ETV Bharat / state

ಡಿಕೆಶಿಗೆ ಕಾನೂನು ಪ್ರಕಾರ ಜಾಮೀನು ಮಂಜೂರಾಗಿದೆ: ಸಚಿವ ಸಿ.ಟಿ.ರವಿ - CT Ravi Reaction about DKS bail at Dharwad

ಸಹಜ ರೀತಿಯಲ್ಲಿ ಬೆಳೆದರೆ ಯಾರೂ ಯಾರ ಮೇಲೆಯೂ ಅನುಮಾನ ಪಡುವುದಿಲ್ಲ. ಅಸಹಜ ರೀತಿಯಲ್ಲಿ ಬೆಳೆದರೆ ಎಲ್ಲರೂ ಎಲ್ಲರ ಮೇಲೆ ಅನುಮಾನ ಪಡ್ತಾರೆ. ನಮ್ಮ ಪಕ್ಷದ ಸಿದ್ದೇಶ್ವರ, ಗೋಲ್ಡ್ ಪಿಂಚ್ ಹೋಟೆಲ್ ಮಾಲೀಕ ಪ್ರಕಾಶ ಶೆಟ್ಟಿ, ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮನೆ ಮೇಲೆಯೂ ದಾಳಿ ಆಗಿತ್ತು. ಇವರೆಲ್ಲ ಕಾಂಗ್ರೆಸ್ಸಿಗರಾ. ಎಲ್ಲಿ ಅಕ್ರಮದ ವಾಸನೆ ಇರುತ್ತದೋ ಅಲ್ಲಿ ಅನುಮಾನದ ದೃಷ್ಟಿ ಇರುತ್ತದೆ ಎಂದರು.

ಸಚಿವ ಸಿ.ಟಿ ರವಿ
author img

By

Published : Oct 23, 2019, 6:03 PM IST

ಧಾರವಾಡ: ಡಿಕೆಶಿಗೆ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಂಗ ನ್ಯಾಯಾಂಗದ ಕೆಲಸವನ್ನು, ಸಿಬಿಐ ಮತ್ತು ಇಡಿ ತಮ್ಮ ಕೆಲಸವನ್ನು ಮಾಡುತ್ತವೆ. ಕಾನೂನು ಪ್ರಕಾರವೇ ಬೇಲ್ ಸಿಕ್ಕಿದೆ. ಅದರಲ್ಲೇನು ವಿಶೇಷ ಇಲ್ಲ ಎಂದು ಹೇಳಿದ್ದಾರೆ.

ಸಚಿವ ಸಿ.ಟಿ.ರವಿ

ಕರ್ನಾಟಕ ವಿವಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಷಯದಲ್ಲಿಯೂ ರಾಜಕೀಯ ಬಣ್ಣ ‌ಹಚ್ಚುವುದು ಇದ್ದೇ ಇರುತ್ತೆ. ನನ್ನ ಆದಾಯ 1 ಕೋಟಿ ಇರೋದು ಐದು ವರ್ಷಕ್ಕೆ ನೂರು ಕೋಟಿಯಾದ್ರೆ ಅದು ಅನುಮಾನಾಸ್ಪದವೋ, ಇಲ್ಲ ರಾಜಕೀಯ ಬಣ್ಣವೋ ಎಂದು ಪ್ರಶ್ನಿಸಿದರು. ಸಹಜ ರೀತಿಯಲ್ಲಿ ಬೆಳೆದರೆ ಯಾರೂ ಯಾರ ಮೇಲೆಯೂ ಅನುಮಾನ ಪಡುವುದಿಲ್ಲ. ಅಸಹಜ ರೀತಿಯಲ್ಲಿ ಬೆಳೆದರೆ ಎಲ್ಲರೂ ಎಲ್ಲರ ಮೇಲೆ ಅನುಮಾನ ಪಡ್ತಾರೆ. ನಮ್ಮ ಪಕ್ಷದ ಸಿದ್ದೇಶ್ವರ, ಗೋಲ್ಡ್ ಪಿಂಚ್ ಹೋಟೆಲ್ ಮಾಲೀಕ ಪ್ರಕಾಶ ಶೆಟ್ಟಿ, ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮನೆ ಮೇಲೆಯೂ ದಾಳಿ ಆಗಿತ್ತು. ಇವರೆಲ್ಲ ಕಾಂಗ್ರೆಸ್ಸಿಗರಾ? ಎಲ್ಲಿ ಅಕ್ರಮದ ವಾಸನೆ ಇರುತ್ತದೋ ಅಲ್ಲಿ ಅನುಮಾನದ ದೃಷ್ಟಿ ಇರುತ್ತದೆ ಎಂದರು.

ಇನ್ನು ಪ್ರವಾಹ ಕುರಿತು ಕೆಲವೇ ಕ್ಷಣಗಳಲ್ಲಿ ಸಿಎಂ ವಿಡಿಯೋ ಸಂವಾದ ಮುಗಿದ ವಿಚಾರದ ಬಗ್ಗೆ ‌ಮಾತನಾಡಿ, ಸಿಎಂಗಿಂತ ಮುಂಚೆ ಮುಖ್ಯ ಕಾರ್ಯದರ್ಶಿ ಎಲ್ಲಾ ವಿವರ ಪಡೆದು ವರದಿ ಮಾಡಿದ್ದರು. ಔಪಚಾರಿಕ ನಿರ್ದೇಶನ ಮಾತ್ರ ಹತ್ತು ನಿಮಿಷದಲ್ಲಿ ಸಿಎಂ ಕೊಟ್ಟು ಮುಗಿಸಿದ್ದಾರೆ. ಏನು ನಿರ್ದೇಶನ ಕೊಡಬೇಕು ಕೊಟ್ಟಿದ್ದಾರೆ. ಜಾಸ್ತಿ ಹೊತ್ತು ವಿಡಿಯೋ ಸಂವಾದ ಮಾಡಿದ್ರೂ ಟೀಕೆ ಮಾಡುತ್ತಿದ್ದರು ಎಂದು ಹೇಳಿದರು.

ಧಾರವಾಡ: ಡಿಕೆಶಿಗೆ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಂಗ ನ್ಯಾಯಾಂಗದ ಕೆಲಸವನ್ನು, ಸಿಬಿಐ ಮತ್ತು ಇಡಿ ತಮ್ಮ ಕೆಲಸವನ್ನು ಮಾಡುತ್ತವೆ. ಕಾನೂನು ಪ್ರಕಾರವೇ ಬೇಲ್ ಸಿಕ್ಕಿದೆ. ಅದರಲ್ಲೇನು ವಿಶೇಷ ಇಲ್ಲ ಎಂದು ಹೇಳಿದ್ದಾರೆ.

ಸಚಿವ ಸಿ.ಟಿ.ರವಿ

ಕರ್ನಾಟಕ ವಿವಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಷಯದಲ್ಲಿಯೂ ರಾಜಕೀಯ ಬಣ್ಣ ‌ಹಚ್ಚುವುದು ಇದ್ದೇ ಇರುತ್ತೆ. ನನ್ನ ಆದಾಯ 1 ಕೋಟಿ ಇರೋದು ಐದು ವರ್ಷಕ್ಕೆ ನೂರು ಕೋಟಿಯಾದ್ರೆ ಅದು ಅನುಮಾನಾಸ್ಪದವೋ, ಇಲ್ಲ ರಾಜಕೀಯ ಬಣ್ಣವೋ ಎಂದು ಪ್ರಶ್ನಿಸಿದರು. ಸಹಜ ರೀತಿಯಲ್ಲಿ ಬೆಳೆದರೆ ಯಾರೂ ಯಾರ ಮೇಲೆಯೂ ಅನುಮಾನ ಪಡುವುದಿಲ್ಲ. ಅಸಹಜ ರೀತಿಯಲ್ಲಿ ಬೆಳೆದರೆ ಎಲ್ಲರೂ ಎಲ್ಲರ ಮೇಲೆ ಅನುಮಾನ ಪಡ್ತಾರೆ. ನಮ್ಮ ಪಕ್ಷದ ಸಿದ್ದೇಶ್ವರ, ಗೋಲ್ಡ್ ಪಿಂಚ್ ಹೋಟೆಲ್ ಮಾಲೀಕ ಪ್ರಕಾಶ ಶೆಟ್ಟಿ, ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮನೆ ಮೇಲೆಯೂ ದಾಳಿ ಆಗಿತ್ತು. ಇವರೆಲ್ಲ ಕಾಂಗ್ರೆಸ್ಸಿಗರಾ? ಎಲ್ಲಿ ಅಕ್ರಮದ ವಾಸನೆ ಇರುತ್ತದೋ ಅಲ್ಲಿ ಅನುಮಾನದ ದೃಷ್ಟಿ ಇರುತ್ತದೆ ಎಂದರು.

ಇನ್ನು ಪ್ರವಾಹ ಕುರಿತು ಕೆಲವೇ ಕ್ಷಣಗಳಲ್ಲಿ ಸಿಎಂ ವಿಡಿಯೋ ಸಂವಾದ ಮುಗಿದ ವಿಚಾರದ ಬಗ್ಗೆ ‌ಮಾತನಾಡಿ, ಸಿಎಂಗಿಂತ ಮುಂಚೆ ಮುಖ್ಯ ಕಾರ್ಯದರ್ಶಿ ಎಲ್ಲಾ ವಿವರ ಪಡೆದು ವರದಿ ಮಾಡಿದ್ದರು. ಔಪಚಾರಿಕ ನಿರ್ದೇಶನ ಮಾತ್ರ ಹತ್ತು ನಿಮಿಷದಲ್ಲಿ ಸಿಎಂ ಕೊಟ್ಟು ಮುಗಿಸಿದ್ದಾರೆ. ಏನು ನಿರ್ದೇಶನ ಕೊಡಬೇಕು ಕೊಟ್ಟಿದ್ದಾರೆ. ಜಾಸ್ತಿ ಹೊತ್ತು ವಿಡಿಯೋ ಸಂವಾದ ಮಾಡಿದ್ರೂ ಟೀಕೆ ಮಾಡುತ್ತಿದ್ದರು ಎಂದು ಹೇಳಿದರು.

Intro:ಧಾರವಾಡ: ಡಿಕೆಶಿಗೆ ಜಾಮೀನು ವಿಚಾರಕ್ಕೆ ಸಂಬಂದಿಸಿದಂತೆ ಧಾರವಾಡದಲ್ಲಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಂಗ ನ್ಯಾಯಾಂಗದ ಕೆಲಸವನ್ನು, ಸಿಬಿಐ ಮತ್ತು ಇಡಿ ಅವರ ಕೆಲಸವನ್ನು ಅವರ ಮಾಡ್ತಾರೆ. ಕಾನೂನು ಪ್ರಕಾರವೇ ಬೆಲ್ ಸಿಕ್ಕಿದೆ ಅದಕ್ಕೆನು ವಿಶೇಷ ಇಲ್ಲ ಎಂದು ಹೇಳಿದ್ದಾರೆ.

ಧಾರವಾಡದ ಕವಿವಿಯಲ್ಲಿ ಪತ್ರಾಗಾರ ನೂತನ ಕಟ್ಟಡ ಕಾರ್ಯಕ್ರಮದಲ್ಲಿ‌ ಭಾಹವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವಿಷಯದಲ್ಲಿಯೂ ರಾಜಕೀಯ ಬಣ್ಣ ‌ಕಟ್ಟುವುದು ಬರುತ್ತೆ. ನನ್ನ ಆದಾಯ ೧ ಕೋಟಿ ಇರೋದು ಐದು ವರ್ಷಕ್ಕೆ ನೂರು ಕೋಟಿಯಾದ್ರೆ ಅದು ಅನುಮಾನಸ್ಪದವೋ ಇಲ್ಲ ರಾಜಕೀಯ ಬಣ್ಣವೋ? ಎಂದು ಪ್ರಶ್ನಿಸಿದರು.

ಸಹಜ ರೀತಿಯಲ್ಲಿ ಬೆಳೆದರೆ ಯಾರೂ ಯಾರ ಮೇಲೆಯೂ ಅನುಮಾನ ಪಡುವುದಿಲ್ಲ ಅಸಹಜ ರೀತಿಯಲ್ಲಿ ಬೆಳೆದರೆ ಎಲ್ಲರೂ ಎಲ್ಲರ ಮೇಲೆ ಅವಮಾನ ಪಡ್ತಾರೆ. ನಮ್ಮ ಪಕ್ಷದ ಸಿದ್ದೇಶ್ವರ ಮನೆಯ ಮೇಲೆಯೂ ದಾಳಿ ಆಗಿತ್ತು. ಗೋಲ್ಡ್ ಪಿಂಚ್ ಹೋಟೆಲ್ ಮಾಲೀಕ ಪ್ರಕಾಶ ಶೆಟ್ರ ಮನೆ ಮೇಲೆ ದಾಳಿ ಆಗಿತ್ತು. ಎಸ್.ಎಂ. ಕೃಷ್ಣ ಅಳಿಯ ಸಿದ್ಧಾರ್ಥ ಮನೆ ಮೇಲೆಯೂ ದಾಳಿ ಆಗಿತ್ತು ಇವರೆಲ್ಲ ಏನ ಕಾಂಗ್ರೆಸ್ಸಿಗರಾ ಎಲ್ಲಿ ಅಕ್ರಮದ ವಾಸನೆ ಇರುತ್ತದೋ ಅಲ್ಲಿ ಅನುಮಾನದ ದೃಷ್ಟಿ ಇರುತ್ತದೆ ಎಂದರು.Body:ಡಿಕೆ ಸುರೇಶ ಕಣ್ಣೀರಿನ ವಿಚಾರ ಅವರು ತುಂಬಾ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಅದು ಕಣ್ಣೀರಲ್ಲ ಎಂದು‌ ತಿಳಿಸಿದರು.

ಪ್ರವಾಹ ಕುರಿತು ಕೆಲವೇ ಕ್ಷಣಗಳಲ್ಲಿ ಸಿಎಂ ವಿಡಿಯೋ ಸಂವಾದ ಮುಗಿದ ವಿಚಾರಕ್ಕೆ ‌ಮಾತನಾಡಿದ ಅವರು, ಅದಕ್ಕಿಂತ ಮುಂಚೆ ಚೀಪ್ ಸೆಕ್ರೆಟರಿ ಎಲ್ಲ ವಿವರ ಪಡೆದು ವರದಿ ಮಾಡಿದ್ರು. ಔಪಚಾರಿಕ ನಿರ್ದೇಶನ ಮಾತ್ರ ಹತ್ತು ನಿಮಿಷದಲ್ಲಿ ಸಿಎಂ ಕೊಟ್ಟು ಮುಗಿಸಿದ್ದಾರೆ. ಏನು ನಿರ್ದೇಶನ ಕೊಡಬೇಕು ಕೊಟ್ಟಿದ್ದಾರೆ. ಜಾಸ್ತಿ ಹೊತ್ತು ವಿಡಿಯೋ ಕಾನ್ಫಿರೆನ್ಸ್ ಮಾಡಿದ್ರೂ ಟೀಕೆ ಮಾಡಿಯೇ ಮಾಡತಿದ್ರು ಎಂದರು.

ಬೈಟ್: ಸಿ.ಟಿ. ರವಿ, ಸಚಿವConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.