ಧಾರವಾಡ: ಗಾಂಜಾ ಮಾರಾಟ ಮಾಡುತ್ತಿದ್ದ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಕೃಷ್ಣಕಾಂತ ಹೇಳಿದರು.
ಜೈಭೀಮ ನಗರದ ಪೃಥ್ವಿ ಕೊಂಡಪಲ್ಲಿ, ಸೌದಾಗರ ಚಾಳದ ಸತ್ಕಾರ ಮಾಡಲಗಿ, ಬಾರಾ ಇಮಾಮ ಗಲ್ಲಿಯ ಜಾವೀದ್ ಅಹ್ಮದ ಬಾದಾಮಿ, ನಿಜಾಮುದ್ದಿನ್ ಕಾಲೋನಿಯ ಮೆಹಬೂಬ್ ಸಾಬ್, ಮಸಾಲಗಾರ ಓಣಿಯ ಮಹ್ಮದ್ ಸಾಧಿಕ ಖತೀಬ, ಹತ್ತಿಕೊಳ್ಳದ ಮದ್ಮದ ಸಾಧಿಕ, ರಾಜೇಸಾಬ ಹಂಚಿನಾಳ ಬಂಧಿತ ಆರೋಪಿಗಳು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳಿಂದ 3 ಕೆಜಿ ಒಂದು ಗ್ರಾಂ ಗಾಂಜಾ, ಒಂದು ಯಮ್ಹಾ ಎಫ್ ಜೆಡ್ ಬೈಕ್ ಹಾಗೂ ಒಂದು ಕಾರು ಸೇರಿದಂತೆ 8 ಲಕ್ಷದ 57 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ಧಾರವಾಡದ ನುಚ್ಚಂಬ್ಲಿ ಬಾವಿ ಹತ್ತಿರ ಗಾಂಜಾ ಮಾರಾಟ ಮಾಡಲು ನಿಂತಾಗ ದಾಳಿ ಮಾಡಲಾಗಿದೆ. ಆರೋಪಗಳನ್ನು ಬಂಧಿಸಿದ ಪೊಲೀಸರಿಗೆ ಡಿಸಿಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.