ETV Bharat / state

ರಸ್ತೆ ಅತಿಕ್ರಮಣಕ್ಕೆ ಜಗದೀಶ್​ ಶೆಟ್ಟರ್ ಆಕ್ರೋಶ, ಅಧಿಕಾರಿಗಳಿಗೆ ಸಚಿವ ದೇಶಪಾಂಡೆ ಬಿಸಿ

ಪಾಲಿಕೆ ಸದಸ್ಯರು ಆಯುಕ್ತರನ್ನು ಏನಾದರೂ ಕೇಳಿದರೆ ಚುನಾವಣೆ ಮುಗಿಯುವರೆಗೂ ಆಯುಕ್ತನಾಗಲು ಬಂದಿದ್ದೇನೆಯೇ ಹೊರತು ಪೂರ್ಣ ಪ್ರಮಾಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಆಯುಕ್ತರಾಗಿ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಅದನ್ನು ‌ಮೊದಲು ಕ್ಲಿಯರ್ ಮಾಡಿ ಎಂದು ಸಚಿವರಿಗೆ ಶೆಟ್ಟರ್ ಪ್ರಶ್ನೆ ಮಾಡಿದರು.

author img

By

Published : Jun 14, 2019, 9:18 PM IST

ಸಭೆ

ಧಾರವಾಡ: ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಬಿ ಸಭೆಯಲ್ಲಿ ಶಾಸಕ ಜಗದೀಶ್​​ ಶೆಟ್ಟರ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಇತ್ತ ಕಂದಾಯ ಸಚಿವ ಆರ್.ವಿ ದೇಶಪಾಂಡೆ, ಶೆಟ್ಟರ್ ಮಾತನಾಡುತ್ತಿದ್ದಾಗ ಅವರ ಹೇಳಿಕೆಗೆ ಪ್ರತಿಯಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಗದೀಶ್ ಶೆಟ್ಟರ್​ ಮತ್ತು ಆರ್​.ವಿ.ದೇಶಪಾಂಡೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಸ್ತೆಗಳ ಅತಿಕ್ರಮಣದಿಂದ ಜನ ಓಡಾಡಲು ಸಾಧ್ಯವಾಗುತ್ತಿಲ್ಲ. ಚಿಕ್ಕ ಮಕ್ಕಳು ಕೂಡ ಅತಿಕ್ರಮಣ ಬಗ್ಗೆ ನೇರವಾಗಿ ಮಾತನಾಡುತ್ತಿದ್ದಾರೆ. ನಾನು ದಾಖಲೆ‌ ಕೂಡ ಕೊಡುತ್ತಿದ್ದೇನೆ. ಇಷ್ಟೆಲ್ಲಾ ಆದರೂ ಅತಿಕ್ರಮಣ ತೆರವುಗೊಳಿಸಲು ಸರ್ಕಾರಕ್ಕೆ ಧೈರ್ಯವಿಲ್ಲ. ಹಾಗೆಂದರೆ ಯಾಕಾದರೂ ಸರ್ಕಾರ ಇರಬೇಕು ಎಂದು ಶೆಟ್ಟರ್ ಆರೋಪಿಸಿದರು. ಅದಕ್ಕೆ ಸಿಡಿಮಿಡಿಗೊಂಡ ಆರ್.ವಿ.ದೇಶಪಾಂಡೆ ಏಕಾಏಕಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು 48 ಗಂಟೆಯೊಳಗೆ ಅತಿಕ್ರಮಣ ತೆರವುಗೊಳಿಸುವಂತೆ ಗಡುವು ನೀಡಿದರು.

ಕೇವಲ ಚುನಾವಣೆಗಾಗಿ ಪಾಲಿಕೆ ‌ಆಯುಕ್ತರನ್ನು‌ ನೇಮಕ‌ ಮಾಡಲಾಗಿದೆಯೋ ಅಥವಾ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂರ್ಣ ಅವಧಿಗೆ ನೇಮಕ ಮಾಡಲಾಗಿದೆಯೋ ಎಂದು ಆರ್.ವಿ.ದೇಶಪಾಂಡೆ ಅವರನ್ನು ‌ ಶೆಟ್ಟರ್​​ ಪ್ರಶ್ನಿಸಿದರು. ಕಮರಿಪೇಟೆಯಿಂದ ಉಣಕಲ್ ಕ್ರಾಸ್​ವರೆಗೆ ಸಂಚಾರ ದಟ್ಟಣೆ ಸಮಸ್ಯೆ ನೀಗಿಸಲು ರಸ್ತೆ ಅಗಲೀಕರಣಕ್ಕೆ ಗಮನಕೊಡಿ‌. ಇದಕ್ಕಾಗಿ ಅಲ್ಲಿರುವ ಅಂಗಡಿಗಳಿಗೆ ನೋಟಿಸ್ ಕೊಡಿ ಎಂದು ಪಾಲಿಕೆ ಆಯುಕ್ತರಿಗೆ ದೇಶಪಾಂಡೆ ಸೂಚನೆ ನೀಡಿದರು.

ಧಾರವಾಡ: ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಬಿ ಸಭೆಯಲ್ಲಿ ಶಾಸಕ ಜಗದೀಶ್​​ ಶೆಟ್ಟರ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಇತ್ತ ಕಂದಾಯ ಸಚಿವ ಆರ್.ವಿ ದೇಶಪಾಂಡೆ, ಶೆಟ್ಟರ್ ಮಾತನಾಡುತ್ತಿದ್ದಾಗ ಅವರ ಹೇಳಿಕೆಗೆ ಪ್ರತಿಯಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಗದೀಶ್ ಶೆಟ್ಟರ್​ ಮತ್ತು ಆರ್​.ವಿ.ದೇಶಪಾಂಡೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಸ್ತೆಗಳ ಅತಿಕ್ರಮಣದಿಂದ ಜನ ಓಡಾಡಲು ಸಾಧ್ಯವಾಗುತ್ತಿಲ್ಲ. ಚಿಕ್ಕ ಮಕ್ಕಳು ಕೂಡ ಅತಿಕ್ರಮಣ ಬಗ್ಗೆ ನೇರವಾಗಿ ಮಾತನಾಡುತ್ತಿದ್ದಾರೆ. ನಾನು ದಾಖಲೆ‌ ಕೂಡ ಕೊಡುತ್ತಿದ್ದೇನೆ. ಇಷ್ಟೆಲ್ಲಾ ಆದರೂ ಅತಿಕ್ರಮಣ ತೆರವುಗೊಳಿಸಲು ಸರ್ಕಾರಕ್ಕೆ ಧೈರ್ಯವಿಲ್ಲ. ಹಾಗೆಂದರೆ ಯಾಕಾದರೂ ಸರ್ಕಾರ ಇರಬೇಕು ಎಂದು ಶೆಟ್ಟರ್ ಆರೋಪಿಸಿದರು. ಅದಕ್ಕೆ ಸಿಡಿಮಿಡಿಗೊಂಡ ಆರ್.ವಿ.ದೇಶಪಾಂಡೆ ಏಕಾಏಕಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು 48 ಗಂಟೆಯೊಳಗೆ ಅತಿಕ್ರಮಣ ತೆರವುಗೊಳಿಸುವಂತೆ ಗಡುವು ನೀಡಿದರು.

ಕೇವಲ ಚುನಾವಣೆಗಾಗಿ ಪಾಲಿಕೆ ‌ಆಯುಕ್ತರನ್ನು‌ ನೇಮಕ‌ ಮಾಡಲಾಗಿದೆಯೋ ಅಥವಾ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂರ್ಣ ಅವಧಿಗೆ ನೇಮಕ ಮಾಡಲಾಗಿದೆಯೋ ಎಂದು ಆರ್.ವಿ.ದೇಶಪಾಂಡೆ ಅವರನ್ನು ‌ ಶೆಟ್ಟರ್​​ ಪ್ರಶ್ನಿಸಿದರು. ಕಮರಿಪೇಟೆಯಿಂದ ಉಣಕಲ್ ಕ್ರಾಸ್​ವರೆಗೆ ಸಂಚಾರ ದಟ್ಟಣೆ ಸಮಸ್ಯೆ ನೀಗಿಸಲು ರಸ್ತೆ ಅಗಲೀಕರಣಕ್ಕೆ ಗಮನಕೊಡಿ‌. ಇದಕ್ಕಾಗಿ ಅಲ್ಲಿರುವ ಅಂಗಡಿಗಳಿಗೆ ನೋಟಿಸ್ ಕೊಡಿ ಎಂದು ಪಾಲಿಕೆ ಆಯುಕ್ತರಿಗೆ ದೇಶಪಾಂಡೆ ಸೂಚನೆ ನೀಡಿದರು.

Intro:ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಬಿ ಸಭೆಯಲ್ಲಿ ಸರ್ಕಾರದ ವಿರುದ್ಧ ಮಾಜಿ ‌ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

ಯಾಕಾದ್ರೂ ಇರಬೇಕ್ರಿ ಸರ್ಕಾರ ಎಂದು
ಶೆಟ್ಟರ್ ಮಾತನಾಡುತ್ತಿದ್ದಾಗ ಅವರ ಮಾತಿಗೆ ಪ್ರತಿಯಾಗಿ ಅಧಿಕಾರಿಗಳನ್ನು ಕಂದಾಯ ಸಚಿವ ಆರ್.ವಿ ದೇಶಪಾಂಡೆ ತರಾಟೆಗೆ ತೆಗೆದುಕೊಂಡರು. ಮಾಜಿ ಸಿಎಂ ಶೆಟ್ಟರ್ ಯಾಕಾದ್ರು ಇರಬೇಕು ಸರ್ಕಾರ ಎಂಬ ಶೆಟ್ಟರ್ ಆರೋಪಕ್ಕೆ‌ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸಿಡಿಮಿಡಿಗೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಸ್ತೆಗಳ ಅತಿಕ್ರಮಣ ಕುರಿತ ಚರ್ಚೆಯಲ್ಲಿ ಶೆಟ್ಟರ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ‌ಕಡೆ ಜನ ಓಡಾಡೋಕೆ ಆಗದಷ್ಟು ರಸ್ತೆ ಅತಿಕ್ರಮಣ ಆಗಿದೆ. ಓಫೆನ್ ಆಗಿ ಸಣ್ಣ ಸಣ್ಣ ಮಕ್ಕಳು ಕೂಡ ಅತಿಕ್ರಮಣ ಬಗ್ಗೆ ಮಾತನಾಡ್ತಾ ಇದಾರೆ. ನಾನು ದಾಖಲೆ‌ಕೂಡ ಕೊಡುತ್ತಿರುವೆ. ಇಷ್ಟೆಲ್ಲ ಆದ್ರೂ ಅತಿಕ್ರಮಣ ತೆರವು ಮಾಡಲು ಧೈರ್ಯ ಇಲ್ಲವೆಂದ್ರೆ ಯಾಕಾದ್ರೂ ಸರ್ಕಾರ ಇರಬೇಕು ಎಂದು ಶೆಟ್ಟರ್ ಈ ರೀತಿ ಹೇಳುತ್ತಿರುವಂತೆ ಪಾಲಿಕೆ ಅಧಿಕಾರಿಗಳನ್ನು ದೇಶಪಾಂಡೆ ತೀವ್ರ ತರಾಟೆಗೆ ತೆಗೆದುಕೊಂಡರು. 48 ಗಂಟೆಯೊಳಗೆ ಅತಿಕ್ರಮಣ ತೆರವಿಗೆ ದೇಶಪಾಂಡೆ ಗಡುವು ನೀಡಿದ್ದಾರೆ.

ಪಾಲಿಕೆ ‌ಆಯುಕ್ತರನ್ನು‌ ಕೇವಲ ಚುನಾವಣೆಗೆ ನೇಮಕ‌ ಮಾಡಿದ್ದೀರೋ ಇಲ್ಲವೋ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಪೂರ್ಣ ಅವಧಿಗೆ ನೇಮಕ ಮಾಡಿದ್ದೀರೋ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರನ್ನು ‌ಪ್ರಶ್ನೆ ಮಾಡಿದರು.Body:ಕಮರಿಪೇಟೆಯಿಂದ ಉಣಕಲ್ ಕ್ರಾಸ್ ವರೆಗೆ ೬೦ ಅಡಿ ರಸ್ತೆ ಅಗಲಿಕರಣ ಮಾಡಲು ಗಮನಕೊಡಿ‌ ಅಲ್ಲಿ ಬರುವ ಅಂಗಡಿಗಳಿಗೆ ನೋಟಿಸ್ ನೀಡಿ ಏಕೆಂದರೆ ಅಲ್ಲಿ ಸಂಚಾರ ಸಮಸ್ಯೆ ‌ಬಹಳ ಉಂಟಾಗುತ್ತಿದೆ ಎಂದು ಪಾಲಿಕೆ ಆಯುಕ್ತರಿಗೆ ಸಚಿವ ಆರ್.ವಿ.ದೇಶಪಾಂಡೆ ತರಾಟೆಗೆ ತೆಗೆದುಕೊಂಡ ಕಾನೂನು ಪಾಠ ಮಾಡಿದರು.

ಪಾಲಿಕೆ ಸದಸ್ಯರು ಪಾಲಿಕೆ ಆಯುಕ್ತರಿಗೆ ಕೇಳಿದರೇ ನಾನು ಚುನಾವಣೆ ಮುಗಿಯುವರೆಗೂ ಮಾತ್ರ ಆಯುಕ್ತನಾಗಿ ಬಂದಿದ್ದೇನೆ ಹೊರತು ಪೂರ್ಣ ಪ್ರಮಾಣದಲ್ಲಿ ಹು-ಧಾ ಮಹಾನಗರಕ್ಕೆ ಆಯುಕ್ತರಾಗಿ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಅದನ್ನು ‌ಮೊದಲು ಕ್ಲಿಯರ್ ಮಾಡಿ ಎಂದು ಸಚಿವರಿಗೆ ಶೆಟ್ಟರ್ ಪ್ರಶ್ನೆ ಮಾಡಿದರು.

ಯುಜಿಡಿ ಕಾಮಗಾರಿ, ನೀರಿನ ಸಮಸ್ಯೆ ಕೆಲವೊಂದು ಸಣ್ಣಪುಟ್ಟ ಕೆಲಸಗಳಿಗೆ ಪಾಲಿಕೆಯಿಂದ ಬಜೆಟ್ ಮೀಸಲಿಡಬೇಕು ಈ ಬಗ್ಗೆ ಉಸ್ತುವಾರಿ ಸಚಿವರು ಪಾಲಿಕೆಗೆ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಶೆಟ್ಟರ್ ಮನವಿ ಮಾಡಿದಾಗ ಸಚಿವ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಮ್ಮ ಭಾಗಕ್ಕೂ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಚಟಾಕಿ ಹಾರಿಸಿದರು.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.