ETV Bharat / state

'ಸಿದ್ದರಾಮಯ್ಯ ಕುರುಬರ ಮೀಸಲಾತಿ ಹೋರಾಟದಿಂದ ಎಷ್ಟು ದಿನ‌ ದೂರವಿರುತ್ತಾರೆ ನೋಡೋಣ'

author img

By

Published : Jan 6, 2021, 8:44 PM IST

Updated : Jan 6, 2021, 9:52 PM IST

ಒಂದು ಕಡೆ ನಾನು ಇನ್ನೊಂದು ಕಡೆ ರೇವಣ್ಣ, ಮತ್ತೊಂದು ಕಡೆ ಬಂಡೆಪ್ಪ, ಅದ್ಯಾಕೆ ಸಿದ್ದರಾಮಯ್ಯ ದೂರವಿದ್ದಾರೋ ಗೊತ್ತಿಲ್ಲ. ಎಷ್ಟು ದಿನ ದೂರವಿರುತ್ತಾರೆ ನೋಡೋಣ ಎಂದರು. 70 ಲಕ್ಷ ಕುರುಬರಿಗೆ ಎಸ್​ಟಿ ಮೀಸಲಾತಿ ಸಿಗಬೇಕು ಎನ್ನುವುದೇ ನಮ್ಮ ಧ್ಯೇಯವಾಗಿದೆ..

KS Eshwarappa talk bout siddaramaiah over reservation for Kurubas
ಸಚಿವ ಕೆ ಎಸ್ ಈಶ್ವರಪ್ಪ

ದಾವಣಗೆರೆ : ಸಿದ್ದರಾಮಯ್ಯ ಕುರುಬರ ಎಸ್​ಟಿ ಮೀಸಲಾತಿ ಹೋರಾಟದಿಂದ ಎಷ್ಟು ದಿನ‌ ದೂರವಿರುತ್ತಾರೋ ನೋಡೋಣ ಎಂದು ಸಚಿವ ಕೆ ಎಸ್ ಈಶ್ವರಪ್ಪ, ಮಾಜಿ ಸಿಎಂ ಅವರನ್ನ ಕಿಚಾಯಿಸಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಕುರುಬ ಎಸ್​ಟಿ ​ಮೀಸಲಾತಿ ಕುರಿತ ಜನ ಜಾಗೃತಿ ಸಮಾವೇಶದ ವೇದಿಕೆಯಲ್ಲಿ ಮಾತನಾಡಿದ ಅವರು, ಎಲ್ಲಾ ಪಕ್ಷದ ರಾಜಕೀಯ ನಾಯಕರನ್ನು ಒಂದೇ ವೇದಿಕೆಗೆ ತಂದ ಕೀರ್ತಿ ಕಾಗಿನೆಲೆ ಶ್ರೀಗಳಿಗೆ ಸಲ್ಲುತ್ತದೆ.

ಕುರುಬ ಎಸ್​ಟಿ ​ಮೀಸಲಾತಿ ಕುರಿತ ಜನ ಜಾಗೃತಿ ಸಮಾವೇಶ

ಒಂದು ಕಡೆ ನಾನು ಇನ್ನೊಂದು ಕಡೆ ರೇವಣ್ಣ, ಮತ್ತೊಂದು ಕಡೆ ಬಂಡೆಪ್ಪ, ಅದ್ಯಾಕೆ ಸಿದ್ದರಾಮಯ್ಯ ದೂರವಿದ್ದಾರೋ ಗೊತ್ತಿಲ್ಲ. ಎಷ್ಟು ದಿನ ದೂರವಿರುತ್ತಾರೆ ನೋಡೋಣ ಎಂದರು. 70 ಲಕ್ಷ ಕುರುಬರಿಗೆ ಎಸ್​ಟಿ ಮೀಸಲಾತಿ ಸಿಗಬೇಕು ಎನ್ನುವುದೇ ನಮ್ಮ ಧ್ಯೇಯವಾಗಿದೆ. ರಾಜಕೀಯವನ್ನು ಹೊರಗಿಟ್ಟು ಈ ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಒಂದು ಅರ್ಜಿ ಸಲ್ಲಿಸಿದ್ರೆ ಮೀಸಲಾತಿ ದೊರೆಯುವುದಿಲ್ಲ.

ಹೋರಾಟ ಮಾಡದೇ ಯಾವ ಸರ್ಕಾರವು ಮೀಸಲಾತಿ ಕೊಡುವುದಿಲ್ಲ. ಅಮಿತಾ ಶಾ, ಮೋದಿ, ಸಂತೋಷ ಜೀ ಅವರನ್ನೂ ಭೇಟಿ ಮಾಡಿ ಬಂದಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದೇ ಮೀಸಲಾತಿ ಜಾರಿಗೊಳಿಸುತ್ತೇವೆ. ಇದು ಶತಃಸಿದ್ಧ ಎಂದು ಸಚಿವ ಈಶ್ವರಪ್ಪ ಶಪತ ಮಾಡಿದರು.

ದಾವಣಗೆರೆ : ಸಿದ್ದರಾಮಯ್ಯ ಕುರುಬರ ಎಸ್​ಟಿ ಮೀಸಲಾತಿ ಹೋರಾಟದಿಂದ ಎಷ್ಟು ದಿನ‌ ದೂರವಿರುತ್ತಾರೋ ನೋಡೋಣ ಎಂದು ಸಚಿವ ಕೆ ಎಸ್ ಈಶ್ವರಪ್ಪ, ಮಾಜಿ ಸಿಎಂ ಅವರನ್ನ ಕಿಚಾಯಿಸಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಕುರುಬ ಎಸ್​ಟಿ ​ಮೀಸಲಾತಿ ಕುರಿತ ಜನ ಜಾಗೃತಿ ಸಮಾವೇಶದ ವೇದಿಕೆಯಲ್ಲಿ ಮಾತನಾಡಿದ ಅವರು, ಎಲ್ಲಾ ಪಕ್ಷದ ರಾಜಕೀಯ ನಾಯಕರನ್ನು ಒಂದೇ ವೇದಿಕೆಗೆ ತಂದ ಕೀರ್ತಿ ಕಾಗಿನೆಲೆ ಶ್ರೀಗಳಿಗೆ ಸಲ್ಲುತ್ತದೆ.

ಕುರುಬ ಎಸ್​ಟಿ ​ಮೀಸಲಾತಿ ಕುರಿತ ಜನ ಜಾಗೃತಿ ಸಮಾವೇಶ

ಒಂದು ಕಡೆ ನಾನು ಇನ್ನೊಂದು ಕಡೆ ರೇವಣ್ಣ, ಮತ್ತೊಂದು ಕಡೆ ಬಂಡೆಪ್ಪ, ಅದ್ಯಾಕೆ ಸಿದ್ದರಾಮಯ್ಯ ದೂರವಿದ್ದಾರೋ ಗೊತ್ತಿಲ್ಲ. ಎಷ್ಟು ದಿನ ದೂರವಿರುತ್ತಾರೆ ನೋಡೋಣ ಎಂದರು. 70 ಲಕ್ಷ ಕುರುಬರಿಗೆ ಎಸ್​ಟಿ ಮೀಸಲಾತಿ ಸಿಗಬೇಕು ಎನ್ನುವುದೇ ನಮ್ಮ ಧ್ಯೇಯವಾಗಿದೆ. ರಾಜಕೀಯವನ್ನು ಹೊರಗಿಟ್ಟು ಈ ಹೋರಾಟ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಒಂದು ಅರ್ಜಿ ಸಲ್ಲಿಸಿದ್ರೆ ಮೀಸಲಾತಿ ದೊರೆಯುವುದಿಲ್ಲ.

ಹೋರಾಟ ಮಾಡದೇ ಯಾವ ಸರ್ಕಾರವು ಮೀಸಲಾತಿ ಕೊಡುವುದಿಲ್ಲ. ಅಮಿತಾ ಶಾ, ಮೋದಿ, ಸಂತೋಷ ಜೀ ಅವರನ್ನೂ ಭೇಟಿ ಮಾಡಿ ಬಂದಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದೇ ಮೀಸಲಾತಿ ಜಾರಿಗೊಳಿಸುತ್ತೇವೆ. ಇದು ಶತಃಸಿದ್ಧ ಎಂದು ಸಚಿವ ಈಶ್ವರಪ್ಪ ಶಪತ ಮಾಡಿದರು.

Last Updated : Jan 6, 2021, 9:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.