ETV Bharat / state

ಲಾಕ್​ಡೌನ್​ನಿಂದಾಗಿ ಆರ್​ಟಿಒ ಕಚೇರಿಗೆ ಮಂಕು.. ಸಾರಿಗೆ ಇಲಾಖೆ ಬಗ್ಗೆ ಜನ ಹೀಗಂತಾರೆ..

ಚಾಲನಾ ಪರವಾನಗಿ ಪಡೆಯಲು ಪದೇಪದೆ ಆರ್‌ಟಿಒ ಕಚೇರಿಗೆ ಬರಬೇಕೆಂದೇನಿಲ್ಲ. ಆನ್​​ಲೈನ್​​ನಲ್ಲಿಯೇ ಅರ್ಜಿ ಹಾಕಬಹುದು, ಅಲ್ಲಿಯೇ ಹಣ ಪಾವತಿಸಬಹುದು. ವಾಹನ ಚಾಲನಾ ಪರೀಕ್ಷೆ ನೀಡಲು ಮಾತ್ರ ಕಚೇರಿಗೆ ಬಂದರೆ ಸಾಕು. ಅಂಚೆ ಮೂಲಕ ಅವರ ಮನೆಗೆ ಡ್ರೈವಿಂಗ್ ಲೈಸೆನ್ಸ್ ಕಳುಹಿಸುವ ವ್ಯವಸ್ಥೆ ಇದೆ..

author img

By

Published : Jul 18, 2020, 9:56 PM IST

Lockdown to RTO Office
ಲಾಕ್​ಡೌನ್​ನಿಂದ ಆರ್​ಟಿಒ ಕಚೇರಿಯ ಸ್ಥಿತಿ

ದಾವಣಗೆರೆ : ಆರ್‌ಟಿಒ ಕಚೇರಿಗಳೆಂದ್ರೆ ಜನಜಾತ್ರೆ. ಚಾಲನಾ ಪರವಾನಗಿ, ವಾಹನಗಳ ನೋಂದಣಿ ಸೇರಿ ಇತರೆ ಕೆಲಸಗಳಿರ್ತವೆ. ಇಲ್ಲಿ ಕೆಲಸ ಆಗಬೇಕು ಅಂದ್ರೆ ಅದಕ್ಕೆ ಮಧ್ಯವರ್ತಿಗಳೇ ಸರಿ ಎಂಬ ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ‌. ಕೊರೊನಾ ಬಂದ ಬಳಿಕ ಇದು ಹೆಚ್ಚಾಗಿದೆಯೇ? ಅಥವಾ ಕೊರೊನಾ ಸೃಸ್ಟಿಸಿದ ಗಂಡಾಂತರದ ಬಿಸಿ ಇವರಿಗೂ ತಟ್ಟಿದೆಯೇ, ವರ್ಷದ ಎಲ್ಲಾ ದಿನಗಳಲ್ಲಿಯೂ ತುಂಬಿ ತುಳುಕುತ್ತಿದ್ದ ಕಚೇರಿ ಈಗ ಹೇಗಿದೆ? ದಿನವಿಡೀ ಕೆಲಸ ಮಾಡುತ್ತಿದ್ದವರು ಈಗ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ.

ಕೋವಿಡ್-19 ವಕ್ಕರಿಸಿದ ಬಳಿಕ ಸಾಕಷ್ಟು ಕ್ಷೇತ್ರಗಳು ನಷ್ಟವನ್ನೇ ಅನುಭವಿಸಿದೆಯೇ ಹೊರತು ಲಾಭವನ್ನಲ್ಲ. ಹೀಗೆ ಎಲ್ಲಾ ಕ್ಷೇತ್ರಗಳಿಗೆ ನಷ್ಟ ಆದಂತೆ ಆರ್​ಟಿಒ ಇಲಾಖೆ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ.‌ ದ್ವಿಚಕ್ರ, ಟ್ರ್ಯಾಕ್ಟರ್ ಹಾಗೂ ಕಾರುಗಳ ನೋಂದಣಿಯೇನೋ ಸ್ವಲ್ಪ ಮಟ್ಟಿಗೆ ನಡೆದಿದೆ. ಲಾರಿ, ಬಸ್​ಗಳ ಮಾಲೀಕರು ಇತ್ತ ಸುಳಿಯುತ್ತಲೇ ಇಲ್ಲ. ಇದರಿಂದಾಗಿ ತಿಂಗಳಿಗೆ ದಾವಣಗೆರೆ, ಚಿತ್ರದುರ್ಗ ವ್ಯಾಪ್ತಿಯ ರಸ್ತೆ ಸಾರಿಗೆ ನಿಗಮಕ್ಕೆ ತುಂಬಾನೇ ಹೊಡೆತ ಬಿದ್ದಿದೆ ಎಂದರೆ ತಪ್ಪಾಗಲಾರದು. ಹಿಂದೆ ಬರುತ್ತಿದ್ದ ರಾಜಸ್ವ ಸಂಗ್ರಹವೂ ಸಹ ಕಡಿಮೆಯಾಗಿದೆ. ವಾಹನಗಳ ನೋಂದಣಿಯ ಬಗ್ಗೆ ಕೇಳೋದೆ ಬೇಡ. ಜನರೇ ಮನೆಯಿಂದ ಹೊರ ಬಾರದಿದ್ದರೆ, ಇನ್ನು ವಾಹನಗಳು ಹೇಗೆ ಬರಲಿದೆ?. ಮೂಲಗಳ ಪ್ರಕಾರ ಆರ್​ಟಿಒ ಕಚೇರಿಯ ಒಂದು ತಿಂಗಳ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ 5 ರಿಂದ 6 ಕೋಟಿ ರೂಪಾಯಿ ನಷ್ಟ ಆಗುತ್ತಿದೆ ಎನ್ನಲಾಗಿದೆ.

ಲಾಕ್​ಡೌನ್​ನಿಂದ ಆರ್​ಟಿಒ ಕಚೇರಿಯ ಸ್ಥಿತಿ

ಲಾಕ್​ಡೌನ್​ನಿಂದಾಗಿ ಬಸ್​​ಗಳು ರಸ್ತೆಗೆ ಇಳಿಯುವುದೇ ವಿರಳವಾಗಿದೆ. ಇದರಿಂದಾಗಿ ಸಹಜವಾಗಿ ಕಾರು, ಬೈಕ್ ಬಳಕೆ‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ಕೊರತೆಯಿಂದಾಗಿ ಅದೆಷ್ಟೋ ಜನ ಒಂದು ಬೈಕ್​ ಖರೀದಿಸಿಬಿಡೋಣ, ಡಿಎಲ್​ ಮಾಡಿಸೊಕೊಳ್ಳೋಣ ಎಂದು ಯೋಚಿಸುತ್ತಿದ್ದಾರೆ. ಇದರಿಂದಾಗಿ ಪರವಾನಿಗೆಗೆ ಆರ್​ಟಿಒ ಕಚೇರಿಯಲ್ಲಿ ಬೇಡಿಕೆ ಸ್ವಲ್ಪ ಜಾಸ್ತಿ ಆಗುತ್ತಿದೆ.

ಇನ್ನು, ಈ ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಮಧ್ಯವರ್ತಿಗಳು, ಜನರಿಂದ ಹಣ ಪಡೆದು ಪರವಾನಗಿ ಮಾಡಿಸಿಕೊಡುತ್ತಾರಂತೆ. ಒಬ್ಬ ಮಧ್ಯವರ್ತಿ ಕೈಯಲ್ಲಿ ಏನಿಲ್ಲಾ ಅಂದರೂ 30 ರಿಂದ 40 ಫೈಲ್​ಗಳು ಕಾಣಸಿಗುತ್ತವೆ. ಕೊರೊನಾ ಆತಂಕದಿಂದಾಗಿ ಜನರು ಮನೆ ಹೊರಗೆ ಕಾಲಿಡಲು ಭಯಪಡ್ತಿದ್ದಾರೆ. ಅಂತದ್ರಲ್ಲಿ ಆರ್​ಟಿಒ ಕಚೇರಿಗೆ ಹೋಗುವುದು ದೂರದ ಮಾತು. ಆರ್​ಟಿಒ ಕಚೇರಿಗೆ ಹೋಗುವ ಬದಲು ಹಣ ಖರ್ಚಾದರೂ ಪರವಾಗಿಲ್ಲ,‌ ಕೆಲಸ ಆದ್ರೆ ಸಾಕಪ್ಪಾ ಎಂಬ ದೃಷ್ಟಿಯಿಂದ ಜನರು ಮಧ್ಯವರ್ತಿಗಳ ಮೊರೆ ಹೋಗ್ತಾರೆ. ಏಜೆಂಟರುಗಳು ಸಹ ಸಿಕ್ಕಿದ್ದೇ ಚಾನ್ಸ್​ ಅಂತಾ, ಡ್ರೈವಿಂಗ್ ಲೈಸೆನ್ಸ್, ಎಲ್‌ಎಲ್‌ಆರ್ ಮಾಡಿಕೊಡಲು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ‌ ಕೇಳಿ ಬರುತ್ತಿದೆ.

ಮಧ್ಯವರ್ತಿಗಳ ಹಾವಳಿ ಬಗ್ಗೆ ಅಧಿಕಾರಿಗಳು ಹೇಳೋದೇನು?: ಚಾಲನಾ ಪರವಾನಗಿ ಪಡೆಯಲು ಪದೇಪದೆ ಆರ್‌ಟಿಒ ಕಚೇರಿಗೆ ಬರಬೇಕೆಂದೇನಿಲ್ಲ. ಆನ್​​ಲೈನ್​​ನಲ್ಲಿಯೇ ಅರ್ಜಿ ಹಾಕಬಹುದು, ಅಲ್ಲಿಯೇ ಹಣ ಪಾವತಿಸಬಹುದು. ವಾಹನ ಚಾಲನಾ ಪರೀಕ್ಷೆ ನೀಡಲು ಮಾತ್ರ ಕಚೇರಿಗೆ ಬಂದರೆ ಸಾಕು. ಅಂಚೆ ಮೂಲಕ ಅವರ ಮನೆಗೆ ಡ್ರೈವಿಂಗ್ ಲೈಸೆನ್ಸ್ ಕಳುಹಿಸುವ ವ್ಯವಸ್ಥೆ ನಮ್ಮಲ್ಲಿದೆ. ನೇರವಾಗಿಯೇ ನಮ್ಮ ಬಳಿ ಬಂದರೆ ಕೆಲಸ ಆಗುತ್ತದೆ.‌ ಅದನ್ನು ಬಿಟ್ಟು ಮಧ್ಯವರ್ತಿಗಳನ್ನು ಸಂಪರ್ಕಿಸುವುದು ಯಾಕೆ ಎಂದು ಪ್ರಶ್ನಿಸುತ್ತಾರೆ ಆರ್‌ಟಿಒ ಪ್ರಭಾರ ಅಧಿಕಾರಿ ಜಿ ಎಸ್ ಹೆಗ್ಡೆ.

ಕೊರೊನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಚೇರಿಗೆ ಅನಧಿಕೃತವಾಗಿ ಜನರು ಒಳಗೆ ಬಾರದಂತೆ ಎಚ್ಚರ ವಹಿಸಿದ್ದೇವೆ. ಏಜೆಂಟರ ಹಾವಳಿಯನ್ನು ನಾವು ತಡೆಯಬೇಕು ಎನ್ನುವುದಕ್ಕಿಂತ ಜನರು ಯಾಕೆ ಅವರ ಬಳಿ ಹೋಗುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ರಾಜ್ಯ ಸರ್ಕಾರವು ಈಗ ವಾಹನಗಳ ರಿನಿವಲ್ ಗೆ ಸೆಪ್ಟಂಬರ್ 30ರವರೆಗೆ ಅವಕಾಶ ನೀಡಿದೆ. ಅದೇ ರೀತಿಯಲ್ಲಿ ಎಲ್‌.ಎಲ್‌. ಆರ್​​ಗಳನ್ನು ಒಂದು ವರ್ಷ ಚಾಲನಾ ಪರವಾನಗಿಯಾಗಿ ಉಪಯೋಗಿಸಬಹುದು ಎಂದು ಅಧಿಕಾರಿ ಉತ್ತರಿಸಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಬಂದ ಬಳಿಕ ಎಲ್ಲಾ ಕ್ಷೇತ್ರಗಳು ನಷ್ಟ ಅನುಭವಿಸುತ್ತಿದ್ದರೆ, ಆರ್​ಟಿಒ ಮಧ್ಯವರ್ತಿಗಳು ಮಾತ್ರ ಲಾಭದಾಯಕವಾಗಿಯೇ ಇದ್ದಾರೆ ಎಂಬುದು ಜನರ ಅಭಿಪ್ರಾಯವಾಗಿದೆ. ಆರ್​ಟಿಒ ಕಚೇರಿಯಲ್ಲಿ ಬ್ರೋಕರ್​​​ಗಳಿಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಜನಸಾಮಾನ್ಯರಿಂದ ಹಿಂದಿನಿಂದಲೂ ಕೇಳಿಬರುತ್ತಿದೆ, ಆದ್ರೆ ಇದು ಕಾರ್ಯ ರೂಪಕ್ಕೆ ಬರುವುದು ಮಾತ್ರ ಕೊಂಚ ಕಠಿಣ ಎಂಬುದು ಜನರ ಮನದಿಂಗಿತವಾಗಿದೆ.

ಆರ್​​ಟಿಒ ಆಫೀಸಿಗೆ ನೇರವಾಗಿ ಹೋದ್ರೆ ನಮ್ಮ ಕಲೆಸ ಆಗೊಲ್ಲ ಎಂದು ಮಧ್ಯವರ್ತಿಗಳ ಮೂಲಕ ಜನರು ಹೋಗುತ್ತಾರೆ. ಆದ್ರೆ ಆರ್.ಟಿ.ಒ ಅಧಿಕಾರಿಗಳು ಮಾತ್ರ, ನೀವ್ಯಾಕೆ ಅವರ ಬಳಿ ಹೋಗ್ತೀರಿ, ನಮ್ಮ ಬಳಿ ನೇರವಾಗಿ ಬನ್ನಿ. ಯಾರೂ ಸಹ ಮಧ್ಯವರ್ತಿಗಳ ಸಂಪರ್ಕಿಸುವ ಗೋಜಿಗೆ ಹೋಗಬೇಡಿ ಎನ್ನುತ್ತಾರೆ‌. ‌ಆದ್ರೆ ಜನರಿಗೆ ಮಾತ್ರ ಆರ್​ಟಿಒ ಕಚೇರಿಗೆ ಹೋದ್ರೆ ದಿನವಿಡಿ ಸಮಯ ವ್ಯರ್ಥ ಆಗೋದು ಸ್ಪಷ್ಟ ಎಂಬುದು ಹಲವರ ಅಭಿಪ್ರಾಯವಾಗಿದೆ.

ಆರ್​ಟಿಒ ಅಧಿಕಾರಿಗಳು ನೋಡಿದ್ರೆ ನಮ್ಮ ಬಳಿ ನೇರವಾಗಿ ಬನ್ನಿ ಎನ್ನುತ್ತಾರೆ, ಆದ್ರೆ ನೇರವಾಗಿ ಹೋಗೋಣ ಅಂದ್ರೆ ನಮ್ಮ ಕೆಲಸ ಆಗೋದು ಕಷ್ಟ ಸಾಧ್ಯ. ಒಂದು ವೇಳೆ ನಮ್ಮ ಕೆಲಸ ಆದ್ರೂ ಅದಕ್ಕೆ ವಾರಗಟ್ಟಲೇ ಹಿಡಿಯುತ್ತೆ, ಅದರ ಬದಲಾಗಿ ಮಧ್ಯವರ್ತಿಗಳ ಮೂಲಕ ಹೋದರೆ ಹಣ ಖರ್ಚಾದರೂ ಸಹ ನಮ್ಮ ಕೆಲಸ ಆಗೋದು ಶತ ಸಿದ್ದ ಎಂದು ಹೋಗ್ತೇವೆ ಅಷ್ಟೆ ಎಂದು ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ : ಆರ್‌ಟಿಒ ಕಚೇರಿಗಳೆಂದ್ರೆ ಜನಜಾತ್ರೆ. ಚಾಲನಾ ಪರವಾನಗಿ, ವಾಹನಗಳ ನೋಂದಣಿ ಸೇರಿ ಇತರೆ ಕೆಲಸಗಳಿರ್ತವೆ. ಇಲ್ಲಿ ಕೆಲಸ ಆಗಬೇಕು ಅಂದ್ರೆ ಅದಕ್ಕೆ ಮಧ್ಯವರ್ತಿಗಳೇ ಸರಿ ಎಂಬ ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ‌. ಕೊರೊನಾ ಬಂದ ಬಳಿಕ ಇದು ಹೆಚ್ಚಾಗಿದೆಯೇ? ಅಥವಾ ಕೊರೊನಾ ಸೃಸ್ಟಿಸಿದ ಗಂಡಾಂತರದ ಬಿಸಿ ಇವರಿಗೂ ತಟ್ಟಿದೆಯೇ, ವರ್ಷದ ಎಲ್ಲಾ ದಿನಗಳಲ್ಲಿಯೂ ತುಂಬಿ ತುಳುಕುತ್ತಿದ್ದ ಕಚೇರಿ ಈಗ ಹೇಗಿದೆ? ದಿನವಿಡೀ ಕೆಲಸ ಮಾಡುತ್ತಿದ್ದವರು ಈಗ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ.

ಕೋವಿಡ್-19 ವಕ್ಕರಿಸಿದ ಬಳಿಕ ಸಾಕಷ್ಟು ಕ್ಷೇತ್ರಗಳು ನಷ್ಟವನ್ನೇ ಅನುಭವಿಸಿದೆಯೇ ಹೊರತು ಲಾಭವನ್ನಲ್ಲ. ಹೀಗೆ ಎಲ್ಲಾ ಕ್ಷೇತ್ರಗಳಿಗೆ ನಷ್ಟ ಆದಂತೆ ಆರ್​ಟಿಒ ಇಲಾಖೆ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ.‌ ದ್ವಿಚಕ್ರ, ಟ್ರ್ಯಾಕ್ಟರ್ ಹಾಗೂ ಕಾರುಗಳ ನೋಂದಣಿಯೇನೋ ಸ್ವಲ್ಪ ಮಟ್ಟಿಗೆ ನಡೆದಿದೆ. ಲಾರಿ, ಬಸ್​ಗಳ ಮಾಲೀಕರು ಇತ್ತ ಸುಳಿಯುತ್ತಲೇ ಇಲ್ಲ. ಇದರಿಂದಾಗಿ ತಿಂಗಳಿಗೆ ದಾವಣಗೆರೆ, ಚಿತ್ರದುರ್ಗ ವ್ಯಾಪ್ತಿಯ ರಸ್ತೆ ಸಾರಿಗೆ ನಿಗಮಕ್ಕೆ ತುಂಬಾನೇ ಹೊಡೆತ ಬಿದ್ದಿದೆ ಎಂದರೆ ತಪ್ಪಾಗಲಾರದು. ಹಿಂದೆ ಬರುತ್ತಿದ್ದ ರಾಜಸ್ವ ಸಂಗ್ರಹವೂ ಸಹ ಕಡಿಮೆಯಾಗಿದೆ. ವಾಹನಗಳ ನೋಂದಣಿಯ ಬಗ್ಗೆ ಕೇಳೋದೆ ಬೇಡ. ಜನರೇ ಮನೆಯಿಂದ ಹೊರ ಬಾರದಿದ್ದರೆ, ಇನ್ನು ವಾಹನಗಳು ಹೇಗೆ ಬರಲಿದೆ?. ಮೂಲಗಳ ಪ್ರಕಾರ ಆರ್​ಟಿಒ ಕಚೇರಿಯ ಒಂದು ತಿಂಗಳ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ 5 ರಿಂದ 6 ಕೋಟಿ ರೂಪಾಯಿ ನಷ್ಟ ಆಗುತ್ತಿದೆ ಎನ್ನಲಾಗಿದೆ.

ಲಾಕ್​ಡೌನ್​ನಿಂದ ಆರ್​ಟಿಒ ಕಚೇರಿಯ ಸ್ಥಿತಿ

ಲಾಕ್​ಡೌನ್​ನಿಂದಾಗಿ ಬಸ್​​ಗಳು ರಸ್ತೆಗೆ ಇಳಿಯುವುದೇ ವಿರಳವಾಗಿದೆ. ಇದರಿಂದಾಗಿ ಸಹಜವಾಗಿ ಕಾರು, ಬೈಕ್ ಬಳಕೆ‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ಕೊರತೆಯಿಂದಾಗಿ ಅದೆಷ್ಟೋ ಜನ ಒಂದು ಬೈಕ್​ ಖರೀದಿಸಿಬಿಡೋಣ, ಡಿಎಲ್​ ಮಾಡಿಸೊಕೊಳ್ಳೋಣ ಎಂದು ಯೋಚಿಸುತ್ತಿದ್ದಾರೆ. ಇದರಿಂದಾಗಿ ಪರವಾನಿಗೆಗೆ ಆರ್​ಟಿಒ ಕಚೇರಿಯಲ್ಲಿ ಬೇಡಿಕೆ ಸ್ವಲ್ಪ ಜಾಸ್ತಿ ಆಗುತ್ತಿದೆ.

ಇನ್ನು, ಈ ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಮಧ್ಯವರ್ತಿಗಳು, ಜನರಿಂದ ಹಣ ಪಡೆದು ಪರವಾನಗಿ ಮಾಡಿಸಿಕೊಡುತ್ತಾರಂತೆ. ಒಬ್ಬ ಮಧ್ಯವರ್ತಿ ಕೈಯಲ್ಲಿ ಏನಿಲ್ಲಾ ಅಂದರೂ 30 ರಿಂದ 40 ಫೈಲ್​ಗಳು ಕಾಣಸಿಗುತ್ತವೆ. ಕೊರೊನಾ ಆತಂಕದಿಂದಾಗಿ ಜನರು ಮನೆ ಹೊರಗೆ ಕಾಲಿಡಲು ಭಯಪಡ್ತಿದ್ದಾರೆ. ಅಂತದ್ರಲ್ಲಿ ಆರ್​ಟಿಒ ಕಚೇರಿಗೆ ಹೋಗುವುದು ದೂರದ ಮಾತು. ಆರ್​ಟಿಒ ಕಚೇರಿಗೆ ಹೋಗುವ ಬದಲು ಹಣ ಖರ್ಚಾದರೂ ಪರವಾಗಿಲ್ಲ,‌ ಕೆಲಸ ಆದ್ರೆ ಸಾಕಪ್ಪಾ ಎಂಬ ದೃಷ್ಟಿಯಿಂದ ಜನರು ಮಧ್ಯವರ್ತಿಗಳ ಮೊರೆ ಹೋಗ್ತಾರೆ. ಏಜೆಂಟರುಗಳು ಸಹ ಸಿಕ್ಕಿದ್ದೇ ಚಾನ್ಸ್​ ಅಂತಾ, ಡ್ರೈವಿಂಗ್ ಲೈಸೆನ್ಸ್, ಎಲ್‌ಎಲ್‌ಆರ್ ಮಾಡಿಕೊಡಲು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ‌ ಕೇಳಿ ಬರುತ್ತಿದೆ.

ಮಧ್ಯವರ್ತಿಗಳ ಹಾವಳಿ ಬಗ್ಗೆ ಅಧಿಕಾರಿಗಳು ಹೇಳೋದೇನು?: ಚಾಲನಾ ಪರವಾನಗಿ ಪಡೆಯಲು ಪದೇಪದೆ ಆರ್‌ಟಿಒ ಕಚೇರಿಗೆ ಬರಬೇಕೆಂದೇನಿಲ್ಲ. ಆನ್​​ಲೈನ್​​ನಲ್ಲಿಯೇ ಅರ್ಜಿ ಹಾಕಬಹುದು, ಅಲ್ಲಿಯೇ ಹಣ ಪಾವತಿಸಬಹುದು. ವಾಹನ ಚಾಲನಾ ಪರೀಕ್ಷೆ ನೀಡಲು ಮಾತ್ರ ಕಚೇರಿಗೆ ಬಂದರೆ ಸಾಕು. ಅಂಚೆ ಮೂಲಕ ಅವರ ಮನೆಗೆ ಡ್ರೈವಿಂಗ್ ಲೈಸೆನ್ಸ್ ಕಳುಹಿಸುವ ವ್ಯವಸ್ಥೆ ನಮ್ಮಲ್ಲಿದೆ. ನೇರವಾಗಿಯೇ ನಮ್ಮ ಬಳಿ ಬಂದರೆ ಕೆಲಸ ಆಗುತ್ತದೆ.‌ ಅದನ್ನು ಬಿಟ್ಟು ಮಧ್ಯವರ್ತಿಗಳನ್ನು ಸಂಪರ್ಕಿಸುವುದು ಯಾಕೆ ಎಂದು ಪ್ರಶ್ನಿಸುತ್ತಾರೆ ಆರ್‌ಟಿಒ ಪ್ರಭಾರ ಅಧಿಕಾರಿ ಜಿ ಎಸ್ ಹೆಗ್ಡೆ.

ಕೊರೊನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಚೇರಿಗೆ ಅನಧಿಕೃತವಾಗಿ ಜನರು ಒಳಗೆ ಬಾರದಂತೆ ಎಚ್ಚರ ವಹಿಸಿದ್ದೇವೆ. ಏಜೆಂಟರ ಹಾವಳಿಯನ್ನು ನಾವು ತಡೆಯಬೇಕು ಎನ್ನುವುದಕ್ಕಿಂತ ಜನರು ಯಾಕೆ ಅವರ ಬಳಿ ಹೋಗುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ರಾಜ್ಯ ಸರ್ಕಾರವು ಈಗ ವಾಹನಗಳ ರಿನಿವಲ್ ಗೆ ಸೆಪ್ಟಂಬರ್ 30ರವರೆಗೆ ಅವಕಾಶ ನೀಡಿದೆ. ಅದೇ ರೀತಿಯಲ್ಲಿ ಎಲ್‌.ಎಲ್‌. ಆರ್​​ಗಳನ್ನು ಒಂದು ವರ್ಷ ಚಾಲನಾ ಪರವಾನಗಿಯಾಗಿ ಉಪಯೋಗಿಸಬಹುದು ಎಂದು ಅಧಿಕಾರಿ ಉತ್ತರಿಸಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಬಂದ ಬಳಿಕ ಎಲ್ಲಾ ಕ್ಷೇತ್ರಗಳು ನಷ್ಟ ಅನುಭವಿಸುತ್ತಿದ್ದರೆ, ಆರ್​ಟಿಒ ಮಧ್ಯವರ್ತಿಗಳು ಮಾತ್ರ ಲಾಭದಾಯಕವಾಗಿಯೇ ಇದ್ದಾರೆ ಎಂಬುದು ಜನರ ಅಭಿಪ್ರಾಯವಾಗಿದೆ. ಆರ್​ಟಿಒ ಕಚೇರಿಯಲ್ಲಿ ಬ್ರೋಕರ್​​​ಗಳಿಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಜನಸಾಮಾನ್ಯರಿಂದ ಹಿಂದಿನಿಂದಲೂ ಕೇಳಿಬರುತ್ತಿದೆ, ಆದ್ರೆ ಇದು ಕಾರ್ಯ ರೂಪಕ್ಕೆ ಬರುವುದು ಮಾತ್ರ ಕೊಂಚ ಕಠಿಣ ಎಂಬುದು ಜನರ ಮನದಿಂಗಿತವಾಗಿದೆ.

ಆರ್​​ಟಿಒ ಆಫೀಸಿಗೆ ನೇರವಾಗಿ ಹೋದ್ರೆ ನಮ್ಮ ಕಲೆಸ ಆಗೊಲ್ಲ ಎಂದು ಮಧ್ಯವರ್ತಿಗಳ ಮೂಲಕ ಜನರು ಹೋಗುತ್ತಾರೆ. ಆದ್ರೆ ಆರ್.ಟಿ.ಒ ಅಧಿಕಾರಿಗಳು ಮಾತ್ರ, ನೀವ್ಯಾಕೆ ಅವರ ಬಳಿ ಹೋಗ್ತೀರಿ, ನಮ್ಮ ಬಳಿ ನೇರವಾಗಿ ಬನ್ನಿ. ಯಾರೂ ಸಹ ಮಧ್ಯವರ್ತಿಗಳ ಸಂಪರ್ಕಿಸುವ ಗೋಜಿಗೆ ಹೋಗಬೇಡಿ ಎನ್ನುತ್ತಾರೆ‌. ‌ಆದ್ರೆ ಜನರಿಗೆ ಮಾತ್ರ ಆರ್​ಟಿಒ ಕಚೇರಿಗೆ ಹೋದ್ರೆ ದಿನವಿಡಿ ಸಮಯ ವ್ಯರ್ಥ ಆಗೋದು ಸ್ಪಷ್ಟ ಎಂಬುದು ಹಲವರ ಅಭಿಪ್ರಾಯವಾಗಿದೆ.

ಆರ್​ಟಿಒ ಅಧಿಕಾರಿಗಳು ನೋಡಿದ್ರೆ ನಮ್ಮ ಬಳಿ ನೇರವಾಗಿ ಬನ್ನಿ ಎನ್ನುತ್ತಾರೆ, ಆದ್ರೆ ನೇರವಾಗಿ ಹೋಗೋಣ ಅಂದ್ರೆ ನಮ್ಮ ಕೆಲಸ ಆಗೋದು ಕಷ್ಟ ಸಾಧ್ಯ. ಒಂದು ವೇಳೆ ನಮ್ಮ ಕೆಲಸ ಆದ್ರೂ ಅದಕ್ಕೆ ವಾರಗಟ್ಟಲೇ ಹಿಡಿಯುತ್ತೆ, ಅದರ ಬದಲಾಗಿ ಮಧ್ಯವರ್ತಿಗಳ ಮೂಲಕ ಹೋದರೆ ಹಣ ಖರ್ಚಾದರೂ ಸಹ ನಮ್ಮ ಕೆಲಸ ಆಗೋದು ಶತ ಸಿದ್ದ ಎಂದು ಹೋಗ್ತೇವೆ ಅಷ್ಟೆ ಎಂದು ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.