ದಾವಣಗೆರೆ: ಬ್ರೈನ್ ಟ್ಯೂಮರ್ನಿಂದ ಇತ್ತೀಚೆಗೆ ನಿಧನ ಹೊಂದಿದ ಬಾಲಕ ಟಿ ಎಸ್ ಕಿಶನ್ ಕೂಡಿಟ್ಟಿದ್ದ ಹಣವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಆರ್ ಬೀಳಗಿ ಅವರ ಮೂಲಕ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ.
ನಾಲ್ಕು ಸಾವಿರದ ನೂರು ರೂಪಾಯಿಯ ಚೆಕ್ನ ಕೊರೊನಾ ವೈರಸ್ ಸೋಂಕು ನಿರ್ವಹಣೆಗಾಗಿ ಕಿಶನ್ ತಂದೆ ಟಿ ಎನ್ ಶ್ರೀನಿವಾಸ್ ತೋಳಹುಣಸೆ ಅವರು ಪುತ್ರನ ಸ್ಮರಣಾರ್ಥ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿಗೆ ನೀಡಿದರು.