ETV Bharat / state

ಶಾಂತಿ ಕದಡಲು ಯತ್ನಿಸಿದರೆ ಕ್ರಮ: ಪೊಲೀಸ್ ಪಥ ಸಂಚಲನ ಮಾಡಿ ಪೊಲೀಸ್‌ ಇಲಾಖೆ ಶಕ್ತಿ ಪ್ರದರ್ಶನ...!

ನಗರದ ದುರ್ಗಾಂಭಿಕ ದೇವಾಲಯದಿಂದ ಆರಂಭವಾದ ಪೊಲೀಸರ ಪಥ ಸಂಚಲನ ಹೊಂಡದ ವೃತ್ತ, ಜಾಲಿ ನಗರ, ಹಗೆದಿಬ್ಬ ವೃತ್ತ, ಮದೀನ‌ ಆಟೋ ನಿಲ್ದಾಣ, ಅಹ್ಮದ್ ನಗರ, ಆಝಾದ್ ನಗರ, ಬಾಷಾ ನಗರ, ಮಂಡಕ್ಕಿ ಭಟ್ಟಿ ಲೇಔಟ್ ನಿಂದ ಸಾಗಿ ಅರಳಿ ಮರ ವೃತ್ತದವರೆಗೂ ಪಥ ಸಂಚಲನ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.

author img

By

Published : Feb 10, 2022, 8:13 PM IST

ಪೊಲೀಸ್ ಪಥ ಸಂಚಲನ
ಪೊಲೀಸ್ ಪಥ ಸಂಚಲನ

ದಾವಣಗೆರೆ : ಜಿಲ್ಲೆಯಲ್ಲಿ ಕೆಲ ಕಡೆ ಶಾಂತಿ ಕದಡಲು ಕೆಲವರ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ದಾವಣಗೆರೆ ಪೊಲೀಸರು ಅಲರ್ಟ್ ಆಗಿದ್ದಾರೆ. ಜಿಲ್ಲೆಯ ಹರಿಹರ, ಮಲೇಬೆನ್ನೂರು, ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಗಳಲ್ಲಿ ಎರಡು ಕೋಮುಗಳ ನಡುವೆ ಈಗಾಗಲೇ ಗಲಾಟೆಯಾಗಿದ್ದು, ಪೊಲೀಸರು ಮಧ್ಯೆ ಪ್ರವೇಶಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪೊಲೀಸ್ ಪಥ ಸಂಚಲನ

ಇದರ ಬೆನ್ನಲ್ಲೇ ದಾವಣಗೆರೆ ಪೊಲೀಸರು ನಗರದ್ಯಾಂತ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ನಗರದ ದುರ್ಗಾಂಭಿಕ ದೇವಾಲಯದಿಂದ ಆರಂಭವಾದ ಪೊಲೀಸರ ಪಥ ಸಂಚಲನ ಹೊಂಡದ ವೃತ್ತ, ಜಾಲಿ ನಗರ, ಹಗೆದಿಬ್ಬ ವೃತ್ತ, ಮದೀನ‌ ಆಟೋ ನಿಲ್ದಾಣ, ಅಹ್ಮದ್ ನಗರ, ಆಝಾದ್ ನಗರ, ಬಾಷಾ ನಗರ, ಮಂಡಕ್ಕಿ ಭಟ್ಟಿ ಲೇಔಟ್ ನಿಂದ ಸಾಗಿ ಅರಳಿ ಮರ ವೃತ್ತಕ್ಕೆ ಕೊನೆ‌ ಮಾಡಲಾಯಿತು.

ಎಸ್ಪಿ ಸಿಬಿ ರಿಷ್ಯಂತ್ ಖಡಕ್ ಆದೇಶ
ಎಸ್ಪಿ ಸಿಬಿ ರಿಷ್ಯಂತ್ ಖಡಕ್ ಆದೇಶ

ಇದರಲ್ಲಿ ಸಾವಿರಾರು ಪೊಲೀಸರು ಭಾಗಿಯಾಗಿದ್ದು, ಶಿಸ್ತಿನಿಂದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿದ ಪೊಲೀಸರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಇದಲ್ಲದೇ ಯಾವುದೇ ಕೋಮಿಗೆ‌ ಸಂಬಂಧಿಸಿದ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನಿಷೇಧಿಸಲಾಗಿದ್ದು, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.

ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ವಾಟ್ಸ್​ಆ್ಯಪ್​ ಹಾಗೂ ಫೇಸ್​​ಬುಕ್‌ಗಳಂತಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​​ಗಳು ಹಾಕಿಕೊಳ್ಳುತ್ತಿರುವುದ್ದರಿಂದ ಸಾಕಷ್ಟು ಆಯಾಯ ಕೋಮಿನವರ ಆಕ್ರೋಶಕ್ಕೆ ಕಾರಣರಾಗಿ ಗಲಾಟೆಗಳು ನಡೆಯುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಕೆಲ ಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಎಸ್ಪಿ ರಿಷ್ಯಂತ್ ಖಡಕ್ ಆದೇಶ ಹೊರಡಿಸಿದ್ದಾರೆ.

ಕೇಸರಿ ಶಾಲು ಹಾಗೂ ಹಿಜಾಬ್ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಗೂ ಪ್ರಚೋದನಕಾರಿ ಪೋಸ್ಟರ್, ಹೇಳಿಕೆಗಳನ್ನು ಕೂಡ ಹಾಕುವಂತಿಲ್ಲ, ಗುಂಪುಗಾರಿಕೆ, ಗಲಾಟೆ, ದೊಂಬಿ ಮಾಡಿದರೆ ಕ್ರಿಮಿನಲ್ ಗುಂಡಾ ಶೀಟ್ ಓಪನ್ ಮಾಡಲಾಗುವುದು. ಹಾಗೂ ಒಂದು ವೇಳೆ ಶಾಂತಿ ಕದಡುವಂತಹ ಪೋಸ್ಟ್ ಗಳನ್ನು ಹಾಕಿದರೆ ಕ್ರಮ ಜರುಗಿಸುತ್ತೇವೆ, ಪೋಸ್ಟ್ ಮಾಡಿದ್ದಲ್ಲಿ ಆಯಾ ಪೊಲೀಸ್ ಠಾಣೆಯ ಪೊಲೀಸರ ಗಮನಕ್ಕೆ ತನ್ನಿ ಎಂದು ಎಸ್ಪಿ ರಿಷ್ಯಂತ್ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ : ಸೋಮವಾರದಿಂದ ಶಾಲೆ ಆರಂಭ: ಸಿಎಂ ಬೊಮ್ಮಾಯಿ ಘೋಷಣೆ

ದಾವಣಗೆರೆ : ಜಿಲ್ಲೆಯಲ್ಲಿ ಕೆಲ ಕಡೆ ಶಾಂತಿ ಕದಡಲು ಕೆಲವರ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ದಾವಣಗೆರೆ ಪೊಲೀಸರು ಅಲರ್ಟ್ ಆಗಿದ್ದಾರೆ. ಜಿಲ್ಲೆಯ ಹರಿಹರ, ಮಲೇಬೆನ್ನೂರು, ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮಗಳಲ್ಲಿ ಎರಡು ಕೋಮುಗಳ ನಡುವೆ ಈಗಾಗಲೇ ಗಲಾಟೆಯಾಗಿದ್ದು, ಪೊಲೀಸರು ಮಧ್ಯೆ ಪ್ರವೇಶಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪೊಲೀಸ್ ಪಥ ಸಂಚಲನ

ಇದರ ಬೆನ್ನಲ್ಲೇ ದಾವಣಗೆರೆ ಪೊಲೀಸರು ನಗರದ್ಯಾಂತ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ನಗರದ ದುರ್ಗಾಂಭಿಕ ದೇವಾಲಯದಿಂದ ಆರಂಭವಾದ ಪೊಲೀಸರ ಪಥ ಸಂಚಲನ ಹೊಂಡದ ವೃತ್ತ, ಜಾಲಿ ನಗರ, ಹಗೆದಿಬ್ಬ ವೃತ್ತ, ಮದೀನ‌ ಆಟೋ ನಿಲ್ದಾಣ, ಅಹ್ಮದ್ ನಗರ, ಆಝಾದ್ ನಗರ, ಬಾಷಾ ನಗರ, ಮಂಡಕ್ಕಿ ಭಟ್ಟಿ ಲೇಔಟ್ ನಿಂದ ಸಾಗಿ ಅರಳಿ ಮರ ವೃತ್ತಕ್ಕೆ ಕೊನೆ‌ ಮಾಡಲಾಯಿತು.

ಎಸ್ಪಿ ಸಿಬಿ ರಿಷ್ಯಂತ್ ಖಡಕ್ ಆದೇಶ
ಎಸ್ಪಿ ಸಿಬಿ ರಿಷ್ಯಂತ್ ಖಡಕ್ ಆದೇಶ

ಇದರಲ್ಲಿ ಸಾವಿರಾರು ಪೊಲೀಸರು ಭಾಗಿಯಾಗಿದ್ದು, ಶಿಸ್ತಿನಿಂದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿದ ಪೊಲೀಸರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಇದಲ್ಲದೇ ಯಾವುದೇ ಕೋಮಿಗೆ‌ ಸಂಬಂಧಿಸಿದ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನಿಷೇಧಿಸಲಾಗಿದ್ದು, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.

ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ವಾಟ್ಸ್​ಆ್ಯಪ್​ ಹಾಗೂ ಫೇಸ್​​ಬುಕ್‌ಗಳಂತಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​​ಗಳು ಹಾಕಿಕೊಳ್ಳುತ್ತಿರುವುದ್ದರಿಂದ ಸಾಕಷ್ಟು ಆಯಾಯ ಕೋಮಿನವರ ಆಕ್ರೋಶಕ್ಕೆ ಕಾರಣರಾಗಿ ಗಲಾಟೆಗಳು ನಡೆಯುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಕೆಲ ಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಎಸ್ಪಿ ರಿಷ್ಯಂತ್ ಖಡಕ್ ಆದೇಶ ಹೊರಡಿಸಿದ್ದಾರೆ.

ಕೇಸರಿ ಶಾಲು ಹಾಗೂ ಹಿಜಾಬ್ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಗೂ ಪ್ರಚೋದನಕಾರಿ ಪೋಸ್ಟರ್, ಹೇಳಿಕೆಗಳನ್ನು ಕೂಡ ಹಾಕುವಂತಿಲ್ಲ, ಗುಂಪುಗಾರಿಕೆ, ಗಲಾಟೆ, ದೊಂಬಿ ಮಾಡಿದರೆ ಕ್ರಿಮಿನಲ್ ಗುಂಡಾ ಶೀಟ್ ಓಪನ್ ಮಾಡಲಾಗುವುದು. ಹಾಗೂ ಒಂದು ವೇಳೆ ಶಾಂತಿ ಕದಡುವಂತಹ ಪೋಸ್ಟ್ ಗಳನ್ನು ಹಾಕಿದರೆ ಕ್ರಮ ಜರುಗಿಸುತ್ತೇವೆ, ಪೋಸ್ಟ್ ಮಾಡಿದ್ದಲ್ಲಿ ಆಯಾ ಪೊಲೀಸ್ ಠಾಣೆಯ ಪೊಲೀಸರ ಗಮನಕ್ಕೆ ತನ್ನಿ ಎಂದು ಎಸ್ಪಿ ರಿಷ್ಯಂತ್ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ : ಸೋಮವಾರದಿಂದ ಶಾಲೆ ಆರಂಭ: ಸಿಎಂ ಬೊಮ್ಮಾಯಿ ಘೋಷಣೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.