ETV Bharat / state

ಹರಿಹರದಲ್ಲಿ ಸಂಭ್ರಮದ ಈದ್​ ಮಿಲಾದ್...

author img

By

Published : Nov 10, 2019, 9:44 PM IST

Updated : Nov 11, 2019, 7:48 AM IST

ಇಂದು ರಾಜ್ಯಾದ್ಯಂತ ಈದ್​ ಮಿಲಾದ್​ ಆರರಣೆ ಮಾಡುತ್ತಿದ್ದು, ಹರಿಹರದಲ್ಲಿಯೂ ಮುಸ್ಲಿಂ ಬಾಂಧವರು ಸಂಭ್ರಮದಿಂದ ಹಬ್ಬವನ್ನು ಆಚರಿಸಿದ್ರು.

Eid Milad , ಈದ್​ ಮಿಲಾದ್

ಹರಿಹರ(ದಾವಣಗೆರೆ): ರಾಜ್ಯಾದ್ಯಂತ ಈದ್​ ಮಿಲಾದ್​ ಆರರಣೆ ಮಾಡುತ್ತಿದ್ದು, ಹರಿಹರದಲ್ಲಿಯೂ ಮುಸ್ಲಿಂ ಬಾಂಧವರು ಸಂಭ್ರಮದಿಂದ ಹಬ್ಬವನ್ನು ಆಚರಿಸಿದ್ರು.

ಇಂದು ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ವಿಶೇಷ ಪ್ರವಚನ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ನಗರದಲ್ಲಿ ಮೆರವಣಿಗೆ ಕೈಗೊಂಡ ಮುಸ್ಲಿಂ ಬಾಂಧವರು ನಾಲಾ ಮೊಹಲ್ಲಾ, ಇಂದಿರಾನಗರ, ನೀಲಕಂಠನಗರ, ಬೆಂಕಿನಗರ, ಕಾಳಿದಾಸನಗರ, ಹೈಸ್ಕೂಲ್ ಬಡಾವಣೆ, ಶಿವಮೊಗ್ಗ ರಸ್ತೆ, ಮುಖ್ಯ ರಸ್ತೆ ಗಾಂಧಿ ವೃತ್ತ ಸೇರಿದಂತೆ ವಿವಿಧ ಕಡೆ ಸಾಗಿದರು. ಮೆರವಣಿಗೆಯಲ್ಲಿ ಯುವಕರು ಪೈಗಂಬರ್‌ರ ಕುರಿತು ಘೋಷಣೆಗಳನ್ನು ಕೂಗಿದರು. ಈ ವೇಳೆ ನಗರದಲ್ಲಿ ಬಿಗಿ ಭದ್ರತೆ ವಹಿಸಲಾಗಿತ್ತು.

ಹರಿಹರದಲ್ಲಿ ಸಂಭ್ರಮದ ಈದ್​ ಮಿಲಾದ್

ಈ ವೇಳೆ ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಮೌಲಾನಾ ಸೈಯದ್ ಶಂಶುದ್ದೀನ್​​ ಬರ್ಕಾತಿ​​, ನಗರಸಭಾ ಸದಸ್ಯರಾದ ಶಂಕರ್ ಖಟಾವಕರ್​, ದಾದಾ ಖಲಾಂದರ್, ಎಸ್.ಎಂ.ವಸಂತ್, ಮಾಜಿ ಸದಸ್ಯರಾದ ಬಿ.ಮೊಹಮ್ಮದ್ ಸಿಗ್ಬತ್, ಅಹ್ಮದ್ ಮತ್ತಿತರರಿದ್ದರು.

ಹರಿಹರ(ದಾವಣಗೆರೆ): ರಾಜ್ಯಾದ್ಯಂತ ಈದ್​ ಮಿಲಾದ್​ ಆರರಣೆ ಮಾಡುತ್ತಿದ್ದು, ಹರಿಹರದಲ್ಲಿಯೂ ಮುಸ್ಲಿಂ ಬಾಂಧವರು ಸಂಭ್ರಮದಿಂದ ಹಬ್ಬವನ್ನು ಆಚರಿಸಿದ್ರು.

ಇಂದು ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ವಿಶೇಷ ಪ್ರವಚನ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ನಗರದಲ್ಲಿ ಮೆರವಣಿಗೆ ಕೈಗೊಂಡ ಮುಸ್ಲಿಂ ಬಾಂಧವರು ನಾಲಾ ಮೊಹಲ್ಲಾ, ಇಂದಿರಾನಗರ, ನೀಲಕಂಠನಗರ, ಬೆಂಕಿನಗರ, ಕಾಳಿದಾಸನಗರ, ಹೈಸ್ಕೂಲ್ ಬಡಾವಣೆ, ಶಿವಮೊಗ್ಗ ರಸ್ತೆ, ಮುಖ್ಯ ರಸ್ತೆ ಗಾಂಧಿ ವೃತ್ತ ಸೇರಿದಂತೆ ವಿವಿಧ ಕಡೆ ಸಾಗಿದರು. ಮೆರವಣಿಗೆಯಲ್ಲಿ ಯುವಕರು ಪೈಗಂಬರ್‌ರ ಕುರಿತು ಘೋಷಣೆಗಳನ್ನು ಕೂಗಿದರು. ಈ ವೇಳೆ ನಗರದಲ್ಲಿ ಬಿಗಿ ಭದ್ರತೆ ವಹಿಸಲಾಗಿತ್ತು.

ಹರಿಹರದಲ್ಲಿ ಸಂಭ್ರಮದ ಈದ್​ ಮಿಲಾದ್

ಈ ವೇಳೆ ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಮೌಲಾನಾ ಸೈಯದ್ ಶಂಶುದ್ದೀನ್​​ ಬರ್ಕಾತಿ​​, ನಗರಸಭಾ ಸದಸ್ಯರಾದ ಶಂಕರ್ ಖಟಾವಕರ್​, ದಾದಾ ಖಲಾಂದರ್, ಎಸ್.ಎಂ.ವಸಂತ್, ಮಾಜಿ ಸದಸ್ಯರಾದ ಬಿ.ಮೊಹಮ್ಮದ್ ಸಿಗ್ಬತ್, ಅಹ್ಮದ್ ಮತ್ತಿತರರಿದ್ದರು.

Intro:ಸ್ಲಗ್ : ಅದ್ದೂರಿ ಈದ್ ಮಿಲಾದ್

Into : ಮೊಹಮ್ಮದ್ ಪೈಗಂಬರ್ ಜಯಂತಿ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಭಾನುವಾರ ಈದ್ ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

Body : ಮುಸ್ಲಿಂ ಬಾಂಧವರು ಭಾನುವಾರ ಬೆಳಿಗ್ಗೆ ಎದ್ದು ಶುಭ್ರರಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹಲವು ಮಸೀದಿಗಳಲ್ಲಿ ಈ ನಿಮಿತ್ತ ವಿಶೇಷ ಪ್ರವಚನಗಳನ್ನು ಆಯೋಜಿಸಲಾಗಿತ್ತು. ನಂತರ ನಗರದ ನಾನಾ ಮುಸ್ಲಿಂ ಮೊಹಲ್ಲಾಗಳಲ್ಲಿ ಶರಬತ್, ತಿಂಡಿ ವಿತರಿಸಲಾಯಿತು. ಮನೆಗಳಲ್ಲಿ ಸಿಹಿ ಅಡುಗೆ ಮಾಡಲಾಗಿತ್ತು.
ಮಧ್ಯಾಹ್ನ ನಂತರ ನಾನಾ ಮೊಹಲ್ಲಾ, ಮಸೀದಿಗಳಿಂದ ಗುಂಪಾಗಿ ಅಂಜುಮನ್ ಶಾಲೆ ಬಳಿ ಸೇರಿ ನಂತರ ಮೆರವಣಿಗೆ ಮೂಲಕ ಸಾಗಲಾಯಿತು. ನಗರದ ನಾಲಾ ಮೊಹಲ್ಲಾ, ಇಂದಿರಾನಗರ, ನೀಲಕಂಠನಗರ, ಬೆಂಕಿನಗರ, ಕಾಳಿದಾಸನಗರ, ಹೈಸ್ಕೂಲ್ ಬಡಾವಣೆ, ಶಿವಮೊಗ್ಗ ರಸ್ತೆ, ಮುಖ್ಯ ರಸ್ತೆ ಗಾಂಧಿ ವೃತ್ತದ ಮೂಲಕ ಮೆರವಣಿಗೆ ಸಾಗಿತು.
ಸಾವಿರಾರು ಜನರಿದ್ದ ಮೆರವಣಿಗೆಯಲ್ಲಿ ಉತ್ಸಾಹಿ ಯುವಕರು ಪೈಗಂಬರ್‌ರ ಗುಣಗಾಣ ಮಾಡುವ ಘೋಷಣೆಗಳನ್ನು ಕೂಗುತ್ತಿದ್ದರು. ಯುವಕರು ಕೆಲವೆಡೆ ಬೈಕ್ ರ‍್ಯಾಲಿ ನಡೆಸಿದರು.
ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ, ಹಾಜಿ ಅಲಿ, ನಗರಸಭಾ ಸದಸ್ಯರಾದ ಶಂಕರ್ ಖಟಾವ್‌ಕರ್, ದಾದಾ ಖಲಾಂದರ್, ಎಸ್.ಎಂ.ವಸಂತ್, ಮಾಜಿ ಸದಸ್ಯರಾದ ಬಿ.ಮೊಹ್ಮದ್ ಸಿಗ್ಬತ್, ಅಹ್ಮದ್, ಮತ್ತಿತರರಿದ್ದರು.
Conclusion : ಈದ್ ಮಿಲಾದ್ ಹಬ್ಬದ ನಿಮಿತ್ತ ದೇವಸ್ಥಾನ ರಸ್ತೆಯಲ್ಲಿ ಅಳವಡಿಸಿದ ಬಂಟಿಂಗ್ಸ್ ಕುರಿತು ಶನಿವಾರದಂದು ನಗರದಲ್ಲಿ ಹಿಂದುಪರ ಸಂಘಟನೆ ಹಾಗೂ ಮುಸ್ಲಿಂ ಸಮಾಜದವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ನಗರದಲ್ಲಿ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ಎಎಸ್ಪಿ ಎಂ ರಾಜೀವ್‌ರವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.Body:ಸ್ಲಗ್ : ಅದ್ದೂರಿ ಈದ್ ಮಿಲಾದ್

Into : ಮೊಹಮ್ಮದ್ ಪೈಗಂಬರ್ ಜಯಂತಿ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಭಾನುವಾರ ಈದ್ ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

Body : ಮುಸ್ಲಿಂ ಬಾಂಧವರು ಭಾನುವಾರ ಬೆಳಿಗ್ಗೆ ಎದ್ದು ಶುಭ್ರರಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹಲವು ಮಸೀದಿಗಳಲ್ಲಿ ಈ ನಿಮಿತ್ತ ವಿಶೇಷ ಪ್ರವಚನಗಳನ್ನು ಆಯೋಜಿಸಲಾಗಿತ್ತು. ನಂತರ ನಗರದ ನಾನಾ ಮುಸ್ಲಿಂ ಮೊಹಲ್ಲಾಗಳಲ್ಲಿ ಶರಬತ್, ತಿಂಡಿ ವಿತರಿಸಲಾಯಿತು. ಮನೆಗಳಲ್ಲಿ ಸಿಹಿ ಅಡುಗೆ ಮಾಡಲಾಗಿತ್ತು.
ಮಧ್ಯಾಹ್ನ ನಂತರ ನಾನಾ ಮೊಹಲ್ಲಾ, ಮಸೀದಿಗಳಿಂದ ಗುಂಪಾಗಿ ಅಂಜುಮನ್ ಶಾಲೆ ಬಳಿ ಸೇರಿ ನಂತರ ಮೆರವಣಿಗೆ ಮೂಲಕ ಸಾಗಲಾಯಿತು. ನಗರದ ನಾಲಾ ಮೊಹಲ್ಲಾ, ಇಂದಿರಾನಗರ, ನೀಲಕಂಠನಗರ, ಬೆಂಕಿನಗರ, ಕಾಳಿದಾಸನಗರ, ಹೈಸ್ಕೂಲ್ ಬಡಾವಣೆ, ಶಿವಮೊಗ್ಗ ರಸ್ತೆ, ಮುಖ್ಯ ರಸ್ತೆ ಗಾಂಧಿ ವೃತ್ತದ ಮೂಲಕ ಮೆರವಣಿಗೆ ಸಾಗಿತು.
ಸಾವಿರಾರು ಜನರಿದ್ದ ಮೆರವಣಿಗೆಯಲ್ಲಿ ಉತ್ಸಾಹಿ ಯುವಕರು ಪೈಗಂಬರ್‌ರ ಗುಣಗಾಣ ಮಾಡುವ ಘೋಷಣೆಗಳನ್ನು ಕೂಗುತ್ತಿದ್ದರು. ಯುವಕರು ಕೆಲವೆಡೆ ಬೈಕ್ ರ‍್ಯಾಲಿ ನಡೆಸಿದರು.
ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ, ಹಾಜಿ ಅಲಿ, ನಗರಸಭಾ ಸದಸ್ಯರಾದ ಶಂಕರ್ ಖಟಾವ್‌ಕರ್, ದಾದಾ ಖಲಾಂದರ್, ಎಸ್.ಎಂ.ವಸಂತ್, ಮಾಜಿ ಸದಸ್ಯರಾದ ಬಿ.ಮೊಹ್ಮದ್ ಸಿಗ್ಬತ್, ಅಹ್ಮದ್, ಮತ್ತಿತರರಿದ್ದರು.
Conclusion : ಈದ್ ಮಿಲಾದ್ ಹಬ್ಬದ ನಿಮಿತ್ತ ದೇವಸ್ಥಾನ ರಸ್ತೆಯಲ್ಲಿ ಅಳವಡಿಸಿದ ಬಂಟಿಂಗ್ಸ್ ಕುರಿತು ಶನಿವಾರದಂದು ನಗರದಲ್ಲಿ ಹಿಂದುಪರ ಸಂಘಟನೆ ಹಾಗೂ ಮುಸ್ಲಿಂ ಸಮಾಜದವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ನಗರದಲ್ಲಿ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ಎಎಸ್ಪಿ ಎಂ ರಾಜೀವ್‌ರವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.Conclusion:
Last Updated : Nov 11, 2019, 7:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.