ETV Bharat / state

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ - ಬಿಕೆ ಹರಿಪ್ರಸಾದ್ ಟುಡೆ ನ್ಯೂಸ್

ಹುಬ್ಬಳ್ಳಿಯಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

BK Hariprasad outrage against BJP govt
ಬಿಜೆಪಿಯಲ್ಲಿ ವಿರುದ್ಧ ವಾಗ್ದಾಳಿ ನಡೆಸಿದ ಬಿಕೆ ಹರಿಪ್ರಸಾದ್
author img

By

Published : Dec 2, 2021, 5:53 PM IST

Updated : Dec 2, 2021, 6:24 PM IST

ಹುಬ್ಬಳ್ಳಿ : ಬಿಜೆಪಿ ನೇತೃತ್ವದ ಸರ್ಕಾರ ಜನ ಸಾಮಾನ್ಯರಿಗೆ ಸ್ಪಂದಿಸದ ಸರ್ಕಾರ. ಹಾನಗಲ್​​​ನಲ್ಲಿ ಹಣ, ಅಧಿಕಾರಿ, ತೋಳು ಬಲ ಪ್ರದರ್ಶನ ಮಾಡಿದ್ದರು. ಎಲ್ಲ ರೀತಿಯ ಭಯ ಪಡಿಸುವ ಪ್ರಯತ್ನವನ್ನು ಸಿಎಂ ಮಾಡಿದ್ದರು. ಆದರೂ ಅವರ ಸ್ವ ಕ್ಷೇತ್ರದಲ್ಲಿ ಜನರು ಬುದ್ಧಿ ಕಲಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬಿಕೆ ಹರಿಪ್ರಸಾದ್

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಚಳವಳಿಯನ್ನು ಹತ್ತಿಕ್ಕುವ ಕೆಲಸವನ್ನು ಮೋದಿ ಮಾಡಿದ್ದರು. ಪ್ರತಿಭಟನೆ ಮಾಡಿದ ರೈತರನ್ನು ಪಾಕಿಸ್ತಾನಿಗಳು, ಕಲಿಸ್ತಾನಿಗಳು ಎಂದೇಳಿದ್ದರು. ಆದರೆ, ಯಾವುದೇ ಚರ್ಚೆ ಇಲ್ಲದೇ ಮಸೂದೆಯನ್ನು ವಾಪಸ್ ಪಡೆದಿದ್ದಾರೆ ಎಂದು ಲೇವಡಿ ಮಾಡಿದರು.

ಪ್ರವಾಹದಿಂದ ಬಹಳಷ್ಟು ಹಾನಿಯಾಗಿದೆ. ಇದರ ಮಧ್ಯೆ ಯಾವುದೇ ಪರಿಹಾರಕ್ಕೆ ಸರ್ಕಾರ ಮುಂದಾಗಿಲ್ಲ. ಅದರ ಬದಲು ನಿನ್ನೆ ಇಬ್ಬರು ಶಾಸಕರು ಕುಸ್ತಿ ಆಡಿದನ್ನು ನೋಡಿದ್ದೇವೆ ಎಂದು ಬಿಜೆಪಿ ಶಾಸಕರ ಜಗಳಕ್ಕೆ ಹರಿಪ್ರಸಾದ್ ವ್ಯಂಗ್ಯವಾಡಿದರು.

ನಾನು ಬಿಜೆಪಿ ಸದಸ್ಯನಲ್ಲ. ಆದರೂ ರಾಜಕೀಯವಾಗಿ ಕಾರ್ಯಕರ್ತನಾಗಿ ಹೇಳುವುದಾದರೆ ಬಿಜೆಪಿಯಲ್ಲಿ ನಾಲ್ವರು ಸಿಎಂ ಆಗಬೇಕೆಂದಿದ್ದರು. ಅದರಲ್ಲಿ ಇಬ್ಬರು ಸಿಎಂ ಆಗಿದ್ದಾರೆ. ಇನ್ನು ಇಬ್ಬರು ಆಗಬಹುದು‌ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ಒಮಿಕ್ರೋನ್​​​ ವೈರಸ್: ವೈದ್ಯರು ನೀಡಿರುವ ಸಲಹೆ ಸೂಚನೆಗಳು

ಹುಬ್ಬಳ್ಳಿ : ಬಿಜೆಪಿ ನೇತೃತ್ವದ ಸರ್ಕಾರ ಜನ ಸಾಮಾನ್ಯರಿಗೆ ಸ್ಪಂದಿಸದ ಸರ್ಕಾರ. ಹಾನಗಲ್​​​ನಲ್ಲಿ ಹಣ, ಅಧಿಕಾರಿ, ತೋಳು ಬಲ ಪ್ರದರ್ಶನ ಮಾಡಿದ್ದರು. ಎಲ್ಲ ರೀತಿಯ ಭಯ ಪಡಿಸುವ ಪ್ರಯತ್ನವನ್ನು ಸಿಎಂ ಮಾಡಿದ್ದರು. ಆದರೂ ಅವರ ಸ್ವ ಕ್ಷೇತ್ರದಲ್ಲಿ ಜನರು ಬುದ್ಧಿ ಕಲಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬಿಕೆ ಹರಿಪ್ರಸಾದ್

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಚಳವಳಿಯನ್ನು ಹತ್ತಿಕ್ಕುವ ಕೆಲಸವನ್ನು ಮೋದಿ ಮಾಡಿದ್ದರು. ಪ್ರತಿಭಟನೆ ಮಾಡಿದ ರೈತರನ್ನು ಪಾಕಿಸ್ತಾನಿಗಳು, ಕಲಿಸ್ತಾನಿಗಳು ಎಂದೇಳಿದ್ದರು. ಆದರೆ, ಯಾವುದೇ ಚರ್ಚೆ ಇಲ್ಲದೇ ಮಸೂದೆಯನ್ನು ವಾಪಸ್ ಪಡೆದಿದ್ದಾರೆ ಎಂದು ಲೇವಡಿ ಮಾಡಿದರು.

ಪ್ರವಾಹದಿಂದ ಬಹಳಷ್ಟು ಹಾನಿಯಾಗಿದೆ. ಇದರ ಮಧ್ಯೆ ಯಾವುದೇ ಪರಿಹಾರಕ್ಕೆ ಸರ್ಕಾರ ಮುಂದಾಗಿಲ್ಲ. ಅದರ ಬದಲು ನಿನ್ನೆ ಇಬ್ಬರು ಶಾಸಕರು ಕುಸ್ತಿ ಆಡಿದನ್ನು ನೋಡಿದ್ದೇವೆ ಎಂದು ಬಿಜೆಪಿ ಶಾಸಕರ ಜಗಳಕ್ಕೆ ಹರಿಪ್ರಸಾದ್ ವ್ಯಂಗ್ಯವಾಡಿದರು.

ನಾನು ಬಿಜೆಪಿ ಸದಸ್ಯನಲ್ಲ. ಆದರೂ ರಾಜಕೀಯವಾಗಿ ಕಾರ್ಯಕರ್ತನಾಗಿ ಹೇಳುವುದಾದರೆ ಬಿಜೆಪಿಯಲ್ಲಿ ನಾಲ್ವರು ಸಿಎಂ ಆಗಬೇಕೆಂದಿದ್ದರು. ಅದರಲ್ಲಿ ಇಬ್ಬರು ಸಿಎಂ ಆಗಿದ್ದಾರೆ. ಇನ್ನು ಇಬ್ಬರು ಆಗಬಹುದು‌ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ಒಮಿಕ್ರೋನ್​​​ ವೈರಸ್: ವೈದ್ಯರು ನೀಡಿರುವ ಸಲಹೆ ಸೂಚನೆಗಳು

Last Updated : Dec 2, 2021, 6:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.