ETV Bharat / state

ಬೆಳೆವಿಮೆ ನೀಡದ ಕಂಪನಿಗಳು.. ಇನ್ನಷ್ಟು ಸಂಕಷ್ಟದಲ್ಲಿ ರೈತರು..

ಮುಂಗಾರು ಮಾತ್ರವಲ್ಲದೆ 2019-20ನೇ ಸಾಲಿನ ಹಿಂಗಾರು ಬೆಳೆವಿಮೆ ಹಣವು ರೈತರಿಗೆ ಪಾವತಿಯಾಗಿಲ್ಲ. ಧಾರವಾಡ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ 138146 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳ, ಕಡಲೆ, ಗೋದಿ ಬೆಳೆಗಳಿಗೆ ಒಟ್ಟು 112906 ರೈತರು 662.02 ಲಕ್ಷ ರೂಪಾಯಿ ಪ್ರೀಮಿಯಂ ಹಣ ತುಂಬಿದ್ದರು..

author img

By

Published : Aug 1, 2020, 7:34 PM IST

Insurance Companies lacking in providing crop vima deposit to Farmers
ಬೆಳೆವಿಮೆ ನೀಡದ ಕಂಪನಿಗಳು: ಇನ್ನಷ್ಟು ಸಂಕಷ್ಟದಲ್ಲಿ ರೈತರು...!!

ಹುಬ್ಬಳ್ಳಿ : ಸರ್ಕಾರಕ್ಕೆ ಅನ್ನದಾತನ ಮೇಲೆ ಇಲ್ಲದ ಪ್ರೀತಿ ವಿಮಾ ಕಂಪನಿಗಳ ಮೇಲಿದೆ. ಕಳೆದ ವರ್ಷದ ಬೆಳೆವಿಮೆ ನೀಡಬೇಕಿದ್ದ ವಿಮಾ ಕಂಪನಿಗಳು ಈವರೆಗೆ ಒಂದು ಪೈಸೆ ಹಣ ಕೊಟ್ಟಿಲ್ಲ. ಈಗ ಕೊರೊನಾ ನೆಪ ಮಾಡಿಕೊಂಡು ಇನ್ನಷ್ಟು ನಿರ್ಲಕ್ಷ್ಯ ತೋರುತ್ತಿವೆ. ಇತ್ತ ಹಣ ಕೊಡಿಸಬೇಕಿದ್ದ ಸರ್ಕಾರ ರೈತರ ನೆರವಿಗೆ ಬಾರದಿರೋದು ಅನ್ನದಾತ‌ನನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ.

ಬೆಳೆವಿಮೆ ನೀಡದ ಕಂಪನಿಗಳು .. ಇನ್ನಷ್ಟು ಸಂಕಷ್ಟದಲ್ಲಿ ರೈತರು..

ಕಳೆದ ವರ್ಷ ವರುಣನ ಆರ್ಭಟ ಈ ವರ್ಷ ಕೊರೊನಾ ಹಾವಳಿ. ಇವುಗಳಿಂದ ರಾಜ್ಯದ ರೈತರು ಕಂಗೆಟ್ಟಿ ಹೋಗಿದ್ದಾರೆ. 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆವಿಮೆ ಹಣ ಈವರೆಗೂ ಪಾವತಿಯಾಗದಿರುವುದು ಸಂಕಷ್ಟದಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಧಾರವಾಡ ಜಿಲ್ಲೆಯೊಂದರಲ್ಲೇ ಕಳೆದ ವರ್ಷ ಮುಂಗಾರಿನಲ್ಲಿ ಬೆಳೆದ ಹತ್ತಿ, ಶೇಂಗಾ, ಮೆಣಸಿನಕಾಯಿ, ಹೆಸರು, ಸೋಯಾಬಿನ್, ಈರುಳ್ಳಿ ಬೆಳೆಗೆ 92361 ರೈತರು 1825.79 ಲಕ್ಷ ರೂಪಾಯಿ ಬೆಳೆವಿಮೆ ಪ್ರೀಮಿಯಂ ಹಣ ತುಂಬಿದ್ದಾರೆ. ಇಷ್ಟೊತ್ತಿಗಾಗಲೇ ಮುಂಗಾರಿಗೆ ತುಂಬಿದ್ದ ಬೆಳೆವಿಮೆ ಹಣ ರೈತರಿಗೆ ಪಾವತಿಯಾಗಬೇಕಿತ್ತು. ಹಣ ಪಾವತಿಯಾಗದಿರೋದಕ್ಕೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಗಾರು ಮಾತ್ರವಲ್ಲದೆ 2019-20ನೇ ಸಾಲಿನ ಹಿಂಗಾರು ಬೆಳೆವಿಮೆ ಹಣವು ರೈತರಿಗೆ ಪಾವತಿಯಾಗಿಲ್ಲ. ಧಾರವಾಡ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ 138146 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳ, ಕಡಲೆ, ಗೋದಿ ಬೆಳೆಗಳಿಗೆ ಒಟ್ಟು 112906 ರೈತರು 662.02 ಲಕ್ಷ ರೂಪಾಯಿ ಪ್ರೀಮಿಯಂ ಹಣ ತುಂಬಿದ್ದರು. ಮುಂಗಾರು ಹಾಗೂ ಹಿಂಗಾರು ಎರಡು ಬೆಳೆವಿಮೆಗಳನ್ನ ವಿಮಾ ಕಂಪನಿಗಳು ಬಾಕಿ ಉಳಿಸಿಕೊಂಡಿದೆ.

ಧಾರವಾಡ ಜಿಲ್ಲೆಯಲ್ಲಿ ಭಾರತಿ ಎಕ್ಸಾ ವಿಮಾ ಕಂಪನಿಗೆ ಬೆಳೆವಿಮೆ ಹಣ ತುಂಬಿದ್ದಾರೆ. ಬೆಳೆವಿಮೆ ಹಣ ತುಂಬಿಸಿಕೊಳ್ಳುವಾಗ ಕೊನೆಯ ದಿನಾಂಕ ನಿಗದಿ ಮಾಡುವ ಕಂಪನಿಗಳು, ರೈತರಿಗೆ ಹಣ ಪಾವತಿ ಮಾಡುವುದಕ್ಕೆ ಮಾತ್ರ ಯಾವುದೇ ದಿನಾಂಕ ನಿಗದಿ ಮಾಡಿಕೊಂಡಿಲ್ಲ. ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತ ರೈತರಿಗೆ ಬೆಳೆವಿಮೆ ಹಣ ಪಾವತಿಯಾಗಿಲ್ಲ. ಇನ್ನೂ ರೈತರಿಗೆ ಹಣ ಕೊಡಿಸಬೇಕಿದ್ದ ಸರ್ಕಾರ ವಿಮಾ ಕಂಪನಿಗಳ ಪರ ನಿಲ್ಲುತ್ತಿರುವುದು ಏಕೆ ಎನ್ನುವುದು ಅನ್ನದಾತನ ಪ್ರಶ್ನೆಯಾಗಿದೆ.

ಹುಬ್ಬಳ್ಳಿ : ಸರ್ಕಾರಕ್ಕೆ ಅನ್ನದಾತನ ಮೇಲೆ ಇಲ್ಲದ ಪ್ರೀತಿ ವಿಮಾ ಕಂಪನಿಗಳ ಮೇಲಿದೆ. ಕಳೆದ ವರ್ಷದ ಬೆಳೆವಿಮೆ ನೀಡಬೇಕಿದ್ದ ವಿಮಾ ಕಂಪನಿಗಳು ಈವರೆಗೆ ಒಂದು ಪೈಸೆ ಹಣ ಕೊಟ್ಟಿಲ್ಲ. ಈಗ ಕೊರೊನಾ ನೆಪ ಮಾಡಿಕೊಂಡು ಇನ್ನಷ್ಟು ನಿರ್ಲಕ್ಷ್ಯ ತೋರುತ್ತಿವೆ. ಇತ್ತ ಹಣ ಕೊಡಿಸಬೇಕಿದ್ದ ಸರ್ಕಾರ ರೈತರ ನೆರವಿಗೆ ಬಾರದಿರೋದು ಅನ್ನದಾತ‌ನನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ.

ಬೆಳೆವಿಮೆ ನೀಡದ ಕಂಪನಿಗಳು .. ಇನ್ನಷ್ಟು ಸಂಕಷ್ಟದಲ್ಲಿ ರೈತರು..

ಕಳೆದ ವರ್ಷ ವರುಣನ ಆರ್ಭಟ ಈ ವರ್ಷ ಕೊರೊನಾ ಹಾವಳಿ. ಇವುಗಳಿಂದ ರಾಜ್ಯದ ರೈತರು ಕಂಗೆಟ್ಟಿ ಹೋಗಿದ್ದಾರೆ. 2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆವಿಮೆ ಹಣ ಈವರೆಗೂ ಪಾವತಿಯಾಗದಿರುವುದು ಸಂಕಷ್ಟದಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಧಾರವಾಡ ಜಿಲ್ಲೆಯೊಂದರಲ್ಲೇ ಕಳೆದ ವರ್ಷ ಮುಂಗಾರಿನಲ್ಲಿ ಬೆಳೆದ ಹತ್ತಿ, ಶೇಂಗಾ, ಮೆಣಸಿನಕಾಯಿ, ಹೆಸರು, ಸೋಯಾಬಿನ್, ಈರುಳ್ಳಿ ಬೆಳೆಗೆ 92361 ರೈತರು 1825.79 ಲಕ್ಷ ರೂಪಾಯಿ ಬೆಳೆವಿಮೆ ಪ್ರೀಮಿಯಂ ಹಣ ತುಂಬಿದ್ದಾರೆ. ಇಷ್ಟೊತ್ತಿಗಾಗಲೇ ಮುಂಗಾರಿಗೆ ತುಂಬಿದ್ದ ಬೆಳೆವಿಮೆ ಹಣ ರೈತರಿಗೆ ಪಾವತಿಯಾಗಬೇಕಿತ್ತು. ಹಣ ಪಾವತಿಯಾಗದಿರೋದಕ್ಕೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಗಾರು ಮಾತ್ರವಲ್ಲದೆ 2019-20ನೇ ಸಾಲಿನ ಹಿಂಗಾರು ಬೆಳೆವಿಮೆ ಹಣವು ರೈತರಿಗೆ ಪಾವತಿಯಾಗಿಲ್ಲ. ಧಾರವಾಡ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ 138146 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳ, ಕಡಲೆ, ಗೋದಿ ಬೆಳೆಗಳಿಗೆ ಒಟ್ಟು 112906 ರೈತರು 662.02 ಲಕ್ಷ ರೂಪಾಯಿ ಪ್ರೀಮಿಯಂ ಹಣ ತುಂಬಿದ್ದರು. ಮುಂಗಾರು ಹಾಗೂ ಹಿಂಗಾರು ಎರಡು ಬೆಳೆವಿಮೆಗಳನ್ನ ವಿಮಾ ಕಂಪನಿಗಳು ಬಾಕಿ ಉಳಿಸಿಕೊಂಡಿದೆ.

ಧಾರವಾಡ ಜಿಲ್ಲೆಯಲ್ಲಿ ಭಾರತಿ ಎಕ್ಸಾ ವಿಮಾ ಕಂಪನಿಗೆ ಬೆಳೆವಿಮೆ ಹಣ ತುಂಬಿದ್ದಾರೆ. ಬೆಳೆವಿಮೆ ಹಣ ತುಂಬಿಸಿಕೊಳ್ಳುವಾಗ ಕೊನೆಯ ದಿನಾಂಕ ನಿಗದಿ ಮಾಡುವ ಕಂಪನಿಗಳು, ರೈತರಿಗೆ ಹಣ ಪಾವತಿ ಮಾಡುವುದಕ್ಕೆ ಮಾತ್ರ ಯಾವುದೇ ದಿನಾಂಕ ನಿಗದಿ ಮಾಡಿಕೊಂಡಿಲ್ಲ. ಧಾರವಾಡ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತ ರೈತರಿಗೆ ಬೆಳೆವಿಮೆ ಹಣ ಪಾವತಿಯಾಗಿಲ್ಲ. ಇನ್ನೂ ರೈತರಿಗೆ ಹಣ ಕೊಡಿಸಬೇಕಿದ್ದ ಸರ್ಕಾರ ವಿಮಾ ಕಂಪನಿಗಳ ಪರ ನಿಲ್ಲುತ್ತಿರುವುದು ಏಕೆ ಎನ್ನುವುದು ಅನ್ನದಾತನ ಪ್ರಶ್ನೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.