ದಾವಣಗೆರೆ : ನಗರದ ಮೀನುಗಾರಿಕೆ ಇಲಾಖೆಯಲ್ಲಿ ಡಿ ದರ್ಜೆ ನೌಕರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
![D grade employee who committed suicide in office](https://etvbharatimages.akamaized.net/etvbharat/prod-images/kn-dvg-06-18-suicide-script-7203307_18112020194809_1811f_1605709089_1056.png)
ನಗರದ ವಿದ್ಯಾರ್ಥಿ ಭವನದ ಬಳಿ ಇರುವ ಮೀನುಗಾರಿಕೆ ಇಲಾಖೆಯ ಡಿ ಗ್ರೂಪ್ ನೌಕರನಾಗಿದ್ದ ಗಂಗಾಧರ (46) ಆತ್ಮಹತ್ಯೆಗೆ ಶರಣಾದವರು.
ದಾವಣಗೆರೆಯ ವಿದ್ಯಾರ್ಥಿ ಭವನದ ಹತ್ತಿರದಲ್ಲಿರುವ ಮೀನುಗಾರಿಕೆ ಕಚೇರಿಯಲ್ಲಿಯೇ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಅಧಿಕಾರಿಗಳು ಕಳುಹಿಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.