ಧಾರವಾಡ: ಕೋಮು ಗಲಭೆಗೆ ಸಂಚು ನಡೆಸಿದ ಆರೋಪದ ಮೇಲೆ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಸೇರಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಮಸೀದಿ ಬಾಗಿಲಿಗೆ ಹಂದಿ ಕಟ್ಟಿದ ಆರೋಪದ ಮೇಲೆ ನಾಲ್ವರಿಗೂ ಪೊಲೀಸರು ಕೈಗೆ ಕೋಳ ಹಾಕಿದ್ದಾರೆ.
ಧಾರವಾಡ ತಾಲೂಕಿನ ಬಾಡ ಗ್ರಾಮದ ಮುಸ್ಲಿಂಮರ ಮಸೀದಿ ಬಾಗಿಲಿಗೆ ಹಂದಿಯನ್ನು ಕಟ್ಟಿ ಆರೋಪಿಗಳು ಪರಾರಿಯಾಗಿದ್ದರು. ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಕೃಷ್ಣಾ ದ್ಯಾಮಣ್ಣ ಕೊಳ್ಳಾನಟ್ಟಿ, ಬಸವರಾಜ ಕುಂದರಗಿ, ಮಂಜುನಾಥ ಪರಸಪ್ಪನವರ, ಆನಂದ ಅಗಸಿಮನಿ ಬಂಧಿತ ಆರೋಪಿಗಳಾಗಿದ್ದಾರೆ. ಜುಲೈ 5ನೇ ತಾರೀಖು ರಾತ್ರಿ ವೇಳೆ ಮಸೀದಿ ಬಾಗಿಲಿಗೆ ಹಂದಿ ಕಟ್ಟಿ ಪರಾರಿಯಾಗಿದ್ದರು. ಬಾಡ ಗ್ರಾಮದ ಜಮೀನು ವಿವಾದದಲ್ಲಿ ಗ್ರಾಮಸ್ಥರೊಂದಿಗೆ ಮನಸ್ತಾಪವಾದ ಹಿನ್ನೆಲೆ ಈ ಕೃತ್ಯ ನಡೆಸಲಾಗಿದೆ ಎನ್ನಲಾಗಿದೆ.
ಬಾಡ ಗ್ರಾಮದಲ್ಲಿ ಕೋಮು ಗಲಭೆ ಸೃಷ್ಠಿಸುವ ಕಾರಣ ಮಸೀದಿಯ ಬಾಗಿಲಿಗೆ ಹಂದಿಯನ್ನು ಕಟ್ಟಿದ್ದರು. ಕೃತ್ಯ ನಡೆದ ಒಂದು ತಿಂಗಳಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.