ETV Bharat / state

ಸಚಿವ ಸ್ಥಾನಕ್ಕಾಗಿ ದಾವಣಗೆರೆ ಶಾಸಕರ ಲಾಬಿ; ಸಿಎಂ ಮನೆಯಲ್ಲೇ ಠಿಕಾಣಿ

author img

By

Published : Jul 29, 2021, 6:04 PM IST

Updated : Jul 30, 2021, 1:06 PM IST

ದಾವಣಗೆರೆ ಜಿಲ್ಲೆಯಲ್ಲಿ ಐವರು ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿದ್ದು ಸಚಿವ ಸ್ಥಾನದ ಕೂಗು ಜೋರಾಗಿ ಕೇಳಿ ಬರುತ್ತಿದೆ.

davanagere-mlas-make-lobby-for-ministerial-position
ಸಚಿವ ಸ್ಥಾನಕ್ಕಾಗಿ ದಾವಣಗೆರೆ ಶಾಸಕರ ಲಾಬಿ

ದಾವಣಗೆರೆ: ರಾಜ್ಯದಲ್ಲಿ ನೂತನ ಸಿಎಂ ಬದಲಾವಣೆ ಮಾಡಿದ ಬೆನ್ನಲ್ಲೇ ಜಿಲ್ಲೆಯ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಮುಂದುವರೆದಿದೆ. ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೂತನ ಸಿಎಂ ಮನೆಯಲ್ಲಿ ಶಾಸಕರು ಠಿಕಾಣಿ ಹೂಡಿದ್ದಾರೆ.

ಈ ಹಿಂದೆ ಇದ್ದ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲೆಗೆ ಸರಿಯಾಗಿ ಬಾರದೆ ಇದ್ದಿದ್ದರಿಂದ ಕೆಲ ಶಾಸಕರು ಬೇಸತ್ತಿದ್ದರು. ದಾವಣಗೆರೆ ಜಿಲ್ಲೆಯ ಐದು ವಿಧಾನ ಸಭಾಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಐವರು ಶಾಸಕರಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳಲೇಬೇಕೆಂದು ಸಿಎಂ ಮನೆಯಲ್ಲಿ ಠಿಕಾಣಿ ಹೂಡಿರುವ ಶಾಸಕರು ತೆರೆಮರೆಯಲ್ಲಿ‌ ಕಸರತ್ತು ನಡೆಸುತ್ತಿದ್ದಾರೆ‌.

ಸಚಿವ ಸ್ಥಾನಕ್ಕಾಗಿ ದಾವಣಗೆರೆ ಶಾಸಕರ ಲಾಬಿ; ಸಿಎಂ ಮನೆಯಲ್ಲೇ ಠಿಕಾಣಿ

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ರವೀಂದ್ರನಾಥ್ ಸೇರಿದಂತೆ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ನಡುವೆ ಸಚಿವ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಇನ್ನು ಎಸ್ಟಿ ಕೋಟದಲ್ಲಿ ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ಸಚಿವ ಸ್ಥಾನ ಸಿಗುತ್ತೆ ಎಂದು ಕಾದು ಕೂತಿದ್ದಾರೆ.

ಐದು ಜನ ಪೈಕಿ ಒಬ್ಬರಿಗೆ ಸಚಿವ ಸ್ಥಾನ?

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೋ ಲಿಂಗಣ್ಣ ಕೂಡ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಜಿಲ್ಲೆಯಲ್ಲಿ ನಾಯಕ ಸಮುದಾಯದಿಂದ ಜಗಳೂರಿನ ಶಾಸಕ ಎಸ್. ವಿ. ರಾಮಚಂದ್ರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಈಗಾಗಲೇ ಇಡೀ ಸಮುದಾಯ ಸಿಎಂ‌ ಬೊಮ್ಮಾಯಿಯವರ ಮೇಲೆ ಒತ್ತಡ ಹಾಕಿ ಮನವಿ ಮಾಡಿದ್ದರು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹೊರಗಿನವರಿಗೆ ಸಚಿವ ಸ್ಥಾನ ಹಾಗೂ ಉಸ್ತುವಾರಿ ನೀಡುವುದರ ಬದಲು ಜಿಲ್ಲೆಯಲ್ಲಿ ಆಯ್ಕೆ ಆಗಿರುವ ಐದು ಜನ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಿ ಎಂಬ ಮನವಿ ಕೂಡ ಕೇಳಿ ಬರುತ್ತಿದೆ.

ಇದನ್ನೂ ಓದಿ: ಜೊಲ್ಲೆ, ಶ್ರೀಮಂತ ಪಾಟೀಲ್​​ಗೆ ಕೊಕ್? ಕುಂದಾನಗರಿಯಿಂದ ಬೊಮ್ಮಾಯಿ ಸಂಪುಟ ಸೇರುವವರಾರು?

ದಾವಣಗೆರೆ: ರಾಜ್ಯದಲ್ಲಿ ನೂತನ ಸಿಎಂ ಬದಲಾವಣೆ ಮಾಡಿದ ಬೆನ್ನಲ್ಲೇ ಜಿಲ್ಲೆಯ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಮುಂದುವರೆದಿದೆ. ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೂತನ ಸಿಎಂ ಮನೆಯಲ್ಲಿ ಶಾಸಕರು ಠಿಕಾಣಿ ಹೂಡಿದ್ದಾರೆ.

ಈ ಹಿಂದೆ ಇದ್ದ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲೆಗೆ ಸರಿಯಾಗಿ ಬಾರದೆ ಇದ್ದಿದ್ದರಿಂದ ಕೆಲ ಶಾಸಕರು ಬೇಸತ್ತಿದ್ದರು. ದಾವಣಗೆರೆ ಜಿಲ್ಲೆಯ ಐದು ವಿಧಾನ ಸಭಾಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಐವರು ಶಾಸಕರಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳಲೇಬೇಕೆಂದು ಸಿಎಂ ಮನೆಯಲ್ಲಿ ಠಿಕಾಣಿ ಹೂಡಿರುವ ಶಾಸಕರು ತೆರೆಮರೆಯಲ್ಲಿ‌ ಕಸರತ್ತು ನಡೆಸುತ್ತಿದ್ದಾರೆ‌.

ಸಚಿವ ಸ್ಥಾನಕ್ಕಾಗಿ ದಾವಣಗೆರೆ ಶಾಸಕರ ಲಾಬಿ; ಸಿಎಂ ಮನೆಯಲ್ಲೇ ಠಿಕಾಣಿ

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ರವೀಂದ್ರನಾಥ್ ಸೇರಿದಂತೆ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ನಡುವೆ ಸಚಿವ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಇನ್ನು ಎಸ್ಟಿ ಕೋಟದಲ್ಲಿ ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ಸಚಿವ ಸ್ಥಾನ ಸಿಗುತ್ತೆ ಎಂದು ಕಾದು ಕೂತಿದ್ದಾರೆ.

ಐದು ಜನ ಪೈಕಿ ಒಬ್ಬರಿಗೆ ಸಚಿವ ಸ್ಥಾನ?

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೋ ಲಿಂಗಣ್ಣ ಕೂಡ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಜಿಲ್ಲೆಯಲ್ಲಿ ನಾಯಕ ಸಮುದಾಯದಿಂದ ಜಗಳೂರಿನ ಶಾಸಕ ಎಸ್. ವಿ. ರಾಮಚಂದ್ರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಈಗಾಗಲೇ ಇಡೀ ಸಮುದಾಯ ಸಿಎಂ‌ ಬೊಮ್ಮಾಯಿಯವರ ಮೇಲೆ ಒತ್ತಡ ಹಾಕಿ ಮನವಿ ಮಾಡಿದ್ದರು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹೊರಗಿನವರಿಗೆ ಸಚಿವ ಸ್ಥಾನ ಹಾಗೂ ಉಸ್ತುವಾರಿ ನೀಡುವುದರ ಬದಲು ಜಿಲ್ಲೆಯಲ್ಲಿ ಆಯ್ಕೆ ಆಗಿರುವ ಐದು ಜನ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಿ ಎಂಬ ಮನವಿ ಕೂಡ ಕೇಳಿ ಬರುತ್ತಿದೆ.

ಇದನ್ನೂ ಓದಿ: ಜೊಲ್ಲೆ, ಶ್ರೀಮಂತ ಪಾಟೀಲ್​​ಗೆ ಕೊಕ್? ಕುಂದಾನಗರಿಯಿಂದ ಬೊಮ್ಮಾಯಿ ಸಂಪುಟ ಸೇರುವವರಾರು?

Last Updated : Jul 30, 2021, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.