ಕಲಘಟಗಿ : ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನಲೆಯಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಬಾಲಕಿ ನೀರುಪಾಲಾದ ಘಟನೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಬೇಡ್ತಿಹಳ್ಳದಲ್ಲಿ ನಡೆದಿದೆ.
ಶ್ರೀದೇವಿ ಗಾಣಿಗೇರ್ (9 )ವರ್ಷದ ಬಾಲಕಿ ನೀರು ಪಾಲಾದ ದುರ್ದೈವಿ. ತಾಯಿಯ ಜೊತೆ ಹಳ್ಳ ದಾಟುವ ವೇಳೆ ಬಾಲಕಿ ಕೊಚ್ಚಿ ಹೋಗಿದ್ದಾಳೆ.
ಬಾಲಕಿ ಶವಕ್ಕಾಗಿ ಕಲಘಟಗಿ ಪೊಲೀಸರು ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.