ETV Bharat / state

ಹು-ಧಾ ಪಾಲಿಕೆಯಿಂದ ಸಿಗದ ಸಂಬಳ... ಆತ್ಮಹತ್ಯೆ ಯತ್ನ: ಪ್ರಧಾನಿ ಮೊರೆ ಹೋದ ಚಾಲಕ - undefined

ಸಂಬಳ ಸರಿಯಾಗಿ ನೀಡದ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೀಡಾಗಿರುವ  ಟಿಪ್ಪರ್ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಚಾಲಕ ಆತ್ಮಹತ್ಯೆಗೆ ಯತ್ನಿಸುವ ವಿಡಿಯೋವನ್ನು ಪ್ರಧಾನಿ ಮೋದಿ ಟ್ಯಾಗ್ ಮಾಡಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.

ಪಾಲಿಕೆಯ ಟಿಪ್ಪರ್ ಚಾಲಕ ಆತ್ಮಹತ್ಯೆಗೆ ಯತ್ನ: ವೀಡಿಯೋ ವೈರಲ್​
author img

By

Published : Jun 27, 2019, 6:39 AM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಕಸ ಸಂಗ್ರಹ ಮಾಡುವ ಪಾಲಿಕೆಯ ಟಿಪ್ಪರ್ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ಚಾಲಕ ಈ ವಿಡಿಯೋವನ್ನ ಪ್ರಧಾನಿ ನರೇಂದ್ರ ಮೋದಿಗೆ ಟ್ವಿಟರ್ ಮೂಲಕ ತ್ಯಾಗ ಮಾಡಿ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾನೆ.‌

ಮಲ್ಲಿಕಾರ್ಜುನ ಬಿಜವಾಡ ಎಂಬಾತನೇ ನೇಣುಬಿಗಿದುಕೊಂಡು ಆತ್ನಹತ್ಯೆಗೆ ಯತ್ನಿಸಿದ ಕಾರ್ಮಿಕ‌ನಾಗಿದ್ದಾನೆ. ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಟ್ವಿಟ್ಟರ್ ಮೂಲಕ ಟ್ಯಾಗ್ ಮಾಡಿದ್ದು, ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾನೆ. ಜೂನ್ 15 ರಂದು ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ತುಣುಕು ಇದಾಗಿದ್ದು, ಮೋದಿ, ಸಿದ್ದರಾಮಯ್ಯ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರಿಗೆ ಕಳುಹಿಸಿದ್ದಾನೆ. ಆದ್ರೆ ಈವರೆಗೂ ಯಾರಿಂದಲೂ ಉತ್ತರ ಬಂದಿಲ್ಲ. ಆದ್ರೆ ಇದೀಗ ಈ ವಿಡಿಯೋ ವೈರಲ್ ಆಗಿದೆ.

Garbage collecting driver
ಪಾಲಿಕೆಯ ಟಿಪ್ಪರ್ ಚಾಲಕ ಆತ್ಮಹತ್ಯೆಗೆ ಯತ್ನ
Garbage collecting driver
ಮನನೊಂದ ಪಾಲಿಕೆಯ ಟಿಪ್ಪರ್ ಚಾಲಕ ಮಾಡಿರುವ ಸಂದೇಶ

ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಟಿಪ್ಪರ್ ಚಾಲಕರು ವೇತನ ಇಲ್ಲದೆ ಪರದಾಡುತ್ತಿದ್ದು, ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಹೆಣಗಾಡುತ್ತಿದ್ದಾರೆ. ಜುಲೈ 1ರಿಂದ ಮನೆ ಮನೆಗೆ ತೆರಳಿ ಟಿಪ್ಪರ್ ಮೂಲಕ ಕಸ ಸಂಗ್ರಹ ಮಾಡುವುದನ್ನ ನಿಲ್ಲಿಸಿದ್ದಾರೆ. ಪ್ರತಿನಿತ್ಯ ಅವಳಿ ನಗರದಲ್ಲಿ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹ ಮಾಡುತ್ತಿರುವ 170ಕ್ಕೂ ಹೆಚ್ಚು ಚಾಲಕರಿಗೆ ಪಾಲಿಕೆ ವೇತನ ನೀಡಿಲ್ಲ. ಕಳೆದ 6 ರಿಂದ 7 ತಿಂಗಳ ವೇತನ ನೀಡದೆ ಚಾಲಕರನ್ನ ಆರ್ಥಿಕ ಸಂಕಷ್ಟಕ್ಕೆ ನೂಕಿರುವ ಪಾಲಿಕೆ ವಿರುದ್ಧ ಚಾಲಕರು ಬೀದಿಗಿಳಿಯಲು ಸಜ್ಜಾಗಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಕಸ ಸಂಗ್ರಹ ಮಾಡುವ ಪಾಲಿಕೆಯ ಟಿಪ್ಪರ್ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ಚಾಲಕ ಈ ವಿಡಿಯೋವನ್ನ ಪ್ರಧಾನಿ ನರೇಂದ್ರ ಮೋದಿಗೆ ಟ್ವಿಟರ್ ಮೂಲಕ ತ್ಯಾಗ ಮಾಡಿ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾನೆ.‌

ಮಲ್ಲಿಕಾರ್ಜುನ ಬಿಜವಾಡ ಎಂಬಾತನೇ ನೇಣುಬಿಗಿದುಕೊಂಡು ಆತ್ನಹತ್ಯೆಗೆ ಯತ್ನಿಸಿದ ಕಾರ್ಮಿಕ‌ನಾಗಿದ್ದಾನೆ. ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಟ್ವಿಟ್ಟರ್ ಮೂಲಕ ಟ್ಯಾಗ್ ಮಾಡಿದ್ದು, ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾನೆ. ಜೂನ್ 15 ರಂದು ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ತುಣುಕು ಇದಾಗಿದ್ದು, ಮೋದಿ, ಸಿದ್ದರಾಮಯ್ಯ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರಿಗೆ ಕಳುಹಿಸಿದ್ದಾನೆ. ಆದ್ರೆ ಈವರೆಗೂ ಯಾರಿಂದಲೂ ಉತ್ತರ ಬಂದಿಲ್ಲ. ಆದ್ರೆ ಇದೀಗ ಈ ವಿಡಿಯೋ ವೈರಲ್ ಆಗಿದೆ.

Garbage collecting driver
ಪಾಲಿಕೆಯ ಟಿಪ್ಪರ್ ಚಾಲಕ ಆತ್ಮಹತ್ಯೆಗೆ ಯತ್ನ
Garbage collecting driver
ಮನನೊಂದ ಪಾಲಿಕೆಯ ಟಿಪ್ಪರ್ ಚಾಲಕ ಮಾಡಿರುವ ಸಂದೇಶ

ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಟಿಪ್ಪರ್ ಚಾಲಕರು ವೇತನ ಇಲ್ಲದೆ ಪರದಾಡುತ್ತಿದ್ದು, ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಹೆಣಗಾಡುತ್ತಿದ್ದಾರೆ. ಜುಲೈ 1ರಿಂದ ಮನೆ ಮನೆಗೆ ತೆರಳಿ ಟಿಪ್ಪರ್ ಮೂಲಕ ಕಸ ಸಂಗ್ರಹ ಮಾಡುವುದನ್ನ ನಿಲ್ಲಿಸಿದ್ದಾರೆ. ಪ್ರತಿನಿತ್ಯ ಅವಳಿ ನಗರದಲ್ಲಿ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹ ಮಾಡುತ್ತಿರುವ 170ಕ್ಕೂ ಹೆಚ್ಚು ಚಾಲಕರಿಗೆ ಪಾಲಿಕೆ ವೇತನ ನೀಡಿಲ್ಲ. ಕಳೆದ 6 ರಿಂದ 7 ತಿಂಗಳ ವೇತನ ನೀಡದೆ ಚಾಲಕರನ್ನ ಆರ್ಥಿಕ ಸಂಕಷ್ಟಕ್ಕೆ ನೂಕಿರುವ ಪಾಲಿಕೆ ವಿರುದ್ಧ ಚಾಲಕರು ಬೀದಿಗಿಳಿಯಲು ಸಜ್ಜಾಗಿದ್ದಾರೆ.

Intro:ಹುಬ್ಬಳ್ಳಿ-04

ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆಯ ಆರ್ಥಿಕ ಸ್ಥಿತಿ ಅದೋಗತಿಗೆ ಇಳಿದಿದೆ. ಮನೆ ಮನೆ ಕಸ ಸಂಗ್ರಹ ಮಾಡುವ ಪಾಲಿಕೆಯ ಟಿಪ್ಪರ್ ಚಾಲಕರಿಗೆ ಸಂಬಳ ನೀಡಲಾಗದ ಸ್ಥಿತಿಗೆ ಪಾಲಿಕೆ ತಲುಪಿದೆ. ಇದರಿಂದ ಮನನೊಂದ ಟಿಪ್ಪರ್ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನ ಮಾಡಿಕೊಳ್ಳುವ ವಿಡಿಯೋವನ್ನ ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಮಾಡಿ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾನೆ.‌ ಮಲ್ಲಿಕಾರ್ಜುನ ಬಿಜವಾಡ ಎಂಬಾತನೇ ನೇಣುಬಿಗಿದುಕೊಂಡು ಆತ್ನಹತ್ಯೆಗೆ ಯತ್ನಿಸಿದ ಕಾರ್ಮಿಕ‌ನಾಗಿದ್ದಾನೆ. ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿ ಎಂ ಸಿದ್ದರಾಮಯ್ಯನವರಿಗೆ ಟ್ವೀಟರ್ ಮೂಲಕ ಅಪಲೋಡ್ ಮಾಡಿದ್ದು, ತಮ್ಮನ್ನು ರಕ್ಷಿಸುವಂತೆ ಟ್ವೀಟರ್ ಮೂಲಕ ಮನವಿ ಮಾಡಿದ್ದಾನೆ.
ಜೂನ್ 15 ರಂದು ಆತ್ಮಹತ್ಯೆ ಮಾಡಿಕೊಳ್ಳುವ ವಿಡಿಯೋ ತುಣುಕು ಇದಾಗಿದ್ದು, ಮೋದಿ, ಸಿದ್ದರಾಮಯ್ಯ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರಿಗೆ ಕಳುಹಿಸಿದ್ದಾನೆ. ಆದ್ರೆ ಇದುರೆಗೂ ಯಾರಿಂದಲೂ ಉತ್ತರ ಬಂದಿಲ್ಲ. ಆದ್ರೆ ಈಗ ಈ ವಿಡಿಯೋ ವೈರಲ್ ಆಗಿದೆ.

ಇವರ ಪಾಲಿಗೆ ಪಾಲಿಕೆ ಇದ್ದು ಸತ್ತಂತಿದೆ.
ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೇಲಸ ಮಾಡುತ್ತಿರುವ ಟಿಪ್ಪರ್ ಚಾಲಕರು ವೇತನ ಇಲ್ಲದೆ ಪರದಾಡುತ್ತಿದ್ದು, ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಹೆಣಗಾಡುತ್ತಿದ್ದಾರೆ. ಜುಲೈ ಒಂದರಿಂದ ಮನೆ ಮನೆಗೆ ತೆರೆಳಿ ಟಿಪ್ಪರ್ ಮೂಲಕ ಕಸ ಸಂಗ್ರಹ ಮಾಡುವುದನ್ನ ನಿಲ್ಲಿಸಿದ್ದಾರೆ.
ಪ್ರತಿನಿತ್ಯ ಅವಳಿ ನಗರದಲ್ಲಿ ಮನೆ ಮನೆಗಳಿಗೆ ತೆರಳಿ ಟಿಪ್ಪರ್ ಮೂಲಕ ಕಸ ಸಂಗ್ರಹ ಮಾಡುತ್ತಿರುವ 170ಕ್ಕು ಹೆಚ್ಚು ಚಾಲಕರಿಗೆ ಪಾಲಿಕೆ ವೇತನ ನೀಡಿಲ್ಲ. ಕಳೆದ 6 ರಿಂದ 7 ತಿಂಗಳ ವೇತನ ನೀಡದೆ ಚಾಲಕರನ್ನ ಆರ್ಥಿಕ ಸಂಕಷ್ಟಕ್ಕೆ ನೂಕಿರುವ ಪಾಲಿಕೆ ವಿರುದ್ದ ಚಾಲಕರು ಬೀದಿಗಿಳಿಯಲು ಸಜ್ಜಾಗಿದ್ದಾರೆ.Body:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.