ETV Bharat / state

ಕುಸಿಯುವ ಭೀತಿಯಲ್ಲಿ ಶತಮಾನದ ಶಾಲೆ: ಜೀವಭಯದಲ್ಲಿ ಪಾಠ ಕೇಳಬೇಕಿದೆ ಮಕ್ಕಳು!

ಹುಬ್ಬಳ್ಳಿಯ ಗೋಪನಕೊಪ್ಪ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು ಪ್ರತಿದಿನ ಜೀವ ಕೈಯಲ್ಲಿ ಹಿಡಿದು ಶಾಲೆಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

author img

By

Published : Jul 13, 2019, 9:54 AM IST

ಕುಸಿಯುತ್ತಿರುವ ಶತಮಾನದ ಶಾಲೆ

ಹುಬ್ಬಳ್ಳಿ: 1930ರಲ್ಲಿ ಸ್ಥಾಪನೆಯಾಗಿರುವ ಹುಬ್ಬಳ್ಳಿಯ ಗೋಪನಕೊಪ್ಪ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಆದ್ರೆ ಶಾಲಾ ಕಟ್ಟಡದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಹಂಚುಗಳು ಕಿತ್ತು ಹೋಗಿವೆ. ಮೇಲ್ಛಾವಣಿ ಸೋರುತ್ತಿದೆ. ಈಗಲೋ ಆಗಲೋ ಬಿದ್ದು ಹೋಗುವಂತಿದೆ ಈ ಶಾಲಾ ಕಟ್ಟಡ. ಇದರಲ್ಲೇ ಮಕ್ಕಳು ಜೀವದ ಹಂಗು ತೊರೆದು ಪಾಠ ಕಲಿಯುತ್ತಿದ್ದಾರೆ.

ಅಲ್ಲದೇ ಇಂತಹ ಅವ್ಯವಸ್ಥೆ ಕಂಡರೂ ಕಾಣದಂತೆ ವೃತ್ತಿ ಜೀವನವನ್ನು ನಡೆಸುತ್ತಿರುವ ಶಿಕ್ಷಕರ ಗೋಳು ಹೇಳತೀರದು. ಬಹುಮಹಡಿ‌ ಕಟ್ಟಡ ಕುಸಿದು ಬಿದ್ದರೂ ಕೂಡ ಶಾಲೆಯ ಅವ್ಯವಸ್ಥೆ ಬಗ್ಗೆ ಹೇಳೋರಿಲ್ಲ, ಕೇಳೋರಿಲ್ಲ. ಇನ್ನು ಕಟ್ಟಡ ಹಾಳಾಗಿರುವುದರಿಂದ ಸಂಜೆಯಾದ್ರೆ ಸಾಕು ಪುಂಡರು, ಪುಡಾರಿಗಳು ಸೇರಿಕೊಂಡು ಅನೈತಿಕ ಚಟುವಟಿಕೆ ನಡೆಸುವುದರ ಜೊತೆಗೆ ಮದ್ಯಪಾನ, ಧೂಮಪಾನ ಮಾಡ್ತಾರೆ. ಹಾಗೇ ಇಸ್ಪೀಟ್​​ ಆಡುತ್ತಾರೆ ಎನ್ನಲಾಗಿದೆ. ಎಲ್ಲವನ್ನೂ ಮುಂಜಾನೆ ಬಂದು ಸ್ವತಃ ಶಿಕ್ಷಕರೇ ಕ್ಲೀನ್​​ ಮಾಡುತ್ತಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಶಾಸಕರಿಗೆ ಶಿಕ್ಷಕರು, ಶಾಲೆಯ ಕಮಿಟಿಯ ಅಧ್ಯಕ್ಷರು ಮನವಿ ಮಾಡಿದ್ರೂ ಆಯಿತು ಮಾಡೋಣ ಅಂತಾ ಹಾರಿಕೆ ಉತ್ತರ ನೀಡುತ್ತಾಂತೆ.

ಕುಸಿಯುತ್ತಿರುವ ಶತಮಾನದ ಶಾಲೆ

ಇನ್ನು ಮಳೆಗಾಲ ಬೇರೆ ಇರೋದರಿಂದ ಶಿಥಿಲಗೊಂಡಿರುವ ಕಟ್ಟಡದ ಗೋಡೆಗಳು ಕುಸಿಯುವ ಸಂಭವ ಇದೆ. ಮಕ್ಕಳು ಅದೇ ಕಟ್ಟಡದ ಪಕ್ಕದಲ್ಲಿ ಆಟವಾಡುತ್ತಾರೆ. ಶಾಲೆಯ ಮುಂದೆ ಇರುವ ಕಾಂಪೌಂಡ್ ಸಹ ಕುಸಿಯುವ ಹಂತಕ್ಕೆ ತಲುಪಿದೆ. ಇನ್ನಾದರೂ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳು, ಶಾಸಕರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಪೋಷಕರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

ಹುಬ್ಬಳ್ಳಿ: 1930ರಲ್ಲಿ ಸ್ಥಾಪನೆಯಾಗಿರುವ ಹುಬ್ಬಳ್ಳಿಯ ಗೋಪನಕೊಪ್ಪ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಆದ್ರೆ ಶಾಲಾ ಕಟ್ಟಡದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಹಂಚುಗಳು ಕಿತ್ತು ಹೋಗಿವೆ. ಮೇಲ್ಛಾವಣಿ ಸೋರುತ್ತಿದೆ. ಈಗಲೋ ಆಗಲೋ ಬಿದ್ದು ಹೋಗುವಂತಿದೆ ಈ ಶಾಲಾ ಕಟ್ಟಡ. ಇದರಲ್ಲೇ ಮಕ್ಕಳು ಜೀವದ ಹಂಗು ತೊರೆದು ಪಾಠ ಕಲಿಯುತ್ತಿದ್ದಾರೆ.

ಅಲ್ಲದೇ ಇಂತಹ ಅವ್ಯವಸ್ಥೆ ಕಂಡರೂ ಕಾಣದಂತೆ ವೃತ್ತಿ ಜೀವನವನ್ನು ನಡೆಸುತ್ತಿರುವ ಶಿಕ್ಷಕರ ಗೋಳು ಹೇಳತೀರದು. ಬಹುಮಹಡಿ‌ ಕಟ್ಟಡ ಕುಸಿದು ಬಿದ್ದರೂ ಕೂಡ ಶಾಲೆಯ ಅವ್ಯವಸ್ಥೆ ಬಗ್ಗೆ ಹೇಳೋರಿಲ್ಲ, ಕೇಳೋರಿಲ್ಲ. ಇನ್ನು ಕಟ್ಟಡ ಹಾಳಾಗಿರುವುದರಿಂದ ಸಂಜೆಯಾದ್ರೆ ಸಾಕು ಪುಂಡರು, ಪುಡಾರಿಗಳು ಸೇರಿಕೊಂಡು ಅನೈತಿಕ ಚಟುವಟಿಕೆ ನಡೆಸುವುದರ ಜೊತೆಗೆ ಮದ್ಯಪಾನ, ಧೂಮಪಾನ ಮಾಡ್ತಾರೆ. ಹಾಗೇ ಇಸ್ಪೀಟ್​​ ಆಡುತ್ತಾರೆ ಎನ್ನಲಾಗಿದೆ. ಎಲ್ಲವನ್ನೂ ಮುಂಜಾನೆ ಬಂದು ಸ್ವತಃ ಶಿಕ್ಷಕರೇ ಕ್ಲೀನ್​​ ಮಾಡುತ್ತಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಶಾಸಕರಿಗೆ ಶಿಕ್ಷಕರು, ಶಾಲೆಯ ಕಮಿಟಿಯ ಅಧ್ಯಕ್ಷರು ಮನವಿ ಮಾಡಿದ್ರೂ ಆಯಿತು ಮಾಡೋಣ ಅಂತಾ ಹಾರಿಕೆ ಉತ್ತರ ನೀಡುತ್ತಾಂತೆ.

ಕುಸಿಯುತ್ತಿರುವ ಶತಮಾನದ ಶಾಲೆ

ಇನ್ನು ಮಳೆಗಾಲ ಬೇರೆ ಇರೋದರಿಂದ ಶಿಥಿಲಗೊಂಡಿರುವ ಕಟ್ಟಡದ ಗೋಡೆಗಳು ಕುಸಿಯುವ ಸಂಭವ ಇದೆ. ಮಕ್ಕಳು ಅದೇ ಕಟ್ಟಡದ ಪಕ್ಕದಲ್ಲಿ ಆಟವಾಡುತ್ತಾರೆ. ಶಾಲೆಯ ಮುಂದೆ ಇರುವ ಕಾಂಪೌಂಡ್ ಸಹ ಕುಸಿಯುವ ಹಂತಕ್ಕೆ ತಲುಪಿದೆ. ಇನ್ನಾದರೂ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳು, ಶಾಸಕರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಪೋಷಕರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

Intro:ಹುಬ್ಬಳಿBody:ಸ್ಲಗ್: ಕುಸಿಯುತ್ತಿರುವ ಶತಮಾನದ ಶಾಲೆ..



ಹುಬ್ಬಳ್ಳಿ :- ರಾಜ್ಯ ಸರ್ಕಾರ ಶಾಲೆಯ ಉಳಿವಿಗಾಗಿ ಹಲವಾರು ಯೋಜನೆಗಳನ್ನು ತಂದ್ರು ಸಹ ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಮಾತ್ರ ಕೈಯಲ್ಲಿ ಜೀವ ಹಿಡಿದಕೊಂಡು ಬದುಕುವ ಪ್ರಸಂಗ ಬಂದಿದೆ. ಅದೂ ಶತಮಾನದ ಶಾಲೆ ಸ್ವತಂತ್ರ ಪೂರ್ವದಲ್ಲೆ ಕಟ್ಟಿಸಿದ ಶಾಲೆ ಆ ಶಾಲೆಯು ಈಗ ಬಿಳ್ಳುವ ಸ್ಥಿತಿಯಲ್ಲಿದೆ.ಇಷ್ಟಕ್ಕೂ ಆ ಶಾಲೆ ಯಾವದು ? ಅದು ಹೇಗಿದೆ ಎಂಬುದನ್ನು ನಾವು ತೋರಸ್ತೇವಿ ನೋಡಿ......!!


ಹೌದು1930 ರಲ್ಲೆ ಸ್ಥಾಪನೆಯಾಗಿರುವ ಈ ಶಾಲೆಯು ಶತಮಾನೋತ್ಸವ ಆಚರಣೆಯ ಸಮೀಪದಲ್ಲಿದೆ, ಹುಬ್ಬಳ್ಳಿಯ ಗೋಪನಕೊಪ್ಪ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ ಆದ್ರೇ ಪರಿಸ್ಥಿತಿ ಮಾತ್ರ ಹದೆಗೆಟ್ಟಿದ್ದು, ಕಿತ್ತು ಹೋಗಿವೆ ಹಂಚುಗಳು, ಎಲ್ಲೆಂದರಲ್ಲಿ ಸೋರುತ್ತಿರುವ ಮೇಲ್ಚಾವಣಿ, ಈಗಲೋ ಆಗಲೋ ಬಿದ್ದು ಹೋಗುವ ಶಾಲಾ ಕಟ್ಟಡ ಇದನ್ನೆಲ್ಲಾ ನೋಡಿದರೇ ಇಂತಹ ಹಾಳು ಬಿದ್ದಿರುವ ಕಟ್ಟಡದಲ್ಲಿ ಮಕ್ಕಳು ಜೀವದ ಹಂಗು ತೊರೆದು ಶಾಲೆ ಕಲೆಯಬೇಕಾಗಿದ್ದು ವಿಪರ್ಯಾಸವೆ ಸರಿ.!
ಈಗಲೋ ಆಗಲೋ ಬಿದ್ದು ಹೋಗುವ ಕಟ್ಟಡದಲ್ಲಿ ಜೀವದ ಭಯ ತೊರೆದು ಕಲಿಯಬೇಕಾಗಿರುವುದು ಮಕ್ಕಳ ದುರಾದೃಷ್ಟ ಅಲ್ಲದೇ ಇಂತಹ ವ್ಯವಸ್ಥೆ ಕಂಡರು ಕಾಣದಂತೆ ವೃತ್ತಿ ಜೀವನವನ್ನು ನಡೆಸುತ್ತಿರುವ ಶಿಕ್ಷಕರ ಗೋಳು ಹೇಳ ತೀರಾದಾಗಿದೆ.ಗುಣಮಟ್ಟ ಜೊತೆಗೆ ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ನಾಮ ಮಾತ್ರಕ್ಕೆ ಹಲವಾರು ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡುತ್ತಿದ್ದರು.ಯಾವುದೇ ಕಿಂಚಿತ್ತೂ ಕೂಡ ಪ್ರಯೋಜನವಾಗುತ್ತಿಲ್ಲ, ಬಹುಮಹಡಿ‌ ಕಟ್ಟಡ ಕುಸಿದು ಬಿದ್ದರೂ ಕೂಡ ಶಾಲೆಯ ಅವ್ಯವಸ್ಥೆ ಬಗ್ಗೆ ಹೇಳೋರಿಲ್ಲ ಕೇಳೋರಿಲ್ಲ. ಇನ್ನೂ ಸಂಜೆಯಾದ್ರೇಸಾಕು ಪುಂಡರು ಪುಡಾರಿಗಳು ಸೇರಿಕೊಂಡು ಅನೈತಿಕ ಚಟುವಟಿಕೆಗಳನ್ನು ಮಾಡುತ್ತಾರೇ, ಮದ್ಯಪಾನ ಸಿಗರೆಟ್, ಇಸ್ಪಿಟ್ ಆಡುತ್ತಾರೆ‌' ಎಲ್ಲವನ್ನೂ ಮುಂಜಾನೆ ಬಂದು ಸ್ವತಹ ಶಿಕ್ಷಕರೆ ಕ್ಲಿನ್ ಮಾಡುತ್ತಾರೆ,ಇಷ್ಟೆಲ್ಲಾ ಗೊತ್ತಿದ್ರು ಶಿಕ್ಷಣ ಇಲಾಖೆಗೆ ಹಾಗೂ ಸ್ಥಳಿಯ ಶಾಸಕರು ಹಾಗೂ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಅವರಿಗೆ ಸಹ ಶಿಕ್ಷಕರು ಶಾಲೆಯ ಕಮಿಟಿಯ ಅಧ್ಯಕ್ಷರು ಮನವಿ ಮಾಡಿದ್ರೂ ಆಯಿತು ಮಾಡೋಣ ಅಂತ ಹಾರಿಕೆ ಉತ್ತರ ನೀಡುತ್ತಾಂತೆ,

ಬೈಟ್:-ಸಿದ್ದರಾಮಯ್ಯೇಶ್ವರ ಹಾದಿಮನನಿ-(ಎಸ್ ಡಿಎಮ್ ಸಿತತ್ ಅಧ್ಯಕ್ಷ)

ಇನ್ನೂ ಮಳೆಗಾಲ ಬೇರೆ ಈ ಶಾಲೆಯ ಅವ್ಯವಸ್ಥೆ ಶೀತಲಗೊಂಡಿರುವ ಕಟ್ಟಡದ ಗೋಡೆಗಳು ಕುಸಿಯುವ ಸಂಭವ ಇದೇ ಮಕ್ಕಳು ಅದೇ ಕಟ್ಟಡದ ಪಕ್ಕದಲ್ಲಿ ಆಟವಾಡುತ್ತಾರೆ,ಮುಂಜಾಗ್ರತಾ ಕ್ರಮವಾಗಿ ಆ ಕಟ್ಟಡವನ್ನು ತೆರವುಗೋಳಿಸಿದ್ರೇ ಮಾತ್ರ ಮಕ್ಕಳು ಸ್ವಚ್ಛಂದವಾಗಿ ಆಟವಾಡಬಹುದು' ಮತ್ತು ಇಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕು ಮತ್ತು ಶಾಲೆಯ ಮುಂದೆ ಇರುವ ಕಂಪೌಂಡ್ ಸಹ ಕುಸಿಯುವ ಹಂತಕ್ಕೆ ತಲುಪಿದೆ ಎಂದು ಸಾರ್ವಜನಿಕರ ಹಾಗೂ ಶಿಕ್ಷಕರ ಒತ್ತಾಯವಾಗಿದೆ.......


ಬೈಟ್:- ಕುಬೇರ ಪವಾರ್ ಕನ್ನಡ ಪರ ಹೋರಾಟಗಾರ.ಹಾಗೂ ಸ್ಥಳೀಯ

ಒಟ್ಟಿನಲ್ಲಿ ರಾಜ್ಯ ಸರಕಾರ ಸಾಕಷ್ಟು ಕೋಟ್ಯಾಂತರ ರೂ ಖರ್ಚು ಮಾಡುತ್ತಿದೆ.ಶಿಕ್ಷಣ ಸುಧಾರಣೆಗೆ ಅನೇಕ ಯೋಜನೆಗಳನ್ನು ತರಿತ್ತೊದೆ ಆದ್ರೇ ಆ ಯೋಜನೆಗಳು ಮತ್ತಿ ಜಣ ಸಮರ್ಪಕವಾಗಿ ಸದುಪಯೋಗೊಳ್ಳದೇ ಇರೊದೆ ವಿಪರ್ಯಾಸ ಸಂಗತಿ ಹಾಗೂ ಸರಕಾರ ಒಳ್ಳೆಯ ಕಟ್ಟಡದ ಜೊತೆಗ ಆಟವಾಡಲು ಸ್ವಚ್ಛಂದ ಮೈದಾನ ನೀಡಿದ್ರೇ ಮಾತ್ರ ಸರಕಾರಿ ಶಾಲೆ ಉಳಿಯುತ್ತವೆ ಎಂಬುದು ಸಾರ್ವಜನಿಕ ಚಿಂತನೆಯಾಗಿದೆ..


_________________________



ಹುಬ್ಬಳ್ಳಿ: ಸ್ಟ್ರಿಂಜರ


ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.