ETV Bharat / state

ಇಳಕಲ್ ಸೀರೆ ಮೇಲೆ ಗೋಲ್ಡ್​ ಫಿಶ್​, ಬುದ್ಧ... ಕಲಾತ್ಮಕ ಟಚ್​ ನೀಡಿ ಮೆರಗು ಹೆಚ್ಚಿಸಿದ ಕಲಾವಿದ

author img

By

Published : Nov 8, 2019, 10:40 AM IST

ಉತ್ತರ ಕರ್ನಾಟಕ ಭಾಗದ ಪ್ರಸಿದ್ಧಇಳಕಲ್ ಸೀರೆಗೆ ಕಲಾವಿದರೊಬ್ಬರು ಕಲೆಯ ಟಚ್ ‌‌ನೀಡಿ ಮತ್ತಷ್ಟು ಮೆರಗು ನೀಡಿದ್ದಾರೆ.

ರಂಗು ರಂಗಿನ ಇಳಕಲ್​​ ಸೀರೆ

ಹುಬ್ಬಳ್ಳಿ:ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಇಳಕಲ್ ಸೀರೆಗೆ ಕಲಾವಿದರೊಬ್ಬರು ಕಲೆಯ ಟಚ್ ‌‌ನೀಡಿ ಮತ್ತಷ್ಟು ಮೆರಗು ನೀಡುವಂತೆ ಮಾಡಿದ್ದಾರೆ.

saree
ರಂಗು ರಂಗಿನ ಇಳಕಲ್​​ ಸೀರೆ

ಹುಬ್ಬಳ್ಳಿ ನಗರದ ನಿವಾಸಿ ಕಲಾವಿದ ಗಣೇಶ ಎಸ್ ಸಾಬೋಜಿ ಎನ್ನುವರೇ ಇಳಕಲ್ ಸೀರೆಯ ಸೊಬಗು ಅಂದ ಚಂದ ಹೆಚ್ಚಿಸಿದವರು. ಇಳಕಲ್ ಸೀರೆಯನ್ನು ತನ್ನ ಪೇಂಟಿಂಗ್ ಮೂಲಕ ಅದರ ಸೂಕ್ಷ್ಮತೆಯನ್ನು ಎಳೆ ಎಳೆಯಾಗಿ ಬಿಡಿಸಿ ಎಲ್ಲರ ಚಿತ್ತವನ್ನು ಸೀರೆಯತ್ತ ಸೆಳೆಯುವಂತೆ ಮಾಡಿದ್ದಾರೆ.

saree
ರಂಗು ರಂಗಿನ ಇಳಕಲ್​​ ಸೀರೆ

ಇಳಕಲ್ ಸೀರೆಯಲ್ಲಿ ಗಣೇಶ ಗೋಲ್ಡ್ ಫಿಶ್ ಮೀನುಗಳಿಗೆ ಇಳಕಲ್​​ ಸೀರೆ ಉಡಿಸುವುದು ಕಾಮಣ್ಣನ ಇಳಕಲ್ ಸೀರೆ, ಹೀಗೆ ಹಲವಾರು ರೀತಿಯ ಸೀರೆಯಲ್ಲಿ ಪೇಂಟಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರ ಪೇಂಟಿಂಗ್ ಮಾಡಿ ಜನರ ಮನ ಸೆಳೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಇಳಕಲ್ ಸೀರೆಯನ್ನು ನಮ್ಮ ಹಿರಿಯರ ಕಾಲದಿಂದಲೂ ಹೆಂಗಸರು ಉಡುವ ಆಚರಣೆ ಇದೆ.ಈ ರೀತಿ ವಿಶಿಷ್ಟತೆ ಹೊಂದಿದ್ದ ಈ ಸೀರೆಯನ್ನು ನಾನು ನನ್ನ ಪೇಂಟಿಂಗ್ ಶೈಲಿಯನ್ನಾಗಿ ಏಕೆ ಇಟ್ಟುಕೊಳ್ಳಬಾರದು ಎನಿಸಿತ್ತು ಅಂದಿನಿಂದ ಇಳಕಲ್ ಸೀರೆ ಪೇಂಟಿಂಗ್ ಮಾಡಲು ಮುಂದಾದೆ ಎನ್ನುತ್ತಾರೆ ಕಲಾವಿದ ಗಣೇಶ.

ರಂಗು ರಂಗಿನ ಇಳಕಲ್​​ ಸೀರೆ

ಗಣೇಶ ಎಂಬಿಎ, ಬಿವಿಎ, ಹಾಗೂ ಎಮ್ಎಫ್ಎ ಪದವಿ ಪಡೆದಿದ್ದಾರೆ .ಪ್ರಸ್ತುತ ಆರ್​​​ಎಮ್​​​ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಡ್ರಾಯಿಂಗ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ.ಗಣೇಶ ಅವರು 2015 ರಲ್ಲಿ ರಾಜ್ಯ ಮಟ್ಟದ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇವರ ಚಿತ್ರಕಲಾ ಪ್ರದರ್ಶನ ಸಿರಸಂಗಿ, ಚಿತ್ರ ಸಂತೆ ಬೆಂಗಳೂರು, ಕಲಾ ಹುಬ್ಬಳ್ಳಿ, ಚಿತ್ರಸಂತೆ ಸುತ್ತುರು ಮೈಸೂರು, ಕಲಾವೈಭವ ಗ್ರೂಪ್ ಚಿತ್ರಕಲಾ, ಪ್ರದರ್ಶನ ಧಾರವಾಡ ಹುಬ್ಬಳ್ಳಿ ಹೀಗೆ ಹದಿನೈದಕ್ಕೆ ಹೆಚ್ಚು ಚಿತ್ರಕಲಾ ಪ್ರದರ್ಶನ ಗೊಂಡಿವೆ. ಧಾರವಾಡದ ಜಿಲ್ಲಾ ಉತ್ಸವ, ಜಿಲ್ಲಾ ಮಟ್ಟದ ಕಲಾ ಸ್ಪರ್ಧೆ, ಮುಂಗಾರು ಜನಪರ ಕಾಲ ಶಿಬಿರ, ಹೀಗೆ ಸುಮಾರು 12 ಕ್ಯಾಂಪ್ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತರ ಕರ್ನಾಟಕದ ಇಳಕಲ್ ಸೀರೆಯನ್ನು ತಮ್ಮ ಕಲೆಯಲ್ಲಿ ತೋರಿಸುತ್ತ ಇದನ್ನು ಇಡೀ ರಾಜ್ಯ ಹಾಗೂ ದೇಶ ತಿರುಗಿ ನಿಂತು ನೋಡುವಂತೆ ಮಾಡಿದ್ದಾರೆ. ಗಣೇಶ ಎಸ್ ಸಾಬೋಜಿಯವರಿಗೆ ಇಂತಹ ವಿಶಿಷ್ಟ ಕಲೆಯನ್ನು ಗುರುತಿಸಿ ವಾರ್ಷಿಕ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹುಬ್ಬಳ್ಳಿ:ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಇಳಕಲ್ ಸೀರೆಗೆ ಕಲಾವಿದರೊಬ್ಬರು ಕಲೆಯ ಟಚ್ ‌‌ನೀಡಿ ಮತ್ತಷ್ಟು ಮೆರಗು ನೀಡುವಂತೆ ಮಾಡಿದ್ದಾರೆ.

saree
ರಂಗು ರಂಗಿನ ಇಳಕಲ್​​ ಸೀರೆ

ಹುಬ್ಬಳ್ಳಿ ನಗರದ ನಿವಾಸಿ ಕಲಾವಿದ ಗಣೇಶ ಎಸ್ ಸಾಬೋಜಿ ಎನ್ನುವರೇ ಇಳಕಲ್ ಸೀರೆಯ ಸೊಬಗು ಅಂದ ಚಂದ ಹೆಚ್ಚಿಸಿದವರು. ಇಳಕಲ್ ಸೀರೆಯನ್ನು ತನ್ನ ಪೇಂಟಿಂಗ್ ಮೂಲಕ ಅದರ ಸೂಕ್ಷ್ಮತೆಯನ್ನು ಎಳೆ ಎಳೆಯಾಗಿ ಬಿಡಿಸಿ ಎಲ್ಲರ ಚಿತ್ತವನ್ನು ಸೀರೆಯತ್ತ ಸೆಳೆಯುವಂತೆ ಮಾಡಿದ್ದಾರೆ.

saree
ರಂಗು ರಂಗಿನ ಇಳಕಲ್​​ ಸೀರೆ

ಇಳಕಲ್ ಸೀರೆಯಲ್ಲಿ ಗಣೇಶ ಗೋಲ್ಡ್ ಫಿಶ್ ಮೀನುಗಳಿಗೆ ಇಳಕಲ್​​ ಸೀರೆ ಉಡಿಸುವುದು ಕಾಮಣ್ಣನ ಇಳಕಲ್ ಸೀರೆ, ಹೀಗೆ ಹಲವಾರು ರೀತಿಯ ಸೀರೆಯಲ್ಲಿ ಪೇಂಟಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರ ಪೇಂಟಿಂಗ್ ಮಾಡಿ ಜನರ ಮನ ಸೆಳೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಇಳಕಲ್ ಸೀರೆಯನ್ನು ನಮ್ಮ ಹಿರಿಯರ ಕಾಲದಿಂದಲೂ ಹೆಂಗಸರು ಉಡುವ ಆಚರಣೆ ಇದೆ.ಈ ರೀತಿ ವಿಶಿಷ್ಟತೆ ಹೊಂದಿದ್ದ ಈ ಸೀರೆಯನ್ನು ನಾನು ನನ್ನ ಪೇಂಟಿಂಗ್ ಶೈಲಿಯನ್ನಾಗಿ ಏಕೆ ಇಟ್ಟುಕೊಳ್ಳಬಾರದು ಎನಿಸಿತ್ತು ಅಂದಿನಿಂದ ಇಳಕಲ್ ಸೀರೆ ಪೇಂಟಿಂಗ್ ಮಾಡಲು ಮುಂದಾದೆ ಎನ್ನುತ್ತಾರೆ ಕಲಾವಿದ ಗಣೇಶ.

ರಂಗು ರಂಗಿನ ಇಳಕಲ್​​ ಸೀರೆ

ಗಣೇಶ ಎಂಬಿಎ, ಬಿವಿಎ, ಹಾಗೂ ಎಮ್ಎಫ್ಎ ಪದವಿ ಪಡೆದಿದ್ದಾರೆ .ಪ್ರಸ್ತುತ ಆರ್​​​ಎಮ್​​​ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಡ್ರಾಯಿಂಗ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ.ಗಣೇಶ ಅವರು 2015 ರಲ್ಲಿ ರಾಜ್ಯ ಮಟ್ಟದ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇವರ ಚಿತ್ರಕಲಾ ಪ್ರದರ್ಶನ ಸಿರಸಂಗಿ, ಚಿತ್ರ ಸಂತೆ ಬೆಂಗಳೂರು, ಕಲಾ ಹುಬ್ಬಳ್ಳಿ, ಚಿತ್ರಸಂತೆ ಸುತ್ತುರು ಮೈಸೂರು, ಕಲಾವೈಭವ ಗ್ರೂಪ್ ಚಿತ್ರಕಲಾ, ಪ್ರದರ್ಶನ ಧಾರವಾಡ ಹುಬ್ಬಳ್ಳಿ ಹೀಗೆ ಹದಿನೈದಕ್ಕೆ ಹೆಚ್ಚು ಚಿತ್ರಕಲಾ ಪ್ರದರ್ಶನ ಗೊಂಡಿವೆ. ಧಾರವಾಡದ ಜಿಲ್ಲಾ ಉತ್ಸವ, ಜಿಲ್ಲಾ ಮಟ್ಟದ ಕಲಾ ಸ್ಪರ್ಧೆ, ಮುಂಗಾರು ಜನಪರ ಕಾಲ ಶಿಬಿರ, ಹೀಗೆ ಸುಮಾರು 12 ಕ್ಯಾಂಪ್ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತರ ಕರ್ನಾಟಕದ ಇಳಕಲ್ ಸೀರೆಯನ್ನು ತಮ್ಮ ಕಲೆಯಲ್ಲಿ ತೋರಿಸುತ್ತ ಇದನ್ನು ಇಡೀ ರಾಜ್ಯ ಹಾಗೂ ದೇಶ ತಿರುಗಿ ನಿಂತು ನೋಡುವಂತೆ ಮಾಡಿದ್ದಾರೆ. ಗಣೇಶ ಎಸ್ ಸಾಬೋಜಿಯವರಿಗೆ ಇಂತಹ ವಿಶಿಷ್ಟ ಕಲೆಯನ್ನು ಗುರುತಿಸಿ ವಾರ್ಷಿಕ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Intro:ಹುಬ್ಬಳ್ಳಿ-03

ಉತ್ತರ ಕರ್ನಾಟಕ ಭಾಗದಲ್ಲಿ ಇಳಕಲ್ ಸೀರೆಗೆ ತನ್ನದೆಯಾದ ಸ್ಥಾನವಿದೆ. ಈ ಭಾಗದ ಮಹಿಳೆಯರ ಸಂಸ್ಕೃತಿಯ ಪ್ರತೀಕವಾಗಿರುವ ಇಳಕಲ್ ಸೀರೆಗೆ ಕಲಾವಿದರೊಬ್ಬರು ಕಲೆಯ ಟಚ್ ‌‌ನೀಡಿ ಮತ್ತಷ್ಟು ಮೆರಗು ನೀಡುವಂತೆ ಮಾಡಿದ್ದಾರೆ.
ಹೌದು.
ನಗರದ ಕಲಾವಿದ ಗಣೇಶ ಎಸ್ ಸಂಬೋಜಿ ಎನ್ನುವರೇ ಇಳಕಲ್ ಸೀರೆಯ ಸೊಬಗು ಅಂದ ಚಂದ ಹೆಚ್ಚಿಸಿದವರು. ಇಳಕಲ್ ಸೀರೆಯನ್ನು ತನ್ನ ಪೇಂಟಿಂಗ್ ಮೂಲಕ ಅದರ ಸೂಕ್ಷ್ಮತೆಯನ್ನು ಎಳೆ ಎಳೆಯಾಗಿ ಬಿಡಿಸಿ ಎಲ್ಲರ ಚಿತ್ತವನ್ನು ಸೀರೆಯತ್ತ ಸೆಳೆಯುವಂತೆ ಮಾಡಿದ್ದಾರೆ. ಇವರು ಬಿಡಿಸುವ ಪ್ರತಿಯೊಂದು ಚಿತ್ರಕಲೆ ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ. ಇದರಿಂದಲೇ ಇಳಕಲ್ ಸೀರೆಯಲ್ಲಿ ಪೇಂಟಿಂಗ್ ಬಿಡಿಸುವ ಸರದಾರ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ.

ಇಳಕಲ್ ಸೀರೆಯಲ್ಲಿ ಗಣೇಶ ಗೋಲ್ಡ್ ಪೀಶ್ ಮೀನುಗಳಿಗೆ ಇಳಕಲ್ಲ ಸೀರೆ ಉಡಿಸುವುದು, ಕಾಮಣ್ಣನ ಇಳಕಲ್ ಸೀರೆ, ಹೀಗೆ ಹಲವಾರು ರೀತಿಯ ಸೀರೆಯಲ್ಲಿ ಪೇಂಟಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರ ಪೇಂಟಿಂಗ್ ಮಾಡಿ ಜನರ ಮನ ಸೆಳೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಇಳಕಲ್ ಸೀರೆಯನ್ನು ನಮ್ಮ ಹಿರಿಯರ ಕಾಲದಿಂದಲೂ ಹೆಂಗಸರು ಇಟ್ಟುಕೊಳ್ಳವ ಆಚರಣೆ ಇದೆ. ಸೀರೆ ತೊಟ್ಟು ಹೊರಟರೆ ಸಾಮಾನ್ಯ ದಿನಗಳು ಸಹ ಹಬ್ಬಗಳು ಆಗಿರುತ್ತಿದ್ದವು. ಅಷ್ಟು ಆಡಂಬರ ಹೊಂದಿದ್ದು ಇಳಕಲ್ ಸೀರೆ.
ಈ ರೀತಿ ವಿಶಿಷ್ಟತೆ ಹೊಂದಿದ್ದ ಈ ಸೀರೆಯನ್ನು ನಾನು ನನ್ನ ಪೇಂಟಿಂಗ್ ಶೈಲಿಯನ್ನಾಗಿ ಏಕೆ ಇಟ್ಟುಕೊಳ್ಳಬಾರದು ಎನಿಸಿತ್ತು ಅಂದಿನಿಂದ ಇಳಕಲ್ ಸೀರೆ ಪೇಂಟಿಂಗ್ ಮಾಡಲು ಮುಂದಾದೆ ಎನ್ನುತ್ತಾರೆ ಕಲಾವಿದ ಗಣೇಶ.

ಶಿಕ್ಷಣ ಮತ್ತು ಆಸಕ್ತಿ:-

ಗಣೇಶ ಅವರು ನಗರದಲ್ಲಿ ಎಂಬಿಎ, ಬಿವಿಎ, ಹಾಗೂ ಎಮ್ಎಫ್ಎ ಪದವಿ ಪಡೆದಿದ್ದಾರೆ ಆಸಕ್ತಿ ಅನುಸಾರವಾಗಿ ಇವರು ಇಂದು ಆರ್ ಎಮ್ ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಡ್ರಾಯಿಂಗ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಪ್ರಶಸ್ತಿಗಳು:-
ಗಣೇಶ ಅವರು 2015 ರಲ್ಲಿ ರಾಜ್ಯ ಮಟ್ಟದ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇವರ ಚಿತ್ರಕಲಾ ಪ್ರದರ್ಶನ ಸಿರಸಂಗಿ, ಚಿತ್ರ ಸಂತೆ ಬೆಂಗಳೂರು, ಕಲಾ ಹುಬ್ಬಳ್ಳಿ, ಚಿತ್ರಸಂತೆ ಸುತ್ತುರು ಮೈಸೂರು, ಕಲಾವೈಭವ ಗ್ರೂಪ್ ಚಿತ್ರಕಲಾ, ಪ್ರದರ್ಶನ ಧಾರವಾಡ ಹುಬ್ಬಳ್ಳಿ ಹೀಗೆ ಹದಿನೈದಕ್ಕೆ ಹೆಚ್ಚು ಚಿತ್ರಕಲಾ ಪ್ರದರ್ಶನ ಗೊಂಡಿವೆ. ಧಾರವಾಡದ ಜಿಲ್ಲಾ ಉತ್ಸವ, ಜಿಲ್ಲಾ ಮಟ್ಟದ ಕಲಾ ಸ್ಪರ್ಧೆ, ಮುಂಗಾರು ಜನಪರ ಕಾಲ ಶಿಬಿರ, ಹಿಗೆ ಸುಮಾರು 12 ಕ್ಯಾಂಪ್ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತರ ಕರ್ನಾಟಕದ ಇಳಕಲ್ ಸೀರೆಯನ್ನು ತಮ್ಮ ಕಲೆಯಲ್ಲಿ ತೋರಿಸುತ್ತ ಇದನ್ನು ಇಡೀ ರಾಜ್ಯ ಹಾಗೂ ದೇಶ ತಿರುಗಿ ನಿಂತು ನೋಡುವಂತೆ ಮಾಡಿದ್ದಾರೆ. ಗಣೇಶ ಎಸ್ ಸಾಬೋಜಿಯವರಿಗೆ ಇಂತಹ ವಿಶಿಷ್ಟ ಕಲೆಯನ್ನು ಗುರುತಿಸಿ ಇತ್ತಿಚಿನ ವಾರ್ಷಿಕ ಕಲಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.