ETV Bharat / state

ಅನಗತ್ಯ ಸಂಚಾರ.. ಕೋವಿಡ್​ ನಿಯಮ ಉಲ್ಲಂಘಿಸಿದವರಿಗೆ ಚನ್ನಗಿರಿಯಲ್ಲಿ ಕಪ್ಪೆ ಓಟ - ವಿಡಿಯೋ - ಅನಗತ್ಯ ಸಂಚಾರ,

ವೀಕೆಂಡ್ ಕರ್ಫ್ಯೂವನ್ನು ಲೆಕ್ಕಿಸದೆ ಬೀದಿಗಿಳಿದು ಸುತ್ತಾಟ ನಡೆಸುತ್ತಿದ್ದ ಯುವಕರಿಗೆ ಕಪ್ಪೆ ಓಟ ಓಡಿಸಿ ಚನ್ನಗಿರಿ ಪೊಲೀಸರು ಬುದ್ಧಿ ಕಲಿಸಿದ್ದಾರೆ.

Frog jump punishment to channagiri youths by police for break the rules
ಯುವಕರ ಅನಾವಶ್ಯಕ ಓಡಾಟಕ್ಕೆ ಬ್ರೇಕ್​ ಹಾಕಿದ ಚನ್ನಗಿರಿ ಪೊಲೀಸರು
author img

By

Published : Apr 25, 2021, 4:58 PM IST

ದಾವಣಗೆರೆ: ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರಿಗೆ ಚನ್ನಗಿರಿ ಪೊಲೀಸರು ವಿನೂತನವಾದ ಶಿಕ್ಷೆ ವಿಧಿಸಿ ಬೀದಿಗಿಳಿಯದೆ ಮನೆಯಲ್ಲೇ ಇರುವಂತೆ ಬುದ್ಧಿವಾದ ಹೇಳಿದ್ದಾರೆ.

ಕೋವಿಡ್​ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಯುವಕರಿಗೆ ಕಪ್ಪೆ ಓಟ ಓಡಿಸಿ ಶಿಕ್ಷೆ ನೀಡುವ ಮೂಲಕ ಪಾಠ ಹೇಳಿದ್ದಾರೆ. ವೀಕೆಂಡ್ ಕರ್ಫ್ಯೂ ಇದ್ದರೂ ಬೀದಿಗಿಳಿದು ಸುತ್ತಾಡುತ್ತಿದ್ದ ಯುವಕರಿಗೆ ವಿನೂತನ ಶಿಕ್ಷೆ ನೀಡಿದ್ದಾರೆ.

ಅನಾವಶ್ಯಕ ಓಡಾಟ ನಡೆಸಿದವರಿಗೆ ಕಪ್ಪೆ ಓಟ ಓಡಿಸಿದ ಪೊಲೀಸರು

ಪಿಎಸ್ಐ ಜಗದೀಶ್​ ಅವರು ಅನಾವಶ್ಯಕವಾಗಿ ಓಡಾಡಿದ ಯುವಕರನ್ನು ಕರೆದು ಶಿಕ್ಷೆ ವಿಧಿಸಿದ್ದು, ಎಲ್ಲೆಂದರಲ್ಲಿ ವಿನಾಕಾರಣ ಸಂಚಾರ ಮಾಡದಂತೆ ಸೂಚನೆ ನೀಡಿದರು. ಕೊರೊನಾ ಕಡಿಮೆಯಾಗಲಿ ಎಂಬ ಉದ್ದೇಶದಿಂದ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದ್ದು, ನೀವು ಈ ರೀತಿ ಮನೆಯಿಂದ ಹೊರಗೆ ಬಂದರೆ ವೈರಸ್​ ಹೆಚ್ಚಾಗಲಿದೆ ಎಂದು ಮನವರಿಕೆ ಮಾಡಿಸಿದರು.

ಓದಿ: ಹಂಪಿಯ ಬಡವಿಲಿಂಗ ದೇವರ ಅರ್ಚಕ ಕೆ ಎನ್​ ಕೃಷ್ಣ ಭಟ್ ನಿಧನ.. ಸಚಿವ ಶ್ರೀರಾಮುಲು ಸಂತಾಪ

ದಾವಣಗೆರೆ: ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರಿಗೆ ಚನ್ನಗಿರಿ ಪೊಲೀಸರು ವಿನೂತನವಾದ ಶಿಕ್ಷೆ ವಿಧಿಸಿ ಬೀದಿಗಿಳಿಯದೆ ಮನೆಯಲ್ಲೇ ಇರುವಂತೆ ಬುದ್ಧಿವಾದ ಹೇಳಿದ್ದಾರೆ.

ಕೋವಿಡ್​ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಯುವಕರಿಗೆ ಕಪ್ಪೆ ಓಟ ಓಡಿಸಿ ಶಿಕ್ಷೆ ನೀಡುವ ಮೂಲಕ ಪಾಠ ಹೇಳಿದ್ದಾರೆ. ವೀಕೆಂಡ್ ಕರ್ಫ್ಯೂ ಇದ್ದರೂ ಬೀದಿಗಿಳಿದು ಸುತ್ತಾಡುತ್ತಿದ್ದ ಯುವಕರಿಗೆ ವಿನೂತನ ಶಿಕ್ಷೆ ನೀಡಿದ್ದಾರೆ.

ಅನಾವಶ್ಯಕ ಓಡಾಟ ನಡೆಸಿದವರಿಗೆ ಕಪ್ಪೆ ಓಟ ಓಡಿಸಿದ ಪೊಲೀಸರು

ಪಿಎಸ್ಐ ಜಗದೀಶ್​ ಅವರು ಅನಾವಶ್ಯಕವಾಗಿ ಓಡಾಡಿದ ಯುವಕರನ್ನು ಕರೆದು ಶಿಕ್ಷೆ ವಿಧಿಸಿದ್ದು, ಎಲ್ಲೆಂದರಲ್ಲಿ ವಿನಾಕಾರಣ ಸಂಚಾರ ಮಾಡದಂತೆ ಸೂಚನೆ ನೀಡಿದರು. ಕೊರೊನಾ ಕಡಿಮೆಯಾಗಲಿ ಎಂಬ ಉದ್ದೇಶದಿಂದ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದ್ದು, ನೀವು ಈ ರೀತಿ ಮನೆಯಿಂದ ಹೊರಗೆ ಬಂದರೆ ವೈರಸ್​ ಹೆಚ್ಚಾಗಲಿದೆ ಎಂದು ಮನವರಿಕೆ ಮಾಡಿಸಿದರು.

ಓದಿ: ಹಂಪಿಯ ಬಡವಿಲಿಂಗ ದೇವರ ಅರ್ಚಕ ಕೆ ಎನ್​ ಕೃಷ್ಣ ಭಟ್ ನಿಧನ.. ಸಚಿವ ಶ್ರೀರಾಮುಲು ಸಂತಾಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.