ETV Bharat / state

ಹುಬ್ಬಳ್ಳಿಯಲ್ಲಿ ಅನಾಥರು, ನಿರ್ಗತಿಕರ ಹಸಿವು ನೀಗಿಸುತ್ತಿರುವ ಯುವಕರ ತಂಡ!

author img

By

Published : Mar 23, 2020, 7:22 PM IST

ಹುಬ್ಬಳ್ಳಿ ನಗರದ ಗಣೇಶ ಪೇಟೆ ಯುವಕರ ತಂಡವೊಂದು ನಿರ್ಗತಿಕರಿಗೆ ಹಾಗೂ ಪ್ರಯಾಣಿಕರು, ಭಿಕ್ಷುಕರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದೆ.

hubli
ಮುಸ್ಲಿಂ ಯುವಕರ ತಂಡ

ಹುಬ್ಬಳ್ಳಿ: ಕೊರೊನಾ ಹಾವಳಿ ದಿನೇ ದಿನೆ ಹೆಚ್ಚುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಗಣೇಶ ಪೇಟೆ ಯುವಕರ ತಂಡವೊಂದು ನಿರ್ಗತಿಕರಿಗೆ ಹಾಗೂ ಪ್ರಯಾಣಿಕರು, ಭಿಕ್ಷುಕರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದೆ. ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕೊರೊನಾ ಭೀತಿಯಿಂದ ದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಅನೇಕ ಕ್ರಮಗಳನ್ನು ತೆಗೆದುಕೊಂಡು ಅವುಗಳನ್ನು ಜಾರಿ ಮಾಡಲಾಗುತ್ತಿದ್ದು, ರಾಜ್ಯದ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದೆ. ಈ ವೇಳೆ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ವಾಣಿಜ್ಯ ಮಳಿಗೆಗಳು ಆಯಾ ಜಿಲ್ಲೆಗಳ ಜಿಲ್ಲಾಡಳಿತದ ಆದೇಶದಂತೆ ಬಂದ್​ ಆಗಿವೆ. ಅದರಂತೆ ಧಾರವಾಡ ಜಿಲ್ಲೆಯಲ್ಲೂ ಕೊರೊನಾ ವೈರಸ್ ವ್ಯಕ್ತಿವೋರ್ವನಲ್ಲಿ ದೃಢಪಟ್ಟ ಹಿನ್ನೆಲೆ ಜಿಲ್ಲೆಯನ್ನು ಮಾ. 31ರವರೆಗೆ ಲಾಕ್ ಡೌನ್ ಮಾಡಲಾಗಿದೆ.

ಅನಾಥರು, ನಿರ್ಗತಿಕರ ಹಸಿವು ನೀಗಿಸುತ್ತಿರುವ ಯುವಕರ ತಂಡ

ಈ ಪರಿಣಾಮ ರೈಲ್ವೆ ನಿಲ್ದಾಣ, ಹಳೆ ಬಸ್ ನಿಲ್ದಾಣ, ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಅನಾಥರು, ಭೀಕ್ಷಕರು, ನಿರ್ಗತಿಕರು ಊಟದಿಂದ ವಂಚಿತರಾಗಿ ಹಸಿವಿನಿಂದ ಬಳಲುವಂತಾಗಿದೆ.

ಈ ಸಂದರ್ಭದಲ್ಲಿ ನಗರದ ಗಣೇಶ ಪೇಟೆಯ ಯುವಕರಾದ ರಸುಲ್ ಶಾಬ್ದಿ, ಫಯಾಜ್ ಕುಂದಗೋಳ, ಸದ್ದಾಂ ಕುರಹಟ್ಟಿ, ಪಾಪು ಸಾಬ್ದಿ ಹಾಗೂ ಸ್ನೇಹಿತರ ತಂಡವೊಂದು ಉಪಹಾರ ಒದಗಿಸುವ ಕೆಲಸ ಮಾಡುತ್ತಿದ್ದು, ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದವರ ಹಸಿವನ್ನು ನೀಗಿಸುತ್ತಿದೆ. ಇವರ ಈ ಕೆಲಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿ: ಕೊರೊನಾ ಹಾವಳಿ ದಿನೇ ದಿನೆ ಹೆಚ್ಚುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಗಣೇಶ ಪೇಟೆ ಯುವಕರ ತಂಡವೊಂದು ನಿರ್ಗತಿಕರಿಗೆ ಹಾಗೂ ಪ್ರಯಾಣಿಕರು, ಭಿಕ್ಷುಕರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದೆ. ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕೊರೊನಾ ಭೀತಿಯಿಂದ ದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಅನೇಕ ಕ್ರಮಗಳನ್ನು ತೆಗೆದುಕೊಂಡು ಅವುಗಳನ್ನು ಜಾರಿ ಮಾಡಲಾಗುತ್ತಿದ್ದು, ರಾಜ್ಯದ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದೆ. ಈ ವೇಳೆ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ವಾಣಿಜ್ಯ ಮಳಿಗೆಗಳು ಆಯಾ ಜಿಲ್ಲೆಗಳ ಜಿಲ್ಲಾಡಳಿತದ ಆದೇಶದಂತೆ ಬಂದ್​ ಆಗಿವೆ. ಅದರಂತೆ ಧಾರವಾಡ ಜಿಲ್ಲೆಯಲ್ಲೂ ಕೊರೊನಾ ವೈರಸ್ ವ್ಯಕ್ತಿವೋರ್ವನಲ್ಲಿ ದೃಢಪಟ್ಟ ಹಿನ್ನೆಲೆ ಜಿಲ್ಲೆಯನ್ನು ಮಾ. 31ರವರೆಗೆ ಲಾಕ್ ಡೌನ್ ಮಾಡಲಾಗಿದೆ.

ಅನಾಥರು, ನಿರ್ಗತಿಕರ ಹಸಿವು ನೀಗಿಸುತ್ತಿರುವ ಯುವಕರ ತಂಡ

ಈ ಪರಿಣಾಮ ರೈಲ್ವೆ ನಿಲ್ದಾಣ, ಹಳೆ ಬಸ್ ನಿಲ್ದಾಣ, ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಅನಾಥರು, ಭೀಕ್ಷಕರು, ನಿರ್ಗತಿಕರು ಊಟದಿಂದ ವಂಚಿತರಾಗಿ ಹಸಿವಿನಿಂದ ಬಳಲುವಂತಾಗಿದೆ.

ಈ ಸಂದರ್ಭದಲ್ಲಿ ನಗರದ ಗಣೇಶ ಪೇಟೆಯ ಯುವಕರಾದ ರಸುಲ್ ಶಾಬ್ದಿ, ಫಯಾಜ್ ಕುಂದಗೋಳ, ಸದ್ದಾಂ ಕುರಹಟ್ಟಿ, ಪಾಪು ಸಾಬ್ದಿ ಹಾಗೂ ಸ್ನೇಹಿತರ ತಂಡವೊಂದು ಉಪಹಾರ ಒದಗಿಸುವ ಕೆಲಸ ಮಾಡುತ್ತಿದ್ದು, ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದವರ ಹಸಿವನ್ನು ನೀಗಿಸುತ್ತಿದೆ. ಇವರ ಈ ಕೆಲಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.