ETV Bharat / state

ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಬೊಮ್ಮಾಯಿ ಅಲ್ಲ, ಮೋದಿ ನಿತ್ಕೊಂಡ್ರು ಗೆಲ್ಲೋದು ನಾವೇ: ಎಸ್​ ಎಸ್​ ಮಲ್ಲಿಕಾರ್ಜುನ್​

author img

By

Published : Jul 18, 2022, 6:06 PM IST

ಸಿದ್ದರಾಮಯ್ಯರ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗುತ್ತ- ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಬಿಜೆಪಿ ಯಾರೇ ಸ್ಪಂರ್ಧಿಸಿದರೂ ಗೆಲ್ಲೋದು ಕಾಂಗ್ರೆಸ್​ ಅಭ್ಯರ್ಥಿ- ಮಾಜಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ವಿಶ್ವಾಸ

ಮಾಜಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್
ಮಾಜಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್

ದಾವಣಗೆರೆ: ಈಗ ಸಿಎಂ ಬೊಮ್ಮಾಯಿಯವರ ಅಪ್ಪ, ಮಾಜಿ ಮುಖ್ಯಮಂತ್ರಿ ಎಸ್​ ಆರ್​ ಬೊಮ್ಮಾಯಿ ಅವರು ಇಲ್ಲ. ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ಅಲ್ಲ, ಪ್ರಧಾನಿ ನರೇಂದ್ರಿ ಮೋದಿ ಬಂದು ನಿತ್ಕೊಂಡ್ರು ಸ್ಪರ್ಧೆಯಲ್ಲಿ ನಾವೇ ಗೆಲ್ಲೋದು ಎಂದು ಮಾಜಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಸವಾಲು ಹಾಕಿದ್ದಾರೆ.

ಮಾಜಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಮಾತನಾಡಿರುವುದು

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಪರಿಶೀಲಿಸಲು ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ಸಿದ್ದರಾಮಯ್ಯ ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಹರಿಹರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಶಾಸಕ ಎಸ್. ರಾಮಪ್ಪ ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮೂರ್ನಾಲ್ಕು ಕ್ಷೇತ್ರಗಳಿಂದ ನಿಲ್ತಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ಹತ್ತಿರ ಬಂದ ಬಳಿಕ ನೋಡೋಣ ಎಂದರು.

ಇವರಿಗೆ ಆಸಕ್ತಿ ಇಲ್ಲ: ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಬಿಜೆಪಿಯವರು ಅವರ ಕಾಲ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. 40 % ಕಮಿಷನ್ ಅಂದ್ರೆ ಸಾಕು, ಬಿಜೆಪಿಯವರು ಸಿಟ್ಟಿಗೇಳುತ್ತಾರೆ. ಕೋಟಿಗಟ್ಟಲೆ ಅನುದಾನವನ್ನು ದಾವಣಗೆರೆಗೆ ತಂದಿದ್ದು ನಾನು. ಆದರೆ, ಅದನ್ನು ಈ ಬಿಜೆಪಿಯವರು ಮಜಾ ಮಾಡ್ತಿದ್ದಾರೆ. ಇವರ ಅವಧಿಯಲ್ಲಿ ಕಳಪೆ ಕಾಮಗಾರಿಗಳಾಗಿವೆ. ಕೆಲ ಕಾಮಗಾರಿಗಳ ಬಗ್ಗೆ ಇವರಿಗೆ ಆಸಕ್ತಿ ಇಲ್ಲ. ಯಾವುದೇ ಕೆಲಸ ಮಾಡಿದ್ರೂ ಆಸಕ್ತಿಯಿಂದ ಮಾಡ್ಬೇಕಾಗುತ್ತದೆ ಎಂದು ಹೇಳಿದರು.

ಕಮಿಷನ್ ಕೊಟ್ರೆ ಕೆಲಸ ಆಗುತ್ತೆ: ಗ್ಲಾಸ್ ಹೌಸ್​ನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಲಾಸ್ ಹೌಸ್ ಬಳಿ ಒಳ್ಳೆ ಒಳ್ಳೆ ವಿದೇಶ ಗಿಡಗಳನ್ನು ತಂದು ಅಭಿವೃದ್ಧಿ ಮಾಡಿದ್ದು ನಾವು. ಆದರೆ ಇದೀಗ ಇವರು ಪೇರಲೆ ಗಿಡ, ಜಾಲಿ ಗಿಡಗಳನ್ನು ಹಾಕ್ತಿವಿ ಎಂದು ಹೇಳಿದ್ರೆ ನಾವ್ ಏನ್ ಮಾಡ್ಬೇಕು? ಎಂದು ನಗೆಚಟಾಕಿ ಹಾರಿಸಿದ್ರು. ನಾವು ಒಂದು ಫೋನ್​ನಲ್ಲಿ ಹೇಳಿದ್ರೆ ಕೆಲಸ ಆಗುತ್ತೆ. ಆದರೆ, ಬಿಜೆಪಿಯವರ ಬಳಿ ತೆರಳಲು ಎರಡು ಜೊತೆ ಚಪ್ಪಲಿ ಹರಿದ್ರು ಕೆಲಸ ಆಗಲ್ಲ. 40% ಕಮಿಷನ್ ಕೊಟ್ರೆ ಮಾತ್ರ ಕೆಲಸ ಆಗುತ್ತೆ ಎಂದು ಎಸ್​ ಎಸ್​ ಮಲ್ಲಿಕರ್ಜುನ್​ ವಾಗ್ದಾಳಿ ನಡೆಸಿದರು.

ಓದಿ: ದ್ರೌಪದಿ ಮುರ್ಮು ರಬ್ಬರ್ ಸ್ಟಾಂಪ್ ಎಂದ ಕಾಂಗ್ರೆಸ್, ಆರ್​ಜೆಡಿ: ದೇಶದ ಕ್ಷಮೆಯಾಚಿಸಬೇಕು ಎಂದ ಸಿ. ಟಿ ರವಿ

ದಾವಣಗೆರೆ: ಈಗ ಸಿಎಂ ಬೊಮ್ಮಾಯಿಯವರ ಅಪ್ಪ, ಮಾಜಿ ಮುಖ್ಯಮಂತ್ರಿ ಎಸ್​ ಆರ್​ ಬೊಮ್ಮಾಯಿ ಅವರು ಇಲ್ಲ. ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ಅಲ್ಲ, ಪ್ರಧಾನಿ ನರೇಂದ್ರಿ ಮೋದಿ ಬಂದು ನಿತ್ಕೊಂಡ್ರು ಸ್ಪರ್ಧೆಯಲ್ಲಿ ನಾವೇ ಗೆಲ್ಲೋದು ಎಂದು ಮಾಜಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಸವಾಲು ಹಾಕಿದ್ದಾರೆ.

ಮಾಜಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಮಾತನಾಡಿರುವುದು

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಪರಿಶೀಲಿಸಲು ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ಸಿದ್ದರಾಮಯ್ಯ ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಹರಿಹರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಶಾಸಕ ಎಸ್. ರಾಮಪ್ಪ ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮೂರ್ನಾಲ್ಕು ಕ್ಷೇತ್ರಗಳಿಂದ ನಿಲ್ತಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ಹತ್ತಿರ ಬಂದ ಬಳಿಕ ನೋಡೋಣ ಎಂದರು.

ಇವರಿಗೆ ಆಸಕ್ತಿ ಇಲ್ಲ: ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಬಿಜೆಪಿಯವರು ಅವರ ಕಾಲ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. 40 % ಕಮಿಷನ್ ಅಂದ್ರೆ ಸಾಕು, ಬಿಜೆಪಿಯವರು ಸಿಟ್ಟಿಗೇಳುತ್ತಾರೆ. ಕೋಟಿಗಟ್ಟಲೆ ಅನುದಾನವನ್ನು ದಾವಣಗೆರೆಗೆ ತಂದಿದ್ದು ನಾನು. ಆದರೆ, ಅದನ್ನು ಈ ಬಿಜೆಪಿಯವರು ಮಜಾ ಮಾಡ್ತಿದ್ದಾರೆ. ಇವರ ಅವಧಿಯಲ್ಲಿ ಕಳಪೆ ಕಾಮಗಾರಿಗಳಾಗಿವೆ. ಕೆಲ ಕಾಮಗಾರಿಗಳ ಬಗ್ಗೆ ಇವರಿಗೆ ಆಸಕ್ತಿ ಇಲ್ಲ. ಯಾವುದೇ ಕೆಲಸ ಮಾಡಿದ್ರೂ ಆಸಕ್ತಿಯಿಂದ ಮಾಡ್ಬೇಕಾಗುತ್ತದೆ ಎಂದು ಹೇಳಿದರು.

ಕಮಿಷನ್ ಕೊಟ್ರೆ ಕೆಲಸ ಆಗುತ್ತೆ: ಗ್ಲಾಸ್ ಹೌಸ್​ನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಲಾಸ್ ಹೌಸ್ ಬಳಿ ಒಳ್ಳೆ ಒಳ್ಳೆ ವಿದೇಶ ಗಿಡಗಳನ್ನು ತಂದು ಅಭಿವೃದ್ಧಿ ಮಾಡಿದ್ದು ನಾವು. ಆದರೆ ಇದೀಗ ಇವರು ಪೇರಲೆ ಗಿಡ, ಜಾಲಿ ಗಿಡಗಳನ್ನು ಹಾಕ್ತಿವಿ ಎಂದು ಹೇಳಿದ್ರೆ ನಾವ್ ಏನ್ ಮಾಡ್ಬೇಕು? ಎಂದು ನಗೆಚಟಾಕಿ ಹಾರಿಸಿದ್ರು. ನಾವು ಒಂದು ಫೋನ್​ನಲ್ಲಿ ಹೇಳಿದ್ರೆ ಕೆಲಸ ಆಗುತ್ತೆ. ಆದರೆ, ಬಿಜೆಪಿಯವರ ಬಳಿ ತೆರಳಲು ಎರಡು ಜೊತೆ ಚಪ್ಪಲಿ ಹರಿದ್ರು ಕೆಲಸ ಆಗಲ್ಲ. 40% ಕಮಿಷನ್ ಕೊಟ್ರೆ ಮಾತ್ರ ಕೆಲಸ ಆಗುತ್ತೆ ಎಂದು ಎಸ್​ ಎಸ್​ ಮಲ್ಲಿಕರ್ಜುನ್​ ವಾಗ್ದಾಳಿ ನಡೆಸಿದರು.

ಓದಿ: ದ್ರೌಪದಿ ಮುರ್ಮು ರಬ್ಬರ್ ಸ್ಟಾಂಪ್ ಎಂದ ಕಾಂಗ್ರೆಸ್, ಆರ್​ಜೆಡಿ: ದೇಶದ ಕ್ಷಮೆಯಾಚಿಸಬೇಕು ಎಂದ ಸಿ. ಟಿ ರವಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.