊಳಂಕಿ ಸಾರ್ವಜನಿಕರು..

________________________________________


ಹುಬ್ಬಳ್ಳಿ:- ಸ್ಟ್ರಿಂಜರ

ಯಲ್ಲಪ್ ಕುಂದಗೋಳConclusion:ಯಲ್ಲಪ್ಪ ಕುಂದಗೊಳ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.