ಹುಬ್ಬಳ್ಳಿ: ದಿನದಿಂದ ದಿನಕ್ಕೆ ಧಾರವಾಡ ಲೋಕಸಭಾ ಕ್ಷೇತ್ರ ರಂಗೇರುತ್ತಿದೆ. ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ತಮ್ಮ ಅಮೂಲ್ಯ ಮತವನ್ನು ನನಗೆ ನೀಡಿ ಎಂದು ಕ್ಷೇತ್ರದ ಜನತೆಗೆ ಮತಯಾಚನೆ ಮಾಡಿದರು. ಮೋದಿಯವರ ಸಾಧನೆ ಹಾಗೂ ಅಭಿವೃದ್ಧಿ ಬಗ್ಗೆ ವಿಸ್ತಾರವಾಗಿ ಮತದಾರರಿಗೆ ಹೇಳಿದರು.
ಸತತವಾಗಿ ಮೂರು ಬಾರಿ ಧಾರವಾಡ ಕ್ಷೇತ್ರದಿಂದ 'ಆಯ್ಕೆ ಮಾಡಿದ್ದಿರಿ' ಈ ಬಾರಿಯೂ ಆಯ್ಕೆ ಮಾಡಬೇಕೆಂದು ವಾಯು ವಿಹಾರಕ್ಕೆ ಆಗಮಿಸಿದ್ದ ಮಹಿಳೆಯರು ಹಾಗೂ ಹಿರಿಯರಿಗೆ ಬಿಜೆಪಿ ಪ್ರಣಾಳಿಕೆ" ಪಾಂಪ್ಲೆಂಟ್ ನೀಡಿ ಮತಯಾಚನೆ ಮಾಡಿದರು.