ETV Bharat / state

ಧಾರವಾಡ: ಸಲಿಂಗಕಾಮಿಯ ಕಾಟಕ್ಕೆ ಪ್ರಾಣ ಕಳೆದುಕೊಂಡ ಯುವಕ - ಈಟಿವಿ ಭಾರತ​ ಕನ್ನಡ

ಪವನ್​ ಮತ್ತು ಯಾಸಿನ್​ ನಡುವೆ ಸ್ನೇಹ ಇತ್ತು, ಅದು ಕ್ರಮೇಣ ಸಲಿಂಗಕಾಮಕ್ಕೂ ಕಾರಣವಾಗಿದೆ. ನಂತರ ಪವನ್​ ನಿಂದ ಯಾಸಿನ್​ಗೆ ಕಿರುಕುಳ ಆರಂಭವಾಗಿತ್ತು. ಕಿರುಕುಳ ತಡೆಯಲಾರದೇ ಯಾಸಿನ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

homosexual-harassment
ಸಲಿಂಗಕಾಮಿಯ ಕಾಟಕ್ಕೆ ಇಹಲೋಕವನ್ನೇ ತ್ಯಜಿಸಿದ ಯುವಕ
author img

By

Published : Oct 21, 2022, 7:47 PM IST

Updated : Oct 21, 2022, 10:17 PM IST

ಧಾರವಾಡ: ಸಲಿಂಗಕಾಮಿಯ ಕಾಟಕ್ಕೆ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಪವನ್​ ಎಂಬಾತನ ಕಿರುಕುಳಕ್ಕೆ ಯಾಸೀನ್ ರೋಟಿವಾಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಯಾಸೀನ್ ರೋಟಿವಾಲೆ ಧಾರವಾಡ ಅತ್ತಿಕೊಳ್ಳದ ನಿವಾಸಿ. ವೃತ್ತಿಯಲ್ಲಿ ಆಟೋ ಡ್ರೈವರ್. ಕಳೆದ ಅಕ್ಟೋಬರ್ 12 ರಂದು ತನ್ನ ಮನೆಯಿಂದ ಹೊರ ಹೋಗಿದ್ದ ಆತ, ಅಕ್ಟೋಬರ್ 15 ರಂದು ಧಾರವಾಡದ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಸಲಿಂಗಕಾಮಿಯ ಕಾಟಕ್ಕೆ ಪ್ರಾಣ ಕಳೆದುಕೊಂಡ ಯುವಕ

ಯಾಸೀನ್ ಹಾಗೂ ಪವನ್ ಮಧ್ಯೆ ಏಳೆಂಟು ತಿಂಗಳಿನಿಂದ ಗೆಳೆತನ ಇತ್ತು. ಈ ಗೆಳೆತನ ಸಲಿಂಗಕಾಮಕ್ಕೂ ಕಾರಣವಾಗಿದೆ. ಅಲ್ಲದೇ ಪವನ್ ಎಲ್ಲರ ಮುಂದೆ ನಾನು ಯಾಸೀನ್‌ನನ್ನು ಮದುವೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದನಂತೆ. ಪವನ್ ಯಾಸೀನ್‌ಗೆ ಪ್ರತಿನಿತ್ಯ ಫೋನ್ ಮಾಡಿ ತನ್ನ ಸಂಪರ್ಕಕ್ಕೆ ಬರುವಂತೆ ಕಿರುಕುಳ ನೀಡುತ್ತಿದ್ದನಂತೆ.

ಅಲ್ಲದೇ ಅಕ್ಟೋಬರ್ 12 ರಂದು ಪವನ್, ಯಾಸೀನ್ ಜೊತೆಯೇ ಇದ್ದ ಎಂಬುದು ಯಾಸೀನ್ ಪೋಷಕರ ಆರೋಪ. ಪವನ್ ನೀಡುತ್ತಿದ್ದ ಕಿರುಕುಳದಿಂದಲೇ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ರಫೀಕ್ ವಿದ್ಯಾಗಿರಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪವನ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ: ಸಬ್‌ ಇನ್‌ಸ್ಪೆಕ್ಟರ್ ಬಂಧನ

ಧಾರವಾಡ: ಸಲಿಂಗಕಾಮಿಯ ಕಾಟಕ್ಕೆ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಪವನ್​ ಎಂಬಾತನ ಕಿರುಕುಳಕ್ಕೆ ಯಾಸೀನ್ ರೋಟಿವಾಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಯಾಸೀನ್ ರೋಟಿವಾಲೆ ಧಾರವಾಡ ಅತ್ತಿಕೊಳ್ಳದ ನಿವಾಸಿ. ವೃತ್ತಿಯಲ್ಲಿ ಆಟೋ ಡ್ರೈವರ್. ಕಳೆದ ಅಕ್ಟೋಬರ್ 12 ರಂದು ತನ್ನ ಮನೆಯಿಂದ ಹೊರ ಹೋಗಿದ್ದ ಆತ, ಅಕ್ಟೋಬರ್ 15 ರಂದು ಧಾರವಾಡದ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಸಲಿಂಗಕಾಮಿಯ ಕಾಟಕ್ಕೆ ಪ್ರಾಣ ಕಳೆದುಕೊಂಡ ಯುವಕ

ಯಾಸೀನ್ ಹಾಗೂ ಪವನ್ ಮಧ್ಯೆ ಏಳೆಂಟು ತಿಂಗಳಿನಿಂದ ಗೆಳೆತನ ಇತ್ತು. ಈ ಗೆಳೆತನ ಸಲಿಂಗಕಾಮಕ್ಕೂ ಕಾರಣವಾಗಿದೆ. ಅಲ್ಲದೇ ಪವನ್ ಎಲ್ಲರ ಮುಂದೆ ನಾನು ಯಾಸೀನ್‌ನನ್ನು ಮದುವೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದನಂತೆ. ಪವನ್ ಯಾಸೀನ್‌ಗೆ ಪ್ರತಿನಿತ್ಯ ಫೋನ್ ಮಾಡಿ ತನ್ನ ಸಂಪರ್ಕಕ್ಕೆ ಬರುವಂತೆ ಕಿರುಕುಳ ನೀಡುತ್ತಿದ್ದನಂತೆ.

ಅಲ್ಲದೇ ಅಕ್ಟೋಬರ್ 12 ರಂದು ಪವನ್, ಯಾಸೀನ್ ಜೊತೆಯೇ ಇದ್ದ ಎಂಬುದು ಯಾಸೀನ್ ಪೋಷಕರ ಆರೋಪ. ಪವನ್ ನೀಡುತ್ತಿದ್ದ ಕಿರುಕುಳದಿಂದಲೇ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಂದೆ ರಫೀಕ್ ವಿದ್ಯಾಗಿರಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪವನ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ: ಸಬ್‌ ಇನ್‌ಸ್ಪೆಕ್ಟರ್ ಬಂಧನ

Last Updated : Oct 21, 2022, 10:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.