ETV Bharat / state

ಬಿಸಿಲಿಗೆ ಬಸವಳಿದ ಹುಬ್ಬಳ್ಳಿ ಮಂದಿ... ಬಡವರ ಫ್ರಿಡ್ಜ್​​ಗೆ ಹೆಚ್ಚಿದ ಬೇಡಿಕೆ   ​ - undefined

ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಡವರ ಫ್ರಿಡ್ಜ್​ ಎಂದೇ ಹೇಳಲಾಗುವ ಮಣ್ಣಿನ ಮಡಿಕೆಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ.

ಮಣ್ಣಿನ ಮಡಿಕೆ
author img

By

Published : Mar 15, 2019, 12:34 PM IST

Updated : Mar 15, 2019, 2:08 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಬಡವರ ಫ್ರಿಡ್ಜ್​ ಎಂದೇ ಬಣ್ಣಿಸಲ್ಪಡುವ ಮಣ್ಣಿನ ಮಡಿಕೆಗಳಿಗೆ ಜನರು ಮೊರೆ ಹೋಗುತ್ತಿದ್ದಾರೆ.

ಮಣ್ಣಿನ ಮಡಿಕೆ

ಮಾರುಕಟ್ಟೆಯಲ್ಲಿ ಒಂದು ಮಡಿಕೆಗೆ ಸುಮಾರು 250 ರಿಂದ 350 ರೂ. ಗಳವರೆಗೆ ಮಡಿಕೆಗಳು ದೊರೆಯುತ್ತಿವೆ. ಮಡಿಕೆಯಲ್ಲಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಕಡಿಮೆ ಬೆಲೆಯಲ್ಲಿ ತಂಪಾದ ನೀರು ಕುಡಿಯಬಹುದು ಎಂದು ಗ್ರಾಹಕರು ಹೇಳುತ್ತಾರೆ.

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಬಡವರ ಫ್ರಿಡ್ಜ್​ ಎಂದೇ ಬಣ್ಣಿಸಲ್ಪಡುವ ಮಣ್ಣಿನ ಮಡಿಕೆಗಳಿಗೆ ಜನರು ಮೊರೆ ಹೋಗುತ್ತಿದ್ದಾರೆ.

ಮಣ್ಣಿನ ಮಡಿಕೆ

ಮಾರುಕಟ್ಟೆಯಲ್ಲಿ ಒಂದು ಮಡಿಕೆಗೆ ಸುಮಾರು 250 ರಿಂದ 350 ರೂ. ಗಳವರೆಗೆ ಮಡಿಕೆಗಳು ದೊರೆಯುತ್ತಿವೆ. ಮಡಿಕೆಯಲ್ಲಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಕಡಿಮೆ ಬೆಲೆಯಲ್ಲಿ ತಂಪಾದ ನೀರು ಕುಡಿಯಬಹುದು ಎಂದು ಗ್ರಾಹಕರು ಹೇಳುತ್ತಾರೆ.

Intro:Body:

ಹುಬ್ಬಳ್ಳಿ 01 (5-03-19)


ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ  ಬಡವರ ಪ್ರಿಜ್ ಎಂದೇ ಹೆಸರು ಹೊಂದಿರುವ ಮಣ್ಣಿನ ಮಡಿಕೆಗಳಿಗೆ ಬಹಳ ಬೇಡಿಕೆಯಾಗಿದೆ. ಜನರು ಮಣ್ಣಿನ ಮಡಿಕೆಗಳಿಗೆ ಮೊರೆಹೊದ ದೃಶ್ಯಗಳು ಸಾಮಾನ್ಯವಾಗಿ ಕಂಡಬರುತ್ತಿವೆ. ಶ್ರೀಮಂತರು ದುಬಾರಿ ಬೆಲೆ ಬಾಳುವ ಪ್ರಿಜ್ ಖರೀದಿಸಿ ಅದರಿಂದ  ತಂಪಾದ ನೀರು ಕುಡಿಯುತ್ತಾರೆ. ಆದರೆ ಬಡವರಿಗೆ ಅಷ್ಟೋಂದು ಬೆಲೆ ಬಾಳುವ ಪ್ರೀಜ್ ಖರಿದಿಸಲು ಸಾಧ್ಯವಾಗದೇ ಇರುವುದರಿಂದ ಬೇಸಿಗೆಯ ಬಿಸಿಲ ತಾಪಕ್ಕಾಗಿ ತಣ್ಣನೇಯ ನೀರು ಕುಡಿಯಲು ಬಡವರು ಮಣ್ಣಿನ ಮಡಿಕೆ ಖರಿದಿಸುತ್ತಿದ್ದಾರೆ. ಇನ್ನೂ ಬೆಸಿಗೆ ಮುಂದಿರುವಾಗಲೇ ಬಿಸಿಲಿನ ತಾಪಮಾನಕ್ಕೆ ಬೆಂದು ಹೊಗಿರುವ ಧಾರವಾಡ ಜಿಲ್ಲೆಯ ಜನರು ಮಣ್ಣಿನ ಮಡಿಕೆಗೆ ಮೊರೆ ಹೊಗಿರುವುದು ಸಹಜವಾಗಿ ಕಾಣುತ್ತಿವೆ . ಈಗಾಗಲೇ ಜಿಲ್ಲೆಯಲ್ಲಿ ಸರಿಸುಮಾರು ‌35 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದ್ದು ಬಡವರು ಈಗಲೇ ಮಣ್ಣಿನ ಮಡಿಕೆಗಳನ್ನು ಖರಿದಿಸಿಟ್ಟುಕೊಂಡು ತಣ್ಣನೇಯ ನೀರು ಕುಡಿಯಲು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ  ಒಂದು ಮಡಿಕೆಗೆ ಸರಿಸುಮಾರು 250 ರಿಂದ 350 ರೂ. ಗಳವರೆಗೆ ಮಡಿಕೆಗಳು ದೊರೆಯುತ್ತಿವೆ ಹಾಗೂ ಮಡಿಕೆಯಲ್ಲಿನ ನೀರು ಕುಡಿಯುವುದರಿಂದ ಆರೋಗ್ಯ ಕ್ಕೂ ಒಳ್ಳೆಯದು ಹಾಗೂ ಕಡಿಮೆ ಬೆಲೆಯಲ್ಲಿ ತಂಪಾದ ನೀರು ಕುಡಿಯಬಹುದು  ಎಂದು ಮಡಿಕೆ ಖರಿದಿಸಲು ಬಂದ ಗ್ರಾಹಕರ ಮಾತಾಗಿದೆ.ಒಟ್ಟಿನಲ್ಲಿ ಬಡವರ ಪ್ರಿಜ್ ಎಂದು ಖ್ಯಾತಿ ಹೊಂದಿರುವ ಮಡಿಕೆಗೆ ಬಹಳ ಬೇಡಿಕೆ ಬಂದಿರುವುದರಿಂದ ಮಡಿಕೆ ತಯಾರಿಸಿ ಮಾರಟ ಮಾಡುವ ಕುಂಬಾರರಿಗೆ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದಂತ್ತು ಸತ್ಯ......

Conclusion:
Last Updated : Mar 15, 2019, 2:08 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.