ETV Bharat / state

ಬೀಸುವ ದೊಣ್ಣೆಯಿಂದ ರೈತರನ್ನು ತಪ್ಪಿಸುತ್ತಿದೆ ಡೊಣ್ಣೆ ಮೆಣಸಿನಕಾಯಿ ಬೆಳೆ...!

author img

By

Published : Sep 17, 2019, 4:41 PM IST

Updated : Sep 18, 2019, 10:55 PM IST

ಹುಬ್ಬಳ್ಳಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ಬೇಸತ್ತ ಅನ್ನದಾತನ ಮೊಗದಲ್ಲಿ ಇದೀಗ ಡೊಣ್ಣೆ ಮೆಣಸಿನಕಾಯಿ ( ಕ್ಯಾಪ್ಸಿಕಂ) ಬೆಳೆ ಮಂದಹಾಸ ಮೂಡಿಸಿದೆ.

ಡೊಣ್ಣ ಮೆಣಸಿನಕಾಯಿ

ಹುಬ್ಬಳ್ಳಿ: ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ಬೇಸತ್ತ ಜಿಲ್ಲೆಯ ಅನ್ನದಾತನ ಮೊಗದಲ್ಲಿ ಇದೀಗ ಡೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಳೆ ಮಂದಹಾಸ ಮೂಡಿಸಿದೆ.

ರೈತನಿಗೆ ಆರ್ಥಿಕ ಹೊರೆಯನ್ನು ತಗ್ಗಿಸುವ ಈ ಬೆಳೆಯು, ಕೆಂಪು, ಕಪ್ಪು ಹಾಗೂ ಮರಳು ಮಿಶ್ರಿತ ಪ್ರದೇಶದಲ್ಲಿ ಬೆಳೆಯುತ್ತದೆ.‌ ಕಳೆದ ಸುಮಾರು ಮೂರು ವರ್ಷಗಳ ಬರಗಾಲ ಹಾಗೂ ಈ ವರ್ಷದ ನೆರೆ ಹಾವಳಿಯ ನಡುವೆಯೂ ಈ ಬೆಳೆ ರೈತನ ಕಣ್ಣೀರನ್ನು ಒರೆಸುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದಿದ್ದರೂ ತಕ್ಕ ಮಟ್ಟಿಗೆ ಬೆಳೆ ಬಂದಿರುವುದು ರೈತನ ಕಷ್ಟವನ್ನು ಸ್ವಲ್ಪವಾದರೂ ನೀಗಿಸುತ್ತಿದೆ.

ಉತ್ತರ ಕರ್ನಾಟಕದ ಹಾವೇರಿ, ಗದಗ, ಬಾಗಲಕೋಟ, ‌ಧಾರವಾಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ರೈತನ ಪಾಲಿಗೆ ವಾಣಿಜ್ಯ ಬೆಳೆಯಾಗಿದೆ. ಮೊದಲಿಗೆ ಮಡಿ ಮಾಡುವ ಮೂಲಕ ಪ್ರಾರಂಭಗೊಂಡು, ಕನಿಷ್ಠ 2.5 ಅಡಿ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಲಾಗುತ್ತದೆ‌. ಇದು ಎರಡು ತಿಂಗಳಲ್ಲಿ ಬೆಳೆ ಬರಲು ಪ್ರಾರಂಭವಾಗುತ್ತದೆ. ಇಲ್ಲಿ ಬೆಳೆದ ಬೆಳೆ ಅಂತರ ರಾಜ್ಯಗಳಿಗೆ ರಫ್ತಾಗುತ್ತದೆ.

ಹೆಚ್ಚಿದ ಬೇಡಿಕೆ:

ತರಕಾರಿಗಳಲ್ಲಿ ಒಂದಾಗಿರುವ ಡೊಣ್ಣೆ ಮೆಣಸಿನಕಾಯಿ ಕಡಿಮೆ ಖಾರದ ಪ್ರಮಾಣವನ್ನು ಹೊಂದಿರುವುದರಿಂದ ಗ್ರಾಹಕರಿಗೆ ಊಟದಲ್ಲಿ ಹಾಗೂ ಅಡುಗೆ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದ್ದರಿಂದ ಡೊಣ್ಣೆ ಮೆಣಸಿನಕಾಯಿ ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಖರೀದಿಗೆ ಗ್ರಾಹಕರು ಮುಗಿ ಬಿಳುತ್ತಾರೆ.

ರೈತರ ಆರ್ಥಿಕ ಸಂಕಷ್ಟವನ್ನು ನೀಗಿಸುತ್ತಿದೆ ಡೊಣ್ಣ ಮೆಣಸಿನಕಾಯಿ

ಈ ವರ್ಷ ಮಳೆ ಪ್ರಮಾಣ ಜಾಸ್ತಿಯಾಗಿ ಹೊಲದಲ್ಲಿ ನೀರು ನಿಂತು ಬೆಳೆ ಹಾಳಾಗಿದೆ. ಆದರೂ ಕೂಡ ಡೊಣ್ಣೆ ಮೆಣಸಿನಕಾಯಿ ರೈತರಲ್ಲಿ ನಿರಾಳತೆಯನ್ನು ನೀಡಿದೆ. ಒಂದು ಎಕರೆಗೆ, ಒಂದು ಕಟಾವಿಗೆ ಹತ್ತರಿಂದ ಹದಿನೈದು ಚೀಲ ಮಾರಾಟ ಮಾಡುತ್ತಾರೆ. ಒಂದು ಚೀಲಕ್ಕೆ 1000-1500 ಬೆಲೆ ಬರುತ್ತದೆ. ಇದು ರೈತರ ಆರ್ಥಿಕ ಸಂಕಷ್ಟ ನೀಗಿಸಿದ್ದು, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಹುಬ್ಬಳ್ಳಿ: ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ಬೇಸತ್ತ ಜಿಲ್ಲೆಯ ಅನ್ನದಾತನ ಮೊಗದಲ್ಲಿ ಇದೀಗ ಡೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಳೆ ಮಂದಹಾಸ ಮೂಡಿಸಿದೆ.

ರೈತನಿಗೆ ಆರ್ಥಿಕ ಹೊರೆಯನ್ನು ತಗ್ಗಿಸುವ ಈ ಬೆಳೆಯು, ಕೆಂಪು, ಕಪ್ಪು ಹಾಗೂ ಮರಳು ಮಿಶ್ರಿತ ಪ್ರದೇಶದಲ್ಲಿ ಬೆಳೆಯುತ್ತದೆ.‌ ಕಳೆದ ಸುಮಾರು ಮೂರು ವರ್ಷಗಳ ಬರಗಾಲ ಹಾಗೂ ಈ ವರ್ಷದ ನೆರೆ ಹಾವಳಿಯ ನಡುವೆಯೂ ಈ ಬೆಳೆ ರೈತನ ಕಣ್ಣೀರನ್ನು ಒರೆಸುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದಿದ್ದರೂ ತಕ್ಕ ಮಟ್ಟಿಗೆ ಬೆಳೆ ಬಂದಿರುವುದು ರೈತನ ಕಷ್ಟವನ್ನು ಸ್ವಲ್ಪವಾದರೂ ನೀಗಿಸುತ್ತಿದೆ.

ಉತ್ತರ ಕರ್ನಾಟಕದ ಹಾವೇರಿ, ಗದಗ, ಬಾಗಲಕೋಟ, ‌ಧಾರವಾಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ರೈತನ ಪಾಲಿಗೆ ವಾಣಿಜ್ಯ ಬೆಳೆಯಾಗಿದೆ. ಮೊದಲಿಗೆ ಮಡಿ ಮಾಡುವ ಮೂಲಕ ಪ್ರಾರಂಭಗೊಂಡು, ಕನಿಷ್ಠ 2.5 ಅಡಿ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಲಾಗುತ್ತದೆ‌. ಇದು ಎರಡು ತಿಂಗಳಲ್ಲಿ ಬೆಳೆ ಬರಲು ಪ್ರಾರಂಭವಾಗುತ್ತದೆ. ಇಲ್ಲಿ ಬೆಳೆದ ಬೆಳೆ ಅಂತರ ರಾಜ್ಯಗಳಿಗೆ ರಫ್ತಾಗುತ್ತದೆ.

ಹೆಚ್ಚಿದ ಬೇಡಿಕೆ:

ತರಕಾರಿಗಳಲ್ಲಿ ಒಂದಾಗಿರುವ ಡೊಣ್ಣೆ ಮೆಣಸಿನಕಾಯಿ ಕಡಿಮೆ ಖಾರದ ಪ್ರಮಾಣವನ್ನು ಹೊಂದಿರುವುದರಿಂದ ಗ್ರಾಹಕರಿಗೆ ಊಟದಲ್ಲಿ ಹಾಗೂ ಅಡುಗೆ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದ್ದರಿಂದ ಡೊಣ್ಣೆ ಮೆಣಸಿನಕಾಯಿ ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಖರೀದಿಗೆ ಗ್ರಾಹಕರು ಮುಗಿ ಬಿಳುತ್ತಾರೆ.

ರೈತರ ಆರ್ಥಿಕ ಸಂಕಷ್ಟವನ್ನು ನೀಗಿಸುತ್ತಿದೆ ಡೊಣ್ಣ ಮೆಣಸಿನಕಾಯಿ

ಈ ವರ್ಷ ಮಳೆ ಪ್ರಮಾಣ ಜಾಸ್ತಿಯಾಗಿ ಹೊಲದಲ್ಲಿ ನೀರು ನಿಂತು ಬೆಳೆ ಹಾಳಾಗಿದೆ. ಆದರೂ ಕೂಡ ಡೊಣ್ಣೆ ಮೆಣಸಿನಕಾಯಿ ರೈತರಲ್ಲಿ ನಿರಾಳತೆಯನ್ನು ನೀಡಿದೆ. ಒಂದು ಎಕರೆಗೆ, ಒಂದು ಕಟಾವಿಗೆ ಹತ್ತರಿಂದ ಹದಿನೈದು ಚೀಲ ಮಾರಾಟ ಮಾಡುತ್ತಾರೆ. ಒಂದು ಚೀಲಕ್ಕೆ 1000-1500 ಬೆಲೆ ಬರುತ್ತದೆ. ಇದು ರೈತರ ಆರ್ಥಿಕ ಸಂಕಷ್ಟ ನೀಗಿಸಿದ್ದು, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Intro:ಹುಬ್ಬಳ್ಳಿ-04

ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ಬೆಸತ್ತ ಅನ್ನದಾತನ ಮೊಗದಲ್ಲಿ
ಭಿತ್ತಿದಾಗ ಬೀಜವಾಗಿ, ಡೊಣ್ಣ ಮೆಣಸಿನಕಾಯಿ ( ಕ್ಯಾಪ್ಸಿಕಂ) ಬೆಳೆ ಮಂದಹಾಸ ಮೂಡಿಸಿದೆ. ರೈತನ ಪಾಲಿಗೆ ಸ್ಪೂರ್ತಿಯಾಗಿ ರೈತರ ಆರ್ಥಿಕ ಸಂಕಷ್ಟವನ್ನು ನೀಗಿಸುವ ಡೊಣ್ಣ ಮೆಣಸಿನಕಾಯಿ ರೈತರ ಪಾಲಿಗೆ ವರದಾನವಾಗಿದೆ.

ಹೌದು. ರೈತನಿಗೆ ಆರ್ಥಿಕ ಹೊರೆಯನ್ನು ತಗ್ಗಿಸುವ ಬೆಳೆಯಾಗಿರುವ ಡೊಣ್ಣ ಮೆಣಸಿನಕಾಯಿ, ಕೆಂಪು, ಕಪ್ಪು ಹಾಗೂ ಮರಳು ಮಿಶ್ರಿತ ಪ್ರದೇಶದಲ್ಲಿ ಬೆಳೆಯುವ ಬೆಳೆಯಾಗಿದೆ.‌ಕಳೆದ ಸುಮಾರು ಮೂರು ವರ್ಷಗಳ ಬರಗಾಲ ಹಾಗೂ ಈ ವರ್ಷದ ನೆರೆ ಹಾವಳಿಯ ನಡುವೆಯೂ ಡೊಣ್ಣ ಮೆಣಸಿನಕಾಯಿ ರೈತನ ಕಣ್ಣೀರನ್ನು ಒರೆಸುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದಿದ್ದರೂ ತಕ್ಕ ಮಟ್ಟಿಗೆ ಬೆಳೆ ಬಂದಿರುವುದು ರೈತನ ಕಷ್ಟವನ್ನು ಸ್ವಲ್ಪವಾದರೂ ನೀಗಿಸುತ್ತಿದೆ.

ಉತ್ತರ ಕರ್ನಾಟಕದ ಹಾವೇರಿ, ಗದಗ, ಬಾಗಲಕೋಟ, ‌ಧಾರವಾಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ರೈತನ ಪಾಲಿಗೆ ವಾಣಿಜ್ಯ ಬೆಳೆಯಾಗಿದೆ. ಮೊದಲಿಗೆ ಮಡಿ ಮಾಡುವ ಮೂಲಕ ಪ್ರಾರಂಭಗೊಂಡು, ಕನಿಷ್ಠ 2.5 ಅಡಿ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಲಾಗುತ್ತದೆ‌. ಇದು ಎರಡು ತಿಂಗಳಲ್ಲಿ ಬೆಳೆ ಬರಲು ಪ್ರಾರಂಭವಾಗುತ್ತದೆ. ಇಲ್ಲಿ ಬೆಳೆದ ಬೆಳೆ ಅಂತರರಾಜ್ಯಗಳಿಗೆ ರಪ್ತಾಗುತ್ತದೆ.

ಹೆಚ್ಚಿದ ಬೇಡಿಕೆ: ತರಕಾರಿಗಳಲ್ಲಿ ಒಂದಾಗಿರುವ ಡೊಣ್ಣ ಮೆಣಸಿನಕಾಯಿ ಕಡಿಮೆ ಖಾರದ ಪ್ರಮಾಣವನ್ನು ಹೊಂದಿರುವುದರಿಂದ ಗ್ರಾಹಕರಿಗೆ ಊಟದಲ್ಲಿ ಹಾಗೂ ಅಡುಗೆ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಆದ್ದರಿಂದ ಡೊಣ್ಣ ಮೆಣಸಿನಕಾಯಿ ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಖರೀದಿಗೆ ಗ್ರಾಹಕರು ಮುಗಿ ಬಿಳುತ್ತಾರೆ.
ಈ ವರ್ಷ ಮಳೆ ಪ್ರಮಾಣ ಜಾಸ್ತಿಯಾಗಿ ಹೊಲದಲ್ಲಿ ನೀರು ನಿಂತು ಬೆಳೆ ಹಾಳಾಗಿದೆ. ಆದರೂ ಕೂಡ ಡೊಣ್ಣ ಮೆಣಸಿನಕಾಯಿ ರೈತರಲ್ಲಿ ನಿರಾಳತೆಯನ್ನು ನೀಡಿದೆ. ಒಂದು ಎಕರೆಗೆ ಒಂದು ಕಟಾವಿಗೆ ಹತ್ತರಿಂದ ಹದಿನೈದು ಚೀಲ ಹರಿದು ಮಾರಾಟ ಮಾಡುತ್ತಾರೆ. ಒಂದು ಚೀಲಕ್ಕೆ 1000-1500 ಬೆಲೆ ಬರುತ್ತದೆ. ಇದು ರೈತರ ಆರ್ಥಿಕ ಸಂಕಷ್ಟ ನೀಗಿಸಿದ್ದು, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.Body:H B GaddadConclusion:Etv hubli
Last Updated : Sep 18, 2019, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.