ETV Bharat / state

ಕೊರೊನಾ ಮಹಾಮಾರಿಯಲ್ಲ, ಭಯ ಬೇಡ: ಶಾಸಕ ಅಬ್ಬಯ್ಯ

author img

By

Published : Jul 20, 2020, 10:43 AM IST

ಶಾಸಕ ಪ್ರಸಾದ್​​ ಅಬ್ಬಯ್ಯ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ನಿನ್ನೆ ಆಸ್ಪತ್ರೆಯಿಂದ ಬಿಡುಗಡೆ ಆಗಿ ಮನೆಗೆ ಹಿಂದಿರುಗಿದರು.

Prakash abbayya
Prakash abbayya

ಹುಬ್ಬಳ್ಳಿ: ಕೊರೊನಾ ವೈರಸ್ ಜನರು ಭಾವಿಸಿರುವಂತೆ ಮಹಾಮಾರಿ ರೋಗವಲ್ಲ. ಹಾಗಂತ ಈ ಕುರಿತು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಶಾಸಕ ಪ್ರಸಾದ್​ ಅಬ್ಬಯ್ಯ ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ನಿನ್ನೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಹಿಂದಿರುಗುವ ವೇಳೆ ಮಾತನಾಡಿದ ಅವರು, ಜನರಲ್ಲಿ ಮಾಹಿತಿ ಕೊರತೆ ಹಾಗೂ ತಪ್ಪು ತಿಳಿವಳಿಕೆಯಿಂದಾಗಿ ಕೊರೊನಾ ವೈರಸ್ ಭಯಾನಕ ಕಾಯಿಲೆ ಎಂದು ಎಲ್ಲೆಡೆ ಬಿಂಬಿತವಾಗಿದೆ. ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆ ಮೂಲಕ ಸಮುದಾಯದಲ್ಲಿ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಕೊರೊನಾ ಸೋಂಕು ದೃಢಪಟ್ಟಾಗ ಆರಂಭದಲ್ಲಿ ನಾನೂ ಸಹ ಸಾಮಾನ್ಯರಂತೆ ಸಹಜವಾಗಿ ಆತಂಕಕ್ಕೆ ಒಳಗಾಗಿದ್ದೆ. ಆದರೆ ಕಿಮ್ಸ್​​​ನಲ್ಲಿನ ಉತ್ತಮ ಚಿಕಿತ್ಸೆ, ವೈದ್ಯರ ಸಲಹೆ, ಮಾರ್ಗದರ್ಶನದಿಂದಾಗಿ ಕೊರೊನಾ ಸೋಂಕು ಹೊರಗಿನ ಜನರು ತಿಳಿದುಕೊಂಡಷ್ಟು ಭಯಾನಕವಲ್ಲ ಎಂಬ ಭಾವನೆ ಮೂಡಿತು. ಇದು ಸಾಮಾನ್ಯ ಜ್ವರ, ಶೀತದಷ್ಟೇ ಕಾಯಿಲೆಯಾಗಿದ್ದು, ಜನರು ಕೊರೊನಾ ಕುರಿತಾಗಿ ಅನಗತ್ಯ ಆತಂಕ ಪಡಬೇಕಿಲ್ಲ ಎಂದರು.

ಖಾಸಗಿ ಆಸ್ಪತ್ರೆ ವಿರುದ್ಧ ಅಸಮಾಧಾನ:

ನನ್ನ ಕುಟುಂಬದ ಇನ್ನುಳಿದ ಕೆಲ ಸದಸ್ಯರಿಗೆ ಸೋಂಕು ತಗುಲಿದಾಗ ಆರಂಭದಲ್ಲಿ ಕಿಮ್ಸ್​​​ನಲ್ಲಿ ಬೆಡ್ ಇರಲಿಲ್ಲ. ಅವರನ್ನು ಸುಚಿರಾಯು ಅಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಜಿಲ್ಲಾಡಳಿತದ ನಿರ್ದೇಶನವಿದ್ದರೂ ಸಹ ಆಸ್ಪತ್ರೆಗೆ ದಾಖಲಾಗಿ 2 ದಿನ ಕಳೆದರೂ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲಿಲ್ಲ. ಅಲ್ಲದೆ ದುಬಾರಿ ಬಿಲ್ ನೀಡಿದ್ದು, ಇದು ಅತ್ಯಂತ ಬೇಜವಾಬ್ದಾರಿತನವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಚಿಕಿತ್ಸೆ ನಿರಾಕರಿಸುವ ಹಾಗೂ ನಿರ್ಲಕ್ಷ್ಯ ತೋರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದೇನೆ ಎಂದರು.

ಪುನಃ ಕುಟುಂಬ ಸದಸ್ಯರನ್ನು ಕಿಮ್ಸ್​​​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅವರೆಲ್ಲರು ಚೇತರಿಸಿಕೊಂಡಿದ್ದು, ಇನ್ನರೆಡು ದಿನದಲ್ಲಿ ಕುಟುಂಬದ ಎಲ್ಲಾ 13 ಸದಸ್ಯರು ಸಹ ಕಿಮ್ಸ್​​ನಿಂದ ಬಿಡುಗಡೆ ಆಗಲಿದ್ದಾರೆ ಎಂದರು.

ಹುಬ್ಬಳ್ಳಿ: ಕೊರೊನಾ ವೈರಸ್ ಜನರು ಭಾವಿಸಿರುವಂತೆ ಮಹಾಮಾರಿ ರೋಗವಲ್ಲ. ಹಾಗಂತ ಈ ಕುರಿತು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಶಾಸಕ ಪ್ರಸಾದ್​ ಅಬ್ಬಯ್ಯ ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ನಿನ್ನೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಹಿಂದಿರುಗುವ ವೇಳೆ ಮಾತನಾಡಿದ ಅವರು, ಜನರಲ್ಲಿ ಮಾಹಿತಿ ಕೊರತೆ ಹಾಗೂ ತಪ್ಪು ತಿಳಿವಳಿಕೆಯಿಂದಾಗಿ ಕೊರೊನಾ ವೈರಸ್ ಭಯಾನಕ ಕಾಯಿಲೆ ಎಂದು ಎಲ್ಲೆಡೆ ಬಿಂಬಿತವಾಗಿದೆ. ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆ ಮೂಲಕ ಸಮುದಾಯದಲ್ಲಿ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಕೊರೊನಾ ಸೋಂಕು ದೃಢಪಟ್ಟಾಗ ಆರಂಭದಲ್ಲಿ ನಾನೂ ಸಹ ಸಾಮಾನ್ಯರಂತೆ ಸಹಜವಾಗಿ ಆತಂಕಕ್ಕೆ ಒಳಗಾಗಿದ್ದೆ. ಆದರೆ ಕಿಮ್ಸ್​​​ನಲ್ಲಿನ ಉತ್ತಮ ಚಿಕಿತ್ಸೆ, ವೈದ್ಯರ ಸಲಹೆ, ಮಾರ್ಗದರ್ಶನದಿಂದಾಗಿ ಕೊರೊನಾ ಸೋಂಕು ಹೊರಗಿನ ಜನರು ತಿಳಿದುಕೊಂಡಷ್ಟು ಭಯಾನಕವಲ್ಲ ಎಂಬ ಭಾವನೆ ಮೂಡಿತು. ಇದು ಸಾಮಾನ್ಯ ಜ್ವರ, ಶೀತದಷ್ಟೇ ಕಾಯಿಲೆಯಾಗಿದ್ದು, ಜನರು ಕೊರೊನಾ ಕುರಿತಾಗಿ ಅನಗತ್ಯ ಆತಂಕ ಪಡಬೇಕಿಲ್ಲ ಎಂದರು.

ಖಾಸಗಿ ಆಸ್ಪತ್ರೆ ವಿರುದ್ಧ ಅಸಮಾಧಾನ:

ನನ್ನ ಕುಟುಂಬದ ಇನ್ನುಳಿದ ಕೆಲ ಸದಸ್ಯರಿಗೆ ಸೋಂಕು ತಗುಲಿದಾಗ ಆರಂಭದಲ್ಲಿ ಕಿಮ್ಸ್​​​ನಲ್ಲಿ ಬೆಡ್ ಇರಲಿಲ್ಲ. ಅವರನ್ನು ಸುಚಿರಾಯು ಅಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಜಿಲ್ಲಾಡಳಿತದ ನಿರ್ದೇಶನವಿದ್ದರೂ ಸಹ ಆಸ್ಪತ್ರೆಗೆ ದಾಖಲಾಗಿ 2 ದಿನ ಕಳೆದರೂ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲಿಲ್ಲ. ಅಲ್ಲದೆ ದುಬಾರಿ ಬಿಲ್ ನೀಡಿದ್ದು, ಇದು ಅತ್ಯಂತ ಬೇಜವಾಬ್ದಾರಿತನವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಚಿಕಿತ್ಸೆ ನಿರಾಕರಿಸುವ ಹಾಗೂ ನಿರ್ಲಕ್ಷ್ಯ ತೋರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದೇನೆ ಎಂದರು.

ಪುನಃ ಕುಟುಂಬ ಸದಸ್ಯರನ್ನು ಕಿಮ್ಸ್​​​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅವರೆಲ್ಲರು ಚೇತರಿಸಿಕೊಂಡಿದ್ದು, ಇನ್ನರೆಡು ದಿನದಲ್ಲಿ ಕುಟುಂಬದ ಎಲ್ಲಾ 13 ಸದಸ್ಯರು ಸಹ ಕಿಮ್ಸ್​​ನಿಂದ ಬಿಡುಗಡೆ ಆಗಲಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.