ETV Bharat / state

ಕ್ರಿಕೆಟ್‌ಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಪ್ರಕರಣ: 12 ಮಂದಿಗೆ ಜೀವಾವಧಿ ಶಿಕ್ಷೆ

author img

By

Published : Dec 31, 2019, 8:59 AM IST

2013 ರ ಜೂನ್‌ 16ರಂದು ನಡೆದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಕೋರ್ಟ್‌ 12 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ 6,50,000 ರೂ ದಂಡ ವಿಧಿಸಿ ತೀರ್ಪು ನೀಡಿದೆ.

Hubli man murder case
ಜಿಲ್ಲಾ ಸೆಷನ್ಸ್‌ ಕೋರ್ಟ್‌

ಹುಬ್ಬಳ್ಳಿ : ಕ್ರಿಕೆಟ್‌ ಆಟಕ್ಕೆ ಸಂಬಂಧಿಸಿದಂತೆ ಆರು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 12 ಜನರಿಗೆ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆ ಹಾಗೂ 6,50,000 ದಂಡ ವಿಧಿಸಿ ತೀರ್ಪು ನೀಡಿದೆ.

ಜಿಲ್ಲಾ ಸೆಷನ್ಸ್‌ ಕೋರ್ಟ್‌

ಬಾನಿ ಓಣಿಯ ಕಲ್ಲಪ್ಪ ತಂದೆ ಬಸವರಾಜ, ಶಿರಕೋಳ, ಸಿದ್ದಾರೂಢ ಈಶ್ವರಪ್ಪ ಶಿರಕೋಳ, ಅಯ್ಯಪ್ಪ ಬಸವರಾಜ ಶಿರಕೋಳ, ನಿಂಗಪ್ಪ ಶಂಕರಪ್ಪ ಶಿಂಧೆ, ಅಯ್ಯಪ್ಪ ಮಂಜುನಾಥ ಲಕ್ಕುಂಡಿ, ಮಂಜುನಾಥ ಮಲ್ಲೇಶಪ್ಪ ಉಪ್ಪಾರ, ಶ್ರೀಪಾದ ಪದ್ಮನಾಭ ಪೂಜಾರಿ, ದೊಡ್ಡಮನಿ ಚಾಳಿನ ವಿಶಾಲ ನಾಗರಾಜ ಜಾಧವ, ಅಜಯ ಗುರುನಾಥ ಗುತ್ತಲ, ಸಂತೋಷ ಗೋಪಾಲ ಸುನಾಯಿ, ಮಂಜುನಾಥ ಹನುಮಂತಪ್ಪ ಗೋಕಾಕ, ಅನಿಲ್​ ಮುರಳೀಧರ ಎಂಬ ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ನೀಡಿದೆ.

ಪಿಎಸ್​ಐ ಆರ್.ಎಸ್. ಲಮಾಣಿ,‌ ಹುಬ್ಬಳ್ಳಿ ಶಹರ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​ ಎಸ್.ಎಮ್. ಸಂಧಿಗವಾಡ ಪ್ರಕರಣದ ತನಿಖೆ ನಡೆಸಿದ್ದು, ನ್ಯಾಯಾಲಯಕ್ಕೆ ಆರೋಪಿತರ ಮೇಲೆ ದೋಷಾರೋಪಣ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಇದೀಗ ಜೀವಾವಧಿ ಶಿಕ್ಷೆ ಹಾಗೂ 6,50,000ರೂ.ದಂಡ ವಿಧಿಸಿದೆ‌.

ಘಟನೆ ಹಿನ್ನೆಲೆ :
2013 ರ ಜೂನ್‌ 16ರಂದು ನೆಹರು ಮೈದಾನದಲ್ಲಿ ಕ್ರಿಕೆಟ್‌ ಆಡುವಾಗ ಯಲ್ಲಾಪುರ ಓಣಿಯ ನಜೀರ್‌ ಮುದಗಲ್‌ ಎಂಬುವವರ ಜೊತೆ ಜಗಳವಾಡಿ ಅವರ ಮೇಲೆ ಈ ಆರೋಪಿಗಳು ಹಲ್ಲೆ ನಡೆಸಿದ್ದು, ಅವರ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದರು. ಬಳಿಕ ಅವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು
ಮೃತಪಟ್ಟಿದ್ದರು. ಈ ಸಂಬಂಧ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹುಬ್ಬಳ್ಳಿ : ಕ್ರಿಕೆಟ್‌ ಆಟಕ್ಕೆ ಸಂಬಂಧಿಸಿದಂತೆ ಆರು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 12 ಜನರಿಗೆ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಜೀವಾವಧಿ ಶಿಕ್ಷೆ ಹಾಗೂ 6,50,000 ದಂಡ ವಿಧಿಸಿ ತೀರ್ಪು ನೀಡಿದೆ.

ಜಿಲ್ಲಾ ಸೆಷನ್ಸ್‌ ಕೋರ್ಟ್‌

ಬಾನಿ ಓಣಿಯ ಕಲ್ಲಪ್ಪ ತಂದೆ ಬಸವರಾಜ, ಶಿರಕೋಳ, ಸಿದ್ದಾರೂಢ ಈಶ್ವರಪ್ಪ ಶಿರಕೋಳ, ಅಯ್ಯಪ್ಪ ಬಸವರಾಜ ಶಿರಕೋಳ, ನಿಂಗಪ್ಪ ಶಂಕರಪ್ಪ ಶಿಂಧೆ, ಅಯ್ಯಪ್ಪ ಮಂಜುನಾಥ ಲಕ್ಕುಂಡಿ, ಮಂಜುನಾಥ ಮಲ್ಲೇಶಪ್ಪ ಉಪ್ಪಾರ, ಶ್ರೀಪಾದ ಪದ್ಮನಾಭ ಪೂಜಾರಿ, ದೊಡ್ಡಮನಿ ಚಾಳಿನ ವಿಶಾಲ ನಾಗರಾಜ ಜಾಧವ, ಅಜಯ ಗುರುನಾಥ ಗುತ್ತಲ, ಸಂತೋಷ ಗೋಪಾಲ ಸುನಾಯಿ, ಮಂಜುನಾಥ ಹನುಮಂತಪ್ಪ ಗೋಕಾಕ, ಅನಿಲ್​ ಮುರಳೀಧರ ಎಂಬ ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ನೀಡಿದೆ.

ಪಿಎಸ್​ಐ ಆರ್.ಎಸ್. ಲಮಾಣಿ,‌ ಹುಬ್ಬಳ್ಳಿ ಶಹರ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​ ಎಸ್.ಎಮ್. ಸಂಧಿಗವಾಡ ಪ್ರಕರಣದ ತನಿಖೆ ನಡೆಸಿದ್ದು, ನ್ಯಾಯಾಲಯಕ್ಕೆ ಆರೋಪಿತರ ಮೇಲೆ ದೋಷಾರೋಪಣ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಇದೀಗ ಜೀವಾವಧಿ ಶಿಕ್ಷೆ ಹಾಗೂ 6,50,000ರೂ.ದಂಡ ವಿಧಿಸಿದೆ‌.

ಘಟನೆ ಹಿನ್ನೆಲೆ :
2013 ರ ಜೂನ್‌ 16ರಂದು ನೆಹರು ಮೈದಾನದಲ್ಲಿ ಕ್ರಿಕೆಟ್‌ ಆಡುವಾಗ ಯಲ್ಲಾಪುರ ಓಣಿಯ ನಜೀರ್‌ ಮುದಗಲ್‌ ಎಂಬುವವರ ಜೊತೆ ಜಗಳವಾಡಿ ಅವರ ಮೇಲೆ ಈ ಆರೋಪಿಗಳು ಹಲ್ಲೆ ನಡೆಸಿದ್ದು, ಅವರ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದರು. ಬಳಿಕ ಅವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು
ಮೃತಪಟ್ಟಿದ್ದರು. ಈ ಸಂಬಂಧ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Intro:ಹುಬ್ಬಳ್ಳಿ-07

ಕ್ರಿಕೆಟ್‌ ಆಟಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ವೃತ್ತದಲ್ಲಿ ಆರು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದ 12 ಆರೋಪಿಗಳು ಅಪರಾಧಿಯೆಂದು ನಗರದ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಘೋಷಣೆ ಮಾಡಿದ್ದು, ಇಂದು ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ 6,50,000 ದಂಡ ವಿಧಿಸಿದೆ.

ಬಾನಿ ಓಣಿಯ ಕಲ್ಲಪ್ಪ ತಂದೆ ಬಸವರಾಜ
ಶಿರಕೋಳ, ಸಿದ್ದಾರೂಡ
ಈಶ್ವರಪ್ಪ ಶಿರಕೋಳ, ಅಯ್ಯಪ್ಪ ಬಸವರಾಜ ಶಿರಕೋಳ, ನಿಂಗಪ್ಪ ಶಂಕ್ರಪ್ಪ ಶಿಂಧೆ,ಅಯ್ಯಪ್ಪ ಮಂಜುನಾಥ ಲಕ್ಕುಂಡಿ, ಮಂಜುನಾಥ
ಮಲ್ಲೇಶಪ್ಪ ಉಪ್ಪಾರ, ಶ್ರೀಪಾದ
ಪದ್ಮನಾಭ ಪೂಜಾರಿ, ದೊಡ್ಡಮನಿ ಚಾಳಿನ ವಿಶಾಲ ನಾಗರಾಜ ಜಾಧವ, ಗಣೇಶಪೇಟೆಯ ಶೆಟ್ಟರ್ ಓಣಿಯ ಅಜಯ
ಗುರುನಾಥ ಗುತ್ತಲ,ಸಂತೋಷ ಗೋಪಾಲ ಸುನಾಯಿ,ಮಂಜುನಾಥ ಹನುಮಂತಪ್ಪ ಗೋಕಾಕ,ತಬೀಬಲ್ಯಾಂಡ್ ಅನೀಲ ಮುರಳಿಧರ ಇವರ ವಿರುದ್ದ ಈ ಪ್ರಕರಣದ ತನಿಖಾಧಿಕಾರಿಗಳಾದ ಆರ್.ಎಸ್. ಲಮಾಣಿ,‌ಪಿ.ಎಸ್.ಐ. ಹಾಗೂ ಹುಬ್ಬಳ್ಳಿ ಶಹರ ಪೊಲೀಸ ಠಾಣೆ ಇನ್ಸ್ಪೆಕ್ಟರ್ ಎಸ್.ಎಮ್. ಸಂಧಿಗವಾಡ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿತರ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು,ಹುಬ್ಬಳ್ಳಿಯ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿತರ ವಿರುದ್ದ ಆರೋಪವು ಸಾಭೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ 6,50,000ರೂ.ದಂಡ ವಿಧಿಸಿದೆ‌. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ಎ. ಬಾಂಡೆಕರ
ರವರು ವಕಾಲತ್ತು ವಹಿಸಿದ್ದರು.

ಘಟನೆ ಹಿನ್ನೆಲೆ:

2013ರ ಜೂನ್‌ 16ರಂದು ನೆಹರೂ ಮೈದಾನದಲ್ಲಿ ಕ್ರಿಕೆಟ್‌ ಆಡುವಾಗ ಯಲ್ಲಾಪುರ ಓಣಿಯ ನಜೀರ್‌ ಮುದಗಲ್‌ ಎಂಬುವವರ ಜೊತೆ ತಂಟೆ ತೆಗೆದು, ಹಲ್ಲೆ ನಡೆಸಿದ್ದರು. ನಂತರ ಚಿಟಗುಪ್ಪಿ ವೃತ್ತದವರೆಗೆ ಅವರ ಮೇಲೆ ಹಲ್ಲೆ ನಡೆಸುತ್ತ, ಸ್ಟಂಪ್‌ನಿಂದ ತಲೆಗೆ ಹೊಡೆದಿದ್ದರು. ಅಲ್ಲದೆ, ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕು ಇರಿದಿದ್ದರು. ಕಿಮ್ಸ್‌ಗೆ ದಾಖಲಾಗಿದ್ದ ಅವರು, ನಾಲ್ಕು ದಿನ ಬಿಟ್ಟು ಮೃತಪಟ್ಟಿದ್ದರು. ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.