ETV Bharat / state

ಭದ್ರಾ ಕಾಲುವೆ ನೀರು ಸಿಗದೆ ಒಣಗಿದ ಭತ್ತ : ನೀರಿಗಾಗಿ ಪಟ್ಟು ಹಿಡಿದು ರೈತರ ಪ್ರತಿಭಟನೆ

ಅಧಿಕಾರಿಗಳ ನಿರ್ಲಕ್ಷ್ಯತನದಿಂದ ದಾವಣಗೆರೆ ತಾಲೂಕಿನ ಕೊನೆ ಭಾಗದ ಕೆಲವು ರೈತರ ಜಮೀನುಗಳಿಗೆ ಭದ್ರಾ ಕಾಲುವೆಯಿಂದ ನೀರು ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ನೂರಾರು ರೈತರು ರಸ್ತೆ ತಡೆ ನಡೆಸಿದರು.

author img

By

Published : Apr 3, 2019, 4:56 PM IST

ಕುಂದುವಾಡ ಕ್ರಾಸ್​ ಬಳಿಯ ಹೆದ್ದಾರಿ ತಡೆ ನಡೆಸಿದ ರೈತರು

ದಾವಣಗೆರೆ: ತಾಲೂಕಿನ ಕೊನೆ ಭಾಗದ ಕೆಲವು ರೈತರ ಜಮೀನುಗಳಿಗೆ ಭದ್ರಾ ಕಾಲುವೆಯಿಂದ ನೀರು ತಲುಪುತ್ತಿಲ್ಲ ಎಂದು ಆರೋಪಿಸಿರುವ ಸ್ಥಳೀಯ ರೈತರು ನಗರದ ಕುಂದುವಾಡ ಕ್ರಾಸ್​ ಬಳಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.


ಕುಂದುವಾಡ ಕ್ರಾಸ್​ ಬಳಿಯ ಹೆದ್ದಾರಿ ತಡೆ ನಡೆಸಿದ ರೈತರು

ತಾಲೂಕಿನ ಕುಂದುವಾಡ, ಬಾತಿ, ಅವರಗೊಳ್ಳ, ಕಕ್ಕರಗೊಳ್ಳ, ಸತ್ಯನಾರಾಯಣ ಕ್ಯಾಂಪ್, ಬನ್ನಿಕೋಡು, ಬೇವಿನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಭದ್ರಾ ಜಲಾಶಯ ನೀರು ತಲುಪುತ್ತಿಲ್ಲ.‌ ಎರಡು ತಿಂಗಳಿಂದ ಕಷ್ಟಪಟ್ಟು ಭತ್ತ ಬೆಳೆಯುತ್ತಿದ್ದು ಭದ್ರಾ ಕಾಲುವೆಯಿಂದ ನೀರು ಬರದೇ ಭತ್ತ ನೆಲಕಚ್ಚುತ್ತಿದೆ. ಇದರಿಂದ ರೈತರು ಕಣ್ಣೀರು ಸುರಿಸುತ್ತಿದ್ದಾರೆ.

Protest against officials
ಹೆದ್ದಾರಿ ತಡೆದಿದ್ದರಿಂದ ಉಂಟಾದ ಟ್ರಾಫಿಕ್​ ಜಾಮ್​

ಈವರೆಗೆ ಭತ್ತ ನಾಟಿ ಕಾರ್ಯ ನಡೆದಿದ್ದು ಸುಮಾರು ಎರಡ್ಮೂರು ತಿಂಗಳು ಭತ್ತವನ್ನು ಕಾಪಾಡಿಕೊಂಡು ಬಂದಿದ್ದಾರೆ.‌ ಆದರೆ, ಈಗ ಭತ್ತಕ್ಕೆ ನೀರು ಅನಿವಾರ್ಯ. ನೀರು ಸಿಗದಿದ್ದರೆ ಶೇ. 50ರಷ್ಟು ಭತ್ತ ಹಾಳಾಗುವ ಸಾಧ್ಯತೆ ಇದೆ.‌ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

Protest against officials
ಕುಂದುವಾಡ ಕ್ರಾಸ್​ ಬಳಿಯ ಹೆದ್ದಾರಿ ತಡೆ ನಡೆಸಿದ ರೈತರು

ದಾವಣಗೆರೆ: ತಾಲೂಕಿನ ಕೊನೆ ಭಾಗದ ಕೆಲವು ರೈತರ ಜಮೀನುಗಳಿಗೆ ಭದ್ರಾ ಕಾಲುವೆಯಿಂದ ನೀರು ತಲುಪುತ್ತಿಲ್ಲ ಎಂದು ಆರೋಪಿಸಿರುವ ಸ್ಥಳೀಯ ರೈತರು ನಗರದ ಕುಂದುವಾಡ ಕ್ರಾಸ್​ ಬಳಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.


ಕುಂದುವಾಡ ಕ್ರಾಸ್​ ಬಳಿಯ ಹೆದ್ದಾರಿ ತಡೆ ನಡೆಸಿದ ರೈತರು

ತಾಲೂಕಿನ ಕುಂದುವಾಡ, ಬಾತಿ, ಅವರಗೊಳ್ಳ, ಕಕ್ಕರಗೊಳ್ಳ, ಸತ್ಯನಾರಾಯಣ ಕ್ಯಾಂಪ್, ಬನ್ನಿಕೋಡು, ಬೇವಿನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಭದ್ರಾ ಜಲಾಶಯ ನೀರು ತಲುಪುತ್ತಿಲ್ಲ.‌ ಎರಡು ತಿಂಗಳಿಂದ ಕಷ್ಟಪಟ್ಟು ಭತ್ತ ಬೆಳೆಯುತ್ತಿದ್ದು ಭದ್ರಾ ಕಾಲುವೆಯಿಂದ ನೀರು ಬರದೇ ಭತ್ತ ನೆಲಕಚ್ಚುತ್ತಿದೆ. ಇದರಿಂದ ರೈತರು ಕಣ್ಣೀರು ಸುರಿಸುತ್ತಿದ್ದಾರೆ.

Protest against officials
ಹೆದ್ದಾರಿ ತಡೆದಿದ್ದರಿಂದ ಉಂಟಾದ ಟ್ರಾಫಿಕ್​ ಜಾಮ್​

ಈವರೆಗೆ ಭತ್ತ ನಾಟಿ ಕಾರ್ಯ ನಡೆದಿದ್ದು ಸುಮಾರು ಎರಡ್ಮೂರು ತಿಂಗಳು ಭತ್ತವನ್ನು ಕಾಪಾಡಿಕೊಂಡು ಬಂದಿದ್ದಾರೆ.‌ ಆದರೆ, ಈಗ ಭತ್ತಕ್ಕೆ ನೀರು ಅನಿವಾರ್ಯ. ನೀರು ಸಿಗದಿದ್ದರೆ ಶೇ. 50ರಷ್ಟು ಭತ್ತ ಹಾಳಾಗುವ ಸಾಧ್ಯತೆ ಇದೆ.‌ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

Protest against officials
ಕುಂದುವಾಡ ಕ್ರಾಸ್​ ಬಳಿಯ ಹೆದ್ದಾರಿ ತಡೆ ನಡೆಸಿದ ರೈತರು
Intro:(ಸ್ಟ್ರಿಂಜರ್: ಮಧುದಾವಣಗೆರೆ) ದಾವಣಗೆರೆ; ತಾಲ್ಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ಭದ್ರಾ ಕಾಲುವೆಯಿಂದ ನೀರು ತಲುಪದ ಹಿನ್ನಲೆ ರೈತರು ಕಣ್ಣಿರಿಡುವ ಪರಿಸ್ಥಿತಿ ಎದುರಾಗಿದೆ. ಎರಡು ತಿಂಗಳಿಂದ ಕಷ್ಟಪಟ್ಟು ಭತ್ತ ಬೆಳೆಯುತ್ತಿದ್ದ ರೈತರು ಸಂಕಷ್ಠ ಎದುರಿಸುತ್ತಿದ್ದಾರೆ. ಕೊನೆ ಭಾಗದ ಜಮೀನುಗಳಿಗೆ ನೀರು ತಲುಪುದೇ ನೀರಿಗಾಗಿ ಹೈರಾಣಾಗಿದ್ದ, ರೈತರು ಇಂದು ದಾವಣಗೆರೆ ನಗರದ ಕುಂದುವಾಡ ಕ್ರಾಸ್ ಬಳಿ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹೌದು.. ದಾವಣಗೆರೆ ತಾಲ್ಲೂಕಿನ ಕುಂದುವಾಡ, ಬಾತಿ, ಅವರಗೊಳ್ಳ, ಕಕ್ಕರಗೊಳ್ಳ, ಸತ್ಯನಾರಾಯಣ ಕ್ಯಾಂಪ್, ಬನ್ನಿಕೋಡು, ಬೇವಿನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಭದ್ರಾ ಜಲಾಶಯ ನೀರು ತಲುಪುತ್ತಿಲ್ಲ.‌ಈ ಕಾರಣ ಇಲ್ಲಿನ ರೈತರ ಗೋಳು ಹೇಳತೀರದಾಗಿದೆ. ಕಳೆದ ಜನವರಿ-ಫೆಬ್ರುವರಿಯಲ್ಲಿ ಭತ್ತ ನಾಟಿ ಕಾರ್ಯ ನಡೆದಿದ್ದು ಸುಮಾರು ಎರಡ್ಮೂರು ತಿಂಗಳು ಭತ್ತವನ್ನು ಕಾಪಾಡಿಕೊಂಡು ಬಂದಿದ್ದಾರೆ.‌ ಸದ್ಯ ಭತ್ತ ಹೊಡೆ ಬಿಚ್ಚುವ ಸಮಯ ಇದಾಗಿದ್ದು ಈಗ ಭತ್ತಕ್ಕೆ ನೀರು ಸಿಗದಿದ್ದರೆ 50% ಭತ್ತ ಹಾಳಾಗುವ ಸಾಧ್ಯತೆ ಇದೆ.‌ ಹೀಗಾಗಿ ಹಗಲಿರುಳು ಪರದಾಡಿದರು ಕಾಲುವೆಯಲ್ಲಿ ನೀರು ಸಿಗುತ್ತಿಲ್ಲ. ಮೇಲ್ಬಾಗದಲ್ಲಿ‌ ಪಂಪ್ ಸೆಟ್ ಸೇರಿದಂತೆ ರೋಟೇಶನ್ ಪದ್ದತಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕೊನೆ ಭಾಗಕ್ಕೆ ನೀರು ಪೂರೈಕೆ ಆಗುತ್ತಿಲ್ಲ ಎಂಬುದು ರೈತರ ಗೋಳಾಗಿದೆ. ಹೆದ್ದಾರಿ ತಡೆದು ಆಕ್ರೋಶ ಭತ್ತ ಗದ್ದೆಗಳು ಒಣಗುತ್ತಿದ್ದು, ಈ ಹಿನ್ನಲೆ ರೈತರು ದಾವಣಗೆರೆ ನೀರಾವರಿ ಇಲಾಖೆಗೆ ತೆರಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ನೀರಾವರಿ ಇಲಾಖೆ ಇಂಜಿನಿಯರ್ ಕೊಟ್ರೇಶ್ ಅವರು ಕೇಬಲ ಕಚೇರಿಯಲ್ಲಿ ಕೂರುತ್ತಾರೆ ರೈತರ ಸಮಸ್ಯೆ ಕೇಳಲ್ಲ. ಕಾಲುವೆಗಳಿಗೆ ತೆರಳಿ ಪರಿಶೀಲನೆ‌ ಮಾಡುವುದಿಲ್ಲ ಎಂಬುದು ರೈತರ ಆರೋಪವಾಗಿದೆ. ಮೇಲ್ಬಾಗದಲ್ಲಿ ಸರಿಯಾಗಿ ರೋಟೇಶನ್ ಪದ್ದತಿ ಅನುಸರಣೆ ಮಾಡದಿರುವುದು ಹಾಗೂ ಪಂಪ್ ಸೆಟ್ ತೆರಳುವುಗೊಳಿಸದೇ ಇರುವುದು ಮತ್ತು ಅಧಿಕಾರಿ ವರ್ಗ ಕಟ್ಟುನಿಟ್ಟಿನ ಕ್ರಮ‌ ಕೈಗೊಳ್ಳದೇ ಇರುವುದರಿಂದ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಇದರಿಂದ ರೈತರು ಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ನೀರಾವರಿ ಅಧಿಕಾರಿಗೆ ರೈತರ ತರಾಟೆ ಸರಿಯಾದ ರೋಟೆಶನ್ ಪದ್ದತಿ ಅನುಸರಿಸದೇ ಕಟ್ಟುನಿಟ್ಟಿನ ನೀರಾವರಿ ಕ್ರಮ ಬಳಸದೇ ಇರುವುದನ್ನ ಖಂಡಿಸಿದ ರೈತರು ನೀರಾವರಿ ಇಲಾಖೆ ಅಭಿಯಂತರು ಕೊಟ್ರೆಶ್ ಅವರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ಕುಂದುವಾಡ ಕ್ರಾಸ್ ಬಳಿ ಕೆಲವೊತ್ತು ರಸ್ತೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸುಮಾರು ಒಂದು ಕಿ.ಮೀ ನಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದವು ಪ್ರತಿಭಟನೆ ಬಿಸಿಗೆ ವಾಹನ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಟ ಅನುಭವಿಸಿದರು. ಕೊನೆಯಲ್ಲಿ ಪೊಲೀಸರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಮಸ್ಯೆ ಸರಿಪಡಿಸುವುದಾಗಿ ಹೇಳಿದ ಬಳಿಕ ರೈತರು ಪ್ರತಿಭಟನೆ ವಾಪಾಸ್ ಪಡೆದು ಕಾಲುವೆ ಬಳಿ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು.. ಬೈಟ್1: ಹನುಮಂತಪ್ಪ.. ರೈತ ಮುಖಂಡ ಬೈಟ್2: ಷಣ್ಮುಖಯ್ಯ. ರೈತ ಮುಖಂಡ


Body:(ಸ್ಟ್ರಿಂಜರ್: ಮಧುದಾವಣಗೆರೆ) ದಾವಣಗೆರೆ; ತಾಲ್ಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ಭದ್ರಾ ಕಾಲುವೆಯಿಂದ ನೀರು ತಲುಪದ ಹಿನ್ನಲೆ ರೈತರು ಕಣ್ಣಿರಿಡುವ ಪರಿಸ್ಥಿತಿ ಎದುರಾಗಿದೆ. ಎರಡು ತಿಂಗಳಿಂದ ಕಷ್ಟಪಟ್ಟು ಭತ್ತ ಬೆಳೆಯುತ್ತಿದ್ದ ರೈತರು ಸಂಕಷ್ಠ ಎದುರಿಸುತ್ತಿದ್ದಾರೆ. ಕೊನೆ ಭಾಗದ ಜಮೀನುಗಳಿಗೆ ನೀರು ತಲುಪುದೇ ನೀರಿಗಾಗಿ ಹೈರಾಣಾಗಿದ್ದ, ರೈತರು ಇಂದು ದಾವಣಗೆರೆ ನಗರದ ಕುಂದುವಾಡ ಕ್ರಾಸ್ ಬಳಿ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹೌದು.. ದಾವಣಗೆರೆ ತಾಲ್ಲೂಕಿನ ಕುಂದುವಾಡ, ಬಾತಿ, ಅವರಗೊಳ್ಳ, ಕಕ್ಕರಗೊಳ್ಳ, ಸತ್ಯನಾರಾಯಣ ಕ್ಯಾಂಪ್, ಬನ್ನಿಕೋಡು, ಬೇವಿನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಭದ್ರಾ ಜಲಾಶಯ ನೀರು ತಲುಪುತ್ತಿಲ್ಲ.‌ಈ ಕಾರಣ ಇಲ್ಲಿನ ರೈತರ ಗೋಳು ಹೇಳತೀರದಾಗಿದೆ. ಕಳೆದ ಜನವರಿ-ಫೆಬ್ರುವರಿಯಲ್ಲಿ ಭತ್ತ ನಾಟಿ ಕಾರ್ಯ ನಡೆದಿದ್ದು ಸುಮಾರು ಎರಡ್ಮೂರು ತಿಂಗಳು ಭತ್ತವನ್ನು ಕಾಪಾಡಿಕೊಂಡು ಬಂದಿದ್ದಾರೆ.‌ ಸದ್ಯ ಭತ್ತ ಹೊಡೆ ಬಿಚ್ಚುವ ಸಮಯ ಇದಾಗಿದ್ದು ಈಗ ಭತ್ತಕ್ಕೆ ನೀರು ಸಿಗದಿದ್ದರೆ 50% ಭತ್ತ ಹಾಳಾಗುವ ಸಾಧ್ಯತೆ ಇದೆ.‌ ಹೀಗಾಗಿ ಹಗಲಿರುಳು ಪರದಾಡಿದರು ಕಾಲುವೆಯಲ್ಲಿ ನೀರು ಸಿಗುತ್ತಿಲ್ಲ. ಮೇಲ್ಬಾಗದಲ್ಲಿ‌ ಪಂಪ್ ಸೆಟ್ ಸೇರಿದಂತೆ ರೋಟೇಶನ್ ಪದ್ದತಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕೊನೆ ಭಾಗಕ್ಕೆ ನೀರು ಪೂರೈಕೆ ಆಗುತ್ತಿಲ್ಲ ಎಂಬುದು ರೈತರ ಗೋಳಾಗಿದೆ. ಹೆದ್ದಾರಿ ತಡೆದು ಆಕ್ರೋಶ ಭತ್ತ ಗದ್ದೆಗಳು ಒಣಗುತ್ತಿದ್ದು, ಈ ಹಿನ್ನಲೆ ರೈತರು ದಾವಣಗೆರೆ ನೀರಾವರಿ ಇಲಾಖೆಗೆ ತೆರಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ನೀರಾವರಿ ಇಲಾಖೆ ಇಂಜಿನಿಯರ್ ಕೊಟ್ರೇಶ್ ಅವರು ಕೇಬಲ ಕಚೇರಿಯಲ್ಲಿ ಕೂರುತ್ತಾರೆ ರೈತರ ಸಮಸ್ಯೆ ಕೇಳಲ್ಲ. ಕಾಲುವೆಗಳಿಗೆ ತೆರಳಿ ಪರಿಶೀಲನೆ‌ ಮಾಡುವುದಿಲ್ಲ ಎಂಬುದು ರೈತರ ಆರೋಪವಾಗಿದೆ. ಮೇಲ್ಬಾಗದಲ್ಲಿ ಸರಿಯಾಗಿ ರೋಟೇಶನ್ ಪದ್ದತಿ ಅನುಸರಣೆ ಮಾಡದಿರುವುದು ಹಾಗೂ ಪಂಪ್ ಸೆಟ್ ತೆರಳುವುಗೊಳಿಸದೇ ಇರುವುದು ಮತ್ತು ಅಧಿಕಾರಿ ವರ್ಗ ಕಟ್ಟುನಿಟ್ಟಿನ ಕ್ರಮ‌ ಕೈಗೊಳ್ಳದೇ ಇರುವುದರಿಂದ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಇದರಿಂದ ರೈತರು ಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ನೀರಾವರಿ ಅಧಿಕಾರಿಗೆ ರೈತರ ತರಾಟೆ ಸರಿಯಾದ ರೋಟೆಶನ್ ಪದ್ದತಿ ಅನುಸರಿಸದೇ ಕಟ್ಟುನಿಟ್ಟಿನ ನೀರಾವರಿ ಕ್ರಮ ಬಳಸದೇ ಇರುವುದನ್ನ ಖಂಡಿಸಿದ ರೈತರು ನೀರಾವರಿ ಇಲಾಖೆ ಅಭಿಯಂತರು ಕೊಟ್ರೆಶ್ ಅವರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ಕುಂದುವಾಡ ಕ್ರಾಸ್ ಬಳಿ ಕೆಲವೊತ್ತು ರಸ್ತೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸುಮಾರು ಒಂದು ಕಿ.ಮೀ ನಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದವು ಪ್ರತಿಭಟನೆ ಬಿಸಿಗೆ ವಾಹನ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಟ ಅನುಭವಿಸಿದರು. ಕೊನೆಯಲ್ಲಿ ಪೊಲೀಸರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಮಸ್ಯೆ ಸರಿಪಡಿಸುವುದಾಗಿ ಹೇಳಿದ ಬಳಿಕ ರೈತರು ಪ್ರತಿಭಟನೆ ವಾಪಾಸ್ ಪಡೆದು ಕಾಲುವೆ ಬಳಿ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು.. ಬೈಟ್1: ಹನುಮಂತಪ್ಪ.. ರೈತ ಮುಖಂಡ ಬೈಟ್2: ಷಣ್ಮುಖಯ್ಯ. ರೈತ ಮುಖಂಡ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.