ETV Bharat / state

ಹರಿಹರ ನಗರಸಭೆ ಚುನಾವಣೆಗೆ ಹೈಟೆನ್ಷನ್​ ಫೈಟ್​: ನಾಳೆಯೇ ಮತದಾನ

author img

By

Published : May 28, 2019, 8:10 PM IST

ಹರಿಹರ ನಗರಸಭೆ ಚುನಾವಣೆ ಕಾವು ರಂಗೇರಿದೆ. ನಾಳೆ ಮತದಾನ ನಡೆಯಲಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಬಿಜೆಪಿ ಕೈ ಮತ್ತು ತೆನೆ ಹೊತ್ತ ಅಭ್ಯರ್ಥಿಗಳೂ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ.

ಹರಿಹರ ನಗರಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ

ದಾವಣಗೆರೆ :ಹರಿಹರ ನಗರಸಭೆ ಚುನಾವಣೆ ಕಾವು ರಂಗೇರಿದೆ. ನಾಳೆ ಮತದಾನ ನಡೆಯಲಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿ ಬಿಜೆಪಿ ಗೆಲುವಿಗೆ ತೀವ್ರ ಕಸರತ್ತು ನಡೆಸಿದೆ. ಬಿರುಸಿನ ಪ್ರಚಾರವನ್ನೂ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕೈ ಮತ್ತು ತೆನೆ ಹೊತ್ತ ಅಭ್ಯರ್ಥಿಗಳೂ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ.

ಹರಿಹರ ನಗರಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ

ಈ ನಗರಸಭೆಯಲ್ಲಿ ಒಟ್ಟು 31 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್ 13, ಜೆಡಿಎಸ್ 11 ಸ್ಥಾನ ಪಡೆದಿದ್ದರೆ, ಕೆಜೆಪಿ 4, ಇಬ್ಬರು ಪಕ್ಷೇತರರು ಗೆದ್ದಿದ್ದರು. ಆದ್ರೆ, ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿಯಿಂದ ಮಾಜಿ ಸಿಎಂ ಹೊರ ಬಂದು ಕೆಜೆಪಿ ಕಟ್ಟಿದ ಪರಿಣಾಮ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಕೆಜೆಪಿಯ ನಾಲ್ವರು ಅಭ್ಯರ್ಥಿಗಳು ಗೆದ್ದಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆಗ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಿದ್ದವು. ಕಳೆದ ಬಾರಿ ಬಿಜೆಪಿಯ ಒಳಜಗಳದಿಂದ ಹೀನಾಯ ಪ್ರದರ್ಶನ ನೀಡಿದ್ದ ಬಿಜೆಪಿ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿದೆ.


ಹರಿಹರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿರುವುದು ವಿಶೇಷ. ಇಲ್ಲಿ ಮಹಿಳೆಯರ ಮತಗಳೇ ನಿರ್ಣಾಯಕ. ಹಾಗಾಗಿ, ಹೆಂಗಳೆಯರ ಮನ ಸೆಳೆಯಲು ಎಲ್ಲ ಪಕ್ಷದ ಅಭ್ಯರ್ಥಿಗಳು ಕಸರತ್ತು ನಡೆಸಿದ್ದಾರೆ. ಒಟ್ಟಿನಲ್ಲಿ ಹರಿಹರ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದು, ಇಲ್ಲಿ ಯಾರು ಅಧಿಕಾರಕ್ಕೆ ಏರುತ್ತಾರೆ ಎಂದು ಹೇಳುವುದು ಕಷ್ಟ. ಕಾಂಗ್ರೆಸ್ - ಜೆಡಿಎಸ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಮತ್ತೆ ಕೈ ಮತ್ತು ತೆನೆ ಹೊತ್ತ ಮಹಿಳೆ ಅಧಿಕಾಕ್ಕೇರುತ್ತಾ ? ಬಿಜೆಪಿ ಕಮಾಲ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.

ದಾವಣಗೆರೆ :ಹರಿಹರ ನಗರಸಭೆ ಚುನಾವಣೆ ಕಾವು ರಂಗೇರಿದೆ. ನಾಳೆ ಮತದಾನ ನಡೆಯಲಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿ ಬಿಜೆಪಿ ಗೆಲುವಿಗೆ ತೀವ್ರ ಕಸರತ್ತು ನಡೆಸಿದೆ. ಬಿರುಸಿನ ಪ್ರಚಾರವನ್ನೂ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕೈ ಮತ್ತು ತೆನೆ ಹೊತ್ತ ಅಭ್ಯರ್ಥಿಗಳೂ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ.

ಹರಿಹರ ನಗರಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ

ಈ ನಗರಸಭೆಯಲ್ಲಿ ಒಟ್ಟು 31 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್ 13, ಜೆಡಿಎಸ್ 11 ಸ್ಥಾನ ಪಡೆದಿದ್ದರೆ, ಕೆಜೆಪಿ 4, ಇಬ್ಬರು ಪಕ್ಷೇತರರು ಗೆದ್ದಿದ್ದರು. ಆದ್ರೆ, ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿಯಿಂದ ಮಾಜಿ ಸಿಎಂ ಹೊರ ಬಂದು ಕೆಜೆಪಿ ಕಟ್ಟಿದ ಪರಿಣಾಮ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಕೆಜೆಪಿಯ ನಾಲ್ವರು ಅಭ್ಯರ್ಥಿಗಳು ಗೆದ್ದಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆಗ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಿದ್ದವು. ಕಳೆದ ಬಾರಿ ಬಿಜೆಪಿಯ ಒಳಜಗಳದಿಂದ ಹೀನಾಯ ಪ್ರದರ್ಶನ ನೀಡಿದ್ದ ಬಿಜೆಪಿ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿದೆ.


ಹರಿಹರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿರುವುದು ವಿಶೇಷ. ಇಲ್ಲಿ ಮಹಿಳೆಯರ ಮತಗಳೇ ನಿರ್ಣಾಯಕ. ಹಾಗಾಗಿ, ಹೆಂಗಳೆಯರ ಮನ ಸೆಳೆಯಲು ಎಲ್ಲ ಪಕ್ಷದ ಅಭ್ಯರ್ಥಿಗಳು ಕಸರತ್ತು ನಡೆಸಿದ್ದಾರೆ. ಒಟ್ಟಿನಲ್ಲಿ ಹರಿಹರ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದು, ಇಲ್ಲಿ ಯಾರು ಅಧಿಕಾರಕ್ಕೆ ಏರುತ್ತಾರೆ ಎಂದು ಹೇಳುವುದು ಕಷ್ಟ. ಕಾಂಗ್ರೆಸ್ - ಜೆಡಿಎಸ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಮತ್ತೆ ಕೈ ಮತ್ತು ತೆನೆ ಹೊತ್ತ ಮಹಿಳೆ ಅಧಿಕಾಕ್ಕೇರುತ್ತಾ ? ಬಿಜೆಪಿ ಕಮಾಲ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.

Intro:KN_DVG_02_28_HARIHARA ELECTION_SCRIPT_7203307_YOGARAJ

Reporter: Yogaraja G.H.

ಹರಿಹರ ನಗರಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ - ಕಾಂಗ್ರೆಸ್ - ಜೆಡಿಎಸ್ ಮಧ್ಯೆ ನೇರ ಪೈಪೋಟಿ...ಈ ಬಾರಿ ಕಮಾಲ್ ಮಾಡುತ್ತಾ ಬಿಜೆಪಿ...?

ದಾವಣಗೆರೆ : ಹರಿಹರ ನಗರಸಭೆ ಚುನಾವಣೆ ಕಾವು ರಂಗೇರಿದೆ. ನಾಳೆ ಮತದಾನ ನಡೆಯಲಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಇಲ್ಲಿ ಅಧಿಕಾರದಲ್ಲಿತ್ತು.
ಈ ಮೈತ್ರಿ ಭದ್ರಕೋಟೆಯಲ್ಲಿ ಬಿಜೆಪಿ ಗೆಲುವಿಗೆ ತೀವ್ರ ಕಸರತ್ತು ನಡೆಸಿದೆ. ಬಿರುಸಿನ ಪ್ರಚಾರವನ್ನೂ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕೈ ಮತ್ತು ತೆನೆ ಹೊತ್ತ ಅಭ್ಯರ್ಥಿಗಳೂ ಭರ್ಜರಿ ಕ್ಯಾಂಪೇನ್
ನಡೆಸಿದ್ದಾರೆ.

ಈ ನಗರಸಭೆಯಲ್ಲಿ ಒಟ್ಟು 31 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್ 13, ಜೆಡಿಎಸ್ 11 ಸ್ಥಾನ ಪಡೆದಿದ್ದರೆ, ಕೆಜೆಪಿ 4, ಇಬ್ಬರು ಪಕ್ಷೇತರರು ಗೆದ್ದಿದ್ದರು. ಆದ್ರೆ, ಬಿಜೆಪಿ
ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿಯಿಂದ ಮಾಜಿ ಸಿಎಂ ಹೊರ ಬಂದು ಕೆಜೆಪಿ ಕಟ್ಟಿದ ಪರಿಣಾಮ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಕೆಜೆಪಿಯ ನಾಲ್ವರು ಅಭ್ಯರ್ಥಿಗಳು
ಗೆದ್ದಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆಗ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಿದ್ದವು.

ಕಳೆದ ಬಾರಿ ಬಿಜೆಪಿಯ ಒಳಜಗಳದಿಂದ ಹೀನಾಯ ಪ್ರದರ್ಶನ ನೀಡಿದ್ದ ಬಿಜೆಪಿ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿದೆ. ಈ ಬಾರಿ ಕೆಜೆಪಿ ಪಕ್ಷ ಇಲ್ಲದ ಕಾರಣ ಬಿಜೆಪಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ
ಗೆಲ್ಲುತ್ತೇವೆ ಎಂಬ ವಿಶ್ವಾಸ ನಾಯಕರದ್ದಾಗಿದೆ.

ಮಹಿಳೆಯರೇ ನಿರ್ಣಾಯಕ...!

ಈ ಚುನಾವಣೆಯಲ್ಲಿ 137 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ 25 ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದೇ ಎಲ್ಲಾ 31 ಸ್ಥಾನಗಳಲ್ಲಿಯೂ
ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಈ ಮೂಲಕ ಎರಡೂ ಪಕ್ಷಗಳು ನೇರ ಪೈಪೋಟಿಗೆ ಇಳಿದಿವೆ. ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದರೂ, ಇಲ್ಲಿ ಈ ಎರಡೂ ಪಕ್ಷಗಳ ನಡುವೆ ಫೈಟ್
ನಡೆಯುತ್ತಿದೆ. ಬಿಎಸ್ಪಿ 4, ಎಸ್ ಡಿ ಪಿ ಐ 1 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ ಬರೋಬ್ಬರಿ 41 ಮಂದಿ ಪಕ್ಷೇತರರಾಗಿ ಸ್ಪರ್ಧಾ ಕಣದಲ್ಲಿದ್ದಾರೆ.

ಒಟ್ಟು 74,656 ಮತದಾರರಿದ್ದು, 38050 ಮಹಿಳೆಯರು, 36,593 ಪುರುಷರು, ಇತರೆ 13 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹರಿಹರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ
ಮತದಾರರು ಇರುವುದು ವಿಶೇಷ. ಇಲ್ಲಿ ಮಹಿಳೆಯರ ಮತಗಳೇ ನಿರ್ಣಾಯಕ. ಅಭ್ಯರ್ಥಿಗಳ ಭವಿಷ್ಯ ನಿಂತಿರುವುದು ಮಹಿಳಾ ಮತಗಳ ಮೇಲೆ ಎನ್ನುವುದು ಅಭ್ಯರ್ಥಿಗಳಿಗೆ ಚೆನ್ನಾಗಿ ಗೊತ್ತು.
ಹಾಗಾಗಿ, ಹೆಂಗಳೆಯರ ಮನ ಸೆಳೆಯಲು ಕಸರತ್ತು ನಡೆಸಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆ, ಸರ್ಕಾರಿ ಜಮೀನುಗಳ ಒತ್ತುವರಿ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲಿನ ಪ್ರಮುಖ
ಸಮಸ್ಯೆಗಳು.

ಆಗ ದೋಸ್ತಿ - ಈಗ ಕುಸ್ತಿ

ಕಳೆದ ಬಾರಿ ಇಲ್ಲಿ ಚುನಾವಣೆ ನಡೆಯುವಾಗ ಹೆಚ್. ಎಸ್. ಶಿವಶಂಕರ್ ಜೆಡಿಎಸ್ ಶಾಸಕರಾಗಿದ್ದ ಕಾರಣ ಈ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲು ಕಾರಣವಾಗಿತ್ತು. ಈ ಬಾರಿ ಕಾಂಗ್ರೆಸ್ ಶಾಸಕ ರಾಮಪ್ಪ ಇರುವುದರಿಂದ
ಕೈ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಹಾಲಿ ಕಾಂಗ್ರೆಸ್ ಶಾಸಕ ಎಸ್ ರಾಮಪ್ಪ, ಜೆಡಿಎಸ್ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್
ಪ್ರತಿಷ್ಠೆ ಬಿಟ್ಟು ಜೊತೆಯಾಗಿ ಪ್ರಚಾರ ನಡೆಸಿದ್ದರು. ಆದ್ರೆ, ಈ ಲೋಕಲ್ ವಾರ್ ನಲ್ಲಿ ಮತ್ತೆ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಸರತ್ತು ನಡೆಸಿದ್ದಾರೆ.

ಇನ್ನು ಬಿಜೆಪಿ ಮಾಜಿ ಶಾಸಕ ಬಿ. ಪಿ. ಹರೀಶ್ ಗೆ ಈ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕಳೆದ ಬಾರಿ ಕೆಜೆಪಿಯಿಂದ 4 ಸ್ಥಾನ ಗೆದ್ದು, ಬಿಜೆಪಿ 1 ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆದ್ರೆ, ಈ ಬಾರಿ ಬಿಜೆಪಿ
ಅಭ್ಯರ್ಥಿಗಳ ಗೆಲುವಿಗೆ ಕಮಲ ನಾಯಕರು ತಂತ್ರಗಾರಿಕೆ ರೂಪಿಸಿದ್ದಾರೆ. ಒಟ್ಟಿನಲ್ಲಿ ಹರಿಹರ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದು,
ಇಲ್ಲಿ ಯಾರು ಅಧಿಕಾರಕ್ಕೆ ಏರುತ್ತಾರೆ ಎಂದು ಹೇಳುವುದು ಕಷ್ಟ. ಕಾಂಗ್ರೆಸ್ - ಜೆಡಿಎಸ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಮತ್ತೆ ಕೈ ಮತ್ತು ತೆನೆ ಹೊತ್ತ ಮಹಿಳೆ ಅಧಿಕಾರ ಮಾಡುತ್ತಾ...?
ಬಿಜೆಪಿ ಕಮಾಲ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.

Body:KN_DVG_02_28_HARIHARA ELECTION_SCRIPT_7203307_YOGARAJ

Reporter: Yogaraja G.H.

ಹರಿಹರ ನಗರಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ - ಕಾಂಗ್ರೆಸ್ - ಜೆಡಿಎಸ್ ಮಧ್ಯೆ ನೇರ ಪೈಪೋಟಿ...ಈ ಬಾರಿ ಕಮಾಲ್ ಮಾಡುತ್ತಾ ಬಿಜೆಪಿ...?

ದಾವಣಗೆರೆ : ಹರಿಹರ ನಗರಸಭೆ ಚುನಾವಣೆ ಕಾವು ರಂಗೇರಿದೆ. ನಾಳೆ ಮತದಾನ ನಡೆಯಲಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಇಲ್ಲಿ ಅಧಿಕಾರದಲ್ಲಿತ್ತು.
ಈ ಮೈತ್ರಿ ಭದ್ರಕೋಟೆಯಲ್ಲಿ ಬಿಜೆಪಿ ಗೆಲುವಿಗೆ ತೀವ್ರ ಕಸರತ್ತು ನಡೆಸಿದೆ. ಬಿರುಸಿನ ಪ್ರಚಾರವನ್ನೂ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕೈ ಮತ್ತು ತೆನೆ ಹೊತ್ತ ಅಭ್ಯರ್ಥಿಗಳೂ ಭರ್ಜರಿ ಕ್ಯಾಂಪೇನ್
ನಡೆಸಿದ್ದಾರೆ.

ಈ ನಗರಸಭೆಯಲ್ಲಿ ಒಟ್ಟು 31 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್ 13, ಜೆಡಿಎಸ್ 11 ಸ್ಥಾನ ಪಡೆದಿದ್ದರೆ, ಕೆಜೆಪಿ 4, ಇಬ್ಬರು ಪಕ್ಷೇತರರು ಗೆದ್ದಿದ್ದರು. ಆದ್ರೆ, ಬಿಜೆಪಿ
ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿಯಿಂದ ಮಾಜಿ ಸಿಎಂ ಹೊರ ಬಂದು ಕೆಜೆಪಿ ಕಟ್ಟಿದ ಪರಿಣಾಮ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಕೆಜೆಪಿಯ ನಾಲ್ವರು ಅಭ್ಯರ್ಥಿಗಳು
ಗೆದ್ದಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆಗ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಿದ್ದವು.

ಕಳೆದ ಬಾರಿ ಬಿಜೆಪಿಯ ಒಳಜಗಳದಿಂದ ಹೀನಾಯ ಪ್ರದರ್ಶನ ನೀಡಿದ್ದ ಬಿಜೆಪಿ ಈ ಬಾರಿ ಗೆಲ್ಲುವ ವಿಶ್ವಾಸ ಹೊಂದಿದೆ. ಈ ಬಾರಿ ಕೆಜೆಪಿ ಪಕ್ಷ ಇಲ್ಲದ ಕಾರಣ ಬಿಜೆಪಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ
ಗೆಲ್ಲುತ್ತೇವೆ ಎಂಬ ವಿಶ್ವಾಸ ನಾಯಕರದ್ದಾಗಿದೆ.

ಮಹಿಳೆಯರೇ ನಿರ್ಣಾಯಕ...!

ಈ ಚುನಾವಣೆಯಲ್ಲಿ 137 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ 25 ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದೇ ಎಲ್ಲಾ 31 ಸ್ಥಾನಗಳಲ್ಲಿಯೂ
ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಈ ಮೂಲಕ ಎರಡೂ ಪಕ್ಷಗಳು ನೇರ ಪೈಪೋಟಿಗೆ ಇಳಿದಿವೆ. ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದರೂ, ಇಲ್ಲಿ ಈ ಎರಡೂ ಪಕ್ಷಗಳ ನಡುವೆ ಫೈಟ್
ನಡೆಯುತ್ತಿದೆ. ಬಿಎಸ್ಪಿ 4, ಎಸ್ ಡಿ ಪಿ ಐ 1 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ ಬರೋಬ್ಬರಿ 41 ಮಂದಿ ಪಕ್ಷೇತರರಾಗಿ ಸ್ಪರ್ಧಾ ಕಣದಲ್ಲಿದ್ದಾರೆ.

ಒಟ್ಟು 74,656 ಮತದಾರರಿದ್ದು, 38050 ಮಹಿಳೆಯರು, 36,593 ಪುರುಷರು, ಇತರೆ 13 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹರಿಹರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ
ಮತದಾರರು ಇರುವುದು ವಿಶೇಷ. ಇಲ್ಲಿ ಮಹಿಳೆಯರ ಮತಗಳೇ ನಿರ್ಣಾಯಕ. ಅಭ್ಯರ್ಥಿಗಳ ಭವಿಷ್ಯ ನಿಂತಿರುವುದು ಮಹಿಳಾ ಮತಗಳ ಮೇಲೆ ಎನ್ನುವುದು ಅಭ್ಯರ್ಥಿಗಳಿಗೆ ಚೆನ್ನಾಗಿ ಗೊತ್ತು.
ಹಾಗಾಗಿ, ಹೆಂಗಳೆಯರ ಮನ ಸೆಳೆಯಲು ಕಸರತ್ತು ನಡೆಸಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆ, ಸರ್ಕಾರಿ ಜಮೀನುಗಳ ಒತ್ತುವರಿ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲಿನ ಪ್ರಮುಖ
ಸಮಸ್ಯೆಗಳು.

ಆಗ ದೋಸ್ತಿ - ಈಗ ಕುಸ್ತಿ

ಕಳೆದ ಬಾರಿ ಇಲ್ಲಿ ಚುನಾವಣೆ ನಡೆಯುವಾಗ ಹೆಚ್. ಎಸ್. ಶಿವಶಂಕರ್ ಜೆಡಿಎಸ್ ಶಾಸಕರಾಗಿದ್ದ ಕಾರಣ ಈ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲು ಕಾರಣವಾಗಿತ್ತು. ಈ ಬಾರಿ ಕಾಂಗ್ರೆಸ್ ಶಾಸಕ ರಾಮಪ್ಪ ಇರುವುದರಿಂದ
ಕೈ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಹಾಲಿ ಕಾಂಗ್ರೆಸ್ ಶಾಸಕ ಎಸ್ ರಾಮಪ್ಪ, ಜೆಡಿಎಸ್ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್
ಪ್ರತಿಷ್ಠೆ ಬಿಟ್ಟು ಜೊತೆಯಾಗಿ ಪ್ರಚಾರ ನಡೆಸಿದ್ದರು. ಆದ್ರೆ, ಈ ಲೋಕಲ್ ವಾರ್ ನಲ್ಲಿ ಮತ್ತೆ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಸರತ್ತು ನಡೆಸಿದ್ದಾರೆ.

ಇನ್ನು ಬಿಜೆಪಿ ಮಾಜಿ ಶಾಸಕ ಬಿ. ಪಿ. ಹರೀಶ್ ಗೆ ಈ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕಳೆದ ಬಾರಿ ಕೆಜೆಪಿಯಿಂದ 4 ಸ್ಥಾನ ಗೆದ್ದು, ಬಿಜೆಪಿ 1 ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಆದ್ರೆ, ಈ ಬಾರಿ ಬಿಜೆಪಿ
ಅಭ್ಯರ್ಥಿಗಳ ಗೆಲುವಿಗೆ ಕಮಲ ನಾಯಕರು ತಂತ್ರಗಾರಿಕೆ ರೂಪಿಸಿದ್ದಾರೆ. ಒಟ್ಟಿನಲ್ಲಿ ಹರಿಹರ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದು,
ಇಲ್ಲಿ ಯಾರು ಅಧಿಕಾರಕ್ಕೆ ಏರುತ್ತಾರೆ ಎಂದು ಹೇಳುವುದು ಕಷ್ಟ. ಕಾಂಗ್ರೆಸ್ - ಜೆಡಿಎಸ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಮತ್ತೆ ಕೈ ಮತ್ತು ತೆನೆ ಹೊತ್ತ ಮಹಿಳೆ ಅಧಿಕಾರ ಮಾಡುತ್ತಾ...?
ಬಿಜೆಪಿ ಕಮಾಲ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.