ETV Bharat / state

ಹುಬ್ಬಳ್ಳಿ: ಭಾರಿ ಮಳೆಯಿಂದ ಬೆಳೆ ಹಾನಿ ಆತಂಕ

author img

By

Published : Jul 23, 2021, 9:39 AM IST

ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆರಾಯನಿಂದ ಬೆಳೆ ನಷ್ಟ ಅನುಭವಿಸುವ ಆತಂಕ ಹುಬ್ಬಳ್ಳಿ ರೈತರಿಗೆ ಎದುರಾಗಿದೆ.

hubballi farmers fear for Crop damage
ಮಳೆರಾಯನಿಂದ ಬೆಳೆ ಹಾನಿ ಆತಂಕ

ಹುಬ್ಬಳ್ಳಿ: ಕೊರೊನಾ ಮಹಾಮಾರಿ ನಡುವೆಯೂ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆ ಬೀಜ ಬಿತ್ತನೆ ಮಾಡಿದ್ದಾರೆ. ಉತ್ತಮ ಫಸಲು ತೆಗೆಯಬೇಕು ಎಂದುಕೊಂಡ್ಡಿದ್ದ ರೈತರಿಗೀಗ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.

ಮಳೆರಾಯನಿಂದ ಬೆಳೆ ಹಾನಿ ಆತಂಕ

ಹೌದು, ಜಿಲ್ಲೆಯಲ್ಲಿ ಕೊರೊನಾ ಲಾಕ್​ಡೌನ್ ಸೇರಿದಂತೆ ಇನ್ನಿತರ ಆರ್ಥಿಕ ಮುಗ್ಗಟ್ಟಿನ ನಡುವೆಯೂ ರೈತರು ಸಾಲಸೂಲ ಮಾಡಿ ಹೊಲಗಳನ್ನು ಹದಮಾಡಿ ಇಟ್ಟು, ಭೂಮಿ ತಾಯಿಗೆ ಬೀಜ ಬಿತ್ತಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಹತ್ತಿ, ಸೊಯಾಬಿನ್, ಹೆಸರು, ಅಲಸಂದಿ, ತೊಗರಿ, ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಬಿತ್ತನೆ ಮಾಡಿದ್ದು, ಉತ್ತಮವಾಗಿ ಬೆಳೆ ಬರಲಾರಂಭಿಸಿತ್ತು.

ಇದನ್ನೂ ಓದಿ: ರಾಯಚೂರು: ನೂತನ ಜಿಲ್ಲಾಧಿಕಾರಿಯಾಗಿ ಡಾ.ಸತೀಶ್ ಬಿ.ಸಿ ಅಧಿಕಾರ ಸ್ವೀಕಾರ

ಆದರೆ‌, ಮಳೆ ಹೆಚ್ಚಾದ ಹಿನ್ನೆಲೆ ಎಲ್ಲಿ ಬೆಳೆ ಹಾನಿಯಾಗಿ ಮತ್ತೆ ಸಾಲದಲ್ಲಿ ಸಿಲುಕುತ್ತೇವೆ ಎಂಬ ಆತಂಕ ಎದುರಾಗಿದೆ. ಸರ್ಕಾರ ತಮ್ಮ ಸ್ಥಾನಮಾನಕ್ಕೆ ಹೋರಾಟ ಮಾಡುತ್ತಿದ್ದು, ಬೆಳೆ ವಿಮೆ ಸಹ ಬಿಡುಗಡೆ ಮಾಡುತ್ತಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ತಾರತಮ್ಯ ಮಾಡದೇ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇನ್ನು ಮಳೆ ಜೋರಾದ ಹಿನ್ನೆಲೆ ಕೆಲ ಮನೆಗಳು ಸೋರಲಾರಂಭಿಸಿದ್ದು, ಮನೆ ಮಂದಿ ಆತಂಕಕ್ಕೀಡಾಗಿದ್ದಾರೆ.

ಹುಬ್ಬಳ್ಳಿ: ಕೊರೊನಾ ಮಹಾಮಾರಿ ನಡುವೆಯೂ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆ ಬೀಜ ಬಿತ್ತನೆ ಮಾಡಿದ್ದಾರೆ. ಉತ್ತಮ ಫಸಲು ತೆಗೆಯಬೇಕು ಎಂದುಕೊಂಡ್ಡಿದ್ದ ರೈತರಿಗೀಗ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.

ಮಳೆರಾಯನಿಂದ ಬೆಳೆ ಹಾನಿ ಆತಂಕ

ಹೌದು, ಜಿಲ್ಲೆಯಲ್ಲಿ ಕೊರೊನಾ ಲಾಕ್​ಡೌನ್ ಸೇರಿದಂತೆ ಇನ್ನಿತರ ಆರ್ಥಿಕ ಮುಗ್ಗಟ್ಟಿನ ನಡುವೆಯೂ ರೈತರು ಸಾಲಸೂಲ ಮಾಡಿ ಹೊಲಗಳನ್ನು ಹದಮಾಡಿ ಇಟ್ಟು, ಭೂಮಿ ತಾಯಿಗೆ ಬೀಜ ಬಿತ್ತಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಹತ್ತಿ, ಸೊಯಾಬಿನ್, ಹೆಸರು, ಅಲಸಂದಿ, ತೊಗರಿ, ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಬಿತ್ತನೆ ಮಾಡಿದ್ದು, ಉತ್ತಮವಾಗಿ ಬೆಳೆ ಬರಲಾರಂಭಿಸಿತ್ತು.

ಇದನ್ನೂ ಓದಿ: ರಾಯಚೂರು: ನೂತನ ಜಿಲ್ಲಾಧಿಕಾರಿಯಾಗಿ ಡಾ.ಸತೀಶ್ ಬಿ.ಸಿ ಅಧಿಕಾರ ಸ್ವೀಕಾರ

ಆದರೆ‌, ಮಳೆ ಹೆಚ್ಚಾದ ಹಿನ್ನೆಲೆ ಎಲ್ಲಿ ಬೆಳೆ ಹಾನಿಯಾಗಿ ಮತ್ತೆ ಸಾಲದಲ್ಲಿ ಸಿಲುಕುತ್ತೇವೆ ಎಂಬ ಆತಂಕ ಎದುರಾಗಿದೆ. ಸರ್ಕಾರ ತಮ್ಮ ಸ್ಥಾನಮಾನಕ್ಕೆ ಹೋರಾಟ ಮಾಡುತ್ತಿದ್ದು, ಬೆಳೆ ವಿಮೆ ಸಹ ಬಿಡುಗಡೆ ಮಾಡುತ್ತಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ತಾರತಮ್ಯ ಮಾಡದೇ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇನ್ನು ಮಳೆ ಜೋರಾದ ಹಿನ್ನೆಲೆ ಕೆಲ ಮನೆಗಳು ಸೋರಲಾರಂಭಿಸಿದ್ದು, ಮನೆ ಮಂದಿ ಆತಂಕಕ್ಕೀಡಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.