ದಾವಣಗೆರೆ: ಬೀದಿ ಬದಿ ಕಸ ಹಾಕಿದವರನ್ನು ಯುವಕರ ತಂಡವೊಂದು ತರಾಟೆಗೆ ತೆಗೆದುಕೊಂಡಿರುವ ಘಟನೆ ನಗರದ ರೇಣುಕಾ ಮಂದಿರದ ಬಾರ್ಲೈನ್ ರಸ್ತೆ ಬಳಿ ನಡೆದಿದೆ.
ಕಸ ಹಾಕುವವರನ್ನು ಗಮನಿಸಿದ ಶ್ರೀಕಾಂತ್ ಎಂಬವರು ಕ್ಲಾಸ್ ತೆಗೆದುಕೊಂಡಿದ್ದು, ಕಸ ಮರಳಿ ಬಕೆಟ್ಗೆ ತುಂಬುವಂತೆ ಮಾಡಿದ್ದಾರೆ. ಸ್ಮಾರ್ಟ್ ಸಿಟಿಯನ್ನು ಕಸದ ಸಿಟಿಯಾಗಿ ಮಾಡ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀಕಾಂತ್ ಜೊತೆ ನಗರದ ಯುವಕರು ಸೇರಿಕೊಂಡು ಬೆಳಗಿನ ವೇಳೆ ಸಂಚರಿಸಿ ಕಸ ಹಾಕುತ್ತಿದ್ದವರನ್ನು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ದಾವಣಗೆರೆ: ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಸಾವು, ವೈದ್ಯರ ವಿರುದ್ಧ ಕುಟಂಬಸ್ಥರ ಪ್ರತಿಭಟನೆ