ETV Bharat / state

ಪೇಡಾ ನಗರಿಯ ಬೆನ್ನಿಗಂಟಿದ ಬರಗಾಲ: ಬರ ನಿರ್ವಹಣೆಗೆ ಜಿಲ್ಲಾಡಳಿತ ಕ್ರಮ - ಬರ ನಿರ್ವಹಣೆ: ಜಿಲ್ಲಾಡಳಿತದಿಂದ ಸೂಕ್ತ ಕ್ರಮ

ಈ ಬಾರಿ ರಾಜ್ಯದೆಲ್ಲೆಡೆ ಬರಗಾಲದ ಛಾಯೆ ಆವರಿಸಿದ್ದು, ಧಾರವಾಡದಲ್ಲಿ ಬರ ನಿರ್ವಹಣೆಗಾಗಿ ಜಿಲ್ಲಾಡಳಿತ ಸಾಕಷ್ಟು ಕ್ರಮ ಕೈಗೊಂಡಿದೆ.

ಬರ ನಿರ್ವಹಣೆಗೆ ಜಿಲ್ಲಾಡಳಿತ ಕ್ರಮ
author img

By

Published : May 11, 2019, 5:04 PM IST

ಧಾರವಾಡ: ಈ ಬಾರಿ ರಾಜ್ಯದ ಹಲವೆಡೆ ಬರ ಪರಿಸ್ಥಿತಿ ಎದುರಾಗಿದ್ದು, ಧಾರವಾಡ ಕೂಡ ಇದರಿಂದ ಹೊರತಾಗಿಲ್ಲ. ಹೀಗಾಗಿ ಬರ ನಿರ್ವಹಣೆಗಾಗಿ ಜಿಲ್ಲಾಡಳಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಹೌದು, ಧಾರವಾಡ ಜಿಲ್ಲೆಯಲ್ಲಿಯೂ ಬರ ತಾಂಡವಾಡುತ್ತಿದೆ. ಜಿಲ್ಲೆಯ ಕೆಲವೆಡೆ ನೀರಿಲ್ಲದೇ ತೊಂದರೆಯನ್ನು ಸಹ ಜನ ಅನುಭವಿಸುತ್ತಿದ್ದಾರೆ. ಜಿಲ್ಲೆಯ ನವಲಗುಂದ, ಕುಂದಗೋಳ ತಾಲೂಕಿನಲ್ಲಿ ಯಾವುದೇ ನೀರಿನ ಆಕರ ಇಲ್ಲ. ಹೀಗಾಗಿ ಜಿಲ್ಲಾಡಳಿತ ಆಯಾ ಗ್ರಾಮಗಳಲ್ಲಿರುವ ಬೋರ್​ವೆಲ್​ಗಳನ್ನೇ ರೀಚಾರ್ಜ್ ಮಾಡಿಸಿ, ಅದರಿಂದ ನೀರು ಪಡೆಯುತ್ತಿದೆ.

ಬರ ನಿರ್ವಹಣೆಗೆ ಜಿಲ್ಲಾಡಳಿತ ಕ್ರಮ

ಕುಡಿಯುವ ನೀರಿನ ಸಮಸ್ಯೆಯನ್ನು ಈಡೇರಿಸುವುದಕ್ಕಾಗಿಯೇ ಜಿಲ್ಲಾಡಳಿತ ಟೋಲ್ ಫ್ರಿ ನಂಬರ್ ಜನರಿಗೆ ಕೊಟ್ಟಿದ್ದು, ವಾಟ್ಸಪ್ ನಂಬರ್​ ಕೂಡ ಕೊಟ್ಟಿದೆ. ಜನ ಇದರಲ್ಲಿ ವಿಡಿಯೋ, ಫೋಟೋ ಕೂಡ ಹಾಕಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ. ಇನ್ನು ಜಿಲ್ಲೆಯಲ್ಲಿ 171 ಕೊಳವೆ ಬಾವಿಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಅಭಿವೃದ್ಧಿಗೊಂಡ 87 ಕೊಳವೆ ಬಾವಿಗಳು 35 ಗ್ರಾಮಗಳ ನೀರಿನ ದಾಹ ತಣಿಸುತ್ತಿವೆ. ಒಟ್ಟಾರೆಯಾಗಿ ಒಂದೆಡೆ ಮಲಪ್ರಭಾ ನದಿಯ ಬಲದಂಡೆ ಕಾಲುವೆ, ಮತ್ತೊಂದೆಡೆ ಅಭಿವೃದ್ಧಿಗೊಳ್ಳುತ್ತಿರುವ ಕೊಳವೆ ಬಾವಿಗಳಲ್ಲಿ ಬರುತ್ತಿರುವ ಅಲ್ಪಸ್ವಲ್ಪ ನೀರಿನಿಂದಾಗಿ ಧಾರವಾಡ ಜಿಲ್ಲೆಯ ಜನತೆ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

ಧಾರವಾಡ: ಈ ಬಾರಿ ರಾಜ್ಯದ ಹಲವೆಡೆ ಬರ ಪರಿಸ್ಥಿತಿ ಎದುರಾಗಿದ್ದು, ಧಾರವಾಡ ಕೂಡ ಇದರಿಂದ ಹೊರತಾಗಿಲ್ಲ. ಹೀಗಾಗಿ ಬರ ನಿರ್ವಹಣೆಗಾಗಿ ಜಿಲ್ಲಾಡಳಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಹೌದು, ಧಾರವಾಡ ಜಿಲ್ಲೆಯಲ್ಲಿಯೂ ಬರ ತಾಂಡವಾಡುತ್ತಿದೆ. ಜಿಲ್ಲೆಯ ಕೆಲವೆಡೆ ನೀರಿಲ್ಲದೇ ತೊಂದರೆಯನ್ನು ಸಹ ಜನ ಅನುಭವಿಸುತ್ತಿದ್ದಾರೆ. ಜಿಲ್ಲೆಯ ನವಲಗುಂದ, ಕುಂದಗೋಳ ತಾಲೂಕಿನಲ್ಲಿ ಯಾವುದೇ ನೀರಿನ ಆಕರ ಇಲ್ಲ. ಹೀಗಾಗಿ ಜಿಲ್ಲಾಡಳಿತ ಆಯಾ ಗ್ರಾಮಗಳಲ್ಲಿರುವ ಬೋರ್​ವೆಲ್​ಗಳನ್ನೇ ರೀಚಾರ್ಜ್ ಮಾಡಿಸಿ, ಅದರಿಂದ ನೀರು ಪಡೆಯುತ್ತಿದೆ.

ಬರ ನಿರ್ವಹಣೆಗೆ ಜಿಲ್ಲಾಡಳಿತ ಕ್ರಮ

ಕುಡಿಯುವ ನೀರಿನ ಸಮಸ್ಯೆಯನ್ನು ಈಡೇರಿಸುವುದಕ್ಕಾಗಿಯೇ ಜಿಲ್ಲಾಡಳಿತ ಟೋಲ್ ಫ್ರಿ ನಂಬರ್ ಜನರಿಗೆ ಕೊಟ್ಟಿದ್ದು, ವಾಟ್ಸಪ್ ನಂಬರ್​ ಕೂಡ ಕೊಟ್ಟಿದೆ. ಜನ ಇದರಲ್ಲಿ ವಿಡಿಯೋ, ಫೋಟೋ ಕೂಡ ಹಾಕಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ. ಇನ್ನು ಜಿಲ್ಲೆಯಲ್ಲಿ 171 ಕೊಳವೆ ಬಾವಿಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಅಭಿವೃದ್ಧಿಗೊಂಡ 87 ಕೊಳವೆ ಬಾವಿಗಳು 35 ಗ್ರಾಮಗಳ ನೀರಿನ ದಾಹ ತಣಿಸುತ್ತಿವೆ. ಒಟ್ಟಾರೆಯಾಗಿ ಒಂದೆಡೆ ಮಲಪ್ರಭಾ ನದಿಯ ಬಲದಂಡೆ ಕಾಲುವೆ, ಮತ್ತೊಂದೆಡೆ ಅಭಿವೃದ್ಧಿಗೊಳ್ಳುತ್ತಿರುವ ಕೊಳವೆ ಬಾವಿಗಳಲ್ಲಿ ಬರುತ್ತಿರುವ ಅಲ್ಪಸ್ವಲ್ಪ ನೀರಿನಿಂದಾಗಿ ಧಾರವಾಡ ಜಿಲ್ಲೆಯ ಜನತೆ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

Intro:ಧಾರವಾಡ: ಒಂದೆಡೆ ಬೆಟ್ಟ ಗುಡ್ಡಗಳ ಅರೆಮಲೆನಾಡು ಇದ್ದರೂ ಕೂಡ ಅದೇಕೋ ಧಾರವಾಡ ಜಿಲ್ಲೆಯ ಮೇಲೆಯೂ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ವರುಣ ಮುನಿಸಿಕೊಳ್ಳುತ್ತಲೇ ಬಂದಿದ್ದಾನೆ. ಪರಿಣಾಮವಾಗಿ ಈಗ ಧಾರವಾಡ ಜಿಲ್ಲೆಯಲ್ಲಿಯೂ ಬರ ತಾಂಡವಾಡುತ್ತಿದೆ. ಮಲಪ್ರಭಾ ನದಿಯ ಕೃಪೆಯಿಂದಾಗಿ ಕೆಲವೆಡೆ ಕುಡಿಯುವ ನೀರಿನ ಬವನೆ ಅಷ್ಟಾಗಿ ಕಂಡು ಬಂದಿಲ್ಲ, ಕೆಲವೆಡೆ ನೀರಿಲ್ಲದೇ ತೊಂದರೆಯನ್ನು ಸಹ ಜನ ಅನುಭವಿಸುತ್ತಿದ್ದಾರೆ.

ಒಂದು ಕಾಲಕ್ಕೆ ಹಸಿರು ಕಂಗೋಳಿಸುತ್ತಿದ್ದ ಸ್ಥಳದಲ್ಲಿ ಮರು ಈಗ ಭೂಮಿಯಂತಹ ವಾತಾವರಣ ನಿರ್ಮಾಣವಾಗಿದೆ. ಸದ್ಯ ಧಾರವಾಡ ಜಿಲ್ಲೆಯ ರೈತಾಪಿ ವರ್ಗದ ಭೂಮಿಯಲ್ಲಿ ಕಂಡು ಬರುತ್ತಿರುವ ಚಿತ್ರಣ. ಕಳೆದ ವರ್ಷ ಹಿಂಗಾರು ಹಾಗೂ ಆ ಬಳಿಕ ಮುಂಗಾರಿನಲ್ಲಿಯೂ ಆರಂಭದಲ್ಲಿ ಕೈ ಹಿಡಿದಂತೆ ಮಾಡಿದ್ದ ಮಳೆ ಆ ಬಳಿಕ ಕಣ್ಣಾಮುಚ್ಚಾಲೆ ಆಡಿ ಬಿಟ್ಟಿದೆ.

ಧಾರವಾಡ ಜಿಲ್ಲೆಯ ರೈತ ಕಂಗಾಲಾಗಿ ಹೋಗಿದ್ದಾನೆ. ಎಷ್ಟೋ ಕಡೆ ಬೆಳೆದು ನಿಂತಲ್ಲಿಯೇ ಬೆಳೆ ಒಣಗಿ ಹೋಗಿದ್ದು, ಅದನ್ನು ರೈತರು ಹಾಗೆ ಬಿಟ್ಟಿದ್ದಾರೆ. ಇದರಿಂದ ದನಕರುಗಳಿಗೆ ಮೇವಿನ ಕೊರತೆಯೂ ಕೂಡಾ ಎದುರಾಗಿದೆ. ಜಿಲ್ಲೆಯ ನವಲಗುಂದ, ಕುಂದಗೋಳ ಹಾಗೂ ಧಾರವಾಡ-ಹುಬ್ಬಳ್ಳಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇತ್ತು. ಆದ್ರೆ ಜಿಲ್ಲಾಡಳಿತ ಮುಂಜಾಗ್ರತೆ ಕೈಗೊಂಡ ಹಿನ್ನೆಲೆಯಲ್ಲಿ ಮಲಪ್ರಭಾ ಜಲಾಶಯದಿಂದ ಬಲದಂಡೆ ಕಾಲುವೆ ಮೂಲಕ ಆರು ದಿನಗಳ ಕಾಲ ನವಲಗುಂದ, ಹುಬ್ಬಳ್ಳಿ ಹಾಗೂ ಧಾರವಾಡ ತಾಲೂಕಿನ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಇನ್ನು ಅಳ್ನಾವರ ಪಟ್ಟಣದಲ್ಲಿ ಡವಗಿ ನಾಲೆ ಖಾಲಿಯಾಗಿದ್ದರಿಂದ ಅಲ್ಲಿಯೂ ನೀರಿನ ಸಮಸ್ಯೆ ಇದೆ. ಕುಂದಗೋಳ ತಾಲೂಕಿನಲ್ಲಿ ಯಾವುದೇ ನೀರಿನ ಆಕರ ಇಲ್ಲ. ಹೀಗಾಗಿ ಈ ಹಿಂದೆಲ್ಲ ಅಳ್ನಾವರ ಮತ್ತು ಕುಂದಗೋಳ ತಾಲೂಕಿನ ಟ್ಯಾಂಕರ್ಗಳನ್ನೇ ಆಶ್ರಯಿಸಬೇಕಾಗುತ್ತಿತ್ತು. ಆದ್ರೆ ಈ ಸಲ ಎಲ್ಲಿಯೂ ಟ್ಯಾಂಕರ್ ಬಳಸದಂತೆ ಜಿಲ್ಲಾಡಳಿತ ಕ್ರಮ ವಹಿಸಿದ್ದು, ಅದರ ಬದಲಿಗೆ ಆಯಾ ಗ್ರಾಮಗಳಲ್ಲಿರುವ ಬೋರ್ವೆಲ್ ಗಳನ್ನೇ ರಿಚಾರ್ಜ್ ಮಾಡಿಸಿ, ಅದರಿಂದ ನೀರು ಪಡೆಯುತ್ತಿದೆ.

ಅಲ್ಲದೇ ಧಾರವಾಡ ಜಿಲ್ಲೆಯಲ್ಲಿ ರೈತರ ಜಾನುವಾರುಗಳಿಗೆ ಮೇವು ಪೂರೈಸಲು 6 ಮೇವು ಬ್ಯಾಂಕ್ ತೆರೆಯಲಾಗಿದೆ. 312 ಕ್ವಿಂಟಾಲ್ ಮೇವು ಸರಬರಾಜು ಮಾಡಿದ್ದು, ಹೆಚ್ಚಿನ ಪ್ರಮಾಣದ ಮೇವಿಗೆ ಬೇಡಿಕೆ ಬಂದ ಬಳಿಕ ಮಾತ್ರ ಟೆಂಡರ್ ಕರೆಯುವುದಾಗಿ ಡಿಸಿ ತಿಳಿಸಿದ್ದಾರೆ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆಯನ್ನು ಈಡೇರಿಸು ವುದಕ್ಕಾಗಿಯೇ ಜಿಲ್ಲಾಡಳಿತ ಟೋಲ್ ಫ್ರಿ ನಂಬರ್ ಜನರಿಗೆ ಕೊಟ್ಟಿದ್ದು, ವಾಟ್ಸಾಪ್ ನಂಬರ ಕೂಡು ಕೊಟ್ಟಿದೆ. ಜನ ಇದರಲ್ಲಿ ವಿಡಿಯೋ ಫೋಟೋ ಕೂಡ ಹಾಕಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ.Body:ಧಾರವಾಡ ಜಿಲ್ಲೆಯಲ್ಲಿ ಒಟ್ಟು 388 ಗ್ರಾಮಗಳಿದ್ದು, ಅದರ ಪೈಕಿ 216 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳೆಂದು ಗುರುತಿಸಲಾಗಿದೆ. ಅವುಗಳ ಪೈಕಿ 87 ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಅಭಿವೃದ್ಧಿ ಪಡಿಸಿ, ಅವುಗಳಿಂದಲೇ ನೀರು ಪಡೆಯಲಾಗುತ್ತಿದೆ.171 ಕೊಳವೆ ಬಾವಿಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಅಭಿವೃದ್ಧಿಗೊಂಡ 87 ಕೊಳವೆ ಬಾವಿಗಳು 35 ಗ್ರಾಮಗಳ ನೀರಿನ ದಾಹ ತಣಿಸುತ್ತಿವೆ.

ಒಟ್ಟಾರೆಯಾಗಿ ಒಂದೆಡೆ ಮಲಪ್ರಭಾ ನದಿಯ ಬಲದಂಡೆ ಕಾಲುವೆ ಮತ್ತೊಂದೆಡೆ ಅಭಿವೃದ್ಧಿಗೊಳುತ್ತಿರುವ ಕೊಳವೆಬಾವಿಳಲ್ಲಿ ಬರುತ್ತಿರವ ಅಲ್ಪಸ್ವಲ್ಪ ನೀರಿನಿಂದಾಗಿ ಧಾರವಾಡ ಜಿಲ್ಲೆಯ ಎದುರಾಗಬಹುದಾಗಿದ್ದ ದೊಡ್ಡ ಜಲಕಂಟಕವೊಂದು ದೂರಾಗಿದೆಯಾದ್ರೂ ಮುಂದಿನ ದಿನಗಳಲ್ಲಿ ಸಮಸ್ಯೆ ಉಲ್ಬಣಿಸಬಲ್ಲ ಎಲ್ಲ ಸಾಧ್ಯತೆಗಳಿದ್ದು, ಅದಕ್ಕೆಲ್ಲ ಜಿಲ್ಲಾಡಳಿತ ಸನ್ನದ್ಧವಾಗಬೇಕಿದೆ.

ಬೈಟ್ ೧: ದೀಪಾ ಚೋಳನ, ಜಿಲ್ಲಾಧಿಕಾರಿConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.