ETV Bharat / state

ಧಾರವಾಡ ಎಸ್ಪಿಯಾಗಿ ಕೃಷ್ಣಕಾಂತ ಅಧಿಕಾರ ಸ್ವೀಕಾರ

author img

By

Published : Oct 21, 2020, 4:13 PM IST

ಧಾರವಾಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೃಷ್ಣಕಾಂತ ಅಧಿಕಾರ ಸ್ವೀಕರಿಸಿದ್ದಾರೆ. ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿದ್ದ ಇವರು ನಿನ್ನೆಯಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.

Krishnakantha takes charge as Dharwad SP
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೃಷ್ಣಕಾಂತ ಅಧಿಕಾರ ಸ್ವೀಕಾರ

ಧಾರವಾಡ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೃಷ್ಣಕಾಂತ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಎಸ್​ಪಿ ವರ್ತಿಕಾ‌ ಕಟಿಯಾರ ಇವರಿಗೆ ಅಧಿಕಾರ ಹಸ್ತಾಂತರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೃಷ್ಣಕಾಂತ ಅಧಿಕಾರ ಸ್ವೀಕಾರ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಕೃಷ್ಣಕಾಂತ ಅವರನ್ನು ಗಾಢ್ ಆಫ್ ಹಾನರ್ ಮೂಲಕ ಸ್ವಾಗತಿಸಲಾಯಿತು. ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿದ್ದ ಕೃಷ್ಣಕಾಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿನ್ನೆ ವರ್ಗಾವಣೆಗೊಂಡಿದ್ದರು.

ಕೃಷ್ಣಕಾಂತ ಮತ್ತು ಪೊಲೀಸ್ ಆಯುಕ್ತರ ನಡುವೆ ಶೀತಲ ಸಮರ ಏರ್ಪಟ್ಟ ಕಾರಣ ಇಬ್ಬರನ್ನೂ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.

ಧಾರವಾಡ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೃಷ್ಣಕಾಂತ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಎಸ್​ಪಿ ವರ್ತಿಕಾ‌ ಕಟಿಯಾರ ಇವರಿಗೆ ಅಧಿಕಾರ ಹಸ್ತಾಂತರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೃಷ್ಣಕಾಂತ ಅಧಿಕಾರ ಸ್ವೀಕಾರ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಕೃಷ್ಣಕಾಂತ ಅವರನ್ನು ಗಾಢ್ ಆಫ್ ಹಾನರ್ ಮೂಲಕ ಸ್ವಾಗತಿಸಲಾಯಿತು. ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿದ್ದ ಕೃಷ್ಣಕಾಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿನ್ನೆ ವರ್ಗಾವಣೆಗೊಂಡಿದ್ದರು.

ಕೃಷ್ಣಕಾಂತ ಮತ್ತು ಪೊಲೀಸ್ ಆಯುಕ್ತರ ನಡುವೆ ಶೀತಲ ಸಮರ ಏರ್ಪಟ್ಟ ಕಾರಣ ಇಬ್ಬರನ್ನೂ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.